<p>`ಬದ್ಧತೆ, ಉದ್ದೇಶ ಪ್ರಶ್ನಾರ್ಹ~ ಶೀರ್ಷಿಕೆಯ (ವಾ.ವಾ. ಜ.20) ಪತ್ರಕ್ಕೆ ಪ್ರತಿಕ್ರಿಯೆ: ವಿವೇಕಾನಂದರ ಬಗ್ಗೆ ದಿನೇಶ್ ಅಮಿನ್ ಮಟ್ಟು ಬರೆದ ಲೇಖನ ನಾವು ಕಟ್ಟಿಕೊಂಡ ವಿವೇಕಾನಂದರ ಚಿತ್ರವನ್ನೇ ಬದಲಿಸಿತು.<br /> <br /> ಕಾರಣ ಅವರನ್ನು ದೈವತ್ವಕ್ಕೇರಿಸಿ ಪೂಜಿಸುವುದರಲ್ಲಿ ಯಾವ ಲಾಭವೂ ಇಲ್ಲ. ಬದಲಾಗಿ ಅವರು ನಮ್ಮ ಗೆಳೆಯರಾಗಿ ನಮ್ಮಳಗೆ ಇಳಿಯಬೇಕು. ಅವರು ಕೇವಲ ಮನುಷ್ಯರಾಗಿದ್ದರು. ಮನುಷ್ಯರ ಜತೆ ಗೆಳೆತನ ಬೆಳೆಸಲು ಸಾಧ್ಯ. ಲೇಖನ ವಿವೇಕಾನಂದರನ್ನು ಮತ್ತಷ್ಟು ಆಪ್ತರನ್ನಾಗಿಸಿತು.<br /> <br /> ದಿನೇಶ್ ಅವರ ಲೇಖನದಿಂದ ವಿವೇಕಾನಂದರಿಗೆ ನನ್ನಂತಹ ಸಾವಿರಾರು ಹೊಸ ಸ್ನೇಹಿತರು ಸಿಕ್ಕರು. ಲೇಖನವನ್ನು ವಿರೋಧಿಸುವವರು ವಿವೇಕಾನಂದರನ್ನು ಶಿಲ್ಪದಲ್ಲಿ, ಪೋಸ್ಟರಿನಲ್ಲಿ, ಚಿತ್ರಗಳಲ್ಲಿ ಜಡವಾಗಿರಿಸಲು ಬಯಸುತ್ತಾರೆ. ಲೇಖನ ಅವರನ್ನು ಶಿಲ್ಪದಿಂದ, ಚಿತ್ರದಿಂದ ಬಿಡಿಸಿ ಓದುಗರ ಜತೆ ಬೆರೆಯಲು ಬಿಟ್ಟಂತಾಗಿದೆ.<br /> <br /> ಲೇಖನ ಓದಿ ವಿವೇಕಾನಂದರ ಬಗ್ಗೆ ಗೌರವ ಹೆಚ್ಚಿದೆಯೇ ವಿನಾ ಕಡಿಮೆ ಆಗಿಲ್ಲ. ವಿ.ರಘು ಅವರು ಲೇಖನದ ಬದ್ಧತೆ ಮತ್ತು ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಬದಲಾಗಿ ವಿವೇಕಾನಂದರು ಬಹುಪಾಲು ಓದುಗರ ಗೆಳೆಯರಾದುದ್ದನ್ನು ಮರೆತಿದ್ದಾರೆ. ವಿವೇಕಾನಂದರನ್ನು ಜಡಗೊಳಿಸುವಂತಹ ವಿರೋಧ ಆರೋಗ್ಯಕರವಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಬದ್ಧತೆ, ಉದ್ದೇಶ ಪ್ರಶ್ನಾರ್ಹ~ ಶೀರ್ಷಿಕೆಯ (ವಾ.ವಾ. ಜ.20) ಪತ್ರಕ್ಕೆ ಪ್ರತಿಕ್ರಿಯೆ: ವಿವೇಕಾನಂದರ ಬಗ್ಗೆ ದಿನೇಶ್ ಅಮಿನ್ ಮಟ್ಟು ಬರೆದ ಲೇಖನ ನಾವು ಕಟ್ಟಿಕೊಂಡ ವಿವೇಕಾನಂದರ ಚಿತ್ರವನ್ನೇ ಬದಲಿಸಿತು.<br /> <br /> ಕಾರಣ ಅವರನ್ನು ದೈವತ್ವಕ್ಕೇರಿಸಿ ಪೂಜಿಸುವುದರಲ್ಲಿ ಯಾವ ಲಾಭವೂ ಇಲ್ಲ. ಬದಲಾಗಿ ಅವರು ನಮ್ಮ ಗೆಳೆಯರಾಗಿ ನಮ್ಮಳಗೆ ಇಳಿಯಬೇಕು. ಅವರು ಕೇವಲ ಮನುಷ್ಯರಾಗಿದ್ದರು. ಮನುಷ್ಯರ ಜತೆ ಗೆಳೆತನ ಬೆಳೆಸಲು ಸಾಧ್ಯ. ಲೇಖನ ವಿವೇಕಾನಂದರನ್ನು ಮತ್ತಷ್ಟು ಆಪ್ತರನ್ನಾಗಿಸಿತು.<br /> <br /> ದಿನೇಶ್ ಅವರ ಲೇಖನದಿಂದ ವಿವೇಕಾನಂದರಿಗೆ ನನ್ನಂತಹ ಸಾವಿರಾರು ಹೊಸ ಸ್ನೇಹಿತರು ಸಿಕ್ಕರು. ಲೇಖನವನ್ನು ವಿರೋಧಿಸುವವರು ವಿವೇಕಾನಂದರನ್ನು ಶಿಲ್ಪದಲ್ಲಿ, ಪೋಸ್ಟರಿನಲ್ಲಿ, ಚಿತ್ರಗಳಲ್ಲಿ ಜಡವಾಗಿರಿಸಲು ಬಯಸುತ್ತಾರೆ. ಲೇಖನ ಅವರನ್ನು ಶಿಲ್ಪದಿಂದ, ಚಿತ್ರದಿಂದ ಬಿಡಿಸಿ ಓದುಗರ ಜತೆ ಬೆರೆಯಲು ಬಿಟ್ಟಂತಾಗಿದೆ.<br /> <br /> ಲೇಖನ ಓದಿ ವಿವೇಕಾನಂದರ ಬಗ್ಗೆ ಗೌರವ ಹೆಚ್ಚಿದೆಯೇ ವಿನಾ ಕಡಿಮೆ ಆಗಿಲ್ಲ. ವಿ.ರಘು ಅವರು ಲೇಖನದ ಬದ್ಧತೆ ಮತ್ತು ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಬದಲಾಗಿ ವಿವೇಕಾನಂದರು ಬಹುಪಾಲು ಓದುಗರ ಗೆಳೆಯರಾದುದ್ದನ್ನು ಮರೆತಿದ್ದಾರೆ. ವಿವೇಕಾನಂದರನ್ನು ಜಡಗೊಳಿಸುವಂತಹ ವಿರೋಧ ಆರೋಗ್ಯಕರವಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>