<p><strong>ಭದ್ರಾವತಿ</strong>: ಇಲ್ಲಿನ ಎಂಪಿಎಂ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಐಎಎಸ್ ಅಧಿಕಾರಿ ನೇಮಿಸುವಂತೆ ಒತ್ತಾಯದ ಕೂಗು ಅಂತೂ, ಇಂತೂ ಈಗ ವೇಗ ಪಡೆದಿದೆ.<br /> <br /> ಒಂದೂವರೆ ವರ್ಷದಿಂದ ಈ ಸ್ಥಾನದ ಭಾರವನ್ನು ಹೊತ್ತು ಕೆಲಸ ಮಾಡುತ್ತಿರುವರು ಐಪಿಎಸ್ ಅಧಿಕಾರಿ ಕೆ.ಪಿ.ಗರ್ಗ್. ಈಗ ಈ ಜಾಗಕ್ಕೆ ಐಎಎಸ್ ಅಧಿಕಾರಿ ನೇಮಕ ಮಾಡುವ ಒತ್ತಡ ಹೇರಲಾಗುತ್ತಿದೆ.<br /> <br /> ಹಲವು ದಶಕದ ಇತಿಹಾಸ ಹೊಂದಿರುವ ಕಾರ್ಖಾನೆಯಲ್ಲಿ 2004ಕ್ಕೂ ಹಿಂದೆ ಕಾರ್ಖಾನೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನವನ್ನು ಐಎಎಸ್ ಅಧಿಕಾರಿ ಹೊತ್ತು ಕಾರ್ಯಭಾರ ನಡೆಸಿದ್ದರು.<br /> <br /> ಆದರೆ, 2004ರಲ್ಲಿ ಸರ್ಕಾರದ ಒತ್ತಾಯದ ಮೇರೆಗೆ ಕಾರ್ಖಾನೆ ಆಡಳಿತಕ್ಕೆ ತಿದ್ದುಪಡಿ ತಂದ ಆಡಳಿತ ಮಂಡಳಿ ನಿರ್ದೇಶಕರು, ಸರ್ಕಾರದಿಂದ ನೇಮಕರಾದ ಅಧ್ಯಕ್ಷರ ಜತೆಗೆ ವ್ಯವಸ್ಥಾಪಕ ನಿರ್ದೇಶಕರು ಕೆಲಸ ಮಾಡುವ ವಿನೂತನ ಕಾರ್ಯ ಆರಂಭಿಸಿತು.<br /> <br /> ಇದರಿಂದಾಗಿ ಒಂದು ಹುದ್ದೆಯಿದ್ದ ಕಾರ್ಖಾನೆಯಲ್ಲಿ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಎಂಬ ಎರಡು ಹುದ್ದೆಗಳ ಸೃಷ್ಟಿ ಆರಂಭವಾಯಿತು. ಈ ಹೊಸ ಬದಲಾವಣೆಯಿಂದ ಮೊದಲ ಬಾರಿಗೆ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಂದ ನೇಮಿತವಾದ ಅಧ್ಯಕ್ಷರು ಎನ್.ಎ.ಹ್ಯಾರಿಸ್.<br /> <br /> ಆಗ ಕಾರ್ಖಾನೆಗೆ ಒಂದಿಷ್ಟು ಹೊಸ ಹುರುಪು ತುಂಬುವ ಕೆಲಸ ಮಾಡಿದ್ದ ಐಎಎಸ್ ಅಧಿಕಾರಿ ಸಿಎಂಡಿ ಕುಟಿನ್ಹೊ ಅಧ್ಯಕ್ಷ ನೇಮಕ ತಿದ್ದುಪಡಿ ಯನ್ನು ಪರೋಕ್ಷವಾಗಿ ವಿರೋಧಿಸಿ, ಸರ್ಕಾರದ ಮತ್ತು ಕೆಲವು ರಾಜಕೀಯ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು.<br /> <br /> <strong>ಕುಟಿನ್ಹೊ ವರ್ಗಾವಣೆ</strong>: ಸರ್ಕಾರದಿಂದ ಅಧ್ಯಕ್ಷರ ನೇಮಕವಾದ ಕೆಲವೇ ದಿನದಲ್ಲಿ ಮುಂಬಡ್ತಿ ನೆಪದಲ್ಲಿ ಕುಟಿನ್ಹೊ ಬೇರೆಡೆ ವರ್ಗಾವಣೆಯಾದರು. ಅದೇ ಸಮಯಕ್ಕೆ ಧರ್ಮಸಿಂಗ್ ಸರ್ಕಾರ ಕೊನೆಗೊಂಡ ನಂತರ ಹೊಸ ಅಧ್ಯಕ್ಷರ ನೇಮಕ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಡೆಯಿತು.