<p><strong>ನವದೆಹಲಿ (ಪಿಟಿಐ, ಐಎಎನ್ಎಸ್): </strong>ದೆಹಲಿ ಸ್ಫೋಟದ ಗಾಯಾಳುಗಳಿಗೆ ರಾಮಮನೋಹರ ಲೋಹಿಯಾ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಆಪಾದಿಸಿ ಗಾಯಾಳುಗಳ ಕುಟುಂಬದವರು ಗುರುವಾರ ಪ್ರತಿಭಟನೆ ನಡೆಸಿದರು.<br /> <br /> ಗಾಯಾಳುಗಳ ಸ್ಥಿತಿ ಬಗ್ಗೆ ಆಸ್ಪತ್ರೆಯವರು ಯಾವುದೇ ಮಾಹಿತಿ ನೀಡುತ್ತಿಲ್ಲ. ಗಣ್ಯ ವ್ಯಕ್ತಿಗಳು (ವಿಐಪಿ) ಭೇಟಿ ನೀಡಿದಾಗ ಮಾತ್ರ ಚಿಕಿತ್ಸೆ ನೀಡುವಂತೆ ನಟಿಸುತ್ತಾರೆ ಎಂದು ತೀವ್ರ ನಿಗಾ ಘಟಕದಲ್ಲಿರುವ ಗಾಯಾಳುವೊಬ್ಬರ ಬಂಧು ಸುರೇಶ್ ಆನಂದ್ ದೂರಿದರು.<br /> <br /> ಮರಣೋತ್ತರ ಪರೀಕ್ಷೆ ವರದಿಗಳ ಬಗ್ಗೆ ಪೊಲೀಸರು ಮಾಹಿತಿ ನೀಡುತ್ತಿಲ್ಲ ಎಂದು ಘಾಜಿಯಾಬಾದ್ನ 40 ವರ್ಷದ ನಿವಾಸಿ ಪ್ರಮೋದ್ ಚೌರಾಸಿಯಾ ಆರೋಪಿಸಿದರು. ಸ್ಫೋಟ ಘಟನೆಯಲ್ಲಿ ಸ್ವತಃ ಚೌರಾಸಿಯಾ ಕೂಡ ಗಾಯಗೊಂಡಿದ್ದಾರೆ.<br /> <br /> ಇದಕ್ಕೆ ಮುನ್ನ ಪ್ರಧಾನಿ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಗಾಯಾಳು ಮೃದುಲ್ ಭಕ್ಷಿ ಸೋದರ ವಿನೋದ್ ಭಕ್ಷಿ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ಫೋಟದ ನಂತರ ಸೋದರನನ್ನು ಹುಡುಕುವುದೇ ಬಲು ಕಷ್ಟವಾಯಿತು. ಆಸ್ಪತ್ರೆಗೆ ಮೂರು ಸಲ ಹೋದರೂ ಸುಳಿವು ಸಿಗಲಿಲ್ಲ. <br /> <br /> ಬಹಳ ಹೊತ್ತು ಕಾಯ್ದು ಪ್ರಯಾಸದಿಂದ ತೀವ್ರ ನಿಗಾ ಘಟಕದೊಳಗೆ ಹೋಗಲು ಅನುಮತಿ ಪಡೆದ ಮೇಲೆ, ಆತ ಅಲ್ಲಿರುವುದು ದೃಢಪಟ್ಟಿತು ಎಂಬುದನ್ನು ಪ್ರಧಾನಿ ಗಮನಕ್ಕೆ ಭಕ್ಷಿ ತಂದಿದ್ದರು.<br /> <br /> <strong>ಉತ್ತಮ ಚಿಕಿತ್ಸೆ- ಪ್ರಧಾನಿ ಭರವಸೆ <br /> </strong>ಚಿಕಿತ್ಸಾ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ತಮ್ಮ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ.ನಾಯರ್ ಅವರನ್ನು ಆಸ್ಪತ್ರೆಗೆ ತೆರಳಿ ಪರಿಶೀಲಿಸಲು ಮನಮೋಹನ್ ಸೂಚಿಸಿದ್ದರು. <br /> <br /> ಗುರುವಾರ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ತೆರಳಿದ ನಾಯರ್ ಗಾಯಾಳುಗಳಿಗೆ ಸಿಗುತ್ತಿರುವ ವೈದ್ಯಕೀಯ ನಿಗಾ ಪರಿಶೀಲಿಸಿದರು. ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮತ್ತು ಗಾಯಾಳುಗಳ ಬಂಧುಗಳೊಂದಿಗೆ ಮಾತುಕತೆ ನಡೆಸಿದರು.<br /> <br /> ನಾಯರ್ ಆಸ್ಪತ್ರೆ ಭೇಟಿ ಕೊಟ್ಟು ವಾಪಸಾದ ನಂತರ ಪ್ರಧಾನಿ ಹೇಳಿಕೆ ನೀಡಿ, ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚ ಭರಿಸುವ ಜತೆಗೆ ತಜ್ಞ ವೈದ್ಯರ ಸೇವೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.<br /> </p>.<p><strong>ದೆಹಲಿ ಹೈಕೋರ್ಟ್: 49 ಸಿ.