<p>ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಿಂದ 20 ಕಿಮೀ ದೂರದಲ್ಲಿರುವ ಗೋಲಗೇರಿಯಲ್ಲಿದೆ ಗೊಲ್ಲಾಳೇಶ್ವರ ದೇವಸ್ಥಾನ. ಇದನ್ನು ಜನ ಗೋಲಗೇರಿ ಲಿಂಗಯ್ಯನ ಊರು ಎಂದೇ ಕರೆಯುತ್ತಾರೆ.<br /> <br /> ದೇವರ ಪ್ರೇರಣೆಯಂತೆ ಸುರಪುರದ ಮುತ್ತು ರತ್ನ ವ್ಯಾಪಾರಿ ಮರಿಯಪ್ಪ ಸಾಹುಕಾರರು ನಿರ್ಮಿಸಿದ ಮೂರು ದ್ವಾರಗಳ ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ತ್ರಿಕಾಲ ಪೂಜೆ, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ರಥೋತ್ಸವ ನಡೆಯುತ್ತದೆ. <br /> <br /> ಈ ಭಾಗದಲ್ಲಿ ಇಂದಿಗೂ ಗೊಲ್ಲಾಳೇಶ್ವರ ಸಹಸ್ರಾರು ಜನರ ಮನೆ ದೇವರು, ಹೀಗಾಗಿಯೇ ಗೊಲ್ಲಾಳಪ್ಪ, ಗೊಲ್ಲಾಳೇಶ್ವರ ಮುಂತಾದ ಹೆಸರುಗಳು ಇಲ್ಲಿ ಸರ್ವೇಸಾಮಾನ್ಯ. ಭಕ್ತನೇ ಇಲ್ಲಿ ಭಗವಂತನಾಗಿದ್ದಾನೆ. ಅದಕ್ಕಾಗಿ ಮಹಾ ಶಿವಭಕ್ತ ಗೊಲ್ಲಾಳೇಶ್ವರನಿಗೇ ಇಲ್ಲಿ ಅಗ್ರಪೂಜೆ.<br /> <br /> ಕ್ಷೇತ್ರ ಮಹಾತ್ಮೆಯ ಪ್ರಕಾರ ಕುರುಬ ಕುಟುಂಬದ ಡವಳಾರದ ಬಿಲ್ಲುಗ ಮತ್ತು ದುಗ್ಗಳಾದೇವಿಯ ಮಗ ಗೊಲ್ಲಾಳ, ಭಗವಾನ್ ಈಶ್ವರನ ಪರಮ ಭಕ್ತ. ಒಮ್ಮೆ ಶ್ರಿಶೈಲಕ್ಕೆ ತೆರಳುತ್ತಿದ್ದ ನಂದಯ್ಯ ಎಂಬಾತನ ಬಳಿ `ಅಲ್ಲಿಂದ ಬರುವಾಗ ನನಗೊಂದು ಶಿವಲಿಂಗ ತಂದು ಕೊಡು~ ಎಂದು ಬೇಡುತ್ತಾನೆ.<br /> <br /> ಆದರೆ ನಂದಯ್ಯ ಇದನ್ನು ಮರೆತು ಬಿಡುತ್ತಾನೆ. ಯಾತ್ರೆ ಮುಗಿಸಿ ವಾಪಸ್ ಗೋಲಗೇರಿ ಹತ್ತಿರ ಬರುವಾಗ ಏಕಾಏಕಿ ಗೊಲ್ಲಾಳನ ಮಾತು ನೆನಪಿಗೆ ಬರುತ್ತದೆ. ಅಲ್ಲಿಯೇ ಇದ್ದ ಕುರಿ ಹಿಕ್ಕೆಯನ್ನು ತೆಗೆದುಕೊಂಡು ಗೊಲ್ಲಾಳನಿಗೆ ಕೊಟ್ಟು `ಇದೇ ಶ್ರೀಶೈಲದಿಂದ ತಂದ ಲಿಂಗ~ ಎಂದು ಹೇಳುತ್ತಾನೆ. <br /> <br /> ಇದನ್ನು ನಂಬಿದ ಗೊಲ್ಲಾಳ ಗೊಬ್ಬರದ ಗುಂಡಿಯಲ್ಲಿ ನಂದಯ್ಯ ನೀಡಿದ ಹಿಕ್ಕೆ ಇಟ್ಟು ಆತನ ಮಾತಿನಂತೆಯೇ ಭಕ್ತಿಯಿಂದ ಪೂಜಿಸುತ್ತಾನೆ. ಇದನ್ನು ಮೆಚ್ಚಿದ ಶಿವ ಆತನ ಭಕ್ತಿಗೆ ಒಲಿದ ಕಾರಣಕ್ಕಾಗಿ ಶಿವ-ಗೊಲ್ಲಾಳ ಒಂದೇ ಎಂಬ ಭಾವ ಈ ದೇಗುಲಕ್ಕೆ ಬರುವ ಭಕ್ತರದ್ದು.<br /> </p>.<p><strong>ಸೇವಾ ವಿವರ (ರೂಪಾಯಿ)</strong></p>.