<p>ಹಾಸನ: `ಜಾಗತೀಕರಣದಲ್ಲಿ ವಿದ್ಯಾವಂತ ಗ್ರಾಹಕರೇ ಮೋಸಕ್ಕೆ ಒಳಗಾಗುತ್ತಿದ್ದಾರೆ. ಅವಿದ್ಯಾವಂತ ಜನರ ಸ್ಥಿತಿ ಶೋಚನೀಯವಾಗಿದೆ~ ಎಂದು ಕಾನೂನು ಕಾಲೇಜು ಸಹಪ್ರಾಧ್ಯಾಪಕ ಪ್ರೊ . ಲಕ್ಷ್ಮಣ್ ಆತಂಕ ವ್ಯಕ್ತಪಡಿಸಿದರು. <br /> <br /> ಗೋರೂರು ಎ.ಎನ್. ವರದರಾಜುಲು ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಆರ್ಥಿಕ ಚಿಂತನಾ ವೇದಿಕೆಯ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ವಿದ್ಯಾವಂತರು ಎಚ್ಚೆತ್ತುಕೊಂಡು ವಂಚನೆಗೆ ಒಳಗಾಗುತ್ತಿರುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು~ ಎಂದರು.<br /> <br /> ಉಪನ್ಯಾಸಕರಾಗಿದ್ದ ಸರ್ಕಾರಿ ಕಾನೂನು ಕಾಲೇಜು ಸಹಪ್ರಾಧ್ಯಾಪಕ ಡಾ. ರಾಜೇಂದ್ರಕುಮಾರ್ ಹಿಟ್ಟಣಗಿ, `ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಗ್ರಾಹಕರ ದಿನಾಚರಣೆ ಉದ್ದೇಶ. <br /> <br /> ಶೋಷಣೆಗೊಳಗಾಗದೆ ಯಾವ ರೀತಿ ಕಾನೂನಿನ ಮೂಲಕ ನ್ಯಾಯ ದೊರಕಿಸಕೊಳ್ಳಬಹುದು ಎಂಬುದನ್ನು ಎಲ್ಲರೂಅರಿತುಕೊಳ್ಳಬೇಕು~ ಎಂದರು.<br /> <br /> ಉಪನ್ಯಾಸಕಿ ಸಿ.ಆರ್. ಪುಷ್ಪವತಿ, ಕಾಲೇಜು ಪ್ರಾಂಶುಪಾಲ ಡಾ. ಎಂ.ಆರ್. ಚಂದ್ರಶೇಖರ್ ಮತನಾಡಿದರು. ಉಪನ್ಯಾಸಕ ಜೆ.ಪಿ. ಧರ್ಮೇಗೌಡ ಉಪಸ್ಥಿತರಿದ್ದರು.<br /> ವಿದ್ಯಾರ್ಥಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವಾಣಿ ವಂದಿಸಿದರು. <br /> <br /> <strong>ಸಮ್ಮಿಶ್ರ ಸರ್ಕಾರ ಸೂಕ್ತ: </strong>ಕಾಲೇಜಿನ ರಾಜಕೀಯ ಚಿಂತನಾ ವೇದಿಕೆ ಆಶ್ರಯದಲ್ಲಿ ಈಚೆಗೆ `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮ್ಮಿಶ್ರಸರ್ಕಾರ ಸೂಕ್ತ~ ವಿಷಯದ ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು.<br /> <br /> ವಿಷಯದ ಪರವಾಗಿ ಅಂತಿಮ ಬಿ.ಎ ವಿದ್ಯಾರ್ಥಿ ಯು.ಪಿ ರಾಕೇಶ್, ಶೇಖರ್, ವಿಷಯದ ವಿರುದ್ಧವಾಗಿ ಎಚ್.ಆರ್ ಸಂತೋಷ್, ಅಶ್ವಿನಿ ವಿಚಾರ ಮಂಡಿಸಿದರು.<br /> <br /> ಅಧ್ಯಕ್ಷತೆ ವಹಿಸಿದ್ದ ಅಂತಿಮ ಬಿ.ಎ ವಿದ್ಯಾಥಿ ಗಂಗಾಧರ್, `ಕಾಲೇಜಿನಲ್ಲಿ ಈ ರೀತಿಯ ಚರ್ಚಾ ಗೋಷ್ಠಿ ಆಯೋಜಿಸಿದರೆ ವಿದ್ಯಾರ್ಥಿಗಳಿಗೆ ಜ್ಞಾನಾಭಿವೃದ್ಧಿಗೆ ಅನುಕೂಲವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ~ ಎಂದರು. <br /> <br /> ಪ್ರಚಾರ್ಯ ಡಾ. ಎಂ.ಆರ್. ಚಂದ್ರಶೇಖರ್, ಉಪನ್ಯಾಸಕ ಎಚ್.