<p><strong>ಬೀದರ್:</strong> ನಗರದ ಮಾಧವನಗರದಲ್ಲಿ ಇರುವ ಜನಸೇವಾ ಶಿಶುಮಂದಿರ ಮತ್ತು ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮಾಧವನಗರ, ಪ್ರತಾಪನಗರ ಬಡಾವಣೆಯ ಶಾಲೆಯ ಮಕ್ಕಳು ಕೃಷ್ಣ ಹಾಗೂ ರಾಧೆ ಅವರ ವೇಷಧಾರಿಗಳಾಗಿ ಶೋಭಾಯಾತ್ರೆ ನಡೆಸಿದರು. <br /> <br /> ಶೋಭಾಯಾತ್ರೆಯಲ್ಲಿ ಗಂಡು ಮಕ್ಕಳು ಕೈಯಲ್ಲಿ ಕೋಲು, ತಲೆಯ ಮೇಲೆ ಕೀರಿಟ ಹಾಕಿಕೊಂಡು ಕೃಷ್ಣನ ಪಾತ್ರ ವಹಿಸಿದ್ದರೆ, ಹೆಣ್ಣು ಮಕ್ಕಳು ರಾಧೆ ಪಾತ್ರ ಧರಿಸಿಕೊಂಡು ಎಲ್ಲರ ಗಮನ ಸೆಳೆದರು. <br /> <br /> ಬಡಾವಣೆಯ ಹನುಮಾನ ದೇವಸ್ಥಾನದಲ್ಲಿ ಮಹಿಳೆಯರಿಂದ ಕೃಷ್ಣನ ತೋಟಿಲು ಹಾಕಿ ಕಾರ್ಯಕ್ರಮ ನಡೆಸಲಾಯಿತು. ತಾಯಿಯರು ಜೋಗುಳ ಪದಗಳನ್ನು ಹಾಡಿದರು. ನಂತರ ಮಕ್ಕಳು ಮೊಸರಿನ ಗಡಗಿ ಒಡೆದು, ಬೆಣ್ಣೆ ತಿಂದು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಉಚಿತವಾಗಿ ಪೆನ್ಸಿಲ್, ನೋಟ್ಬುಕ್ ವಿತರಿಸಲಾಯಿತು.<br /> <br /> ನಂತರ ಶಾರದಾ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಸುಬ್ರಮಣ್ಯಪ್ರಭು ಅವರು, ಕೃಷ್ಣ ಜನ್ಮಾಷ್ಠಮಿ ಕುರಿತು ಉಪನ್ಯಾಸ ನೀಡಿದರು. ಜನ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ಧಪ್ಪ ಜಲಾದೆ ಅಧಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ರವಿಸ್ವಾಮಿ, ಮುಖ್ಯಗುರು ಭವ್ಯಾ, ಶಿಕ್ಷಕಿಯರಾದ ನೀಲಮ್ಮ, ವೈಶಾಲಿ, ಮೀನಾಕ್ಷಿ ಉಪಸ್ಥಿತರಿದ್ದರು.<br /> <br /> <strong>`ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಾಲು, ಮೊಸರು~ </strong><br /> `ಮಕ್ಕಳ ಆರೋಗ್ಯ ಉತ್ತಮ ರೀತಿಯಿಂದ ಕೂಡಿರಲು ಅವರಿಗೆ ಹಾಲು, ಮೊಸರು ಹೆಚ್ಚಿನದಾಗಿ ಒದಗಿಸಬೇಕು~ ಎಂದು ಎಂದು ಡಾ. ನರಸಪ್ಪ ಅಭಿಪ್ರಾಯಪಟ್ಟರು. <br /> <br /> ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕೃಷ್ಣಾನುಭವ ಪ್ರತಿಷ್ಠಾನ ನಗರದ ಸಿದ್ಧಿ ವಿನಾಯಕ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ಹಾಲು ಸೇವನೆಯಿಂದ ಆರೋಗ್ಯಕ್ಕೆ ಪೂರಕವಾದ `ಎ~ ಮತ್ತು `ಬಿ~ ವಿಟಮಿನ್ ಸಿಗುತ್ತದೆ ಎಂದು ವಿವರಿಸಿದರು. ತತ್ವಪದಕಾರ ರಘುನಾಥ ಹಡಪದ ಮಾತನಾಡಿದರು. ಓಂಪ್ರಕಾಶ ಧಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.