<p>ಶಾಶ್ವತ ರುದ್ರಾಭಿಷೇಕ 1100<br /> ರುದ್ರಾಭಿಷೇಕ 501<br /> ಪಂಚಾಮೃತ 251<br /> ಅಭಿಷೇಕ 101<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಿಂದ 20 ಕಿಮೀ ದೂರದಲ್ಲಿರುವ ಗೋಲಗೇರಿಯಲ್ಲಿದೆ ಗೊಲ್ಲಾಳೇಶ್ವರ ದೇವಸ್ಥಾನ. ಇದನ್ನು ಜನ ಗೋಲಗೇರಿ ಲಿಂಗಯ್ಯನ ಊರು ಎಂದೇ ಕರೆಯುತ್ತಾರೆ.<br /> <br /> ದೇವರ ಪ್ರೇರಣೆಯಂತೆ ಸುರಪುರದ ಮುತ್ತು ರತ್ನ ವ್ಯಾಪಾರಿ ಮರಿಯಪ್ಪ ಸಾಹುಕಾರರು ನಿರ್ಮಿಸಿದ ಮೂರು ದ್ವಾರಗಳ ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ತ್ರಿಕಾಲ ಪೂಜೆ, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ರಥೋತ್ಸವ ನಡೆಯುತ್ತದೆ. <br /> <br /> ಈ ಭಾಗದಲ್ಲಿ ಇಂದಿಗೂ ಗೊಲ್ಲಾಳೇಶ್ವರ ಸಹಸ್ರಾರು ಜನರ ಮನೆ ದೇವರು, ಹೀಗಾಗಿಯೇ ಗೊಲ್ಲಾಳಪ್ಪ, ಗೊಲ್ಲಾಳೇಶ್ವರ ಮುಂತಾದ ಹೆಸರುಗಳು ಇಲ್ಲಿ ಸರ್ವೇಸಾಮಾನ್ಯ. ಭಕ್ತನೇ ಇಲ್ಲಿ ಭಗವಂತನಾಗಿದ್ದಾನೆ. ಅದಕ್ಕಾಗಿ ಮಹಾ ಶಿವಭಕ್ತ ಗೊಲ್ಲಾಳೇಶ್ವರನಿಗೇ ಇಲ್ಲಿ ಅಗ್ರಪೂಜೆ.<br /> <br /> ಕ್ಷೇತ್ರ ಮಹಾತ್ಮೆಯ ಪ್ರಕಾರ ಕುರುಬ ಕುಟುಂಬದ ಡವಳಾರದ ಬಿಲ್ಲುಗ ಮತ್ತು ದುಗ್ಗಳಾದೇವಿಯ ಮಗ ಗೊಲ್ಲಾಳ, ಭಗವಾನ್ ಈಶ್ವರನ ಪರಮ ಭಕ್ತ. ಒಮ್ಮೆ ಶ್ರಿಶೈಲಕ್ಕೆ ತೆರಳುತ್ತಿದ್ದ ನಂದಯ್ಯ ಎಂಬಾತನ ಬಳಿ `ಅಲ್ಲಿಂದ ಬರುವಾಗ ನನಗೊಂದು ಶಿವಲಿಂಗ ತಂದು ಕೊಡು~ ಎಂದು ಬೇಡುತ್ತಾನೆ.<br /> <br /> ಆದರೆ ನಂದಯ್ಯ ಇದನ್ನು ಮರೆತು ಬಿಡುತ್ತಾನೆ. ಯಾತ್ರೆ ಮುಗಿಸಿ ವಾಪಸ್ ಗೋಲಗೇರಿ ಹತ್ತಿರ ಬರುವಾಗ ಏಕಾಏಕಿ ಗೊಲ್ಲಾಳನ ಮಾತು ನೆನಪಿಗೆ ಬರುತ್ತದೆ. ಅಲ್ಲಿಯೇ ಇದ್ದ ಕುರಿ ಹಿಕ್ಕೆಯನ್ನು ತೆಗೆದುಕೊಂಡು ಗೊಲ್ಲಾಳನಿಗೆ ಕೊಟ್ಟು `ಇದೇ ಶ್ರೀಶೈಲದಿಂದ ತಂದ ಲಿಂಗ~ ಎಂದು ಹೇಳುತ್ತಾನೆ. <br /> <br /> ಇದನ್ನು ನಂಬಿದ ಗೊಲ್ಲಾಳ ಗೊಬ್ಬರದ ಗುಂಡಿಯಲ್ಲಿ ನಂದಯ್ಯ ನೀಡಿದ ಹಿಕ್ಕೆ ಇಟ್ಟು ಆತನ ಮಾತಿನಂತೆಯೇ ಭಕ್ತಿಯಿಂದ ಪೂಜಿಸುತ್ತಾನೆ. ಇದನ್ನು ಮೆಚ್ಚಿದ ಶಿವ ಆತನ ಭಕ್ತಿಗೆ ಒಲಿದ ಕಾರಣಕ್ಕಾಗಿ ಶಿವ-ಗೊಲ್ಲಾಳ ಒಂದೇ ಎಂಬ ಭಾವ ಈ ದೇಗುಲಕ್ಕೆ ಬರುವ ಭಕ್ತರದ್ದು.<br /> </p>.<p><strong>ಸೇವಾ ವಿವರ (ರೂಪಾಯಿ)</strong></p>.<p>ಶಾಶ್ವತ ರುದ್ರಾಭಿಷೇಕ 1100<br /> ರುದ್ರಾಭಿಷೇಕ 501<br /> ಪಂಚಾಮೃತ 251<br /> ಅಭಿಷೇಕ 101<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>