<p><strong>ಶ್ರೀನಿವಾಸಪುರ:</strong> ತಾಲ್ಲೂಕಿನ ಸಂತೆಗಳಲ್ಲಿ ಗುಡ್ಡೆ ತರಕಾರಿ ಮಾರಾಟ ಹೆಚ್ಚು ಆಕರ್ಷಕವಾಗುತ್ತಿದೆ. ಗ್ರಾಹಕರು ತಮಗೆ ಬೇಕಾದ ತರಕಾರಿಯನ್ನು ತಕ್ಕಡಿಯಲ್ಲಿ ತೂಕ ಮಾಡದೆ ಖರೀದಿಸಬಹುದಾಗಿದೆ.<br /> <br /> ಕೆಲವು ತರಕಾರಿ ವ್ಯಾಪಾರಿಗಳು ಬೇರೆ ಬೇರೆ ತರಕಾರಿಗಳನ್ನು ಸಗಟು ಮಾರುಕಟ್ಟೆಯಲ್ಲಿ ಖರೀದಿಸಿ, ವಾರದ ಸಂತೆಗೆ ತಂದು ಚಿಕ್ಕ ಗುಡ್ಡೆಗಳಿಟ್ಟು, ಎಲ್ಲ ತರಕಾರಿಗು ಒಂದು ಸಾಮಾನ್ಯ ಬೆಲೆ ನಿಗದಿಪಡಿಸಿ ಮಾರುವುದು ಹೊಸ ಬೆಳವಣಿಗೆಯಾಗಿದೆ.<br /> <br /> ಈ ಪದ್ಧತಿಯಲ್ಲಿ ಬದನೆ ಕಾಯಿ, ಹೀರೆಕಾಯಿ, ಬೆಂಡೆಕಾಯಿ, ಆಗಲಕಾಯಿ, ಟೊಮೆಟೊ, ಆಲೂಗಡ್ಡೆ, ಹಸಿ ಮೆಣಸಿನ ಕಾಯಿ, ಕ್ಯಾಪ್ಸಿಕಂ, ಬೀನ್ಸ್, ಚಪ್ಪರ<br /> ಬದನೆ ಮುಂತಾದ ತರಕಾರಿಗಳನ್ನು ಒಂದೆರಡು ಹಿಡಿಯಷ್ಟು ಗುಡ್ಡೆಯಿಡುತ್ತಾರೆ, ಸಾಮಾನ್ಯವಾಗಿ ಗುಡ್ಡೆಯೊಂದಕ್ಕೆ ₨ 10 ಬೆಲೆ ನಿಗದಿಪಡಿಸುತ್ತಾರೆ. ಯಾವುದೇ ಕೊಸರಾಟವಿಲ್ಲದೆ ವ್ಯಾಪಾರ ನಡೆಯುತ್ತದೆ.</p>.<p>ಈಗ ತರಕಾರಿ ಬೆಲೆ ಗಗನಕ್ಕೇರಿದ್ದರಿಂದ ಗ್ರಾಹಕರು ಕೆ.ಜಿ.ಗಟ್ಟಲೆ ಕೊಳ್ಳಲು ಮುಂದಾಗುತ್ತಿಲ್ಲ. ಒಂದು ಕೆ.ಜಿ. ತರಕಾರಿಗೆ ₨ 40 ರಿಂದ 100 ನೀಡುವ ಬದಲು ಒಂದು ಗುಡ್ಡೆ ತರಕಾರಿಗೆ ₨ 10ರಂತೆ ಅಗತ್ಯವಿದ್ದಷ್ಟು ಗುಡ್ಡೆಗಳನ್ನು ಖರೀದಿಸಿ ಕೊಂಡೊಯ್ಯುತ್ತಾರೆ. ಕೊಳ್ಳುವ ತರಕಾರಿ ಪ್ರಮಾಣ ಕಡಿಮೆಯಾದರೂ, ತಾವು ಹೆಚ್ಚು ಹಣ ಕೊಡುತ್ತಿದ್ದೇವೆ ಅನಿಸುವುದಿಲ್ಲ ಎಂದು ತರಕಾರಿ ವ್ಯಾಪಾರಿ ಮುನಿಯಮ್ಮ ತಿಳಿಸಿದರು.</p>.<p>ಹಿಂದೆ ಎಲ್ಲ ತರಕಾರಿಗಳನ್ನೂ ತೂಕ ಮಾಡಿದರೆ, ಮೂಲಂಗಿಯನ್ನು ಮಾತ್ರ ಗುಡ್ಡೆಯಿಟ್ಟು ಮಾರಲಾಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ತರಕಾರಿಗಳನ್ನೂ ಗುಡ್ಡೆ ವ್ಯಾಪಾರಕ್ಕೆ ಇಡಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ:</strong> ತಾಲ್ಲೂಕಿನ ಸಂತೆಗಳಲ್ಲಿ ಗುಡ್ಡೆ ತರಕಾರಿ ಮಾರಾಟ ಹೆಚ್ಚು ಆಕರ್ಷಕವಾಗುತ್ತಿದೆ. ಗ್ರಾಹಕರು ತಮಗೆ ಬೇಕಾದ ತರಕಾರಿಯನ್ನು ತಕ್ಕಡಿಯಲ್ಲಿ ತೂಕ ಮಾಡದೆ ಖರೀದಿಸಬಹುದಾಗಿದೆ.