<p><strong>ಕುರುಗೋಡು: </strong>ಪಟ್ಟಣದ ಕುಂಬಾರ ಗುಡ್ಡದ ಬಳಿಯಿರುವ ಮಹಿಳಾ ಸಾಮೂಹಿಕ ಶೌಚಾಲಯ ದುರಸ್ತಿಗೊಳಿಸುವಂತೆ ಆಗ್ರಹಿಸಿ ಮಹಿಳೆಯರು ಬುಧವಾರ ಸ್ಥಳೀಯ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. <br /> <br /> ಪಿಂಜಾರ್ಓಣಿ, ಕುರುಬರಓಣಿ ಮತ್ತು 5ನೇ ವಾರ್ಡಿನ ಮಹಿಳೆಯರಿಗೆ ಇದೊಂದೆ ಮಹಿಳಾ ಸಾಮೂಹಿಕ ಶೌಚಾಲಯವಿದ್ದು, ಅನೇಕ ವರ್ಷದಿಂದ ದುರಸ್ತಿ ಕಾಣದೆ ಶೌಚಾಲಯದ ಒಂದು ಮಗ್ಗಲಿನ ಗೋಡೆ ಬಿದ್ದಿದೆ.<br /> ಇದರ ಪಕ್ಕದಲ್ಲಿರುವ ಹುಣಿಸೆ ಗಿಡದ ನೆರಳಲ್ಲಿ ಪುರುಷರು ಗುಂಪು ಸದಾ ಇಸ್ಟೀಟ್ನಲ್ಲಿ ಮುಳುಗಿರುತ್ತಾರೆ.<br /> ಶೌಚಾಲಯದ ಸುತ್ತ ತಿಪ್ಪೆಗಳು ತಲೆ ಎತ್ತಿದ್ದು ಶೌಚಾಲಯಕ್ಕೆ ಹೋಗಲು ಸೂಕ್ತ ರಸ್ತೆ ಇರುವುದಿಲ್ಲ. ಬಹಿರ್ದೆಸೆಗೆ ಹೋಗುವ ಮಹಿಳೆಯರಿಗೆ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. <br /> <br /> ಇಲ್ಲಿ ನಡೆಯುವ ಇಸ್ಪೀಟ್ ಆಟಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಮತ್ತು ದುರಸ್ತಿ ಕೈಗೊಳ್ಳುವಂತೆ ಗ್ರಾಪಂ.ಗೆ ಅನೇಕ ಬಾರಿ ಒತ್ತಾಯಿಸಿದರೂ ಪ್ರಯೋಜವಾಗಿಲ್ಲ. ನಿರ್ಲಕ್ಷ್ಯ ಮುಂದುವರಿದರೆ ಶೌಚಾಲಯವೇ ಕಾಣದಾಗುತ್ತದೆ, ತಕ್ಷಣ ಗ್ರಾಪಂ. ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. <br /> <br /> ಮಹಿಳೆಯರ ಹೋರಾಟಕ್ಕೆ ಬೆಂಬಲಿಸಿ ಕರವೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚಾನಾಳ್ ಚನ್ನಬಸವರಾಜ್ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಅವಕಾಶವಿದ್ದರೂ. ಗ್ರಾಪಂ. ಮೌನವಾಗಿದೆ. ಮೂರು ವಾರ್ಡಿನ ಮಹಿಳೆಯರು ಸಂಕಟದ ಸ್ಥಿತಿ ಅನುಭವಿಸುವಂತಾಗಿದೆ. ಈ ಬಗ್ಗೆ ಗ್ರಾಮಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. <br /> <br /> ಪ್ರತಿಭಟನಾ ನಿರತರ ಅಹವಾಲು ಸ್ವೀಕರಿಸಿದ ಗ್ರಾಪಂ. ಅಭಿವೃದ್ಧಿ ಅಧಿಕಾರಿ ಎಸ್ಎಮ್. ಶಿವರುದ್ರಯ್ಯ, ಸಾಮೂಹಿಕ ಶೌಚಾಲಯ ನಿರ್ಮಾಣ ಮತ್ತು ದುರಸ್ತಿಗೆ ಜಿಲ್ಲಾಡಳಿತ ಪರವಾನಿಗೆ ನೀಡಿಲ್ಲ. ಜಿ.ಪಂ.