ಡಿ. ಲೋಕೇಶ್. ಭಾಗವಹಿಸಿದ್ದರು. ವಿದ್ಯಾರ್ಥಿ ಅಭಿಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಸಂತಕುಮಾರ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: `ಜಾಗತೀಕರಣದಲ್ಲಿ ವಿದ್ಯಾವಂತ ಗ್ರಾಹಕರೇ ಮೋಸಕ್ಕೆ ಒಳಗಾಗುತ್ತಿದ್ದಾರೆ. ಅವಿದ್ಯಾವಂತ ಜನರ ಸ್ಥಿತಿ ಶೋಚನೀಯವಾಗಿದೆ~ ಎಂದು ಕಾನೂನು ಕಾಲೇಜು ಸಹಪ್ರಾಧ್ಯಾಪಕ ಪ್ರೊ . ಲಕ್ಷ್ಮಣ್ ಆತಂಕ ವ್ಯಕ್ತಪಡಿಸಿದರು. <br /> <br /> ಗೋರೂರು ಎ.ಎನ್. ವರದರಾಜುಲು ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಆರ್ಥಿಕ ಚಿಂತನಾ ವೇದಿಕೆಯ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ವಿದ್ಯಾವಂತರು ಎಚ್ಚೆತ್ತುಕೊಂಡು ವಂಚನೆಗೆ ಒಳಗಾಗುತ್ತಿರುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು~ ಎಂದರು.<br /> <br /> ಉಪನ್ಯಾಸಕರಾಗಿದ್ದ ಸರ್ಕಾರಿ ಕಾನೂನು ಕಾಲೇಜು ಸಹಪ್ರಾಧ್ಯಾಪಕ ಡಾ. ರಾಜೇಂದ್ರಕುಮಾರ್ ಹಿಟ್ಟಣಗಿ, `ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಗ್ರಾಹಕರ ದಿನಾಚರಣೆ ಉದ್ದೇಶ. <br /> <br /> ಶೋಷಣೆಗೊಳಗಾಗದೆ ಯಾವ ರೀತಿ ಕಾನೂನಿನ ಮೂಲಕ ನ್ಯಾಯ ದೊರಕಿಸಕೊಳ್ಳಬಹುದು ಎಂಬುದನ್ನು ಎಲ್ಲರೂಅರಿತುಕೊಳ್ಳಬೇಕು~ ಎಂದರು.<br /> <br /> ಉಪನ್ಯಾಸಕಿ ಸಿ.ಆರ್. ಪುಷ್ಪವತಿ, ಕಾಲೇಜು ಪ್ರಾಂಶುಪಾಲ ಡಾ. ಎಂ.ಆರ್. ಚಂದ್ರಶೇಖರ್ ಮತನಾಡಿದರು. ಉಪನ್ಯಾಸಕ ಜೆ.ಪಿ. ಧರ್ಮೇಗೌಡ ಉಪಸ್ಥಿತರಿದ್ದರು.<br /> ವಿದ್ಯಾರ್ಥಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವಾಣಿ ವಂದಿಸಿದರು. <br /> <br /> <strong>ಸಮ್ಮಿಶ್ರ ಸರ್ಕಾರ ಸೂಕ್ತ: </strong>ಕಾಲೇಜಿನ ರಾಜಕೀಯ ಚಿಂತನಾ ವೇದಿಕೆ ಆಶ್ರಯದಲ್ಲಿ ಈಚೆಗೆ `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮ್ಮಿಶ್ರಸರ್ಕಾರ ಸೂಕ್ತ~ ವಿಷಯದ ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು.<br /> <br /> ವಿಷಯದ ಪರವಾಗಿ ಅಂತಿಮ ಬಿ.ಎ ವಿದ್ಯಾರ್ಥಿ ಯು.ಪಿ ರಾಕೇಶ್, ಶೇಖರ್, ವಿಷಯದ ವಿರುದ್ಧವಾಗಿ ಎಚ್.ಆರ್ ಸಂತೋಷ್, ಅಶ್ವಿನಿ ವಿಚಾರ ಮಂಡಿಸಿದರು.<br /> <br /> ಅಧ್ಯಕ್ಷತೆ ವಹಿಸಿದ್ದ ಅಂತಿಮ ಬಿ.ಎ ವಿದ್ಯಾಥಿ ಗಂಗಾಧರ್, `ಕಾಲೇಜಿನಲ್ಲಿ ಈ ರೀತಿಯ ಚರ್ಚಾ ಗೋಷ್ಠಿ ಆಯೋಜಿಸಿದರೆ ವಿದ್ಯಾರ್ಥಿಗಳಿಗೆ ಜ್ಞಾನಾಭಿವೃದ್ಧಿಗೆ ಅನುಕೂಲವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ~ ಎಂದರು. <br /> <br /> ಪ್ರಚಾರ್ಯ ಡಾ. ಎಂ.ಆರ್. ಚಂದ್ರಶೇಖರ್, ಉಪನ್ಯಾಸಕ ಎಚ್.ಡಿ. ಲೋಕೇಶ್. ಭಾಗವಹಿಸಿದ್ದರು. ವಿದ್ಯಾರ್ಥಿ ಅಭಿಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಸಂತಕುಮಾರ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>