<p>ಮೈಸೂರು: ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾರು ರ್್ಯಾಲಿಯಲ್ಲಿ ಚಾಲಕರಿಗೆ ಅಂಧರು ಮಾರ್ಗದರ್ಶನ ನೀಡುವ ಮೂಲಕ ಗಮನ ಸೆಳೆದರು. ಅಂಧರು ಹೇಳಿದ ಮಾರ್ಗದಲ್ಲಿ ಮತ್ತು ವೇಗದಲ್ಲಿ ಚಾಲಕರು ಕಾರು ಚಲಾಯಿಸಿದರು.<br /> <br /> ಟಿಡಿಎಸ್ ಮಾದರಿಯ 60 ಕಿ.ಮೀ ದೂರದ ರ್್ಯಾಲಿಯಲ್ಲಿ ಸುಮಾರು 60 ಕಾರುಗಳು ಸ್ಪರ್ಧೆಯಲ್ಲಿದ್ದವು. ಈ ಕಾರುಗಳ ಚಾಲಕರಿಗೆ ಅಂಧರು ‘ನೇವಿ ಗೇಟರ್’ ಆಗಿ ಕಾರ್ಯನಿರ್ವಹಿಸಿದರು. ಬ್ರೈಲ್ ಲಿಪಿಯಲ್ಲಿ ನೀಡಿದ್ದ ಮಾರ್ಗದ ನಕ್ಷೆಯ ನೆರವಿನೊಂದಿಗೆ ಯಶಸ್ವಿಯಾಗಿ ತಮ್ಮ ಕೆಲಸ ನಿಭಾಯಿಸಿದರು.<br /> <br /> ಅಂಧರಲ್ಲಿ ಸ್ಫೂರ್ತಿ ತುಂಬಲು ರೌಂಡ್ ಟೇಬಲ್ ಇಂಡಿಯಾದ ಮೈಸೂರು ಅಮಿಟಿ ರೌಂಡ್ ಟೇಬಲ್ 156 ಈ ರ್್ಯಾಲಿ ಆಯೋಜಿಸಿತ್ತು. ‘ಬಿ ಮೈ ಸೈಟ್’ ಎಂಬ ಹೆಸರಿನ ರ್್ಯಾಲಿಯು ರಿಂಗ್ ರಸ್ತೆ, ಎಚ್.ಡಿ. ಕೋಟೆ ರಸ್ತೆ, ನಂಜನಗೂಡು ರಸ್ತೆಗಳಲ್ಲಿ ಸುತ್ತಾಡಿ ಮಾಲ್ ಆಫ್ ಮೈಸೂರು ಬಳಿ ಅಂತ್ಯಗೊಂಡಿತು.<br /> <br /> ‘ಗುರಿ ಮುಟ್ಟಲು ಅಂಧತ್ವ ಅಡ್ಡಿ ಯಾಗದು’ ಎಂಬುದನ್ನು ಸಾಬೀತುಪಡಿ ಸಲು ಈ ರ್್ಯಾಲಿ ಆಯೋಜಿಸಲಾಗಿತ್ತು. ಯಾವ ರಸ್ತೆಯ ಮೂಲಕ ಹೋಗಬೇಕು, ಯಾವ ಸ್ಥಳದಲ್ಲಿ ಎಡಕ್ಕೆ ತೆಗೆದುಕೊಳ್ಳ ಬೇಕು, ಎಲ್ಲಿ ನಿಧಾನವಾಗಿ ಚಲಿಸಬೇಕು ಎಂಬುದರ ಬಗ್ಗೆ ಅಂಧರು ಮಾರ್ಗ ದರ್ಶನ ಮಾಡಿದರು. <br /> <br /> ಹಕ್ಕು ವಂಚಿತ ಮಕ್ಕಳಲ್ಲಿ ಶಿಕ್ಷಣ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ರ್್ಯಾಲಿಯಲ್ಲಿ ಬೆಂಗ ಳೂರು, ಮೈಸೂರು, ಮಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸ್ಪರ್ಧಿಗಳು ಭಾಗವಹಿಸಿದ್ದರು.