<p><strong>ನವಲಗುಂದ: </strong>ರೈತರು ರೇಷ್ಮೆ ವ್ಯವಸಾಯ ಮಾಡುವುದರಿಂದ ಹೆಚ್ಚು ಆರ್ಥಿಕವಾಗಿ ಸುಧಾರಣೆಯಾಗಬಹುದು. ವ್ಯವಸಾಯದಲ್ಲಿ ಸರಳ ತಾಂತ್ರಿಕತೆ ಉಪಯೋಗಿಸಿ ಕೊಂಡಾಗ ಉತ್ತಮ ಬೆಳೆ ಪಡೆಯಬಹುದಾಗಿದೆ ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಡಿ.ಕೆ.ಪುಟ್ಟರಂಗಸ್ವಾಮಿ ರೈತರಿಗೆ ಸಲಹೆ ನೀಡಿದರು. <br /> <br /> ಇತ್ತೀಚೆಗೆ ತಾಲ್ಲೂಕಿನ ಗೊಬ್ಬರಗುಂಪಿ ಗ್ರಾಮದಲ್ಲಿ ರೈತ ಬಸವಂತಪ್ಪ ಮುಗದ ಅವರ ಹಿಪ್ಪುನೇರಳೆ ತೋಟದಲ್ಲಿ ಏರ್ಪಡಿಸಿದ ರೇಷ್ಮೆ ಕೃಷಿ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು. <br /> <br /> ತಾಲ್ಲೂಕಿನಲ್ಲಿ ರೇಷ್ಮೆ ವ್ಯವಸಾಯವನ್ನು 2007-08ನೇ ಸಾಲಿನಿಂದ ಅರಹಟ್ಟಿ ಗ್ರಾಮದ ಗದಿಗೆಪ್ಪ ಜಲಾದಿ, ತಡಹಾಳ ಗ್ರಾಮದ ರಮೇಶ ಮೇಟಿ ಅವರಿಂದ ಪ್ರಾರಂಭಿಸಿದ್ದು, ರಮೇಶ ಮೇಟಿ, ರೂ.12 ಲಕ್ಷ ಆದಾಯ ಪಡೆದಿದ್ದಾರೆ ಎಂದು ರೇಷ್ಮೆ ನಿರೀಕ್ಷಕ ಎಸ್.ಎಫ್.ದಾನಪ್ಪಗೌಡ್ರ ವಿವರಿಸಿದರು.<br /> <br /> ಬೆಳವಟಗಿ ಗ್ರಾ.ಪಂ.ಸದಸ್ಯ ಸಿದ್ದನಗೌಡ ಕರೆಪ್ಪಗೌಡ್ರ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಮಲ್ಲನಗೌಡ ರಾಟಿಮನಿ ಪಾಲ್ಗೊಂಡಿದ್ದರು. <br /> <br /> ರೇಷ್ಮೆ ವಿಸ್ತರಣಾ ಅಧಿಕಾರಿ ಎಸ್.ಜಿ.ದಾನಿ ರೇಷ್ಮೆ ಇಲಾಖೆಯಲ್ಲಿನ ವಿವಿಧ ಯೋಜನೆಗಳು, ಪ್ರೋತ್ಸಾಹಧನ, ರೇಷ್ಮೆ ಹುಳು ಸಾಕಾಣಿಕೆ, ಹೊಸ ತಳಿ ಹಿಪ್ಪು ನೇರಳೆ ನಾಟಿಗೆ ಹಾಗೂ ರೇಷ್ಮೆ ಉಪಕರಣಗಳ ಖರೀದಿ ಕುರಿತು ಮಾತನಾಡಿದರು.<br /> <br /> ಎಸ್.ಸಿ.ಜಾಲಿಕಟ್ಟಿ ಮಾತನಾಡಿ ರೈತರು ನೀರಾವರಿ ಭೂಮಿಯಲ್ಲಿ ವರ್ಷಕ್ಕೆ ಎರಡು ಬೆಳೆ ಮಾತ್ರ ಬೆಳೆಯುತ್ತಾರೆ. ಆದರೆ ರೇಷ್ಮೆ ವ್ಯವಸಾಯ ಮಾಡಿದರೆ ಪ್ರತಿ ವರ್ಷ 4 ರಿಂದ 5 ಬೆಳೆ ಬೆಳೆಯಬಹುದೆಂದು ತಿಳಿಸಿದರು. <br /> <br /> ಕೃಷಿ ಅಧಿಕಾರಿ ಆರ್.ಎಚ್.ಪದಕಿ ಭೂಮಿ ಫಲವತ್ತತೆ ಕಾಪಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳುವುದರ ಕುರಿತು ಮಾತನಾಡಿದರು. ಪ್ರಗತಿಪರ ರೈತ ಮಲಕಾಜಗೌಡ ಉಪಸ್ಥಿತರಿದ್ದರು. ಎಸ್.ಎಫ್.ದಾನಪ್ಪಗೌಡ್ರ ಸ್ವಾಗತಿಸಿದರು. ಬಿ.ಎ.ಗಾಣಿಗೇರ ವಂದಿಸಿದರು. <br /> <strong><br /> ಓಶೋ ಧ್ಯಾನ ಶಿಬಿರ 8ರಂದು<br /> ಹುಬ್ಬಳ್ಳಿ:</strong> ಬುದ್ಧ ಧ್ಯಾನ ಕೇಂದ್ರದ ವತಿಯಿಂದ ಇದೇ 8ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯಾನಗರದ ಜಯನಗರದ ಚೇತನಾ ಕಾಲೊನಿಯ 3ನೇ ಕ್ರಾಸ್ನಲ್ಲಿಯ ಬುದ್ಧ ಧ್ಯಾನ ಕೇಂದ್ರದಲ್ಲಿ ಓಶೋ ಧ್ಯಾನ ಶಿಬಿರವನ್ನು ಏರ್ಪಡಿಸಲಾಗಿದೆ.<br /> <br /> ಶಿಬಿರದಲ್ಲಿ ಓಶೋ ವಿಚಾರಧಾರೆ, ಅವರ ಅಸಂಪ್ರದಾಯಿಕ ಧ್ಯಾನ ಪದ್ಧತಿಗಳನ್ನು ಹಾಗೂ ಬುದ್ಧನ ವಿಪಷನ ಧ್ಯಾನ ಕಲಿಸಲಾಗುತ್ತದೆ. ಅಲ್ಲದೇ ಬುದ್ಧ-ಓಶೋ-ಸೂಫಿ-ತಾವೋ ಅವರ ಧ್ಯಾನ ವಿಧಾನಗಳನ್ನು ಹೇಳಿಕೊಡಲಾಗುತ್ತದೆ. ಆಸಕ್ತರು ಜಯದೇವ ಪೂಜಾರ (9448146225) ಇಲ್ಲವೆ ರಘು (9845284576) ಅವರನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವಲಗುಂದ: </strong>ರೈತರು ರೇಷ್ಮೆ ವ್ಯವಸಾಯ ಮಾಡುವುದರಿಂದ ಹೆಚ್ಚು ಆರ್ಥಿಕವಾಗಿ ಸುಧಾರಣೆಯಾಗಬಹುದು. ವ್ಯವಸಾಯದಲ್ಲಿ ಸರಳ ತಾಂತ್ರಿಕತೆ ಉಪಯೋಗಿಸಿ ಕೊಂಡಾಗ ಉತ್ತಮ ಬೆಳೆ ಪಡೆಯಬಹುದಾಗಿದೆ ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಡಿ.ಕೆ.ಪುಟ್ಟರಂಗಸ್ವಾಮಿ ರೈತರಿಗೆ ಸಲಹೆ ನೀಡಿದರು. <br /> <br /> ಇತ್ತೀಚೆಗೆ ತಾಲ್ಲೂಕಿನ ಗೊಬ್ಬರಗುಂಪಿ ಗ್ರಾಮದಲ್ಲಿ ರೈತ ಬಸವಂತಪ್ಪ ಮುಗದ ಅವರ ಹಿಪ್ಪುನೇರಳೆ ತೋಟದಲ್ಲಿ ಏರ್ಪಡಿಸಿದ ರೇಷ್ಮೆ ಕೃಷಿ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು. <br /> <br /> ತಾಲ್ಲೂಕಿನಲ್ಲಿ ರೇಷ್ಮೆ ವ್ಯವಸಾಯವನ್ನು 2007-08ನೇ ಸಾಲಿನಿಂದ ಅರಹಟ್ಟಿ ಗ್ರಾಮದ ಗದಿಗೆಪ್ಪ ಜಲಾದಿ, ತಡಹಾಳ ಗ್ರಾಮದ ರಮೇಶ ಮೇಟಿ ಅವರಿಂದ ಪ್ರಾರಂಭಿಸಿದ್ದು, ರಮೇಶ ಮೇಟಿ, ರೂ.12 ಲಕ್ಷ ಆದಾಯ ಪಡೆದಿದ್ದಾರೆ ಎಂದು ರೇಷ್ಮೆ ನಿರೀಕ್ಷಕ ಎಸ್.ಎಫ್.ದಾನಪ್ಪಗೌಡ್ರ ವಿವರಿಸಿದರು.