<p>ಇವತ್ತು ಏನಾದರಾಗ್ಲಿ, ಡಿಸಿಎಂ ಡಿಕೆಶಿ ಸಾಹೇಬ್ರ ಮೌನ ಭಂಗ ಮಾಡ್ಲೇಬೇಕು ಎಂದು ಪಣ ತೊಟ್ಟು ಕ್ಯಾಮೆರಾ, ಮೈಕು ಹಿಡ್ಕಂಡು ವಿಧಾನಸೌಧಕ್ಕೆ ಹೋದ ಟಿ.ವಿ. ಪತ್ರಕರ್ತ ತೆಪರೇಸಿ. ಡಿಕೆಶಿ ಸಾಹೇಬ್ರು ಬಂಡೆಯಂತೆ ಕೂತಿದ್ದರು.</p>.<p>‘ಸರ್, ನವೆಂಬರ್ ಕ್ರಾಂತಿ ಗ್ಯಾರಂಟಿನಾ?’ ತೆಪರೇಸಿ ಕಡ್ಡಿ ಕೆರೆಯೋಕೆ ಮೆಲ್ಲಗೆ ಕಡ್ಡಿಪೆಟಿಗಿ ಹೊರ ತೆಗೆದ.</p>.<p>ಬಂಡೆ ಸಾಹೇಬ್ರು ತುಟಿ ಮೇಲೆ ಬೆರಳಿಟ್ಟು ಸುಮ್ಮನೆ ನಕ್ಕರು.</p>.<p>‘ಮಾತಾಡಲ್ವ? ಮೌನ ವ್ರತಾನ? ಅಥ್ವ ಮೌನ ಯುದ್ಧಾನ?’ ಎಂದ ತೆಪರೇಸಿ.</p>.<p>ಬಂಡೆ ಸಾಹೇಬ್ರು ಎರಡೂ ಕೈ ಎತ್ತಿ ಮುಗಿದರು.</p>.<p>‘ಅಂದ್ರೆ? ದೊಡ್ಡ ನಮಸ್ಕಾರ, ಏನಾದ್ರು ತಿಳ್ಕಾ ಅಂತಾನ? ಈಗ ಮತ್ತೆ ದಲಿತ ಸಿ.ಎಂ. ಡಿಮ್ಯಾಂಡ್ ಶುರುವಾಗಿದೆ?’</p>.<p>ಬಂಡೆ ಸಾಹೇಬ್ರು ಬಲಗೈ ಬೆರಳು ಮೇಲಕ್ಕೆತ್ತಿ ತೋರಿಸಿದರು.</p>.<p>‘ಅಂದ್ರೆ ಹೈಕಮಾಂಡ್ಗೆ ಬಿಟ್ಟದ್ದು ಅಂತಾನ? ಸಿದ್ರಾಮಣ್ಣ ಸಾಹೇಬ್ರ ಕಡೆ ಬಾಳ ಜನ ಬ್ಯಾಟಿಂಗ್ ಮಾಡ್ತಿದಾರೆ?’</p>.<p>ಬಂಡೆ ಆಕಾಶ ನೋಡಿದರು. ತೆಪರೇಸಿಗೆ ಅಲ್ಲೇನೂ ಕಾಣಿಸಲಿಲ್ಲ. ‘ಓ.. ದೇವರಿದಾನೆ ಅಂತಾನ? ಅದಿರ್ಲಿ ಈಗ ಎಲ್ಲ ಕಡೆ ಔತಣಕೂಟ ಜಾಸ್ತಿಯಾಗಿದಾವೆ?’</p>.<p>ಆಗಲೂ ಬಂಡೆ ಸಾಹೇಬ್ರು ಏನನ್ನೂ ಮಾತಾಡದೆ ತಮ್ಮ ಮುಂದಿದ್ದ ಕಪ್ ಎತ್ತಿ ನೀರು ಕುಡಿದರು.</p>.<p>‘ಓ.. ಅವರು ಊಟ ಮಾಡ್ಲಿ, ನಾನು ನೀರು ಕುಡಿಸ್ತೀನಿ ಅಂತ ಅರ್ಥನಾ?’</p>.<p>ಬಂಡೆ ಸಾಹೇಬ್ರು ಹಣೆ ಮುಟ್ಟಿಕೊಂಡರು.</p>.<p>‘ಗೊತ್ತಾತು, ಹಣೆಬರಹದಲ್ಲಿ ಇದ್ರೆ ಸಿ.ಎಂ. ಆಗ್ತೀನಿ ಅಂತ. ಹಣೆಬರಹದಲ್ಲಿ ಇಲ್ಲದೇ ಇದ್ರೆ?’</p>.<p>ಬಂಡೆ ಸಾಹೇಬ್ರ ಮುಖ ಕೆಂಪಾಯಿತು. ಸಿಟ್ಟಿನಿಂದ ಬಾಗಿಲ ಕಡೆಗೆ ಕೈ ತೋರಿಸಿದರು.