<p>ಈರೋಡ್, ತಮಿಳುನಾಡು (ಪಿಟಿಐ): ಪೆರುಂದುರೈ ಬಳಿ ಮಂಗಳವಾರ ಬಟ್ಟೆ ಗಿರಣಿ ಬಣ್ಣ ಹಾಕುವ ಘಟಕದಲ್ಲಿ ಉಸಿರುಗಟ್ಟಿಸುವ ವಿಷಾನಿಲ ತುಂಬಿಕೊಂಡಿದ್ದ ಟ್ಯಾಂಕ್ ಒಳಗೆ ಬಿದ್ದಿದ್ದ ಏಳು ಮಂದಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ಘಟಕದ ವ್ಯವಸ್ಥಾಪಕರು ಸೇರಿದಂತೆ ಮೂವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.<br /> <br /> ಮಾಲಿನ್ಯ ನಿಯಂತ್ರಣ ಉಸ್ತುವಾರಿ ಹಾಗೂ ಕಾರ್ಮಿಕ ಕಲ್ಯಾಣ ಅಧಿಕಾರಿಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.<br /> ಐವರ ಶವವನ್ನು ಕುಟುಂಬ ಸದಸ್ಯರ ವಶಕ್ಕೆ ನೀಡಲಾಗಿದೆ. ಉಳಿದ ಇಬ್ಬರು ನೇಪಾಳದವರಾದ ಕಾರಣ ಇಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.<br /> <br /> ಕಾರ್ಖಾನೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ, ಬಣ್ಣ ಹಾಕುವ ಘಟಕದ ಬಾಗಿಲನ್ನು ಮುಚ್ಚಿಸಲಾಗುವುದೆಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.<br /> <br /> <strong>ಘಟನೆ ಹಿನ್ನೆಲೆ: </strong>ಇಬ್ಬರು ಕೆಲಸಗಾರರು ಮಂಗಳವಾರ ಅಕಸ್ಮಾತಾಗಿ ವಿಷಾನಿಲ ಟ್ಯಾಂಕ್ ಒಳಗೆ ಬಿದ್ದಿದ್ದಾರೆ. ಅಲ್ಲೇ ಇದ್ದ ಐವರು ಅವರನ್ನು ಬಚಾವ್ ಮಾಡಲು ಟ್ಯಾಂಕ್ಗೆ ಹಾರಿದ್ದಾರೆ. ಘಟಕದಲ್ಲಿದ್ದ ಉಳಿದ ಕೆಲಸಗಾರರು ಮೋಟಾರು ದುರಸ್ತಿ ಕೆಲಸದಲ್ಲಿ ಮಗ್ನರಾಗಿದ್ದ ಕಾರಣ ಏಳೂ ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈರೋಡ್, ತಮಿಳುನಾಡು (ಪಿಟಿಐ): ಪೆರುಂದುರೈ ಬಳಿ ಮಂಗಳವಾರ ಬಟ್ಟೆ ಗಿರಣಿ ಬಣ್ಣ ಹಾಕುವ ಘಟಕದಲ್ಲಿ ಉಸಿರುಗಟ್ಟಿಸುವ ವಿಷಾನಿಲ ತುಂಬಿಕೊಂಡಿದ್ದ ಟ್ಯಾಂಕ್ ಒಳಗೆ ಬಿದ್ದಿದ್ದ ಏಳು ಮಂದಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ಘಟಕದ ವ್ಯವಸ್ಥಾಪಕರು ಸೇರಿದಂತೆ ಮೂವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.<br /> <br /> ಮಾಲಿನ್ಯ ನಿಯಂತ್ರಣ ಉಸ್ತುವಾರಿ ಹಾಗೂ ಕಾರ್ಮಿಕ ಕಲ್ಯಾಣ ಅಧಿಕಾರಿಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.<br /> ಐವರ ಶವವನ್ನು ಕುಟುಂಬ ಸದಸ್ಯರ ವಶಕ್ಕೆ ನೀಡಲಾಗಿದೆ. ಉಳಿದ ಇಬ್ಬರು ನೇಪಾಳದವರಾದ ಕಾರಣ ಇಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.<br /> <br /> ಕಾರ್ಖಾನೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ, ಬಣ್ಣ ಹಾಕುವ ಘಟಕದ ಬಾಗಿಲನ್ನು ಮುಚ್ಚಿಸಲಾಗುವುದೆಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.<br /> <br /> <strong>ಘಟನೆ ಹಿನ್ನೆಲೆ: </strong>ಇಬ್ಬರು ಕೆಲಸಗಾರರು ಮಂಗಳವಾರ ಅಕಸ್ಮಾತಾಗಿ ವಿಷಾನಿಲ ಟ್ಯಾಂಕ್ ಒಳಗೆ ಬಿದ್ದಿದ್ದಾರೆ. ಅಲ್ಲೇ ಇದ್ದ ಐವರು ಅವರನ್ನು ಬಚಾವ್ ಮಾಡಲು ಟ್ಯಾಂಕ್ಗೆ ಹಾರಿದ್ದಾರೆ. ಘಟಕದಲ್ಲಿದ್ದ ಉಳಿದ ಕೆಲಸಗಾರರು ಮೋಟಾರು ದುರಸ್ತಿ ಕೆಲಸದಲ್ಲಿ ಮಗ್ನರಾಗಿದ್ದ ಕಾರಣ ಏಳೂ ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>