<p><strong>ರಾಮನಾಥಪುರ:</strong> ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ನ ದಶಮಾನೋತ್ಸವ ಸಮಾರಂಭದ ಅಂಗವಾಗಿ ಭಾನುವಾರ ನಡೆದ ‘ಗಮಕ ಸೌರಭ’ ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ವಿದ್ವಾನ್ ಮತ್ತೂರು ಕೃಷ್ಣಮೂರ್ತಿ ಪವಿತ್ರ ಮಹಾಭಾರತ ಗ್ರಂಥದಲ್ಲಿ ಶಿವ ಅರ್ಜುನನಿಗೆ ಪಾಶುಪತಾಸ್ತ್ರ ನೀಡುವ ಕಥಾ ಭಾಗವನ್ನು ಅರ್ಥಪೂರ್ಣವಾಗಿ ವಾಚಿಸಿದರು.<br /> <br /> ಮತ್ತೂರು ಕೃಷ್ಣಮೂರ್ತಿ ಅವರ ವ್ಯಾಖ್ಯಾನಕ್ಕೆ ತಕ್ಕಂತೆ ಕುಮಾರವ್ಯಾಸ ಪ್ರಶಸ್ತಿ ವಿಜೇತ ವಿದ್ವಾನ್ ಹೊಸಹಳ್ಳಿ ಕೇಶವಮೂರ್ತಿ ಅವರು ಪ್ರತಿಯೊಂದು ಸಾಲುಗಳನ್ನು ಲಯ ಬದ್ಧವಾಗಿ ವಾಚಿಸಿ ಭಕ್ತಿರಸವನ್ನು ಅಭಿವ್ಯಕ್ತಗೊಳಿಸಿದರು.<br /> <br /> ‘ಶಿವನು ಬೇಡನ ವೇಷ ಧರಿಸಿ ಬಂದು ಅರ್ಜುನನ್ನು ಪರೀಕ್ಷಿಸುವ ಸನ್ನಿವೇಶ ಹಾಗೂ ಅರ್ಜುನ ಕೆಲ ದಿನ ಹಣ್ಣು-ಹಂಪಲು, ಮತ್ತೆ ಕೆಲವು ದಿನ ತರಗೆಲೆ ಇನ್ನು ಕೆಲವು ದಿನಗಳ ಕಾಲ ಒಂಟಿ ಕಾಲಿನಲ್ಲಿ ನಿಂತು ಗಾಳಿಯನ್ನು ಆಹಾರವಾಗಿ ಸ್ವೀಕರಿಸಿ ಕಠಿಣ ತಪ್ಪಸ್ಸುಗೈದು ಶಿವನಿಂದ ಅಸ್ತ್ರಗಳನ್ನು ಪಡೆದುಕೊಳ್ಳುವ ದೃಶ್ಯಗಳನ್ನು ಹಾವ-ಭಾವ ಪ್ರದರ್ಶಿಸುವ ಮೂಲಕ ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು.<br /> <br /> ಇದಲ್ಲದೆ ಗೌರಿಯೂ ಅರ್ಜುನನಿಗೆ ಅಂಜನಾಶಸ್ತ್ರವನ್ನೂ, ಶಿವನ ಪುತ್ರರಾದ ಗುಹ ಮತ್ತು ಗಣಪತಿಯೂ ಅಸ್ತ್ರಗಳನ್ನು ನೀಡುವ ಪ್ರಸಂಗವನ್ನು ಮನಮುಟ್ಟುವಂತೆ ಬಣ್ಣಿಸಿದರು.<br /> <br /> ಸಂಗೀತ ಗಾನ ಕಲಾಭೂಷಣ ಆರ್.ಕೆ. ಪದ್ಮನಾಭ ಅವರು ಡಾ.