<br /> <br /> ಪ್ರಾಚಾರ್ಯ ಪ್ರಶಾಂತ ಬಿರಾದಾರ್, ಪ್ರಮುಖರಾದ ಸಿದ್ರಾಮಪ್ಪ ಕಪಲಾಪುರೆ, ರಮೇಶ ಬಿರಾದಾರ್, ಪ್ರಕಾಶ ಪಾಟೀಲ್, ರವೀಂದ್ರಸಿಂಗ್ ಠಾಕೂರ್, ನಾಗಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ನಗರದ ಮಾಧವನಗರದಲ್ಲಿ ಇರುವ ಜನಸೇವಾ ಶಿಶುಮಂದಿರ ಮತ್ತು ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮಾಧವನಗರ, ಪ್ರತಾಪನಗರ ಬಡಾವಣೆಯ ಶಾಲೆಯ ಮಕ್ಕಳು ಕೃಷ್ಣ ಹಾಗೂ ರಾಧೆ ಅವರ ವೇಷಧಾರಿಗಳಾಗಿ ಶೋಭಾಯಾತ್ರೆ ನಡೆಸಿದರು. <br /> <br /> ಶೋಭಾಯಾತ್ರೆಯಲ್ಲಿ ಗಂಡು ಮಕ್ಕಳು ಕೈಯಲ್ಲಿ ಕೋಲು, ತಲೆಯ ಮೇಲೆ ಕೀರಿಟ ಹಾಕಿಕೊಂಡು ಕೃಷ್ಣನ ಪಾತ್ರ ವಹಿಸಿದ್ದರೆ, ಹೆಣ್ಣು ಮಕ್ಕಳು ರಾಧೆ ಪಾತ್ರ ಧರಿಸಿಕೊಂಡು ಎಲ್ಲರ ಗಮನ ಸೆಳೆದರು. <br /> <br /> ಬಡಾವಣೆಯ ಹನುಮಾನ ದೇವಸ್ಥಾನದಲ್ಲಿ ಮಹಿಳೆಯರಿಂದ ಕೃಷ್ಣನ ತೋಟಿಲು ಹಾಕಿ ಕಾರ್ಯಕ್ರಮ ನಡೆಸಲಾಯಿತು. ತಾಯಿಯರು ಜೋಗುಳ ಪದಗಳನ್ನು ಹಾಡಿದರು. ನಂತರ ಮಕ್ಕಳು ಮೊಸರಿನ ಗಡಗಿ ಒಡೆದು, ಬೆಣ್ಣೆ ತಿಂದು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಉಚಿತವಾಗಿ ಪೆನ್ಸಿಲ್, ನೋಟ್ಬುಕ್ ವಿತರಿಸಲಾಯಿತು.<br /> <br /> ನಂತರ ಶಾರದಾ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಸುಬ್ರಮಣ್ಯಪ್ರಭು ಅವರು, ಕೃಷ್ಣ ಜನ್ಮಾಷ್ಠಮಿ ಕುರಿತು ಉಪನ್ಯಾಸ ನೀಡಿದರು. ಜನ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ಧಪ್ಪ ಜಲಾದೆ ಅಧಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ರವಿಸ್ವಾಮಿ, ಮುಖ್ಯಗುರು ಭವ್ಯಾ, ಶಿಕ್ಷಕಿಯರಾದ ನೀಲಮ್ಮ, ವೈಶಾಲಿ, ಮೀನಾಕ್ಷಿ ಉಪಸ್ಥಿತರಿದ್ದರು.<br /> <br /> <strong>`ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಾಲು, ಮೊಸರು~ </strong><br /> `ಮಕ್ಕಳ ಆರೋಗ್ಯ ಉತ್ತಮ ರೀತಿಯಿಂದ ಕೂಡಿರಲು ಅವರಿಗೆ ಹಾಲು, ಮೊಸರು ಹೆಚ್ಚಿನದಾಗಿ ಒದಗಿಸಬೇಕು~ ಎಂದು ಎಂದು ಡಾ. ನರಸಪ್ಪ ಅಭಿಪ್ರಾಯಪಟ್ಟರು. <br /> <br /> ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕೃಷ್ಣಾನುಭವ ಪ್ರತಿಷ್ಠಾನ ನಗರದ ಸಿದ್ಧಿ ವಿನಾಯಕ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ಹಾಲು ಸೇವನೆಯಿಂದ ಆರೋಗ್ಯಕ್ಕೆ ಪೂರಕವಾದ `ಎ~ ಮತ್ತು `ಬಿ~ ವಿಟಮಿನ್ ಸಿಗುತ್ತದೆ ಎಂದು ವಿವರಿಸಿದರು. ತತ್ವಪದಕಾರ ರಘುನಾಥ ಹಡಪದ ಮಾತನಾಡಿದರು. ಓಂಪ್ರಕಾಶ ಧಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.<br /> <br /> ಪ್ರಾಚಾರ್ಯ ಪ್ರಶಾಂತ ಬಿರಾದಾರ್, ಪ್ರಮುಖರಾದ ಸಿದ್ರಾಮಪ್ಪ ಕಪಲಾಪುರೆ, ರಮೇಶ ಬಿರಾದಾರ್, ಪ್ರಕಾಶ ಪಾಟೀಲ್, ರವೀಂದ್ರಸಿಂಗ್ ಠಾಕೂರ್, ನಾಗಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>