<br /> <br /> ಹ್ಯಾರಿಸ್ ನಂತರ ನೇಮಕಗೊಂಡ ಸುರೇಶ್ಗೌಡ ಸಮ್ಮಿಶ್ರ ಸರ್ಕಾರದ ಅವಧಿ ಪೂರ್ಣ ಅಧ್ಯಕ್ಷರಾಗಿ ಕೆಲಸ ಮಾಡಿದರು. ಈ ಅವಧಿ ನಡುವೆ ಇಬ್ಬರು ಐಎಎಸ್ ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು.<br /> <br /> 2008ರಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಆರಗಜ್ಞಾನೇಂದ್ರ ಅವರನ್ನು ಕಾರ್ಖಾನೆ ಅಧ್ಯಕ್ಷರಾಗಿ ನೇಮಕ ಮಾಡಿತು. ಸರ್ಕಾರದ ಅವಧಿಯಲ್ಲಿ ಮೂವರು ವ್ಯವಸ್ಥಾಪಕ ನಿರ್ದೇಶಕರು ಬದಲಾದರು. ಅವರಲ್ಲಿ ಅಂತಿಮವಾಗಿ ನೇಮಕಗೊಂಡವರು ಐಪಿಎಸ್ ಅಧಿಕಾರಿ ಕೆ.ಪಿ.ಗರ್ಗ್.<br /> <br /> ಈ ಅವಧಿಯ್ಲ್ಲಲಿ ಐಎಎಸ್ ಅಧಿಕಾರಿ ಸುಧೀರ್ಕುಮಾರ್ ಅವರನ್ನು ಹೊರತುಪಡಿಸಿ ಮತ್ಯಾವುದೇ ಅಧಿಕಾರಿ ಬಹಳ ದಿನಗಳ ಕಾಲ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಲಿಲ್ಲ. ಆ ಸಂದರ್ಭದಲ್ಲಿ ನಡೆದ ಕಾರ್ಮಿಕರ ಹೋರಾಟ, ಅಧಿಕಾರಿಗಳ ಜತೆ ನಡೆದ ಕೆಲವು ಸಂಘರ್ಷ ಕಾರಣವೋ ಏನೋ ಸರ್ಕಾರ ಐಪಿಎಸ್ ಅಧಿಕಾರಿಯನ್ನು ನೇಮಿಸಿತು.<br /> <br /> ಅಧಿಕಾರಿಗಳ ಹಿಂದೇಟು: 2004ರ ನಂತರ ಬದಲಾದ ಸನ್ನಿವೇಶದಲ್ಲಿ ಸರ್ಕಾರ ನೇಮಕ ಅಧ್ಯಕ್ಷ ಸ್ಥಾನದ ಪ್ರಭಾವ ಕಾರಣವೋ ಏನೋ ಅಧಿಕಾರಿಗಳು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಲು ಹಿಂಜರಿಯುತ್ತಾರೆ ಎಂಬ ಮಾತು ಕಾರ್ಮಿಕ ವಲಯದಲ್ಲಿದೆ.<br /> <br /> ಅಷ್ಟೇ ಅಲ್ಲದೆ ಹಲವು ಪ್ರಮುಖ ಹುದ್ದೆಗಳು ಖಾಲಿ ಇದ್ದರೂ ಅಲ್ಲಿಗೆ ಬರಲು ಹಿರಿಯ ಅಧಿಕಾರಿಗಳು ಹಿಂದೇಟು ಹಾಕುವ ಸ್ಥಿತಿ ಇದೆ. ಈ ಬೇಡಿಕೆ ಜತೆಗೆ ಹಲವು ಆಶೋತ್ತರಗಳ ಮನವಿ ಹೊತ್ತ ಶಾಸಕ ಎಂ.ಜೆ.ಅಪ್ಪಾಜಿ ನೇತೃತ್ವದ ಕಾರ್ಮಿಕ ಮುಖಂಡರ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದಾರೆ. ಇದರಿಂದಾಗಿ ಈ ತಿಂಗಳ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಸಭೆ ನಡೆಸುವ ಭರವಸೆ ನಿಯೋಗಕ್ಕೆ ಸಿಕ್ಕಿದೆ.<br /> <br /> ಒಟ್ಟಿನಲ್ಲಿ ಹಲವು ಏಳುಬೀಳಿನ ನಡುವೆ ಸದಾ ಸುದ್ದಿಯಲ್ಲಿರುವ ಜಿಲ್ಲೆಯ ಏಕೈಕ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆ ಐಎಎಸ್ ಅಧಿಕಾರಿ ನೇಮಕದೊಂದಿಗೆ ತನ್ನ ಅಭಿವೃದ್ಧಿಯ ಕನಸನ್ನು, ನನಸು ಮಾಡಿಕೊಳ್ಳಲಿ ಎಂಬುದು ಇಲ್ಲಿನ ನಾಗರಿಕರ ಒತ್ತಾಸೆಯಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ</strong>: ಇಲ್ಲಿನ ಎಂಪಿಎಂ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಐಎಎಸ್ ಅಧಿಕಾರಿ ನೇಮಿಸುವಂತೆ ಒತ್ತಾಯದ ಕೂಗು ಅಂತೂ, ಇಂತೂ ಈಗ ವೇಗ ಪಡೆದಿದೆ.