ವಿದ್ವಾನ್ ಮತ್ತೂರು ಕೃಷ್ಣಮೂರ್ತಿ ಹಾಗೂ ವಿದ್ವಾನ್ ಹೊಸಹಳ್ಳಿ ಕೇಶವಮೂರ್ತಿ ಅವರನ್ನು ಶಾಲು ಹೊದಿಸಿ ಗೌರವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಾಥಪುರ:</strong> ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ನ ದಶಮಾನೋತ್ಸವ ಸಮಾರಂಭದ ಅಂಗವಾಗಿ ಭಾನುವಾರ ನಡೆದ ‘ಗಮಕ ಸೌರಭ’ ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ವಿದ್ವಾನ್ ಮತ್ತೂರು ಕೃಷ್ಣಮೂರ್ತಿ ಪವಿತ್ರ ಮಹಾಭಾರತ ಗ್ರಂಥದಲ್ಲಿ ಶಿವ ಅರ್ಜುನನಿಗೆ ಪಾಶುಪತಾಸ್ತ್ರ ನೀಡುವ ಕಥಾ ಭಾಗವನ್ನು ಅರ್ಥಪೂರ್ಣವಾಗಿ ವಾಚಿಸಿದರು.<br /> <br /> ಮತ್ತೂರು ಕೃಷ್ಣಮೂರ್ತಿ ಅವರ ವ್ಯಾಖ್ಯಾನಕ್ಕೆ ತಕ್ಕಂತೆ ಕುಮಾರವ್ಯಾಸ ಪ್ರಶಸ್ತಿ ವಿಜೇತ ವಿದ್ವಾನ್ ಹೊಸಹಳ್ಳಿ ಕೇಶವಮೂರ್ತಿ ಅವರು ಪ್ರತಿಯೊಂದು ಸಾಲುಗಳನ್ನು ಲಯ ಬದ್ಧವಾಗಿ ವಾಚಿಸಿ ಭಕ್ತಿರಸವನ್ನು ಅಭಿವ್ಯಕ್ತಗೊಳಿಸಿದರು.<br /> <br /> ‘ಶಿವನು ಬೇಡನ ವೇಷ ಧರಿಸಿ ಬಂದು ಅರ್ಜುನನ್ನು ಪರೀಕ್ಷಿಸುವ ಸನ್ನಿವೇಶ ಹಾಗೂ ಅರ್ಜುನ ಕೆಲ ದಿನ ಹಣ್ಣು-ಹಂಪಲು, ಮತ್ತೆ ಕೆಲವು ದಿನ ತರಗೆಲೆ ಇನ್ನು ಕೆಲವು ದಿನಗಳ ಕಾಲ ಒಂಟಿ ಕಾಲಿನಲ್ಲಿ ನಿಂತು ಗಾಳಿಯನ್ನು ಆಹಾರವಾಗಿ ಸ್ವೀಕರಿಸಿ ಕಠಿಣ ತಪ್ಪಸ್ಸುಗೈದು ಶಿವನಿಂದ ಅಸ್ತ್ರಗಳನ್ನು ಪಡೆದುಕೊಳ್ಳುವ ದೃಶ್ಯಗಳನ್ನು ಹಾವ-ಭಾವ ಪ್ರದರ್ಶಿಸುವ ಮೂಲಕ ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು.<br /> <br /> ಇದಲ್ಲದೆ ಗೌರಿಯೂ ಅರ್ಜುನನಿಗೆ ಅಂಜನಾಶಸ್ತ್ರವನ್ನೂ, ಶಿವನ ಪುತ್ರರಾದ ಗುಹ ಮತ್ತು ಗಣಪತಿಯೂ ಅಸ್ತ್ರಗಳನ್ನು ನೀಡುವ ಪ್ರಸಂಗವನ್ನು ಮನಮುಟ್ಟುವಂತೆ ಬಣ್ಣಿಸಿದರು.<br /> <br /> ಸಂಗೀತ ಗಾನ ಕಲಾಭೂಷಣ ಆರ್.ಕೆ. ಪದ್ಮನಾಭ ಅವರು ಡಾ.ವಿದ್ವಾನ್ ಮತ್ತೂರು ಕೃಷ್ಣಮೂರ್ತಿ ಹಾಗೂ ವಿದ್ವಾನ್ ಹೊಸಹಳ್ಳಿ ಕೇಶವಮೂರ್ತಿ ಅವರನ್ನು ಶಾಲು ಹೊದಿಸಿ ಗೌರವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>