<p><strong>ಹಾವೇರಿ:</strong> ಭಾರತ ಸಿಂಧು ರಶ್ಮಿ ಖ್ಯಾತಿಯ ಜ್ಞಾನಪೀಠ ಪುರಸ್ಕೃತ ಡಾ. ವಿ.ಕೃ.ಗೋಕಾಕ್ ಹುಟ್ಟಿದ ಮನೆ ಸ್ಮಾರಕವಾಗುವ ಬದಲು ಬಚ್ಚಲು (ಸ್ನಾನದ) ಮನೆಯಾಗಿ ಮಾರ್ಪಟ್ಟಿದೆ.</p>.<p>ಜಿಲ್ಲೆಯ ಸವಣೂರು ಪಟ್ಟಣದ ಜೋಶಿ ಗಲ್ಲಿಯಲ್ಲಿರುವ ಜೋಶಿ ಅವರ ಕುಟುಂಬಕ್ಕೆ ಸೇರಿದ ಬಾಡಿಗೆ ಮನೆಯ ಬಾಣಂತಿ ಕೋಣೆಯಲ್ಲಿ (ಹೆರಿಗೆಗಾಗಿ ಇರುವ ಪ್ರತ್ಯೇಕ ಕೊಠಡಿ)1909 ಆಗಸ್ಟ್ 9 ರಂದು ಜನಿಸಿದ ಗೋಕಾಕ್, ಎಸ್ಸೆಸ್ಸೆಲ್ಸಿವರೆಗೆ ಅದೇ ಊರಿನಲ್ಲಿಯೇ ಅಭ್ಯಾಸ ಮಾಡಿದ್ದರು.</p>.<p>ನಂತರದ ದಿನಗಳಲ್ಲಿ ಹೆಚ್ಚಿನ ಅಧ್ಯಯನ, ಅಧ್ಯಾಪಕ ವೃತ್ತಿಗಾಗಿ ಅವರು ಸವಣೂರು ಪಟ್ಟಣದಿಂದ ಹೊರಗೆ ಇದ್ದರೂ, ಅವರ ತಂದೆ ತಾಯಿ ಮಾತ್ರ ಜೀವಿತದ ಕೊನೆಯವರೆಗೆ ಅಲ್ಲಿಯೇ ಇದ್ದರು. ಅವರಿದ್ದ ಆ ಮನೆ ಇಂದಿಗೂ ಜೋಶಿ ಕುಟುಂಬದ ಒಡೆತನದಲ್ಲಿದೆ. ಮನೆಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಆ ಕುಟುಂಬದವರು ಬದಲಾವಣೆ ಮಾಡಿಕೊಂಡಿದ್ದು, ಗೋಕಾಕ್ ಹುಟ್ಟಿದ ಕೋಣೆಯನ್ನು ಈಗ ಬಚ್ಚಲು ಮನೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.</p>.<p>ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿಯ ಕವಿಶೈಲದಂತೆ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಗೋಕಾಕ್ ಅವರು ಜನಿಸಿದ್ದ ಮನೆಯನ್ನೂ ಮಾಡಬೇಕು. ಇಂದಿನ ಪೀಳಿಗೆಗೆ ಅವರ ಬದುಕು, ಬರಹವನ್ನು ಪರಿಚಯಿಸುವಂತಾಗಬೇಕೆಂಬ ಸಾಹಿತ್ಯಾಭಿಮಾನಿಗಳ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ.</p>.