<br /> <br /> ನಗರದ ದಿವ್ಯಜ್ಯೋತಿ ಚಾರಿಟಬಲ್ ಟ್ರಸ್ಟ್, ಹೆಲೆನ್ ಕೆಲರ್ ಸಂಸ್ಥೆ, ರಂಗರಾವ್ ಸ್ಮಾರಕ ಅಂಧರ ಶಾಲೆ, ಜೆಎಸ್ಎಸ್ ಪಾಲಿಟೆಕ್ನಿಕ್ ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳ ಸುಮಾರು 60 ಅಂಧರು ಪಾಲ್ಗೊಂಡಿದ್ದರು.<br /> <br /> ಚಾಲಕರಾದ ಶಿಲ್ಪಾ ಗೌಡ ಹಾಗೂ ಉಷಾ ಅವರು ಪ್ರಥಮ ಸ್ಥಾನ ಪಡೆದರು. ಇವರಿಗೆ ನೇವಿಗೇಟರ್ ಆಗಿ ಮಾರ್ಗ ದರ್ಶನ ನೀಡಿದ್ದು ಕೇಶವಮೂರ್ತಿ. ಇವರಿಗೆ ₹ 30 ಸಾವಿರ ಬಹುಮಾನ ಲಭಿಸಿತು.<br /> <br /> ಎರಡನೇ ಸ್ಥಾನ ಸಂಜನಾ ಹಾಗೂ ಸುಜಿತ್ ಪಾಲಾಯಿತು. ಇವರಿಗೆ ಕವಿತಾ ಅವರು ನೇವಿಗೇಟರ್ ಆಗಿ ಕಾರ್ಯನಿ ರ್ವಹಿಸಿದರು. ಮೂರನೇ ಸ್ಥಾನ ರಾಮ್ ಹಾಗೂ ಗೌತಮ್ ಅವರಿಗೆ ಒಲಿಯಿತು. ಇವರಿಗೆ ಚಂದ್ರೇಶ್ ಅವರು ನೇವಿ ಗೇಟರ್ ಆಗಿದ್ದರು. ಇವರು ಕ್ರಮವಾಗಿ<br /> ₹ 20, ₹ 10 ಸಾವಿರ ಬಹುಮಾನ ಲಭಿಸಿತು.<br /> <br /> ‘ನಾನು ಶಿಕ್ಷಕಿಯಾಗಿ ಕಾರ್ಯನಿರ್ವ ಹಿಸುತ್ತಿದ್ದೇನೆ. ಈ ರ್್ಯಾಲಿ ನನಗೆ ಹೊಸ ಅನುಭವ ನೀಡಿತು. ದಿನನಿತ್ಯದ ಜಂಜಾ ಟದಿಂದ ಹೊರಬಂದು ಖುಷಿಪಟ್ಟೆ. ನಾನಿದ್ದ ಕಾರಿನ ಚಾಲಕರಿಗೆ ಸರಿಯಾದ ಮಾರ್ಗದರ್ಶನ ನೀಡಿದೆ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಕವಿತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.<br /> <br /> ರ್್ಯಾಲಿಯ ಆರಂಭ ತಡವಾಯಿತು. ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಕಾಲೇಜು ಮೈದಾನದಲ್ಲಿ ಶುರುವಾದ ರ್್ಯಾಲಿಗೆ ನಟಿ ಹರಿಪ್ರಿಯಾ ಚಾಲನೆ ನೀಡಿದರು. ಕಾರ್ಯಕ್ರಮದ ಸಂಚಾಲಕ ರಾದ ಪವನ್ ರಂಗಾ, ಕಿರಣ್ ರಂಗಾ, ಲೋಹಿತ್ ಅರಸು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾರು ರ್್ಯಾಲಿಯಲ್ಲಿ ಚಾಲಕರಿಗೆ ಅಂಧರು ಮಾರ್ಗದರ್ಶನ ನೀಡುವ ಮೂಲಕ ಗಮನ ಸೆಳೆದರು. ಅಂಧರು ಹೇಳಿದ ಮಾರ್ಗದಲ್ಲಿ ಮತ್ತು ವೇಗದಲ್ಲಿ ಚಾಲಕರು ಕಾರು ಚಲಾಯಿಸಿದರು.<br /> <br /> ಟಿಡಿಎಸ್ ಮಾದರಿಯ 60 ಕಿ.ಮೀ ದೂರದ ರ್್ಯಾಲಿಯಲ್ಲಿ ಸುಮಾರು 60 ಕಾರುಗಳು ಸ್ಪರ್ಧೆಯಲ್ಲಿದ್ದವು. ಈ ಕಾರುಗಳ ಚಾಲಕರಿಗೆ ಅಂಧರು ‘ನೇವಿ ಗೇಟರ್’ ಆಗಿ ಕಾರ್ಯನಿರ್ವಹಿಸಿದರು. ಬ್ರೈಲ್ ಲಿಪಿಯಲ್ಲಿ ನೀಡಿದ್ದ ಮಾರ್ಗದ ನಕ್ಷೆಯ ನೆರವಿನೊಂದಿಗೆ ಯಶಸ್ವಿಯಾಗಿ ತಮ್ಮ ಕೆಲಸ ನಿಭಾಯಿಸಿದರು.<br /> <br /> ಅಂಧರಲ್ಲಿ ಸ್ಫೂರ್ತಿ ತುಂಬಲು ರೌಂಡ್ ಟೇಬಲ್ ಇಂಡಿಯಾದ ಮೈಸೂರು ಅಮಿಟಿ ರೌಂಡ್ ಟೇಬಲ್ 156 ಈ ರ್್ಯಾಲಿ ಆಯೋಜಿಸಿತ್ತು. ‘ಬಿ ಮೈ ಸೈಟ್’ ಎಂಬ ಹೆಸರಿನ ರ್್ಯಾಲಿಯು ರಿಂಗ್ ರಸ್ತೆ, ಎಚ್.ಡಿ. ಕೋಟೆ ರಸ್ತೆ, ನಂಜನಗೂಡು ರಸ್ತೆಗಳಲ್ಲಿ ಸುತ್ತಾಡಿ ಮಾಲ್ ಆಫ್ ಮೈಸೂರು ಬಳಿ ಅಂತ್ಯಗೊಂಡಿತು.<br /> <br /> ‘ಗುರಿ ಮುಟ್ಟಲು ಅಂಧತ್ವ ಅಡ್ಡಿ ಯಾಗದು’ ಎಂಬುದನ್ನು ಸಾಬೀತುಪಡಿ ಸಲು ಈ ರ್್ಯಾಲಿ ಆಯೋಜಿಸಲಾಗಿತ್ತು. ಯಾವ ರಸ್ತೆಯ ಮೂಲಕ ಹೋಗಬೇಕು, ಯಾವ ಸ್ಥಳದಲ್ಲಿ ಎಡಕ್ಕೆ ತೆಗೆದುಕೊಳ್ಳ ಬೇಕು, ಎಲ್ಲಿ ನಿಧಾನವಾಗಿ ಚಲಿಸಬೇಕು ಎಂಬುದರ ಬಗ್ಗೆ ಅಂಧರು ಮಾರ್ಗ ದರ್ಶನ ಮಾಡಿದರು. <br /> <br /> ಹಕ್ಕು ವಂಚಿತ ಮಕ್ಕಳಲ್ಲಿ ಶಿಕ್ಷಣ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ರ್್ಯಾಲಿಯಲ್ಲಿ ಬೆಂಗ ಳೂರು, ಮೈಸೂರು, ಮಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸ್ಪರ್ಧಿಗಳು ಭಾಗವಹಿಸಿದ್ದರು.