<p>ನವದೆಹಲಿ: ಗದಗ-ಹರಿಹರ ರೈಲ್ವೆ ಯೋಜನೆಗೆ ಮಂಜೂರಾತಿ ಕೊಡಬೇಕು ಹಾಗೂ ಮೇಲ್ದರ್ಜೆಗೆ ಏರಿರುವ ಮುಂಡರಗಿ ರೈಲ್ವೆನಿಲ್ದಾಣ ನಿರ್ಮಾಣ ಕಾರ್ಯ ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿ ಮುಂಡರಗಿ ರೈಲ್ವೆ ಹೋರಾಟ ಸಮಿತಿ ಕಾರ್ಯಕರ್ತರು ಶನಿವಾರ ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸಿದರು.<br /> <br /> ಮುಂಡರಗಿ ಹಾಗೂ ಹೂವಿನ ಹಡಗಲಿ ಮಾರ್ಗವಾಗಿ ಗದಗ- ಹರಿಹರ ಯೋಜನೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಮಿತಿ ಕಾರ್ಯಕರ್ತರು ರೈಲ್ವೆ ಸಚಿವರಾದ ಮಮತಾ ಬ್ಯಾನರ್ಜಿ, ಕೆ.ಎಚ್. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.<br /> <br /> ಮುಂಡರಗಿ ತಾಲೂಕು ಕೇಂದ್ರ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಪಟ್ಟಣಕ್ಕೆ ಐತಿಹಾಸಿಕ ಮಹತ್ವವಿದೆ. ಮ್ಯಾಂಗನೀಸ್, ಕಬ್ಬಿಣ, ಚಿನ್ನದ ಅದಿರು ಒಳಗೊಂಡಂತೆ ನೈಸರ್ಗಿಕ ಸಂಪತ್ತು ಹೇರಳವಾಗಿದೆ. ದೇವಸ್ಥಾನ ಮತ್ತು ಪ್ರವಾಸಿ ತಾಣಗಳಿಂದ ಕೂಡಿದ್ದು, ರೈಲ್ವೆ ಮಾರ್ಗ ಅನಿವಾರ್ಯ ಎಂದು ವಿವರಿಸಿದರು.<br /> ರಾಜ್ಯ ಸರ್ಕಾರ ಗದಗ- ಹರಿಹರ ಮಾರ್ಗವನ್ನು ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಮನವಿ ಮಾಡಿತ್ತು. ಆದರೆ, ಹೊಸ ಮಾರ್ಗಗಳ ಪಟ್ಟಿಯಲ್ಲಿ ಇದು ಸೇರ್ಪಡೆ ಆಗದಿರುವುದರಿಂದ ಜನರಿಗೆ ಅಸಮಾಧಾನವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.<br /> <br /> ರೈಲ್ವೆಗೆ ಲಾಭವಾಗಿರುವ ಹಾಗೂ ಜನರಿಗೆ ಅನುಕೂಲವಾಗಿರುವ ಗದಗ- ಹರಿಹರ ಯೋಜನೆಯನ್ನು ತಕ್ಷಣ ಪ್ರಕಟ ಮಾಡಬೇಕು ಎಂದು ಸಮಿತಿ ಕಾರ್ಯಕರ್ತರು ಆಗ್ರಹಿಸಿದರು. ಬಸವರಾಜ್ ನವಲಗುಂದ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಎಂ.ಪಿ. ನಾಡಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ಗದಗ-ಹರಿಹರ ರೈಲ್ವೆ ಯೋಜನೆಗೆ ಮಂಜೂರಾತಿ ಕೊಡಬೇಕು ಹಾಗೂ ಮೇಲ್ದರ್ಜೆಗೆ ಏರಿರುವ ಮುಂಡರಗಿ ರೈಲ್ವೆನಿಲ್ದಾಣ ನಿರ್ಮಾಣ ಕಾರ್ಯ ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿ ಮುಂಡರಗಿ ರೈಲ್ವೆ ಹೋರಾಟ ಸಮಿತಿ ಕಾರ್ಯಕರ್ತರು ಶನಿವಾರ ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸಿದರು.<br /> <br /> ಮುಂಡರಗಿ ಹಾಗೂ ಹೂವಿನ ಹಡಗಲಿ ಮಾರ್ಗವಾಗಿ ಗದಗ- ಹರಿಹರ ಯೋಜನೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಮಿತಿ ಕಾರ್ಯಕರ್ತರು ರೈಲ್ವೆ ಸಚಿವರಾದ ಮಮತಾ ಬ್ಯಾನರ್ಜಿ, ಕೆ.ಎಚ್. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.<br /> <br /> ಮುಂಡರಗಿ ತಾಲೂಕು ಕೇಂದ್ರ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಪಟ್ಟಣಕ್ಕೆ ಐತಿಹಾಸಿಕ ಮಹತ್ವವಿದೆ. ಮ್ಯಾಂಗನೀಸ್, ಕಬ್ಬಿಣ, ಚಿನ್ನದ ಅದಿರು ಒಳಗೊಂಡಂತೆ ನೈಸರ್ಗಿಕ ಸಂಪತ್ತು ಹೇರಳವಾಗಿದೆ. ದೇವಸ್ಥಾನ ಮತ್ತು ಪ್ರವಾಸಿ ತಾಣಗಳಿಂದ ಕೂಡಿದ್ದು, ರೈಲ್ವೆ ಮಾರ್ಗ ಅನಿವಾರ್ಯ ಎಂದು ವಿವರಿಸಿದರು.<br /> ರಾಜ್ಯ ಸರ್ಕಾರ ಗದಗ- ಹರಿಹರ ಮಾರ್ಗವನ್ನು ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಮನವಿ ಮಾಡಿತ್ತು. ಆದರೆ, ಹೊಸ ಮಾರ್ಗಗಳ ಪಟ್ಟಿಯಲ್ಲಿ ಇದು ಸೇರ್ಪಡೆ ಆಗದಿರುವುದರಿಂದ ಜನರಿಗೆ ಅಸಮಾಧಾನವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.<br /> <br /> ರೈಲ್ವೆಗೆ ಲಾಭವಾಗಿರುವ ಹಾಗೂ ಜನರಿಗೆ ಅನುಕೂಲವಾಗಿರುವ ಗದಗ- ಹರಿಹರ ಯೋಜನೆಯನ್ನು ತಕ್ಷಣ ಪ್ರಕಟ ಮಾಡಬೇಕು ಎಂದು ಸಮಿತಿ ಕಾರ್ಯಕರ್ತರು ಆಗ್ರಹಿಸಿದರು. ಬಸವರಾಜ್ ನವಲಗುಂದ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಎಂ.ಪಿ. ನಾಡಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>