<p><strong>ಗುರುಮಠಕಲ್: </strong>ಜಗತ್ತಿನ ವಿವಿಧೆಡೆ ನಡೆಯುತ್ತಿರುವ ಭೂಕಂಪ, ಸುನಾಮಿಯಂತಹ ಘಟನೆಗಳು 2012 ಪ್ರಳಯವಾಗುತ್ತದೆ ಎಂಬ ಜನರ ನಂಬಿಕೆಗೆ ಇನ್ನಷ್ಟು ಪುಷ್ಟಿ ಕೊಡುತ್ತಿವೆ. ಇಂತಹ ಸಂದರ್ಭದಲ್ಲಿಯೇ ನಿಸರ್ಗದಲ್ಲಿ ಹಲವಾರು ವಿಸ್ಮಯಕಾರಿ ಘಟನೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅನಾಹುತ ಕಾದಿದೆಯೇ ಎಂಬ ಆತಂಕ ಸೃಷ್ಟಿಯಾಗುತ್ತಿದೆ. <br /> <br /> ಸಮೀಪದ ಚಿಂತಕುಂಟಾ ಗ್ರಾಮದ ಹೊಲದಲ್ಲಿರುವ ಬಾವಿಯ ಒಳಭಾಗದಿಂದ ಪ್ರಕಾಶಮಾನ ಬೆಳಕು ಹೊರಹೊಮ್ಮುತ್ತಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಗ್ರಾಮದ ವಿಶ್ವನಾಥರೆಡ್ಡಿ ಎಂಬುವವರ ಹೊಲದಲ್ಲಿರುವ ಹಳೆಯ ಬಾವಿಯಲ್ಲಿ ಕಳೆದ 4 ದಿನಗಳಿಂದ ಸಂಜೆ 7 ಗಂಟೆಯಿಂದ ಬೆಳಗಿನ ಜಾವ 6ರ ವರೆಗೆ ಈ ಬೆಳಕು ಸ್ಪಷ್ಟವಾಗಿ ಗೋಚರಿಸುತ್ತಿದೆ. <br /> <br /> ಗ್ರಾಮಸ್ಥರು ಈ ಹಳೆಯ ಬಾವಿಯಲ್ಲಿರುವ ನೀರನ್ನು ಪವಿತ್ರವೆಂಬ ನಂಬುತ್ತಿದ್ದು, ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಈ ಬಾವಿಯ ನೀರನ್ನೇ ತೆಗೆದುಕೊಂಡು ಹೋಗುತ್ತಾರೆ. ಬುಧವಾರ ಈ ಬಾವಿಯಲ್ಲಿನ ನೀರು ತೆಗೆದುಕೊಂಡು ಹೋಗಲು ಬಂದ ಸಂದರ್ಭದಲ್ಲಿ ನೀರಿನಿಂದ ಪ್ರಕಾಶಮಾನ ಬೆಳಕು ಹೊರಸೂಸುತ್ತಿರುವುದು ಗಮನಕ್ಕೆ ಬಂದಿದೆ. <br /> <br /> ಬಾವಿಯೊಳಗೆ ಬ್ಯಾಟರಿ ಲೈಟ್ ಇರಬಹುದು ಎಂದು ಶಂಕಿಸಿ, ಬಾಬು ಎಂಬ ವ್ಯಕ್ತಿ ಬಾವಿಗೆ ಇಳಿದು ಕಬ್ಬಿಣದ ಪೈಪ್ನಿಂದ ಪರೀಕ್ಷಿಸಿದರು. ಇದರಿಂದ ಸುತ್ತಮುತ್ತ ಬೆಳಕು ಚಿಮ್ಮಿದಂತೆ ಕಾಣತೊಡಗಿತಂತೆ. ಅಲ್ಲದೇ ತನ್ನನ್ನೇ ಮೇಲಕ್ಕೆ ಎತ್ತಿ ಬಿಸಾಡಿದಂತಹ ಅನುಭವ ಆಯಿತು ಎಂದು ಬಾಬು ಹೇಳುತ್ತಾರೆ. <br /> <br /> ಬೆಳಕಿನ ಹಿಂದಿರುವ ರಹಸ್ಯ ತಿಳಿಯಲು ಬಾವಿಯೊಳಗಿನ ನೀರನ್ನು ಖಾಲಿ ಮಾಡಲು ಮೋಟಾರ್ ಹಚ್ಚಲಾಯಿತು. ಆದರೆ ನೀರೆತ್ತುವ ಮೋಟಾರ್ ಸುಟ್ಟು ಹೋಗಿದ್ದನ್ನು ಕಂಡ ಜನರು ಇನ್ನಷ್ಟು ಗಾಬರಿಯಾದರು.ಗ್ರಾಮದ ಹಿರಿಯರು ಹೇಳುವ ಪ್ರಕಾರ, ಈ ಹಿಂದೆ ಈ ಬಾವಿಯೊಳಗೆ ಖಾಸಿಮ್ಸಾಬ್ ಪೀರ್ ಮುಳುಗಿದೆ. ಆ ದೇವರೇ ಪ್ರತ್ಯಕ್ಷ ಆಗಿರಬಹುದು. ಈ ಹಿನ್ನೆಲೆಯಲ್ಲಿ ಬಾವಿಯೊಳಗೆ ಬೆಳಕು ಬರುತ್ತಿರುವುದರಿಂದ ಸ್ಥಳೀಯರು ಭಯಭೀತಿಯೊಂದಿಗೆ ಭಕ್ತಿಯ ಪರವಶತೆಯಲ್ಲಿ ತೇಲಾಡುತ್ತಿದ್ದಾರೆ. <br /> <br /> ಇನ್ನೂ ಕೆಲವರ ಪ್ರಕಾರ ವಜ್ರದ ಹರಳು ಪ್ರಕಾಶಿಸುತ್ತಿರಬಹುದು ಎಂದು ನಂಬಲಾಗಿದೆ. ಹಲವು ಜನರು ಬಾವಿಯೊಳಗೆ ಸಿಡಿಲು ಬಿದ್ದಿರಬಹುದು ಎಂದು ತರ್ಕಿಸುತ್ತಿದ್ದಾರೆ.ವಿಜ್ಞಾನಕ್ಕೆ ಸವಾಲೊಡ್ಡುವ ಅದ್ಭುತ ಪವಾಡದತ್ತ ಜನಸಾಗರವೇ ಹರಿದು ಬರುತ್ತಿದೆ. <br /> <br /> ಗ್ರಾಮದ ಪಕ್ಕದಲ್ಲಿರುವ ಹಳೆಯ ಕಾಲದ ಬಾವಿ ಇದಾಗಿದ್ದು, ಮೊದಲು ಇದೇ ನೀರನ್ನೇ ಕುಡಿಯಲು, ಬಟ್ಟೆ ತೊಳೆಯುವುದು ಹಾಗೂ ಈಜಾಟಕ್ಕೆ ಬಳಕೆ ಮಾಡಲಾಗುತ್ತಿತ್ತು. ಈ ಬಾವಿ ನೀರನ್ನು ಸೇವಿಸುವುದರಿಂದ ಆನೆಕಾಲು ರೋಗ ಹರಡುತ್ತಿದೆ ಎಂಬ ಆತಂಕ ಸೃಷ್ಟಿಯಾಗಿದ್ದರಿಂದ, ಕಳೆದ ಒಂದು ದಶಕದಿಂದ ಈ ಬಾವಿಯ ನೀರು ಬಳಸುವುದನ್ನು ನಿಲ್ಲಿಸಲಾಗಿದೆ. ಈ ಬಾವಿಯ ಕಡೆ ಹೋಗಲು ಸಹ ಜನ ಹೆದರುತ್ತಿದ್ದು, ಕೇವಲ ಮಂಗಳ ಕಾರ್ಯಗಳ ದಿನದಂದು ಮಾತ್ರ ಬಾವಿ ಕಡೆ ಹೋಗುತ್ತೇವೆ ಎಂದು ಗ್ರಾಮಸ್ಥ ಚಂದ್ರಪ್ಪ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್: </strong>ಜಗತ್ತಿನ ವಿವಿಧೆಡೆ ನಡೆಯುತ್ತಿರುವ ಭೂಕಂಪ, ಸುನಾಮಿಯಂತಹ ಘಟನೆಗಳು 2012 ಪ್ರಳಯವಾಗುತ್ತದೆ ಎಂಬ ಜನರ ನಂಬಿಕೆಗೆ ಇನ್ನಷ್ಟು ಪುಷ್ಟಿ ಕೊಡುತ್ತಿವೆ. ಇಂತಹ ಸಂದರ್ಭದಲ್ಲಿಯೇ ನಿಸರ್ಗದಲ್ಲಿ ಹಲವಾರು ವಿಸ್ಮಯಕಾರಿ ಘಟನೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅನಾಹುತ ಕಾದಿದೆಯೇ ಎಂಬ ಆತಂಕ ಸೃಷ್ಟಿಯಾಗುತ್ತಿದೆ. <br /> <br /> ಸಮೀಪದ ಚಿಂತಕುಂಟಾ ಗ್ರಾಮದ ಹೊಲದಲ್ಲಿರುವ ಬಾವಿಯ ಒಳಭಾಗದಿಂದ ಪ್ರಕಾಶಮಾನ ಬೆಳಕು ಹೊರಹೊಮ್ಮುತ್ತಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಗ್ರಾಮದ ವಿಶ್ವನಾಥರೆಡ್ಡಿ ಎಂಬುವವರ ಹೊಲದಲ್ಲಿರುವ ಹಳೆಯ ಬಾವಿಯಲ್ಲಿ ಕಳೆದ 4 ದಿನಗಳಿಂದ ಸಂಜೆ 7 ಗಂಟೆಯಿಂದ ಬೆಳಗಿನ ಜಾವ 6ರ ವರೆಗೆ ಈ ಬೆಳಕು ಸ್ಪಷ್ಟವಾಗಿ ಗೋಚರಿಸುತ್ತಿದೆ. <br /> <br /> ಗ್ರಾಮಸ್ಥರು ಈ ಹಳೆಯ ಬಾವಿಯಲ್ಲಿರುವ ನೀರನ್ನು ಪವಿತ್ರವೆಂಬ ನಂಬುತ್ತಿದ್ದು, ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಈ ಬಾವಿಯ ನೀರನ್ನೇ ತೆಗೆದುಕೊಂಡು ಹೋಗುತ್ತಾರೆ. ಬುಧವಾರ ಈ ಬಾವಿಯಲ್ಲಿನ ನೀರು ತೆಗೆದುಕೊಂಡು ಹೋಗಲು ಬಂದ ಸಂದರ್ಭದಲ್ಲಿ ನೀರಿನಿಂದ ಪ್ರಕಾಶಮಾನ ಬೆಳಕು ಹೊರಸೂಸುತ್ತಿರುವುದು ಗಮನಕ್ಕೆ ಬಂದಿದೆ. <br /> <br /> ಬಾವಿಯೊಳಗೆ ಬ್ಯಾಟರಿ ಲೈಟ್ ಇರಬಹುದು ಎಂದು ಶಂಕಿಸಿ, ಬಾಬು ಎಂಬ ವ್ಯಕ್ತಿ ಬಾವಿಗೆ ಇಳಿದು ಕಬ್ಬಿಣದ ಪೈಪ್ನಿಂದ ಪರೀಕ್ಷಿಸಿದರು. ಇದರಿಂದ ಸುತ್ತಮುತ್ತ ಬೆಳಕು ಚಿಮ್ಮಿದಂತೆ ಕಾಣತೊಡಗಿತಂತೆ. ಅಲ್ಲದೇ ತನ್ನನ್ನೇ ಮೇಲಕ್ಕೆ ಎತ್ತಿ ಬಿಸಾಡಿದಂತಹ ಅನುಭವ ಆಯಿತು ಎಂದು ಬಾಬು ಹೇಳುತ್ತಾರೆ. <br /> <br /> ಬೆಳಕಿನ ಹಿಂದಿರುವ ರಹಸ್ಯ ತಿಳಿಯಲು ಬಾವಿಯೊಳಗಿನ ನೀರನ್ನು ಖಾಲಿ ಮಾಡಲು ಮೋಟಾರ್ ಹಚ್ಚಲಾಯಿತು. ಆದರೆ ನೀರೆತ್ತುವ ಮೋಟಾರ್ ಸುಟ್ಟು ಹೋಗಿದ್ದನ್ನು ಕಂಡ ಜನರು ಇನ್ನಷ್ಟು ಗಾಬರಿಯಾದರು.ಗ್ರಾಮದ ಹಿರಿಯರು ಹೇಳುವ ಪ್ರಕಾರ, ಈ ಹಿಂದೆ ಈ ಬಾವಿಯೊಳಗೆ ಖಾಸಿಮ್ಸಾಬ್ ಪೀರ್ ಮುಳುಗಿದೆ. ಆ ದೇವರೇ ಪ್ರತ್ಯಕ್ಷ ಆಗಿರಬಹುದು. ಈ ಹಿನ್ನೆಲೆಯಲ್ಲಿ ಬಾವಿಯೊಳಗೆ ಬೆಳಕು ಬರುತ್ತಿರುವುದರಿಂದ ಸ್ಥಳೀಯರು ಭಯಭೀತಿಯೊಂದಿಗೆ ಭಕ್ತಿಯ ಪರವಶತೆಯಲ್ಲಿ ತೇಲಾಡುತ್ತಿದ್ದಾರೆ. <br /> <br /> ಇನ್ನೂ ಕೆಲವರ ಪ್ರಕಾರ ವಜ್ರದ ಹರಳು ಪ್ರಕಾಶಿಸುತ್ತಿರಬಹುದು ಎಂದು ನಂಬಲಾಗಿದೆ. ಹಲವು ಜನರು ಬಾವಿಯೊಳಗೆ ಸಿಡಿಲು ಬಿದ್ದಿರಬಹುದು ಎಂದು ತರ್ಕಿಸುತ್ತಿದ್ದಾರೆ.ವಿಜ್ಞಾನಕ್ಕೆ ಸವಾಲೊಡ್ಡುವ ಅದ್ಭುತ ಪವಾಡದತ್ತ ಜನಸಾಗರವೇ ಹರಿದು ಬರುತ್ತಿದೆ. <br /> <br /> ಗ್ರಾಮದ ಪಕ್ಕದಲ್ಲಿರುವ ಹಳೆಯ ಕಾಲದ ಬಾವಿ ಇದಾಗಿದ್ದು, ಮೊದಲು ಇದೇ ನೀರನ್ನೇ ಕುಡಿಯಲು, ಬಟ್ಟೆ ತೊಳೆಯುವುದು ಹಾಗೂ ಈಜಾಟಕ್ಕೆ ಬಳಕೆ ಮಾಡಲಾಗುತ್ತಿತ್ತು. ಈ ಬಾವಿ ನೀರನ್ನು ಸೇವಿಸುವುದರಿಂದ ಆನೆಕಾಲು ರೋಗ ಹರಡುತ್ತಿದೆ ಎಂಬ ಆತಂಕ ಸೃಷ್ಟಿಯಾಗಿದ್ದರಿಂದ, ಕಳೆದ ಒಂದು ದಶಕದಿಂದ ಈ ಬಾವಿಯ ನೀರು ಬಳಸುವುದನ್ನು ನಿಲ್ಲಿಸಲಾಗಿದೆ. ಈ ಬಾವಿಯ ಕಡೆ ಹೋಗಲು ಸಹ ಜನ ಹೆದರುತ್ತಿದ್ದು, ಕೇವಲ ಮಂಗಳ ಕಾರ್ಯಗಳ ದಿನದಂದು ಮಾತ್ರ ಬಾವಿ ಕಡೆ ಹೋಗುತ್ತೇವೆ ಎಂದು ಗ್ರಾಮಸ್ಥ ಚಂದ್ರಪ್ಪ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>