<p><strong>ತಮಗೆ ಹೆಮ್ಮೆಯಿದೆ: </strong> `ಗೋಕಾಕ್ ಅವರು ನಮ್ಮ ಮನೆಯಲ್ಲಿ ಜನಿಸಿದ್ದರು ಎನ್ನುವುದೇ ನಮಗೆ ಹೆಮ್ಮೆಯ ವಿಷಯ. ಅದೇ ಕಾರಣಕ್ಕೆ ಟ್ರಸ್ಟ್ ಸದಸ್ಯರು ಹಾಗೂ ಜಿಲ್ಲಾಡಳಿತದವರು ಮನೆ ನೀಡುವಂತೆ ಕೇಳಿದಾಗ ನಾವು ಒಪ್ಪಿದ್ದೇವು. ಆದರೆ, ಸ್ಮಾರಕ ನಿರ್ಮಾಣಕ್ಕೆ ಮನೆ ಸೂಕ್ತವಾಗಿಲ್ಲ ಎಂದು ಹೇಳಿ ಖರೀದಿಯಿಂದ ನಂತರ ಹಿಂದೆಸರಿದರು~ ಎಂದು ಹೇಳುತ್ತಾರೆ ಜೋಶಿ ಕುಟುಂದ ಸದಸ್ಯ ರವಿ ಜೋಶಿ.</p>.<p>`ಈಗಲೂ ಸರ್ಕಾರ ಸೂಕ್ತ ಬೆಲೆ ನೀಡಿ ಮನೆ ಖರೀದಿಸಲು ಮುಂದಾದರೆ, ನಮ್ಮ ಸಹೋದರರ ಜತೆ ಚರ್ಚಿಸಿ ನೀಡಲು ಸಿದ್ಧ~ ಎಂದು ಅವರು ತಿಳಿಸಿದ್ದಾರೆ.</p>.<p><strong>ಸ್ಮಾರಕ ಭವನ ನಿರ್ಮಾಣ: </strong> `ಪುರಸಭೆ ನೀಡಿದ ಜಾಗದಲ್ಲಿ ಸುಮಾರು 2.45 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರಸ್ಟ್ ಸ್ಮಾರಕ ನಿರ್ಮಿಸುತ್ತಿದೆ. ಗೋಕಾಕ್ ಅವರು ಹುಟ್ಟಿದ ಮನೆಯನ್ನು ಪಡೆದು ಅದನ್ನೇ ಸ್ಮಾರಕವನ್ನಾಗಿ ಮಾಡುವ ಚಿಂತನೆ ಇತ್ತು. ಆದರೆ, ಜೋಶಿ ಕುಟುಂಬದವರು ಹೆಚ್ಚಿನ ಹಣ ನಿರೀಕ್ಷೆ ಮಾಡಿದ್ದರಿಂದ ಆ ವಿಚಾರವನ್ನು ಬಿಟ್ಟು ಅದೇ ಊರಿನಲ್ಲಿ ಬೇರೆ ಕಡೆ ಸ್ಮಾರಕ ಭವನ ನಿರ್ಮಿಸಲಾಗುತ್ತಿದೆ~ ಎಂದು ಟ್ರಸ್ಟ್ ಅಧ್ಯಕ್ಷ ಪಾಟೀಲ ಪುಟ್ಟಪ್ಪ ತಿಳಿಸುತ್ತಾರೆ.</p>.<p><strong>ಪ್ರಯತ್ನ ವಿಫಲ</strong></p>.<p>ಪಾಟೀಲ ಪುಟ್ಟಪ್ಪ ಅಧ್ಯಕ್ಷತೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಡಾ. ವಿ.ಕೃ.ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಗೋಕಾಕ್ ಜನಿಸಿದ ಮನೆಯನ್ನು ಜೋಶಿ ಕುಟುಂಬದಿಂದ ಖರೀದಿಸಿ ಅದನ್ನೊಂದು ಸಭಾಭವನ ಹಾಗೂ ಸ್ಮಾರಕ ಮಾಡಲು ಪ್ರಯತ್ನಿಸಿತ್ತು. ಈ ಸಂಬಂಧ ಮಾತುಕತೆ ನಡೆದಿತ್ತಾದರೂ ಹಣಕಾಸಿನ ವಿಷಯದಲ್ಲಿ ಹೊಂದಾಣಿಕೆಯಾಗಲಿಲ್ಲ. ಹಾಗಾಗಿ ಮನೆ ಖರೀದಿಸಲು ಟ್ರಸ್ಟ್ಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಭಾರತ ಸಿಂಧು ರಶ್ಮಿ ಖ್ಯಾತಿಯ ಜ್ಞಾನಪೀಠ ಪುರಸ್ಕೃತ ಡಾ. ವಿ.