ನಲ್ಲಿ ನಡೆದ ಸಭೆಗಳಲ್ಲಿ ವೈಯಕ್ತಿಕ ಶೌಚಾಲಯ ಕಡ್ಡಾಯಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. <br /> <br /> ಸಾಮೂಹಿಕ ಶೌಚಾಲಯ ದುರಸ್ತಿ ಮತ್ತು ನಿರ್ಮಾಣಕ್ಕೆ ಯಾವುದೆ ಅನುದಾನವಿಲ್ಲ ಎಂದು ತಿಳಿಸಿದರು.<br /> ಅಭಿವೃದ್ಧಿ ಅಧಿಕಾರಿಯ ಸಮಜಾಯಿಷಿ ಒಪ್ಪದ ಪ್ರಭಟನಾಕಾರರು ಕೆಲ ಸಮಯದ ವರೆಗೆ ಬಿಸಿ ಬಿಸಿ ಚರ್ಚೆ ನಡೆಸಿದರು.<br /> <br /> ಜಿಪಂ. ಅಧಿಕಾರಿಗೊಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, 13ನೇ ಹಣಕಾಸು ಅಥವಾ ಅಭಿವೃದ್ಧಿ ಯೋಜನೆ ಅನುದಾನದಡಿ, ದುರಸ್ತಿ ಕಾಮಗಾರಿ ಕೈಗೊಳ್ಳಲು ಪರವಾನಿಗೆ ಪಡೆಯಲಾಯಿತು.<br /> ಮುಂದಿನ ವಾರದಿಂದ ದುರಸ್ತಿ ಕೈಗೊಳ್ಳುವ ಭರವಸೆ ನೀಡಿದ ನಂತರ ಮಹಿಳೆಯರು ಪ್ರತಿಭಟನೆ ಹಿಂಪಡೆದರು. <br /> <br /> ಕರವೇ ಸ್ಥಳೀಯ ಘಟಕದ ಅಧ್ಯಕ್ಷ ಬಿ. ಮಲ್ಲಿಕಾರ್ಜುನ, ರೈತ ವಿಭಾಗದ ಅಧ್ಯಕ್ಷ್ಯ ಚನ್ನಪಟ್ಟಣ ಮಲ್ಲಿಕಾರ್ಜುನ, ನಂದಿಕೋಲು ಬಸವರಾಜ್, ಸಿದ್ದಿಸಾಬ್, ಸ್ತ್ರೀಶಕ್ತಿ ಸಂಘದ ಸದಸ್ಯರು ಪ್ರತಿಭಟೆನಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು: </strong>ಪಟ್ಟಣದ ಕುಂಬಾರ ಗುಡ್ಡದ ಬಳಿಯಿರುವ ಮಹಿಳಾ ಸಾಮೂಹಿಕ ಶೌಚಾಲಯ ದುರಸ್ತಿಗೊಳಿಸುವಂತೆ ಆಗ್ರಹಿಸಿ ಮಹಿಳೆಯರು ಬುಧವಾರ ಸ್ಥಳೀಯ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. <br /> <br /> ಪಿಂಜಾರ್ಓಣಿ, ಕುರುಬರಓಣಿ ಮತ್ತು 5ನೇ ವಾರ್ಡಿನ ಮಹಿಳೆಯರಿಗೆ ಇದೊಂದೆ ಮಹಿಳಾ ಸಾಮೂಹಿಕ ಶೌಚಾಲಯವಿದ್ದು, ಅನೇಕ ವರ್ಷದಿಂದ ದುರಸ್ತಿ ಕಾಣದೆ ಶೌಚಾಲಯದ ಒಂದು ಮಗ್ಗಲಿನ ಗೋಡೆ ಬಿದ್ದಿದೆ.<br /> ಇದರ ಪಕ್ಕದಲ್ಲಿರುವ ಹುಣಿಸೆ ಗಿಡದ ನೆರಳಲ್ಲಿ ಪುರುಷರು ಗುಂಪು ಸದಾ ಇಸ್ಟೀಟ್ನಲ್ಲಿ ಮುಳುಗಿರುತ್ತಾರೆ.<br /> ಶೌಚಾಲಯದ ಸುತ್ತ ತಿಪ್ಪೆಗಳು ತಲೆ ಎತ್ತಿದ್ದು ಶೌಚಾಲಯಕ್ಕೆ ಹೋಗಲು ಸೂಕ್ತ ರಸ್ತೆ ಇರುವುದಿಲ್ಲ. ಬಹಿರ್ದೆಸೆಗೆ ಹೋಗುವ ಮಹಿಳೆಯರಿಗೆ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. <br /> <br /> ಇಲ್ಲಿ ನಡೆಯುವ ಇಸ್ಪೀಟ್ ಆಟಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಮತ್ತು ದುರಸ್ತಿ ಕೈಗೊಳ್ಳುವಂತೆ ಗ್ರಾಪಂ.