<p><strong>ಗಂಗಾವತಿ:</strong> ಪ್ರತಿ ಭಾನುವಾರ ತರಕಾರಿ ವ್ಯಾಪಾರ ವಹಿವಾಟು ನಡೆಯುವ ಇಲ್ಲಿನ ಸಂತೆ ಬೈಲು ಪ್ರದೇಶದ ಇಡೀ ವಾರದ ಮಾರುಕಟ್ಟೆ (ವೀಕ್ಲಿ ಮಾರ್ಕೆಟ್) ಸತತ ಸುರಿದ ಮಳೆಯಿಂದಾಗಿ ಕೊಚ್ಚೆ ಹಿಡಿದು ಗಬ್ಬೆದ್ದು ದುರ್ನಾತದಿಂದ ನಾರುತ್ತಿದೆ. <br /> <br /> ತುಂತುರು ಹನಿ ಸುರಿದರೆ ಸಾಕು ಇಡೀ ಮಾರುಕಟ್ಟೆ ಕಾಲಿಡಲಾಗದ ಗಿಜಿಗಿಜಿ ಎನ್ನುತ್ತಿರುತ್ತದೆ. ಇನ್ನು ಜಡಿ ಮಳೆ ಸುರಿದರಂತೂ ಮುಗಿಯಿತು ಕತೆ. ಸಾರ್ವಜನಿಕರು ತಿಪ್ಪೆಯಂತ ರಸ್ತೆಗಳಲ್ಲಿ ನಿಂತು ತರಕಾರಿ ಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. <br /> <br /> ತರಕಾರಿ ಮಾರಾಟದ ಬಳಿಕ ಅಳಿದುಳಿದ ತ್ಯಾಜ್ಯ ವಿಲೇವಾರಿಯಲ್ಲಿ ನಗರಸಭೆ ವಹಿಸುತ್ತಿರುವ ನಿರ್ಲಕ್ಷ್ಯದಿಂದಾಗಿ ಇಡೀ ಮಾರುಕಟ್ಟೆ ತ್ಯಾಜ್ಯ ಮತ್ತು ತಿಪ್ಪೆ ಸಂಗ್ರಹದ ಸ್ಥಳದಂತೆ ಭಾಸವಾಗುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. <br /> <br /> ನಿಜಕ್ಕೂ ಇದು ತರಕಾರಿ ಮಾರುಕಟ್ಟೆನಾ ಎಂಬ ಅನುಮಾನ ಮೊದಲ ಬಾರಿಗೆ ಕಾಲಿಡುವವರಿಗೆ ಕಾಡುತ್ತದೆ. ತರಕಾರಿ ಮಾರಾಟಗಾರರು ಪ್ರತಿ ವಾರ ನಗರಸಭೆಗೆ ತೆರಿಗೆ ಕಟ್ಟುತ್ತಾರೆ. ಆದರೆ ಸೂಕ್ತ ಸೌಲಭ್ಯ ಮಾತ್ರ ನೀಡುತ್ತಿಲ್ಲ ಎಂದು ವರ್ತಕ ರಾಜಾಸಾಬ ಮಕಾನವಾಲೆ ದೂರಿದ್ದಾರೆ. <br /> <br /> ಸಾಕಾಲಕ್ಕೆ ವಿಲೇವಾರಿಯಾಗದ ತರಕಾರಿ ತ್ಯಾಜ್ಯ ಸಂಗ್ರಹಗೊಂಡು ಸಾಂಕ್ರಾಮಿಕ ರೋಗರುಜ್ಜೀನ ಹರಡುವ ಭಿತಿ ಎದುರಾಗುತ್ತದೆ. ಬಿದ್ದ ಮಳೆ ನೀರು ಹರಿದು ಹೋಗಲು ಸೂಕ್ತ ಅವಕಾಶವಿಲ್ಲದೆ ತ್ಯಾಜ್ಯದೊಂದಿಗೆ ಸೇರಿ ದುರ್ನಾತ ಬೀರುತ್ತಿದೆ. <br /> <br /> ವಾರದ ಮಾರುಕಟ್ಟೆ ಸುತ್ತಲೂ ಇರುವ ನಿವಾಸಿಗಳಿಗೆ ಈಗ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಆತಂಕ ಎದುರಾಗಿದೆ. ನಗರಸಭೆಯಲ್ಲಿ ನೈರ್ಮಲ್ಯ ನಿರೀಕ್ಷಕರು ಇದ್ದು ಇಲ್ಲದಂತಾಗಿದ್ದಾರೆ. ಒಮ್ಮೆಯೂ ಇತ್ತ ಕಣ್ಣು ಹಾಕಿಲ್ಲ ಎಂದು ವರ್ತಕ ಅಮೀನಸಾಬ ಆರೋಪಿಸಿದ್ದಾರೆ. <br /> <br /> ಇದು ಒಂದು ದಿನದ ಕತೆಯಲ್ಲ. ಮಳೆ ಸುರಿದಾಗಲೆಲ್ಲಾ ವ್ಯಾಪರಿಗಳು ವಾರದ ಮಾರುಕಟ್ಟೆಯಲ್ಲಿ ತಿಪ್ಪೆಯಂತಾಗುವ ರಸ್ತೆಗಳಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಬೇರೆ ದಾರಿ ಕಾಣದ ಸಾರ್ವಜನಿಕರು ದುರ್ನಾತದ ಮಧ್ಯೆಯೆ ತರಕಾರಿ ಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ಪ್ರತಿ ಭಾನುವಾರ ತರಕಾರಿ ವ್ಯಾಪಾರ ವಹಿವಾಟು ನಡೆಯುವ ಇಲ್ಲಿನ ಸಂತೆ ಬೈಲು ಪ್ರದೇಶದ ಇಡೀ ವಾರದ ಮಾರುಕಟ್ಟೆ (ವೀಕ್ಲಿ ಮಾರ್ಕೆಟ್) ಸತತ ಸುರಿದ ಮಳೆಯಿಂದಾಗಿ ಕೊಚ್ಚೆ ಹಿಡಿದು ಗಬ್ಬೆದ್ದು ದುರ್ನಾತದಿಂದ ನಾರುತ್ತಿದೆ. <br /> <br /> ತುಂತುರು ಹನಿ ಸುರಿದರೆ ಸಾಕು ಇಡೀ ಮಾರುಕಟ್ಟೆ ಕಾಲಿಡಲಾಗದ ಗಿಜಿಗಿಜಿ ಎನ್ನುತ್ತಿರುತ್ತದೆ. ಇನ್ನು ಜಡಿ ಮಳೆ ಸುರಿದರಂತೂ ಮುಗಿಯಿತು ಕತೆ. ಸಾರ್ವಜನಿಕರು ತಿಪ್ಪೆಯಂತ ರಸ್ತೆಗಳಲ್ಲಿ ನಿಂತು ತರಕಾರಿ ಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. <br /> <br /> ತರಕಾರಿ ಮಾರಾಟದ ಬಳಿಕ ಅಳಿದುಳಿದ ತ್ಯಾಜ್ಯ ವಿಲೇವಾರಿಯಲ್ಲಿ ನಗರಸಭೆ ವಹಿಸುತ್ತಿರುವ ನಿರ್ಲಕ್ಷ್ಯದಿಂದಾಗಿ ಇಡೀ ಮಾರುಕಟ್ಟೆ ತ್ಯಾಜ್ಯ ಮತ್ತು ತಿಪ್ಪೆ ಸಂಗ್ರಹದ ಸ್ಥಳದಂತೆ ಭಾಸವಾಗುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. <br /> <br /> ನಿಜಕ್ಕೂ ಇದು ತರಕಾರಿ ಮಾರುಕಟ್ಟೆನಾ ಎಂಬ ಅನುಮಾನ ಮೊದಲ ಬಾರಿಗೆ ಕಾಲಿಡುವವರಿಗೆ ಕಾಡುತ್ತದೆ. ತರಕಾರಿ ಮಾರಾಟಗಾರರು ಪ್ರತಿ ವಾರ ನಗರಸಭೆಗೆ ತೆರಿಗೆ ಕಟ್ಟುತ್ತಾರೆ. ಆದರೆ ಸೂಕ್ತ ಸೌಲಭ್ಯ ಮಾತ್ರ ನೀಡುತ್ತಿಲ್ಲ ಎಂದು ವರ್ತಕ ರಾಜಾಸಾಬ ಮಕಾನವಾಲೆ ದೂರಿದ್ದಾರೆ. <br /> <br /> ಸಾಕಾಲಕ್ಕೆ ವಿಲೇವಾರಿಯಾಗದ ತರಕಾರಿ ತ್ಯಾಜ್ಯ ಸಂಗ್ರಹಗೊಂಡು ಸಾಂಕ್ರಾಮಿಕ ರೋಗರುಜ್ಜೀನ ಹರಡುವ ಭಿತಿ ಎದುರಾಗುತ್ತದೆ. ಬಿದ್ದ ಮಳೆ ನೀರು ಹರಿದು ಹೋಗಲು ಸೂಕ್ತ ಅವಕಾಶವಿಲ್ಲದೆ ತ್ಯಾಜ್ಯದೊಂದಿಗೆ ಸೇರಿ ದುರ್ನಾತ ಬೀರುತ್ತಿದೆ. <br /> <br /> ವಾರದ ಮಾರುಕಟ್ಟೆ ಸುತ್ತಲೂ ಇರುವ ನಿವಾಸಿಗಳಿಗೆ ಈಗ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಆತಂಕ ಎದುರಾಗಿದೆ. ನಗರಸಭೆಯಲ್ಲಿ ನೈರ್ಮಲ್ಯ ನಿರೀಕ್ಷಕರು ಇದ್ದು ಇಲ್ಲದಂತಾಗಿದ್ದಾರೆ. ಒಮ್ಮೆಯೂ ಇತ್ತ ಕಣ್ಣು ಹಾಕಿಲ್ಲ ಎಂದು ವರ್ತಕ ಅಮೀನಸಾಬ ಆರೋಪಿಸಿದ್ದಾರೆ. <br /> <br /> ಇದು ಒಂದು ದಿನದ ಕತೆಯಲ್ಲ. ಮಳೆ ಸುರಿದಾಗಲೆಲ್ಲಾ ವ್ಯಾಪರಿಗಳು ವಾರದ ಮಾರುಕಟ್ಟೆಯಲ್ಲಿ ತಿಪ್ಪೆಯಂತಾಗುವ ರಸ್ತೆಗಳಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಬೇರೆ ದಾರಿ ಕಾಣದ ಸಾರ್ವಜನಿಕರು ದುರ್ನಾತದ ಮಧ್ಯೆಯೆ ತರಕಾರಿ ಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>