<br /> <br /> ಒಂದೂವರೆ ವರ್ಷದಿಂದ ಈ ಸ್ಥಾನದ ಭಾರವನ್ನು ಹೊತ್ತು ಕೆಲಸ ಮಾಡುತ್ತಿರುವರು ಐಪಿಎಸ್ ಅಧಿಕಾರಿ ಕೆ.ಪಿ.ಗರ್ಗ್. ಈಗ ಈ ಜಾಗಕ್ಕೆ ಐಎಎಸ್ ಅಧಿಕಾರಿ ನೇಮಕ ಮಾಡುವ ಒತ್ತಡ ಹೇರಲಾಗುತ್ತಿದೆ.<br /> <br /> ಹಲವು ದಶಕದ ಇತಿಹಾಸ ಹೊಂದಿರುವ ಕಾರ್ಖಾನೆಯಲ್ಲಿ 2004ಕ್ಕೂ ಹಿಂದೆ ಕಾರ್ಖಾನೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನವನ್ನು ಐಎಎಸ್ ಅಧಿಕಾರಿ ಹೊತ್ತು ಕಾರ್ಯಭಾರ ನಡೆಸಿದ್ದರು.<br /> <br /> ಆದರೆ, 2004ರಲ್ಲಿ ಸರ್ಕಾರದ ಒತ್ತಾಯದ ಮೇರೆಗೆ ಕಾರ್ಖಾನೆ ಆಡಳಿತಕ್ಕೆ ತಿದ್ದುಪಡಿ ತಂದ ಆಡಳಿತ ಮಂಡಳಿ ನಿರ್ದೇಶಕರು, ಸರ್ಕಾರದಿಂದ ನೇಮಕರಾದ ಅಧ್ಯಕ್ಷರ ಜತೆಗೆ ವ್ಯವಸ್ಥಾಪಕ ನಿರ್ದೇಶಕರು ಕೆಲಸ ಮಾಡುವ ವಿನೂತನ ಕಾರ್ಯ ಆರಂಭಿಸಿತು.<br /> <br /> ಇದರಿಂದಾಗಿ ಒಂದು ಹುದ್ದೆಯಿದ್ದ ಕಾರ್ಖಾನೆಯಲ್ಲಿ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಎಂಬ ಎರಡು ಹುದ್ದೆಗಳ ಸೃಷ್ಟಿ ಆರಂಭವಾಯಿತು. ಈ ಹೊಸ ಬದಲಾವಣೆಯಿಂದ ಮೊದಲ ಬಾರಿಗೆ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಂದ ನೇಮಿತವಾದ ಅಧ್ಯಕ್ಷರು ಎನ್.ಎ.ಹ್ಯಾರಿಸ್.<br /> <br /> ಆಗ ಕಾರ್ಖಾನೆಗೆ ಒಂದಿಷ್ಟು ಹೊಸ ಹುರುಪು ತುಂಬುವ ಕೆಲಸ ಮಾಡಿದ್ದ ಐಎಎಸ್ ಅಧಿಕಾರಿ ಸಿಎಂಡಿ ಕುಟಿನ್ಹೊ ಅಧ್ಯಕ್ಷ ನೇಮಕ ತಿದ್ದುಪಡಿ ಯನ್ನು ಪರೋಕ್ಷವಾಗಿ ವಿರೋಧಿಸಿ, ಸರ್ಕಾರದ ಮತ್ತು ಕೆಲವು ರಾಜಕೀಯ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು.<br /> <br /> <strong>ಕುಟಿನ್ಹೊ ವರ್ಗಾವಣೆ</strong>: ಸರ್ಕಾರದಿಂದ ಅಧ್ಯಕ್ಷರ ನೇಮಕವಾದ ಕೆಲವೇ ದಿನದಲ್ಲಿ ಮುಂಬಡ್ತಿ ನೆಪದಲ್ಲಿ ಕುಟಿನ್ಹೊ ಬೇರೆಡೆ ವರ್ಗಾವಣೆಯಾದರು. ಅದೇ ಸಮಯಕ್ಕೆ ಧರ್ಮಸಿಂಗ್ ಸರ್ಕಾರ ಕೊನೆಗೊಂಡ ನಂತರ ಹೊಸ ಅಧ್ಯಕ್ಷರ ನೇಮಕ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಡೆಯಿತು.