<p><strong>ಬೆಂಗಳೂರು:</strong> ಗಿರಿಜನ ಮಹಿಳೆಯರನ್ನು ಸ್ವಾವಲಂಬಿಗೊಳಿಸುವ ಸಲುವಾಗಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮವು ಮೂರು ವರ್ಷಗಳ ಹಿಂದೆ ರೂಪಿಸಿದ್ದ `ಭೂ ಒಡೆತನ~ ವಿನೂತನ ಯೋಜನೆಯು ಈಗ ಫಲ ಕಾಣುತ್ತಿದೆ.<br /> <br /> ಒಪ್ಪತ್ತಿನ ಗಂಜಿಗಾಗಿ ಶ್ರಮವಹಿಸಿ ದುಡಿಯುವ ಮಹಿಳೆಯರು ಭೂಮಿಯ ಒಡೆಯರಾಗಲು ಸಾಧ್ಯವೇ? ಇಂತಹ ಕನಸನ್ನು ಸಾಕಾರಗೊಳಿಸಲು ಈ ಯೋಜನೆಯು ಸಾಥ್ ನೀಡಲಿದೆ. ಮೂರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಯೋಜನೆಯು ಒಂಟಿ ಮಹಿಳೆಯರು, ನಿರ್ಗತಿಕ ಮತ್ತು ನಿರಾಶ್ರಿತ ಬುಡಕಟ್ಟು ಜನಾಂಗದ ಬಡ ಮಹಿಳೆಯರಿಗೆ ಊರುಗೋಲಾಗಿ ಆಸರೆ ನೀಡುತ್ತಿ.<br /> <br /> <strong>ಏನಿದು `ಭೂ ಒಡೆತನ~?: </strong><br /> ಪ್ರತಿ ಜಿಲ್ಲೆಗಳಲ್ಲಿರುವ ಪರಿಶಿಷ್ಟ ಪಂಗಡದ ನಿಸ್ಸಹಾಯಕ ಹೆಣ್ಣು ಮಕ್ಕಳಿಗೆ ತಾವು ವಾಸವಿರುವ ಜಾಗದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಒಣ (2 ಎಕರೆ) ಅಥವಾ ಕೃಷಿ ಭೂಮಿ (1 ಎಕರೆ) ಯನ್ನು ನಿಗಮವು ನೇರವಾಗಿ ಖರೀದಿಸಿ ನೀಡಲಿದೆ. ನಿಗಮದ ಅಧಿಕಾರಿಗಳು ಮತ್ತು ಕ್ಷೇತ್ರಪಾಲಕರು ವಿವಿಧ ಜಿಲ್ಲೆಗಳಲ್ಲಿರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಸುತ್ತಾರೆ. <br /> <br /> ನಂತರ ಅವರ ಪೂರ್ವಾಪರಗಳನ್ನು ತಿಳಿದುಕೊಂಡು ಜಿಲ್ಲಾಧಿಕಾರಿ ಶಿಫಾರಸ್ಸು ನೀಡುತ್ತಾರೆ. ನಂತರ ಗ್ರಾಮಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.<br /> <br /> ಈ ಯೋಜನೆಗಾಗಿ ನಿಗಮವು ಪ್ರಸಕ್ತ ವರ್ಷದಲ್ಲಿ 3 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಈ ಬಾರಿ 200 ಮಂದಿ ಫಲಾನುಭವಿಗಳನ್ನು ಗುರುತಿಸಿ ಈ ಯೋಜನೆಯಡಿ ಭೂಮಿ ಖರೀದಿ ಮಾಡುವ ಪ್ರಸ್ತಾವ ಇದೆ. ಪ್ರತಿ ಫಲಾನುಭವಿಗೂ ಎರಡೂವರೆ ಲಕ್ಷ ರೂಪಾಯಿ ಮಿತಿಯಲ್ಲಿ ಭೂ ಖರೀದಿ ಮಾಡಿ ನೀಡಲಾಗುತ್ತದೆ.<br /> <br /> ಯೋಜನೆಯು ಆರಂಭಗೊಂಡು ಮೂರು ವರ್ಷ ಕಳೆದಿದೆ. ವಿವಿಧ ಜಿಲ್ಲೆಗಳಿಂದ ಸುಮಾರು 800 ಮಂದಿ ಈ ಯೋಜನೆಯ ಫಲಾನುಭವಿಯಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈವರೆಗೆ 40 ಮಂದಿ ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. <br /> <br /> <strong>ಚಾಲ್ತಿಯಲ್ಲಿರುವ ಜಿಲ್ಲೆಗಳು</strong><br /> ರಾಜ್ಯದ ವಿವಿಧ ಜಿಲ್ಲೆಗಳಾದ ಕೊಪ್ಪಳ, ಬಳ್ಳಾರಿ, ಗುಲ್ಬರ್ಗ, ಗದಗ, ಹಾವೇರಿ, ದಕ್ಷಿಣ ಕನ್ನಡ, ಬಾಗಲಕೋಟೆ ಮತ್ತು ಉಡುಪಿಯ ಗ್ರಾಮೀಣ ಪ್ರದೇಶಗಳಲ್ಲಿ ನಿಗಮದ ಬಜೆಟ್ ಅನುಗುಣವಾಗಿ ಭೂಮಿ ದೊರೆಯುತ್ತಿದ್ದು, ಈ ಭಾಗದಲ್ಲಿ ಹೆಚ್ಚಿನ ಫಲಾನುಭವಿಗಳನ್ನು ಕಾಣಬಹುದು. ಪರಿಶಿಷ್ಟ ಪಂಗಡಗಳ ಪೈಕಿ ಒಟ್ಟು 50 ಪಂಗಡಗಳು ಈ ಯೋಜನೆಯಡಿಯಲ್ಲಿ ಬರುತ್ತವೆ. <br /> <br /> ಭೂರಹಿತ ಪರಿಶಿಷ್ಟ ಪಂಗಡದ ಕಾರ್ಮಿಕ ಮಹಿಳೆ ಫಲಾಪೇಕ್ಷಿಯಾಗಿರಬೇಕು. ಭೂಮಿ ನೀಡುವವರ ಮತ್ತು ಪಡೆಯುವವರ ಎಲ್ಲಾ ದಾಖಲೆಗಳು ಪರಿಶೀಲನೆಗೆ ಒಳಪಡುತ್ತವೆ. ಆ ನಂತರವೇ ನಿಗಮವು ರೂ. 1. 25 ಲಕ್ಷವನ್ನು ಭೂ ಖರೀದಿಗೆ ಸಹಾಯಧನವಾಗಿ ನೀಡುತ್ತದೆ. ಉಳಿದ ರೂ.1. 25 ಲಕ್ಷವನ್ನು ಸಾಲದ ರೂಪದಲ್ಲಿ ಫಲಾನುಭವಿಗಳು ಭರಿಸಬೇಕು. ಈ ಸಾಲಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸಾಲ ಪಾವತಿಯ ನಂತರ ಪೂರ್ಣ ಪ್ರಮಾಣದಲ್ಲಿ ಭೂಮಿ ಹಕ್ಕನ್ನು ಫಲಾನುಭವಿಗಳು ಪಡೆಯುತ್ತಾರೆ. <br /> <br /> <strong>ತೊಡಕುಗಳೇನು?</strong><br /> ಅರ್ಜಿದಾರರು ವಾಸದಿಂದ ಸುಮಾರು 5 ಕಿ.ಮೀ. ವ್ಯಾಪ್ತಿಯ ಒಳಗೆ ಭೂಮಿ ಖರೀದಿ ಮಾಡಬೇಕಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರದವರಿಂದ ಭೂಮಿ ಖರೀದಿ ಮಾಡಬೇಕು ಎಂಬ ನಿಯಮವಿರುವುದರಿಂದ ಫಲಾನುಭವಿಗಳಿಗೆ ನೀಡಲು ಸಾಕಷ್ಟು ಭೂಮಿಯ ಕೊರತೆಯಿದೆ. <br /> <br /> ಇದಲ್ಲದೇ ಬೆಂಗಳೂರು ಗ್ರಾಮಾಂತರ ಮತ್ತು ನಗರ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿದ್ದು, ಎರಡೂವರೆ ಲಕ್ಷಕ್ಕೆ ಭೂಮಿ ದೊರೆಯದೇ ಇರುವುದರ ಬಗ್ಗೆ ನಿಗಮವು ಇನ್ನೂ ಉತ್ತರ ಕಂಡುಕೊಂಡಿಲ್ಲ. <br /> <br /> ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಸರ್ಫರೋಜ್ ಖಾನ್, `ನಗರಕ್ಕಿಂತ ಗ್ರಾಮೀಣ ಭಾಗದ ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ನಗರ ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಿರುವುದರಿಂದ, ನಗರ ಪ್ರದೇಶದ ಮಹಿಳೆಯರನ್ನು ಸ್ವಾವಲಂಬಿಗೊಳಿಸುವ ಸಲುವಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ~ ಎಂದು ಹೇಳಿದರು.</p>.<p>ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ಕರ್ನಾಟಕ ರಾಜ್ಯ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ, 4ನೇ ಮುಖ್ಯರಸ್ತೆ, 16ನೇ ಅಡ್ಡರಸ್ತೆ, ಸಂಪಂಗಿರಾಮನಗರ, ಬೆಂಗಳೂರು -560027. ದೂರವಾಣಿ ಸಂಖ್ಯೆ- (080) 2211 0675.