ಗೆ ಅನೇಕ ಬಾರಿ ಒತ್ತಾಯಿಸಿದರೂ ಪ್ರಯೋಜವಾಗಿಲ್ಲ. ನಿರ್ಲಕ್ಷ್ಯ ಮುಂದುವರಿದರೆ ಶೌಚಾಲಯವೇ ಕಾಣದಾಗುತ್ತದೆ, ತಕ್ಷಣ ಗ್ರಾಪಂ. ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. <br /> <br /> ಮಹಿಳೆಯರ ಹೋರಾಟಕ್ಕೆ ಬೆಂಬಲಿಸಿ ಕರವೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚಾನಾಳ್ ಚನ್ನಬಸವರಾಜ್ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಅವಕಾಶವಿದ್ದರೂ. ಗ್ರಾಪಂ. ಮೌನವಾಗಿದೆ. ಮೂರು ವಾರ್ಡಿನ ಮಹಿಳೆಯರು ಸಂಕಟದ ಸ್ಥಿತಿ ಅನುಭವಿಸುವಂತಾಗಿದೆ. ಈ ಬಗ್ಗೆ ಗ್ರಾಮಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. <br /> <br /> ಪ್ರತಿಭಟನಾ ನಿರತರ ಅಹವಾಲು ಸ್ವೀಕರಿಸಿದ ಗ್ರಾಪಂ. ಅಭಿವೃದ್ಧಿ ಅಧಿಕಾರಿ ಎಸ್ಎಮ್. ಶಿವರುದ್ರಯ್ಯ, ಸಾಮೂಹಿಕ ಶೌಚಾಲಯ ನಿರ್ಮಾಣ ಮತ್ತು ದುರಸ್ತಿಗೆ ಜಿಲ್ಲಾಡಳಿತ ಪರವಾನಿಗೆ ನೀಡಿಲ್ಲ. ಜಿ.ಪಂ.ನಲ್ಲಿ ನಡೆದ ಸಭೆಗಳಲ್ಲಿ ವೈಯಕ್ತಿಕ ಶೌಚಾಲಯ ಕಡ್ಡಾಯಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. <br /> <br /> ಸಾಮೂಹಿಕ ಶೌಚಾಲಯ ದುರಸ್ತಿ ಮತ್ತು ನಿರ್ಮಾಣಕ್ಕೆ ಯಾವುದೆ ಅನುದಾನವಿಲ್ಲ ಎಂದು ತಿಳಿಸಿದರು.<br /> ಅಭಿವೃದ್ಧಿ ಅಧಿಕಾರಿಯ ಸಮಜಾಯಿಷಿ ಒಪ್ಪದ ಪ್ರಭಟನಾಕಾರರು ಕೆಲ ಸಮಯದ ವರೆಗೆ ಬಿಸಿ ಬಿಸಿ ಚರ್ಚೆ ನಡೆಸಿದರು.<br /> <br /> ಜಿಪಂ. ಅಧಿಕಾರಿಗೊಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, 13ನೇ ಹಣಕಾಸು ಅಥವಾ ಅಭಿವೃದ್ಧಿ ಯೋಜನೆ ಅನುದಾನದಡಿ, ದುರಸ್ತಿ ಕಾಮಗಾರಿ ಕೈಗೊಳ್ಳಲು ಪರವಾನಿಗೆ ಪಡೆಯಲಾಯಿತು.<br /> ಮುಂದಿನ ವಾರದಿಂದ ದುರಸ್ತಿ ಕೈಗೊಳ್ಳುವ ಭರವಸೆ ನೀಡಿದ ನಂತರ ಮಹಿಳೆಯರು ಪ್ರತಿಭಟನೆ ಹಿಂಪಡೆದರು. <br /> <br /> ಕರವೇ ಸ್ಥಳೀಯ ಘಟಕದ ಅಧ್ಯಕ್ಷ ಬಿ. ಮಲ್ಲಿಕಾರ್ಜುನ, ರೈತ ವಿಭಾಗದ ಅಧ್ಯಕ್ಷ್ಯ ಚನ್ನಪಟ್ಟಣ ಮಲ್ಲಿಕಾರ್ಜುನ, ನಂದಿಕೋಲು ಬಸವರಾಜ್, ಸಿದ್ದಿಸಾಬ್, ಸ್ತ್ರೀಶಕ್ತಿ ಸಂಘದ ಸದಸ್ಯರು ಪ್ರತಿಭಟೆನಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>