<p><strong>ಕಳಸ: </strong>ಹೋಬಳಿಯಾದ್ಯಂತ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಜನರ ಗಮನ ಸೆಳೆಯಲು ಅಖಿಲ ಭಾರತ ಯುವಜನ ಫೆಡರೇಶನ್ ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ಮತ್ತು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿತು.<br /> <br /> ಕೈಮರದಿಂದ ಆರಂಭಗೊಂಡ ಪ್ರತಿಭಟನಾ ಮೆರ ವಣಿಗೆಯಲ್ಲಿ ಗ್ರಾ.ಪಂ., ತಾ.ಪಂ. ಮತ್ತು ಜಿ.ಪಂ. ಸದಸ್ಯರು, ಅಧ್ಯಕ್ಷರಿಗೆ ಧಿಕ್ಕಾರ ಹಾಕಲಾಯಿತು. ರಸ್ತೆ ಗಳು ಶೋಚನೀಯ ಸ್ಥಿತಿಗೆ ತಲುಪಿದ್ದರೂ ನಿರ್ವ ಹಣೆಗೆ ಗಮನ ನೀಡದ ಅಧಿಕಾರಿಗಳ ವಿರುದ್ಧವೂ ಘೋಷಣೆಗಳು ಕೇಳಿ ಬಂದವು.<br /> <br /> ಸಿ.ಪಿ.ಐ. ಮುಖಂಡರಾದ ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್ ನೇತೃತ್ವದಲ್ಲಿ ನಡೆದ ಮೆರವಣಿಗೆ ಯಲ್ಲಿ ಎಐವೈಎಫ್ಮುಖಂಡರಾದ ಪೆರಿಯ ಸ್ವಾಮಿ, ಸುಂಕ ಸಾಲೆ ರವಿ, ಅಣ್ಣಪ್ಪ ಮತ್ತಿತರರು ಭಾಗವಹಿಸಿದ್ದರು.<br /> <br /> ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಆನಂತರ ಕಳಸ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದರು. ಕಚೇರಿಯ ಮೆಟ್ಟಿಲುಗಳಲ್ಲಿ ಸುಡುಬಿಸಿಲಿನಲ್ಲಿ ಎರಡು ಗಂಟೆಗಳ ಕಾಲ ಕಾರ್ಯಕರ್ತರು ಕುಳಿತಿದ್ದರು.<br /> <br /> ಪ್ರತಿಭಟನಾಕಾರರನ್ನು ಉದ್ದೇಶಿಸಿ ಲಕ್ಷ್ಮಣಾಚಾರ್, ಗೋಪಾಲ ಶೆಟ್ಟಿ, ಪೆರಿಯಸ್ವಾಮಿ ಮಾತನಾಡಿದರು.<br /> ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾವೀರ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ಕಂಚಿನಕೆರೆ, ಕಾಳಿಕೆರೆ ಗ್ರಾಮಗಳಿಗೆ ನೀರು ಮತ್ತು ರಸ್ತೆ ಸೌಲಭ್ಯ ಅಸಮರ್ಪಕವಾಗಿದೆ ಎಂದು ಪ್ರತಿಭಟನಾಕಾರರು ಗ್ರಾ.ಪಂ. ಅಧ್ಯಕ್ಷರ ಗಮನ ಸೆಳೆದರು.<br /> <br /> ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ಒಳಪಡುವ ಕಳಸ-ಕೊಟ್ಟಿಗೆಹಾರ, ಕಳಸ-ಬಸರೀಕಟ್ಟೆ, ಕಳಸ-ಹೊರನಾಡು ರಸ್ತೆಗಳೂ ಅವನತಿಯ ಅಂಚಿಗೆ ತಲುಪಿವೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತ ಪಡಿಸಿದರು.<br /> <br /> ಗ್ರಾ.ಪಂ. ಅಧ್ಯಕ್ಷ ಭರತ್ರಾಜ್ ಮಾತ ನಾಡಿ, ರಸ್ತೆಗಳ ಅಭಿವೃದ್ಧಿಗೆ ಅನುದಾನದ ಕೊರತೆ ಇದೆ. ಕಂಚಿನಕೆರೆ ದಲಿತ ಕಾಲೊನಿಗೆ ರಸ್ತೆ ದುರಸ್ತಿಗೊಳಿಸಲು ಮತ್ತು ನೀರು ಪೂರೈಕೆ ಸರಿಪಡಿಸಲು 50 ಸಾವಿರ ರೂಪಾಯಿಯನ್ನು ನಿಗದಿ ಮಾಡಲಾಗಿದೆ ಎಂದರು.<br /> <br /> ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಚೆನ್ನಯ್ಯ ಮಾತನಾಡಿ, ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುತ್ತದೆ. ಕಳಸ ರಥಬೀದಿಯ ಕಾಂಕ್ರೆಟ್ ಕಾಮಗಾರಿ ಸದ್ಯದಲ್ಲೇ ಆರಂಭಗೊಳ್ಳಲಿದೆ ಎಂದು ಸ್ಪಷ್ಟನೆ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಸ: </strong>ಹೋಬಳಿಯಾದ್ಯಂತ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಜನರ ಗಮನ ಸೆಳೆಯಲು ಅಖಿಲ ಭಾರತ ಯುವಜನ ಫೆಡರೇಶನ್ ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ಮತ್ತು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿತು.<br /> <br /> ಕೈಮರದಿಂದ ಆರಂಭಗೊಂಡ ಪ್ರತಿಭಟನಾ ಮೆರ ವಣಿಗೆಯಲ್ಲಿ ಗ್ರಾ.ಪಂ., ತಾ.ಪಂ. ಮತ್ತು ಜಿ.ಪಂ. ಸದಸ್ಯರು, ಅಧ್ಯಕ್ಷರಿಗೆ ಧಿಕ್ಕಾರ ಹಾಕಲಾಯಿತು. ರಸ್ತೆ ಗಳು ಶೋಚನೀಯ ಸ್ಥಿತಿಗೆ ತಲುಪಿದ್ದರೂ ನಿರ್ವ ಹಣೆಗೆ ಗಮನ ನೀಡದ ಅಧಿಕಾರಿಗಳ ವಿರುದ್ಧವೂ ಘೋಷಣೆಗಳು ಕೇಳಿ ಬಂದವು.<br /> <br /> ಸಿ.ಪಿ.ಐ. ಮುಖಂಡರಾದ ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್ ನೇತೃತ್ವದಲ್ಲಿ ನಡೆದ ಮೆರವಣಿಗೆ ಯಲ್ಲಿ ಎಐವೈಎಫ್ಮುಖಂಡರಾದ ಪೆರಿಯ ಸ್ವಾಮಿ, ಸುಂಕ ಸಾಲೆ ರವಿ, ಅಣ್ಣಪ್ಪ ಮತ್ತಿತರರು ಭಾಗವಹಿಸಿದ್ದರು.<br /> <br /> ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಆನಂತರ ಕಳಸ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದರು. ಕಚೇರಿಯ ಮೆಟ್ಟಿಲುಗಳಲ್ಲಿ ಸುಡುಬಿಸಿಲಿನಲ್ಲಿ ಎರಡು ಗಂಟೆಗಳ ಕಾಲ ಕಾರ್ಯಕರ್ತರು ಕುಳಿತಿದ್ದರು.<br /> <br /> ಪ್ರತಿಭಟನಾಕಾರರನ್ನು ಉದ್ದೇಶಿಸಿ ಲಕ್ಷ್ಮಣಾಚಾರ್, ಗೋಪಾಲ ಶೆಟ್ಟಿ, ಪೆರಿಯಸ್ವಾಮಿ ಮಾತನಾಡಿದರು.<br /> ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾವೀರ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ಕಂಚಿನಕೆರೆ, ಕಾಳಿಕೆರೆ ಗ್ರಾಮಗಳಿಗೆ ನೀರು ಮತ್ತು ರಸ್ತೆ ಸೌಲಭ್ಯ ಅಸಮರ್ಪಕವಾಗಿದೆ ಎಂದು ಪ್ರತಿಭಟನಾಕಾರರು ಗ್ರಾ.ಪಂ. ಅಧ್ಯಕ್ಷರ ಗಮನ ಸೆಳೆದರು.<br /> <br /> ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ಒಳಪಡುವ ಕಳಸ-ಕೊಟ್ಟಿಗೆಹಾರ, ಕಳಸ-ಬಸರೀಕಟ್ಟೆ, ಕಳಸ-ಹೊರನಾಡು ರಸ್ತೆಗಳೂ ಅವನತಿಯ ಅಂಚಿಗೆ ತಲುಪಿವೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತ ಪಡಿಸಿದರು.<br /> <br /> ಗ್ರಾ.ಪಂ. ಅಧ್ಯಕ್ಷ ಭರತ್ರಾಜ್ ಮಾತ ನಾಡಿ, ರಸ್ತೆಗಳ ಅಭಿವೃದ್ಧಿಗೆ ಅನುದಾನದ ಕೊರತೆ ಇದೆ. ಕಂಚಿನಕೆರೆ ದಲಿತ ಕಾಲೊನಿಗೆ ರಸ್ತೆ ದುರಸ್ತಿಗೊಳಿಸಲು ಮತ್ತು ನೀರು ಪೂರೈಕೆ ಸರಿಪಡಿಸಲು 50 ಸಾವಿರ ರೂಪಾಯಿಯನ್ನು ನಿಗದಿ ಮಾಡಲಾಗಿದೆ ಎಂದರು.<br /> <br /> ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಚೆನ್ನಯ್ಯ ಮಾತನಾಡಿ, ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುತ್ತದೆ. ಕಳಸ ರಥಬೀದಿಯ ಕಾಂಕ್ರೆಟ್ ಕಾಮಗಾರಿ ಸದ್ಯದಲ್ಲೇ ಆರಂಭಗೊಳ್ಳಲಿದೆ ಎಂದು ಸ್ಪಷ್ಟನೆ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>