<br /> <br /> ಹ್ಯಾರಿಸ್ ನಂತರ ನೇಮಕಗೊಂಡ ಸುರೇಶ್ಗೌಡ ಸಮ್ಮಿಶ್ರ ಸರ್ಕಾರದ ಅವಧಿ ಪೂರ್ಣ ಅಧ್ಯಕ್ಷರಾಗಿ ಕೆಲಸ ಮಾಡಿದರು. ಈ ಅವಧಿ ನಡುವೆ ಇಬ್ಬರು ಐಎಎಸ್ ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು.<br /> <br /> 2008ರಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಆರಗಜ್ಞಾನೇಂದ್ರ ಅವರನ್ನು ಕಾರ್ಖಾನೆ ಅಧ್ಯಕ್ಷರಾಗಿ ನೇಮಕ ಮಾಡಿತು. ಸರ್ಕಾರದ ಅವಧಿಯಲ್ಲಿ ಮೂವರು ವ್ಯವಸ್ಥಾಪಕ ನಿರ್ದೇಶಕರು ಬದಲಾದರು. ಅವರಲ್ಲಿ ಅಂತಿಮವಾಗಿ ನೇಮಕಗೊಂಡವರು ಐಪಿಎಸ್ ಅಧಿಕಾರಿ ಕೆ.ಪಿ.ಗರ್ಗ್.<br /> <br /> ಈ ಅವಧಿಯ್ಲ್ಲಲಿ ಐಎಎಸ್ ಅಧಿಕಾರಿ ಸುಧೀರ್ಕುಮಾರ್ ಅವರನ್ನು ಹೊರತುಪಡಿಸಿ ಮತ್ಯಾವುದೇ ಅಧಿಕಾರಿ ಬಹಳ ದಿನಗಳ ಕಾಲ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಲಿಲ್ಲ. ಆ ಸಂದರ್ಭದಲ್ಲಿ ನಡೆದ ಕಾರ್ಮಿಕರ ಹೋರಾಟ, ಅಧಿಕಾರಿಗಳ ಜತೆ ನಡೆದ ಕೆಲವು ಸಂಘರ್ಷ ಕಾರಣವೋ ಏನೋ ಸರ್ಕಾರ ಐಪಿಎಸ್ ಅಧಿಕಾರಿಯನ್ನು ನೇಮಿಸಿತು.<br /> <br /> ಅಧಿಕಾರಿಗಳ ಹಿಂದೇಟು: 2004ರ ನಂತರ ಬದಲಾದ ಸನ್ನಿವೇಶದಲ್ಲಿ ಸರ್ಕಾರ ನೇಮಕ ಅಧ್ಯಕ್ಷ ಸ್ಥಾನದ ಪ್ರಭಾವ ಕಾರಣವೋ ಏನೋ ಅಧಿಕಾರಿಗಳು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಲು ಹಿಂಜರಿಯುತ್ತಾರೆ ಎಂಬ ಮಾತು ಕಾರ್ಮಿಕ ವಲಯದಲ್ಲಿದೆ.<br /> <br /> ಅಷ್ಟೇ ಅಲ್ಲದೆ ಹಲವು ಪ್ರಮುಖ ಹುದ್ದೆಗಳು ಖಾಲಿ ಇದ್ದರೂ ಅಲ್ಲಿಗೆ ಬರಲು ಹಿರಿಯ ಅಧಿಕಾರಿಗಳು ಹಿಂದೇಟು ಹಾಕುವ ಸ್ಥಿತಿ ಇದೆ. ಈ ಬೇಡಿಕೆ ಜತೆಗೆ ಹಲವು ಆಶೋತ್ತರಗಳ ಮನವಿ ಹೊತ್ತ ಶಾಸಕ ಎಂ.ಜೆ.ಅಪ್ಪಾಜಿ ನೇತೃತ್ವದ ಕಾರ್ಮಿಕ ಮುಖಂಡರ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದಾರೆ. ಇದರಿಂದಾಗಿ ಈ ತಿಂಗಳ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಸಭೆ ನಡೆಸುವ ಭರವಸೆ ನಿಯೋಗಕ್ಕೆ ಸಿಕ್ಕಿದೆ.<br /> <br /> ಒಟ್ಟಿನಲ್ಲಿ ಹಲವು ಏಳುಬೀಳಿನ ನಡುವೆ ಸದಾ ಸುದ್ದಿಯಲ್ಲಿರುವ ಜಿಲ್ಲೆಯ ಏಕೈಕ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆ ಐಎಎಸ್ ಅಧಿಕಾರಿ ನೇಮಕದೊಂದಿಗೆ ತನ್ನ ಅಭಿವೃದ್ಧಿಯ ಕನಸನ್ನು, ನನಸು ಮಾಡಿಕೊಳ್ಳಲಿ ಎಂಬುದು ಇಲ್ಲಿನ ನಾಗರಿಕರ ಒತ್ತಾಸೆಯಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>