<br /> <br /> ಕೆಲವು ತರಕಾರಿ ವ್ಯಾಪಾರಿಗಳು ಬೇರೆ ಬೇರೆ ತರಕಾರಿಗಳನ್ನು ಸಗಟು ಮಾರುಕಟ್ಟೆಯಲ್ಲಿ ಖರೀದಿಸಿ, ವಾರದ ಸಂತೆಗೆ ತಂದು ಚಿಕ್ಕ ಗುಡ್ಡೆಗಳಿಟ್ಟು, ಎಲ್ಲ ತರಕಾರಿಗು ಒಂದು ಸಾಮಾನ್ಯ ಬೆಲೆ ನಿಗದಿಪಡಿಸಿ ಮಾರುವುದು ಹೊಸ ಬೆಳವಣಿಗೆಯಾಗಿದೆ.<br /> <br /> ಈ ಪದ್ಧತಿಯಲ್ಲಿ ಬದನೆ ಕಾಯಿ, ಹೀರೆಕಾಯಿ, ಬೆಂಡೆಕಾಯಿ, ಆಗಲಕಾಯಿ, ಟೊಮೆಟೊ, ಆಲೂಗಡ್ಡೆ, ಹಸಿ ಮೆಣಸಿನ ಕಾಯಿ, ಕ್ಯಾಪ್ಸಿಕಂ, ಬೀನ್ಸ್, ಚಪ್ಪರ<br /> ಬದನೆ ಮುಂತಾದ ತರಕಾರಿಗಳನ್ನು ಒಂದೆರಡು ಹಿಡಿಯಷ್ಟು ಗುಡ್ಡೆಯಿಡುತ್ತಾರೆ, ಸಾಮಾನ್ಯವಾಗಿ ಗುಡ್ಡೆಯೊಂದಕ್ಕೆ ₨ 10 ಬೆಲೆ ನಿಗದಿಪಡಿಸುತ್ತಾರೆ. ಯಾವುದೇ ಕೊಸರಾಟವಿಲ್ಲದೆ ವ್ಯಾಪಾರ ನಡೆಯುತ್ತದೆ.</p>.<p>ಈಗ ತರಕಾರಿ ಬೆಲೆ ಗಗನಕ್ಕೇರಿದ್ದರಿಂದ ಗ್ರಾಹಕರು ಕೆ.ಜಿ.ಗಟ್ಟಲೆ ಕೊಳ್ಳಲು ಮುಂದಾಗುತ್ತಿಲ್ಲ. ಒಂದು ಕೆ.ಜಿ. ತರಕಾರಿಗೆ ₨ 40 ರಿಂದ 100 ನೀಡುವ ಬದಲು ಒಂದು ಗುಡ್ಡೆ ತರಕಾರಿಗೆ ₨ 10ರಂತೆ ಅಗತ್ಯವಿದ್ದಷ್ಟು ಗುಡ್ಡೆಗಳನ್ನು ಖರೀದಿಸಿ ಕೊಂಡೊಯ್ಯುತ್ತಾರೆ. ಕೊಳ್ಳುವ ತರಕಾರಿ ಪ್ರಮಾಣ ಕಡಿಮೆಯಾದರೂ, ತಾವು ಹೆಚ್ಚು ಹಣ ಕೊಡುತ್ತಿದ್ದೇವೆ ಅನಿಸುವುದಿಲ್ಲ ಎಂದು ತರಕಾರಿ ವ್ಯಾಪಾರಿ ಮುನಿಯಮ್ಮ ತಿಳಿಸಿದರು.</p>.<p>ಹಿಂದೆ ಎಲ್ಲ ತರಕಾರಿಗಳನ್ನೂ ತೂಕ ಮಾಡಿದರೆ, ಮೂಲಂಗಿಯನ್ನು ಮಾತ್ರ ಗುಡ್ಡೆಯಿಟ್ಟು ಮಾರಲಾಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ತರಕಾರಿಗಳನ್ನೂ ಗುಡ್ಡೆ ವ್ಯಾಪಾರಕ್ಕೆ ಇಡಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>