<p>ನವದೆಹಲಿ (ಪಿಟಿಐ): ಮೂರು ದಶಕಗಳಿಂದ ಅಸ್ಸಾಂ ರಾಜ್ಯವನ್ನು ಕಾಡುತ್ತಿರುವ `ಬಂಡುಕೋರರ~ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಂತೆ ಸಂವಿಧಾನದ ನಿಯಮಗಳಿಗೆ ತಿದ್ದುಪಡಿ ತರಬೇಕೆಂಬ ಒತ್ತಾಯವೂ ಸೇರಿದಂತೆ 12 ಅಂಶಗಳ ಬೇಡಿಕೆಯುಳ್ಳ ಪಟ್ಟಿಯನ್ನು ಉಲ್ಫಾ ಕಾರ್ಯಕರ್ತರ ನಿಯೋಗ ಸೋಮವಾರ ಕೇಂದ್ರಕ್ಕೆ ಸಲ್ಲಿಸಿತು.<br /> <br /> ಉಲ್ಫಾ ಸಂಘಟನೆ ಅಧ್ಯಕ್ಷ ಅರವಿಂದ ರಾಜ್ಖೋವಾ ನೇತೃತ್ವದ ನಿಯೋಗವು, ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಸೇರಿದಂತೆ ವಿವಿಧ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ, ತಮ್ಮ ಬೇಡಿಕೆಗಳನ್ನು ಸಲ್ಲಿಸಿತು. <br /> <br /> `90 ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ ಅಸ್ಸಾಂನಲ್ಲಿ ಶಾಂತಿ ಸ್ಥಾಪನೆ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು. ಈ ಚರ್ಚೆಯ ಪ್ರಕ್ರಿಯೆಯನ್ನು ನಾವೆಲ್ಲ ಒಟ್ಟಾಗಿ ಮುಂದಕ್ಕೆ ಕೊಂಡೊಯ್ಯುತ್ತೇವೆ~ ಎಂದು ಉಲ್ಫಾ ಅಧ್ಯಕ್ಷ ರಾಜ್ಖೋವಾ ಸುದ್ದಿಗಾರರಿಗೆ ತಿಳಿಸಿದರು. <br /> <br /> `ಇದೊಂದು ರಚನಾತ್ಮಕ ಮತ್ತು ಫಲಪ್ರದ ಭೇಟಿಯಾಗಿದ್ದು, ಉತ್ತಮ ಪ್ರಗತಿಗೆ ದಾರಿಯಾಗಿದೆ~ ಎಂದು ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ವಿವರಿಸಿದರು. ಉಲ್ಫಾ ನಿಯೋಗದಲ್ಲಿ ರಾಜು ಬರೌಹ, ಪ್ರಣತಿ ದೇಕಾ ಮತ್ತು ಮಿತಿಂಗ ಡೈಮರಿ ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಮೂರು ದಶಕಗಳಿಂದ ಅಸ್ಸಾಂ ರಾಜ್ಯವನ್ನು ಕಾಡುತ್ತಿರುವ `ಬಂಡುಕೋರರ~ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಂತೆ ಸಂವಿಧಾನದ ನಿಯಮಗಳಿಗೆ ತಿದ್ದುಪಡಿ ತರಬೇಕೆಂಬ ಒತ್ತಾಯವೂ ಸೇರಿದಂತೆ 12 ಅಂಶಗಳ ಬೇಡಿಕೆಯುಳ್ಳ ಪಟ್ಟಿಯನ್ನು ಉಲ್ಫಾ ಕಾರ್ಯಕರ್ತರ ನಿಯೋಗ ಸೋಮವಾರ ಕೇಂದ್ರಕ್ಕೆ ಸಲ್ಲಿಸಿತು.<br /> <br /> ಉಲ್ಫಾ ಸಂಘಟನೆ ಅಧ್ಯಕ್ಷ ಅರವಿಂದ ರಾಜ್ಖೋವಾ ನೇತೃತ್ವದ ನಿಯೋಗವು, ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಸೇರಿದಂತೆ ವಿವಿಧ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ, ತಮ್ಮ ಬೇಡಿಕೆಗಳನ್ನು ಸಲ್ಲಿಸಿತು. <br /> <br /> `90 ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ ಅಸ್ಸಾಂನಲ್ಲಿ ಶಾಂತಿ ಸ್ಥಾಪನೆ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು. ಈ ಚರ್ಚೆಯ ಪ್ರಕ್ರಿಯೆಯನ್ನು ನಾವೆಲ್ಲ ಒಟ್ಟಾಗಿ ಮುಂದಕ್ಕೆ ಕೊಂಡೊಯ್ಯುತ್ತೇವೆ~ ಎಂದು ಉಲ್ಫಾ ಅಧ್ಯಕ್ಷ ರಾಜ್ಖೋವಾ ಸುದ್ದಿಗಾರರಿಗೆ ತಿಳಿಸಿದರು. <br /> <br /> `ಇದೊಂದು ರಚನಾತ್ಮಕ ಮತ್ತು ಫಲಪ್ರದ ಭೇಟಿಯಾಗಿದ್ದು, ಉತ್ತಮ ಪ್ರಗತಿಗೆ ದಾರಿಯಾಗಿದೆ~ ಎಂದು ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ವಿವರಿಸಿದರು. ಉಲ್ಫಾ ನಿಯೋಗದಲ್ಲಿ ರಾಜು ಬರೌಹ, ಪ್ರಣತಿ ದೇಕಾ ಮತ್ತು ಮಿತಿಂಗ ಡೈಮರಿ ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>