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗಿರಿಜನ ಮಹಿಳೆಯರನ್ನು ಸ್ವಾವಲಂಬಿಗೊಳಿಸುವ ಸಲುವಾಗಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮವು ಮೂರು ವರ್ಷಗಳ ಹಿಂದೆ ರೂಪಿಸಿದ್ದ `ಭೂ ಒಡೆತನ~ ವಿನೂತನ ಯೋಜನೆಯು ಈಗ ಫಲ ಕಾಣುತ್ತಿದೆ.<br /> <br /> ಒಪ್ಪತ್ತಿನ ಗಂಜಿಗಾಗಿ ಶ್ರಮವಹಿಸಿ ದುಡಿಯುವ ಮಹಿಳೆಯರು ಭೂಮಿಯ ಒಡೆಯರಾಗಲು ಸಾಧ್ಯವೇ? ಇಂತಹ ಕನಸನ್ನು ಸಾಕಾರಗೊಳಿಸಲು ಈ ಯೋಜನೆಯು ಸಾಥ್ ನೀಡಲಿದೆ. ಮೂರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಯೋಜನೆಯು ಒಂಟಿ ಮಹಿಳೆಯರು, ನಿರ್ಗತಿಕ ಮತ್ತು ನಿರಾಶ್ರಿತ ಬುಡಕಟ್ಟು ಜನಾಂಗದ ಬಡ ಮಹಿಳೆಯರಿಗೆ ಊರುಗೋಲಾಗಿ ಆಸರೆ ನೀಡುತ್ತಿ.<br /> <br /> <strong>ಏನಿದು `ಭೂ ಒಡೆತನ~?: </strong><br /> ಪ್ರತಿ ಜಿಲ್ಲೆಗಳಲ್ಲಿರುವ ಪರಿಶಿಷ್ಟ ಪಂಗಡದ ನಿಸ್ಸಹಾಯಕ ಹೆಣ್ಣು ಮಕ್ಕಳಿಗೆ ತಾವು ವಾಸವಿರುವ ಜಾಗದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಒಣ (2 ಎಕರೆ) ಅಥವಾ ಕೃಷಿ ಭೂಮಿ (1 ಎಕರೆ) ಯನ್ನು ನಿಗಮವು ನೇರವಾಗಿ ಖರೀದಿಸಿ ನೀಡಲಿದೆ. ನಿಗಮದ ಅಧಿಕಾರಿಗಳು ಮತ್ತು ಕ್ಷೇತ್ರಪಾಲಕರು ವಿವಿಧ ಜಿಲ್ಲೆಗಳಲ್ಲಿರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಸುತ್ತಾರೆ. <br /> <br /> ನಂತರ ಅವರ ಪೂರ್ವಾಪರಗಳನ್ನು ತಿಳಿದುಕೊಂಡು ಜಿಲ್ಲಾಧಿಕಾರಿ ಶಿಫಾರಸ್ಸು ನೀಡುತ್ತಾರೆ. ನಂತರ ಗ್ರಾಮಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.<br /> <br /> ಈ ಯೋಜನೆಗಾಗಿ ನಿಗಮವು ಪ್ರಸಕ್ತ ವರ್ಷದಲ್ಲಿ 3 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಈ ಬಾರಿ 200 ಮಂದಿ ಫಲಾನುಭವಿಗಳನ್ನು ಗುರುತಿಸಿ ಈ ಯೋಜನೆಯಡಿ ಭೂಮಿ ಖರೀದಿ ಮಾಡುವ ಪ್ರಸ್ತಾವ ಇದೆ. ಪ್ರತಿ ಫಲಾನುಭವಿಗೂ ಎರಡೂವರೆ ಲಕ್ಷ ರೂಪಾಯಿ ಮಿತಿಯಲ್ಲಿ ಭೂ ಖರೀದಿ ಮಾಡಿ ನೀಡಲಾಗುತ್ತದೆ.<br /> <br /> ಯೋಜನೆಯು ಆರಂಭಗೊಂಡು ಮೂರು ವರ್ಷ ಕಳೆದಿದೆ. ವಿವಿಧ ಜಿಲ್ಲೆಗಳಿಂದ ಸುಮಾರು 800 ಮಂದಿ ಈ ಯೋಜನೆಯ ಫಲಾನುಭವಿಯಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈವರೆಗೆ 40 ಮಂದಿ ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. <br /> <br /> <strong>ಚಾಲ್ತಿಯಲ್ಲಿರುವ ಜಿಲ್ಲೆಗಳು</strong><br /> ರಾಜ್ಯದ ವಿವಿಧ ಜಿಲ್ಲೆಗಳಾದ ಕೊಪ್ಪಳ, ಬಳ್ಳಾರಿ, ಗುಲ್ಬರ್ಗ, ಗದಗ, ಹಾವೇರಿ, ದಕ್ಷಿಣ ಕನ್ನಡ, ಬಾಗಲಕೋಟೆ ಮತ್ತು ಉಡುಪಿಯ ಗ್ರಾಮೀಣ ಪ್ರದೇಶಗಳಲ್ಲಿ ನಿಗಮದ ಬಜೆಟ್ ಅನುಗುಣವಾಗಿ ಭೂಮಿ ದೊರೆಯುತ್ತಿದ್ದು, ಈ ಭಾಗದಲ್ಲಿ ಹೆಚ್ಚಿನ ಫಲಾನುಭವಿಗಳನ್ನು ಕಾಣಬಹುದು. ಪರಿಶಿಷ್ಟ ಪಂಗಡಗಳ ಪೈಕಿ ಒಟ್ಟು 50 ಪಂಗಡಗಳು ಈ ಯೋಜನೆಯಡಿಯಲ್ಲಿ ಬರುತ್ತವೆ. <br /> <br /> ಭೂರಹಿತ ಪರಿಶಿಷ್ಟ ಪಂಗಡದ ಕಾರ್ಮಿಕ ಮಹಿಳೆ ಫಲಾಪೇಕ್ಷಿಯಾಗಿರಬೇಕು. ಭೂಮಿ ನೀಡುವವರ ಮತ್ತು ಪಡೆಯುವವರ ಎಲ್ಲಾ ದಾಖಲೆಗಳು ಪರಿಶೀಲನೆಗೆ ಒಳಪಡುತ್ತವೆ. ಆ ನಂತರವೇ ನಿಗಮವು ರೂ. 1. 25 ಲಕ್ಷವನ್ನು ಭೂ ಖರೀದಿಗೆ ಸಹಾಯಧನವಾಗಿ ನೀಡುತ್ತದೆ. ಉಳಿದ ರೂ.1. 25 ಲಕ್ಷವನ್ನು ಸಾಲದ ರೂಪದಲ್ಲಿ ಫಲಾನುಭವಿಗಳು ಭರಿಸಬೇಕು. ಈ ಸಾಲಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸಾಲ ಪಾವತಿಯ ನಂತರ ಪೂರ್ಣ ಪ್ರಮಾಣದಲ್ಲಿ ಭೂಮಿ ಹಕ್ಕನ್ನು ಫಲಾನುಭವಿಗಳು ಪಡೆಯುತ್ತಾರೆ. <br /> <br /> <strong>ತೊಡಕುಗಳೇನು?</strong><br /> ಅರ್ಜಿದಾರರು ವಾಸದಿಂದ ಸುಮಾರು 5 ಕಿ.ಮೀ. ವ್ಯಾಪ್ತಿಯ ಒಳಗೆ ಭೂಮಿ ಖರೀದಿ ಮಾಡಬೇಕಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರದವರಿಂದ ಭೂಮಿ ಖರೀದಿ ಮಾಡಬೇಕು ಎಂಬ ನಿಯಮವಿರುವುದರಿಂದ ಫಲಾನುಭವಿಗಳಿಗೆ ನೀಡಲು ಸಾಕಷ್ಟು ಭೂಮಿಯ ಕೊರತೆಯಿದೆ. <br /> <br /> ಇದಲ್ಲದೇ ಬೆಂಗಳೂರು ಗ್ರಾಮಾಂತರ ಮತ್ತು ನಗರ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿದ್ದು, ಎರಡೂವರೆ ಲಕ್ಷಕ್ಕೆ ಭೂಮಿ ದೊರೆಯದೇ ಇರುವುದರ ಬಗ್ಗೆ ನಿಗಮವು ಇನ್ನೂ ಉತ್ತರ ಕಂಡುಕೊಂಡಿಲ್ಲ. <br /> <br /> ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಸರ್ಫರೋಜ್ ಖಾನ್, `ನಗರಕ್ಕಿಂತ ಗ್ರಾಮೀಣ ಭಾಗದ ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ನಗರ ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಿರುವುದರಿಂದ, ನಗರ ಪ್ರದೇಶದ ಮಹಿಳೆಯರನ್ನು ಸ್ವಾವಲಂಬಿಗೊಳಿಸುವ ಸಲುವಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ~ ಎಂದು ಹೇಳಿದರು.</p>.<p>ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ಕರ್ನಾಟಕ ರಾಜ್ಯ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ, 4ನೇ ಮುಖ್ಯರಸ್ತೆ, 16ನೇ ಅಡ್ಡರಸ್ತೆ, ಸಂಪಂಗಿರಾಮನಗರ, ಬೆಂಗಳೂರು -560027. ದೂರವಾಣಿ ಸಂಖ್ಯೆ- (080) 2211 0675.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>