ಸಿ ಕ್ಯಾಮೆರಾ ಅಳವಡಿಕೆ<br /> ನವದೆಹಲಿ (ಪಿಟಿಐ):</strong> ದೆಹಲಿ ಹೈಕೋರ್ಟ್ನ ಒಳಗೆ ಮತ್ತು ಸುತ್ತಲೂ ವಿವಿಧ ಸ್ಥಳಗಳಲ್ಲಿ 49ಕ್ಕೂ ಹೆಚ್ಚು ಸಿಸಿಟಿವಿಗಳು ಮೂರು ವಾರಗಳಲ್ಲಿ ಅಳವಡಿಕೆ ಆಗಲಿವೆ.<br /> <br /> ಹೈಕೋರ್ಟ್ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ವಿಶೇಷ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.<br /> <br /> ಕೋರ್ಟ್ ಸಂಕೀರ್ಣದ ಪ್ರವೇಶ ದ್ವಾರಗಳಲ್ಲಿ ವಾಹನಗಳನ್ನು ತಪಾಸಣೆಗೊಳಪಡಿಸುವ ನಾಲ್ಕು ಸ್ಕ್ಯಾನರ್ಗಳನ್ನು ಅಳವಡಿಸಲು ಕೂಡ ಸಭೆ ನಿರ್ಧರಿಸಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಧ್ಯಕ್ಷತೆ ವಹಿಸಿದ್ದರು.<br /> <br /> ಕೋರ್ಟ್ ಆವರಣ ಬಳಿಯ ಅಕ್ಕಪಕ್ಕದ ಪ್ರದೇಶ ಮತ್ತು ರಸ್ತೆಗಳು ಯಾವಾಗಲೂ ಜನನಿಬಿಡವಾಗಿದ್ದು ಇದನ್ನು ತಪ್ಪಿಸಲೂ ಸಭೆ ನಿರ್ಣಯ ಕೈಗೊಂಡಿತು ಎಂದು ದೆಹಲಿ ಹೈಕೋರ್ಟ್ ವಕೀಲರ ಸಂಘದ ಕಾರ್ಯದರ್ಶಿ ಡಿ.ಕೆ. ಶರ್ಮಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು, 2010ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಬಳಸಿದ್ದ ಸಿಸಿಟಿವಿಗಳನ್ನು ಬಳಸದೆ ಇಡಲಾಗಿದ್ದು ಇವನ್ನು ಇಲ್ಲಿಗೆ ಅಳವಡಿಸಬಹುದು ಎಂದು ಸಭೆಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ, ಐಎಎನ್ಎಸ್): </strong>ದೆಹಲಿ ಸ್ಫೋಟದ ಗಾಯಾಳುಗಳಿಗೆ ರಾಮಮನೋಹರ ಲೋಹಿಯಾ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಆಪಾದಿಸಿ ಗಾಯಾಳುಗಳ ಕುಟುಂಬದವರು ಗುರುವಾರ ಪ್ರತಿಭಟನೆ ನಡೆಸಿದರು.<br /> <br /> ಗಾಯಾಳುಗಳ ಸ್ಥಿತಿ ಬಗ್ಗೆ ಆಸ್ಪತ್ರೆಯವರು ಯಾವುದೇ ಮಾಹಿತಿ ನೀಡುತ್ತಿಲ್ಲ. ಗಣ್ಯ ವ್ಯಕ್ತಿಗಳು (ವಿಐಪಿ) ಭೇಟಿ ನೀಡಿದಾಗ ಮಾತ್ರ ಚಿಕಿತ್ಸೆ ನೀಡುವಂತೆ ನಟಿಸುತ್ತಾರೆ ಎಂದು ತೀವ್ರ ನಿಗಾ ಘಟಕದಲ್ಲಿರುವ ಗಾಯಾಳುವೊಬ್ಬರ ಬಂಧು ಸುರೇಶ್ ಆನಂದ್ ದೂರಿದರು.<br /> <br /> ಮರಣೋತ್ತರ ಪರೀಕ್ಷೆ ವರದಿಗಳ ಬಗ್ಗೆ ಪೊಲೀಸರು ಮಾಹಿತಿ ನೀಡುತ್ತಿಲ್ಲ ಎಂದು ಘಾಜಿಯಾಬಾದ್ನ 40 ವರ್ಷದ ನಿವಾಸಿ ಪ್ರಮೋದ್ ಚೌರಾಸಿಯಾ ಆರೋಪಿಸಿದರು. ಸ್ಫೋಟ ಘಟನೆಯಲ್ಲಿ ಸ್ವತಃ ಚೌರಾಸಿಯಾ ಕೂಡ ಗಾಯಗೊಂಡಿದ್ದಾರೆ.<br /> <br /> ಇದಕ್ಕೆ ಮುನ್ನ ಪ್ರಧಾನಿ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಗಾಯಾಳು ಮೃದುಲ್ ಭಕ್ಷಿ ಸೋದರ ವಿನೋದ್ ಭಕ್ಷಿ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ಫೋಟದ ನಂತರ ಸೋದರನನ್ನು ಹುಡುಕುವುದೇ ಬಲು ಕಷ್ಟವಾಯಿತು. ಆಸ್ಪತ್ರೆಗೆ ಮೂರು ಸಲ ಹೋದರೂ ಸುಳಿವು ಸಿಗಲಿಲ್ಲ. <br /> <br /> ಬಹಳ ಹೊತ್ತು ಕಾಯ್ದು ಪ್ರಯಾಸದಿಂದ ತೀವ್ರ ನಿಗಾ ಘಟಕದೊಳಗೆ ಹೋಗಲು ಅನುಮತಿ ಪಡೆದ ಮೇಲೆ, ಆತ ಅಲ್ಲಿರುವುದು ದೃಢಪಟ್ಟಿತು ಎಂಬುದನ್ನು ಪ್ರಧಾನಿ ಗಮನಕ್ಕೆ ಭಕ್ಷಿ ತಂದಿದ್ದರು.