<br /> <br /> ನಗರದ ದಿವ್ಯಜ್ಯೋತಿ ಚಾರಿಟಬಲ್ ಟ್ರಸ್ಟ್, ಹೆಲೆನ್ ಕೆಲರ್ ಸಂಸ್ಥೆ, ರಂಗರಾವ್ ಸ್ಮಾರಕ ಅಂಧರ ಶಾಲೆ, ಜೆಎಸ್ಎಸ್ ಪಾಲಿಟೆಕ್ನಿಕ್ ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳ ಸುಮಾರು 60 ಅಂಧರು ಪಾಲ್ಗೊಂಡಿದ್ದರು.<br /> <br /> ಚಾಲಕರಾದ ಶಿಲ್ಪಾ ಗೌಡ ಹಾಗೂ ಉಷಾ ಅವರು ಪ್ರಥಮ ಸ್ಥಾನ ಪಡೆದರು. ಇವರಿಗೆ ನೇವಿಗೇಟರ್ ಆಗಿ ಮಾರ್ಗ ದರ್ಶನ ನೀಡಿದ್ದು ಕೇಶವಮೂರ್ತಿ. ಇವರಿಗೆ ₹ 30 ಸಾವಿರ ಬಹುಮಾನ ಲಭಿಸಿತು.<br /> <br /> ಎರಡನೇ ಸ್ಥಾನ ಸಂಜನಾ ಹಾಗೂ ಸುಜಿತ್ ಪಾಲಾಯಿತು. ಇವರಿಗೆ ಕವಿತಾ ಅವರು ನೇವಿಗೇಟರ್ ಆಗಿ ಕಾರ್ಯನಿ ರ್ವಹಿಸಿದರು. ಮೂರನೇ ಸ್ಥಾನ ರಾಮ್ ಹಾಗೂ ಗೌತಮ್ ಅವರಿಗೆ ಒಲಿಯಿತು. ಇವರಿಗೆ ಚಂದ್ರೇಶ್ ಅವರು ನೇವಿ ಗೇಟರ್ ಆಗಿದ್ದರು. ಇವರು ಕ್ರಮವಾಗಿ<br /> ₹ 20, ₹ 10 ಸಾವಿರ ಬಹುಮಾನ ಲಭಿಸಿತು.<br /> <br /> ‘ನಾನು ಶಿಕ್ಷಕಿಯಾಗಿ ಕಾರ್ಯನಿರ್ವ ಹಿಸುತ್ತಿದ್ದೇನೆ. ಈ ರ್್ಯಾಲಿ ನನಗೆ ಹೊಸ ಅನುಭವ ನೀಡಿತು. ದಿನನಿತ್ಯದ ಜಂಜಾ ಟದಿಂದ ಹೊರಬಂದು ಖುಷಿಪಟ್ಟೆ. ನಾನಿದ್ದ ಕಾರಿನ ಚಾಲಕರಿಗೆ ಸರಿಯಾದ ಮಾರ್ಗದರ್ಶನ ನೀಡಿದೆ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಕವಿತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.<br /> <br /> ರ್್ಯಾಲಿಯ ಆರಂಭ ತಡವಾಯಿತು. ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಕಾಲೇಜು ಮೈದಾನದಲ್ಲಿ ಶುರುವಾದ ರ್್ಯಾಲಿಗೆ ನಟಿ ಹರಿಪ್ರಿಯಾ ಚಾಲನೆ ನೀಡಿದರು. ಕಾರ್ಯಕ್ರಮದ ಸಂಚಾಲಕ ರಾದ ಪವನ್ ರಂಗಾ, ಕಿರಣ್ ರಂಗಾ, ಲೋಹಿತ್ ಅರಸು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>