ಕೃ.ಗೋಕಾಕ್ ಹುಟ್ಟಿದ ಮನೆ ಸ್ಮಾರಕವಾಗುವ ಬದಲು ಬಚ್ಚಲು (ಸ್ನಾನದ) ಮನೆಯಾಗಿ ಮಾರ್ಪಟ್ಟಿದೆ.</p>.<p>ಜಿಲ್ಲೆಯ ಸವಣೂರು ಪಟ್ಟಣದ ಜೋಶಿ ಗಲ್ಲಿಯಲ್ಲಿರುವ ಜೋಶಿ ಅವರ ಕುಟುಂಬಕ್ಕೆ ಸೇರಿದ ಬಾಡಿಗೆ ಮನೆಯ ಬಾಣಂತಿ ಕೋಣೆಯಲ್ಲಿ (ಹೆರಿಗೆಗಾಗಿ ಇರುವ ಪ್ರತ್ಯೇಕ ಕೊಠಡಿ)1909 ಆಗಸ್ಟ್ 9 ರಂದು ಜನಿಸಿದ ಗೋಕಾಕ್, ಎಸ್ಸೆಸ್ಸೆಲ್ಸಿವರೆಗೆ ಅದೇ ಊರಿನಲ್ಲಿಯೇ ಅಭ್ಯಾಸ ಮಾಡಿದ್ದರು.</p>.<p>ನಂತರದ ದಿನಗಳಲ್ಲಿ ಹೆಚ್ಚಿನ ಅಧ್ಯಯನ, ಅಧ್ಯಾಪಕ ವೃತ್ತಿಗಾಗಿ ಅವರು ಸವಣೂರು ಪಟ್ಟಣದಿಂದ ಹೊರಗೆ ಇದ್ದರೂ, ಅವರ ತಂದೆ ತಾಯಿ ಮಾತ್ರ ಜೀವಿತದ ಕೊನೆಯವರೆಗೆ ಅಲ್ಲಿಯೇ ಇದ್ದರು. ಅವರಿದ್ದ ಆ ಮನೆ ಇಂದಿಗೂ ಜೋಶಿ ಕುಟುಂಬದ ಒಡೆತನದಲ್ಲಿದೆ. ಮನೆಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಆ ಕುಟುಂಬದವರು ಬದಲಾವಣೆ ಮಾಡಿಕೊಂಡಿದ್ದು, ಗೋಕಾಕ್ ಹುಟ್ಟಿದ ಕೋಣೆಯನ್ನು ಈಗ ಬಚ್ಚಲು ಮನೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.</p>.<p>ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿಯ ಕವಿಶೈಲದಂತೆ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಗೋಕಾಕ್ ಅವರು ಜನಿಸಿದ್ದ ಮನೆಯನ್ನೂ ಮಾಡಬೇಕು. ಇಂದಿನ ಪೀಳಿಗೆಗೆ ಅವರ ಬದುಕು, ಬರಹವನ್ನು ಪರಿಚಯಿಸುವಂತಾಗಬೇಕೆಂಬ ಸಾಹಿತ್ಯಾಭಿಮಾನಿಗಳ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ.</p>.<p><strong>ತಮಗೆ ಹೆಮ್ಮೆಯಿದೆ: </strong> `ಗೋಕಾಕ್ ಅವರು ನಮ್ಮ ಮನೆಯಲ್ಲಿ ಜನಿಸಿದ್ದರು ಎನ್ನುವುದೇ ನಮಗೆ ಹೆಮ್ಮೆಯ ವಿಷಯ. ಅದೇ ಕಾರಣಕ್ಕೆ ಟ್ರಸ್ಟ್ ಸದಸ್ಯರು ಹಾಗೂ ಜಿಲ್ಲಾಡಳಿತದವರು ಮನೆ ನೀಡುವಂತೆ ಕೇಳಿದಾಗ ನಾವು ಒಪ್ಪಿದ್ದೇವು. ಆದರೆ, ಸ್ಮಾರಕ ನಿರ್ಮಾಣಕ್ಕೆ ಮನೆ ಸೂಕ್ತವಾಗಿಲ್ಲ ಎಂದು ಹೇಳಿ ಖರೀದಿಯಿಂದ ನಂತರ ಹಿಂದೆಸರಿದರು~ ಎಂದು ಹೇಳುತ್ತಾರೆ ಜೋಶಿ ಕುಟುಂದ ಸದಸ್ಯ ರವಿ ಜೋಶಿ.</p>.<p>`ಈಗಲೂ ಸರ್ಕಾರ ಸೂಕ್ತ ಬೆಲೆ ನೀಡಿ ಮನೆ ಖರೀದಿಸಲು ಮುಂದಾದರೆ, ನಮ್ಮ ಸಹೋದರರ ಜತೆ ಚರ್ಚಿಸಿ ನೀಡಲು ಸಿದ್ಧ~ ಎಂದು ಅವರು ತಿಳಿಸಿದ್ದಾರೆ.</p>.<p><strong>ಸ್ಮಾರಕ ಭವನ ನಿರ್ಮಾಣ: </strong> `ಪುರಸಭೆ ನೀಡಿದ ಜಾಗದಲ್ಲಿ ಸುಮಾರು 2.45 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರಸ್ಟ್ ಸ್ಮಾರಕ ನಿರ್ಮಿಸುತ್ತಿದೆ. ಗೋಕಾಕ್ ಅವರು ಹುಟ್ಟಿದ ಮನೆಯನ್ನು ಪಡೆದು ಅದನ್ನೇ ಸ್ಮಾರಕವನ್ನಾಗಿ ಮಾಡುವ ಚಿಂತನೆ ಇತ್ತು. ಆದರೆ, ಜೋಶಿ ಕುಟುಂಬದವರು ಹೆಚ್ಚಿನ ಹಣ ನಿರೀಕ್ಷೆ ಮಾಡಿದ್ದರಿಂದ ಆ ವಿಚಾರವನ್ನು ಬಿಟ್ಟು ಅದೇ ಊರಿನಲ್ಲಿ ಬೇರೆ ಕಡೆ ಸ್ಮಾರಕ ಭವನ ನಿರ್ಮಿಸಲಾಗುತ್ತಿದೆ~ ಎಂದು ಟ್ರಸ್ಟ್ ಅಧ್ಯಕ್ಷ ಪಾಟೀಲ ಪುಟ್ಟಪ್ಪ ತಿಳಿಸುತ್ತಾರೆ.</p>.<p><strong>ಪ್ರಯತ್ನ ವಿಫಲ</strong></p>.<p>ಪಾಟೀಲ ಪುಟ್ಟಪ್ಪ ಅಧ್ಯಕ್ಷತೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಡಾ. ವಿ.ಕೃ.ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಗೋಕಾಕ್ ಜನಿಸಿದ ಮನೆಯನ್ನು ಜೋಶಿ ಕುಟುಂಬದಿಂದ ಖರೀದಿಸಿ ಅದನ್ನೊಂದು ಸಭಾಭವನ ಹಾಗೂ ಸ್ಮಾರಕ ಮಾಡಲು ಪ್ರಯತ್ನಿಸಿತ್ತು. ಈ ಸಂಬಂಧ ಮಾತುಕತೆ ನಡೆದಿತ್ತಾದರೂ ಹಣಕಾಸಿನ ವಿಷಯದಲ್ಲಿ ಹೊಂದಾಣಿಕೆಯಾಗಲಿಲ್ಲ. ಹಾಗಾಗಿ ಮನೆ ಖರೀದಿಸಲು ಟ್ರಸ್ಟ್ಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>