ಗುರುವಾರ, 12-7-1962
ಚೀಣೀ ಮುತ್ತಿಗೆ ಮುಂದುವರಿಕೆ
ನವದೆಹಲಿ, ಜುಲೈ 11 -ಲಡಖ್ನ ಗಾಲ್ವವ್ ನದಿ ಕಣಿವೆಯಲ್ಲಿರುವ ಭಾರತೀಯ ಸೇನಾ ಠಾಣ್ಯದ ಸುತ್ತ ಚೀಣಿ ಸೇನೆಗಳು ಸುತ್ತುವರಿದಿರುವುದರಿಂದ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲವೆಂದು ಭಾರತ ಸರ್ಕಾರದ ಅಧಿಕೃತ ವಕ್ತಾರರೊಬ್ಬರು ಇಲ್ಲಿ ಇಂದು ತಿಳಿಸಿದರು.
ಪಾಕ್ ಬೇಡಿಕೆಗೆ ನೆಹ್ರೂ ನಕಾರ
ಶ್ರೀನಗರ್, ಜುಲೈ 11 - ಕಾಶ್ಮೀರದಲ್ಲಿ ಮಹುಮಂದಿ ಮುಸ್ಲಿಮರಿರುವುದರಿಂದ ಅದು ಪಾಕಿಸ್ತಾನದ ಭಾಗವಾಗಬೇಕೆಂಬ ಪಾಕಿಸ್ತಾನದ ಕೇಳಿಕೆಯನ್ನು ಪ್ರಧಾನಿ ನೆಹರು ಖಚಿತ ರೀತಿಯಲ್ಲಿ ತಿರಸ್ಕರಿಸಿದರು.
ಕಾವೇರಿ ನದೀ ಮಂಡಳಿ ಅನಗತ್ಯ
ಮದರಾಸ್, ಜುಲೈ 11 - ಕಾವೇರಿ ಜಲಾನಯನ ಭೂಮಿಗೆ ಸಂಬಂಧಿಸಿದಂತೆ ನದೀ ಮಂಡಳಿಯೊಂದನ್ನು ರಚಿಸುವ ಅಗತ್ಯವಿಲ್ಲವೆಂದು ಮದರಾಸ್ ಸರಕಾರ ಭಾರತ ಸರ್ಕಾರಕ್ಕೆ ತಿಳಿಸಿದೆ. ಕಾವೇರಿ ನದಿಯ ಪೂರ್ವ ಪ್ರಯೋಜನವನ್ನು ಈಗ ಪಡೆಯಲಾಗುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.