<br /> <br /> <strong>ಉತ್ತಮ ಚಿಕಿತ್ಸೆ- ಪ್ರಧಾನಿ ಭರವಸೆ <br /> </strong>ಚಿಕಿತ್ಸಾ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ತಮ್ಮ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ.ನಾಯರ್ ಅವರನ್ನು ಆಸ್ಪತ್ರೆಗೆ ತೆರಳಿ ಪರಿಶೀಲಿಸಲು ಮನಮೋಹನ್ ಸೂಚಿಸಿದ್ದರು. <br /> <br /> ಗುರುವಾರ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ತೆರಳಿದ ನಾಯರ್ ಗಾಯಾಳುಗಳಿಗೆ ಸಿಗುತ್ತಿರುವ ವೈದ್ಯಕೀಯ ನಿಗಾ ಪರಿಶೀಲಿಸಿದರು. ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮತ್ತು ಗಾಯಾಳುಗಳ ಬಂಧುಗಳೊಂದಿಗೆ ಮಾತುಕತೆ ನಡೆಸಿದರು.<br /> <br /> ನಾಯರ್ ಆಸ್ಪತ್ರೆ ಭೇಟಿ ಕೊಟ್ಟು ವಾಪಸಾದ ನಂತರ ಪ್ರಧಾನಿ ಹೇಳಿಕೆ ನೀಡಿ, ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚ ಭರಿಸುವ ಜತೆಗೆ ತಜ್ಞ ವೈದ್ಯರ ಸೇವೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.<br /> </p>.<p><strong>ದೆಹಲಿ ಹೈಕೋರ್ಟ್: 49 ಸಿ.ಸಿ ಕ್ಯಾಮೆರಾ ಅಳವಡಿಕೆ<br /> ನವದೆಹಲಿ (ಪಿಟಿಐ):</strong> ದೆಹಲಿ ಹೈಕೋರ್ಟ್ನ ಒಳಗೆ ಮತ್ತು ಸುತ್ತಲೂ ವಿವಿಧ ಸ್ಥಳಗಳಲ್ಲಿ 49ಕ್ಕೂ ಹೆಚ್ಚು ಸಿಸಿಟಿವಿಗಳು ಮೂರು ವಾರಗಳಲ್ಲಿ ಅಳವಡಿಕೆ ಆಗಲಿವೆ.<br /> <br /> ಹೈಕೋರ್ಟ್ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ವಿಶೇಷ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.<br /> <br /> ಕೋರ್ಟ್ ಸಂಕೀರ್ಣದ ಪ್ರವೇಶ ದ್ವಾರಗಳಲ್ಲಿ ವಾಹನಗಳನ್ನು ತಪಾಸಣೆಗೊಳಪಡಿಸುವ ನಾಲ್ಕು ಸ್ಕ್ಯಾನರ್ಗಳನ್ನು ಅಳವಡಿಸಲು ಕೂಡ ಸಭೆ ನಿರ್ಧರಿಸಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಧ್ಯಕ್ಷತೆ ವಹಿಸಿದ್ದರು.<br /> <br /> ಕೋರ್ಟ್ ಆವರಣ ಬಳಿಯ ಅಕ್ಕಪಕ್ಕದ ಪ್ರದೇಶ ಮತ್ತು ರಸ್ತೆಗಳು ಯಾವಾಗಲೂ ಜನನಿಬಿಡವಾಗಿದ್ದು ಇದನ್ನು ತಪ್ಪಿಸಲೂ ಸಭೆ ನಿರ್ಣಯ ಕೈಗೊಂಡಿತು ಎಂದು ದೆಹಲಿ ಹೈಕೋರ್ಟ್ ವಕೀಲರ ಸಂಘದ ಕಾರ್ಯದರ್ಶಿ ಡಿ.ಕೆ. ಶರ್ಮಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು, 2010ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಬಳಸಿದ್ದ ಸಿಸಿಟಿವಿಗಳನ್ನು ಬಳಸದೆ ಇಡಲಾಗಿದ್ದು ಇವನ್ನು ಇಲ್ಲಿಗೆ ಅಳವಡಿಸಬಹುದು ಎಂದು ಸಭೆಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>