<br /> <br /> ಬೆಳವಟಗಿ ಗ್ರಾ.ಪಂ.ಸದಸ್ಯ ಸಿದ್ದನಗೌಡ ಕರೆಪ್ಪಗೌಡ್ರ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಮಲ್ಲನಗೌಡ ರಾಟಿಮನಿ ಪಾಲ್ಗೊಂಡಿದ್ದರು. <br /> <br /> ರೇಷ್ಮೆ ವಿಸ್ತರಣಾ ಅಧಿಕಾರಿ ಎಸ್.ಜಿ.ದಾನಿ ರೇಷ್ಮೆ ಇಲಾಖೆಯಲ್ಲಿನ ವಿವಿಧ ಯೋಜನೆಗಳು, ಪ್ರೋತ್ಸಾಹಧನ, ರೇಷ್ಮೆ ಹುಳು ಸಾಕಾಣಿಕೆ, ಹೊಸ ತಳಿ ಹಿಪ್ಪು ನೇರಳೆ ನಾಟಿಗೆ ಹಾಗೂ ರೇಷ್ಮೆ ಉಪಕರಣಗಳ ಖರೀದಿ ಕುರಿತು ಮಾತನಾಡಿದರು.<br /> <br /> ಎಸ್.ಸಿ.ಜಾಲಿಕಟ್ಟಿ ಮಾತನಾಡಿ ರೈತರು ನೀರಾವರಿ ಭೂಮಿಯಲ್ಲಿ ವರ್ಷಕ್ಕೆ ಎರಡು ಬೆಳೆ ಮಾತ್ರ ಬೆಳೆಯುತ್ತಾರೆ. ಆದರೆ ರೇಷ್ಮೆ ವ್ಯವಸಾಯ ಮಾಡಿದರೆ ಪ್ರತಿ ವರ್ಷ 4 ರಿಂದ 5 ಬೆಳೆ ಬೆಳೆಯಬಹುದೆಂದು ತಿಳಿಸಿದರು. <br /> <br /> ಕೃಷಿ ಅಧಿಕಾರಿ ಆರ್.ಎಚ್.ಪದಕಿ ಭೂಮಿ ಫಲವತ್ತತೆ ಕಾಪಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳುವುದರ ಕುರಿತು ಮಾತನಾಡಿದರು. ಪ್ರಗತಿಪರ ರೈತ ಮಲಕಾಜಗೌಡ ಉಪಸ್ಥಿತರಿದ್ದರು. ಎಸ್.ಎಫ್.ದಾನಪ್ಪಗೌಡ್ರ ಸ್ವಾಗತಿಸಿದರು. ಬಿ.ಎ.ಗಾಣಿಗೇರ ವಂದಿಸಿದರು. <br /> <strong><br /> ಓಶೋ ಧ್ಯಾನ ಶಿಬಿರ 8ರಂದು<br /> ಹುಬ್ಬಳ್ಳಿ:</strong> ಬುದ್ಧ ಧ್ಯಾನ ಕೇಂದ್ರದ ವತಿಯಿಂದ ಇದೇ 8ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯಾನಗರದ ಜಯನಗರದ ಚೇತನಾ ಕಾಲೊನಿಯ 3ನೇ ಕ್ರಾಸ್ನಲ್ಲಿಯ ಬುದ್ಧ ಧ್ಯಾನ ಕೇಂದ್ರದಲ್ಲಿ ಓಶೋ ಧ್ಯಾನ ಶಿಬಿರವನ್ನು ಏರ್ಪಡಿಸಲಾಗಿದೆ.<br /> <br /> ಶಿಬಿರದಲ್ಲಿ ಓಶೋ ವಿಚಾರಧಾರೆ, ಅವರ ಅಸಂಪ್ರದಾಯಿಕ ಧ್ಯಾನ ಪದ್ಧತಿಗಳನ್ನು ಹಾಗೂ ಬುದ್ಧನ ವಿಪಷನ ಧ್ಯಾನ ಕಲಿಸಲಾಗುತ್ತದೆ. ಅಲ್ಲದೇ ಬುದ್ಧ-ಓಶೋ-ಸೂಫಿ-ತಾವೋ ಅವರ ಧ್ಯಾನ ವಿಧಾನಗಳನ್ನು ಹೇಳಿಕೊಡಲಾಗುತ್ತದೆ. ಆಸಕ್ತರು ಜಯದೇವ ಪೂಜಾರ (9448146225) ಇಲ್ಲವೆ ರಘು (9845284576) ಅವರನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>