</p>.<p>‘ಓ... ಬಾಗಿಲು ಒದ್ದು ಸಿ.ಎಂ. ಸ್ಥಾನ ಕಿತ್ಕೋತೀನಿ ಅಂದ್ರಾ?’</p>.<p>‘ಇಲ್ಲ, ಬಾಗಿಲು ಆ ಕಡೆ ಇದೆ, ಎದ್ದು ನಡಿಯಪ್ಪ ಸಾಕು ಅಂದೆ...’ ಬಾಯಿ ಬಿಟ್ಟರು ಬಂಡೆ!</p>.<p>ಕೊನೆಗೂ ಡಿಕೆಶಿ ಮೌನ ಭಂಗ ಮಾಡಿದ ಖುಷಿಯಲ್ಲಿ ಪಿಟಿಕ್ಕನ್ನದೆ ಎದ್ದು ಬಂದ ತೆಪರೇಸಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇವತ್ತು ಏನಾದರಾಗ್ಲಿ, ಡಿಸಿಎಂ ಡಿಕೆಶಿ ಸಾಹೇಬ್ರ ಮೌನ ಭಂಗ ಮಾಡ್ಲೇಬೇಕು ಎಂದು ಪಣ ತೊಟ್ಟು ಕ್ಯಾಮೆರಾ, ಮೈಕು ಹಿಡ್ಕಂಡು ವಿಧಾನಸೌಧಕ್ಕೆ ಹೋದ ಟಿ.ವಿ. ಪತ್ರಕರ್ತ ತೆಪರೇಸಿ. ಡಿಕೆಶಿ ಸಾಹೇಬ್ರು ಬಂಡೆಯಂತೆ ಕೂತಿದ್ದರು.</p>.<p>‘ಸರ್, ನವೆಂಬರ್ ಕ್ರಾಂತಿ ಗ್ಯಾರಂಟಿನಾ?’ ತೆಪರೇಸಿ ಕಡ್ಡಿ ಕೆರೆಯೋಕೆ ಮೆಲ್ಲಗೆ ಕಡ್ಡಿಪೆಟಿಗಿ ಹೊರ ತೆಗೆದ.</p>.<p>ಬಂಡೆ ಸಾಹೇಬ್ರು ತುಟಿ ಮೇಲೆ ಬೆರಳಿಟ್ಟು ಸುಮ್ಮನೆ ನಕ್ಕರು.</p>.<p>‘ಮಾತಾಡಲ್ವ? ಮೌನ ವ್ರತಾನ? ಅಥ್ವ ಮೌನ ಯುದ್ಧಾನ?’ ಎಂದ ತೆಪರೇಸಿ.</p>.<p>ಬಂಡೆ ಸಾಹೇಬ್ರು ಎರಡೂ ಕೈ ಎತ್ತಿ ಮುಗಿದರು.</p>.<p>‘ಅಂದ್ರೆ? ದೊಡ್ಡ ನಮಸ್ಕಾರ, ಏನಾದ್ರು ತಿಳ್ಕಾ ಅಂತಾನ? ಈಗ ಮತ್ತೆ ದಲಿತ ಸಿ.ಎಂ. ಡಿಮ್ಯಾಂಡ್ ಶುರುವಾಗಿದೆ?’</p>.<p>ಬಂಡೆ ಸಾಹೇಬ್ರು ಬಲಗೈ ಬೆರಳು ಮೇಲಕ್ಕೆತ್ತಿ ತೋರಿಸಿದರು.</p>.<p>‘ಅಂದ್ರೆ ಹೈಕಮಾಂಡ್ಗೆ ಬಿಟ್ಟದ್ದು ಅಂತಾನ? ಸಿದ್ರಾಮಣ್ಣ ಸಾಹೇಬ್ರ ಕಡೆ ಬಾಳ ಜನ ಬ್ಯಾಟಿಂಗ್ ಮಾಡ್ತಿದಾರೆ?’</p>.<p>ಬಂಡೆ ಆಕಾಶ ನೋಡಿದರು. ತೆಪರೇಸಿಗೆ ಅಲ್ಲೇನೂ ಕಾಣಿಸಲಿಲ್ಲ. ‘ಓ.. ದೇವರಿದಾನೆ ಅಂತಾನ? ಅದಿರ್ಲಿ ಈಗ ಎಲ್ಲ ಕಡೆ ಔತಣಕೂಟ ಜಾಸ್ತಿಯಾಗಿದಾವೆ?’</p>.<p>ಆಗಲೂ ಬಂಡೆ ಸಾಹೇಬ್ರು ಏನನ್ನೂ ಮಾತಾಡದೆ ತಮ್ಮ ಮುಂದಿದ್ದ ಕಪ್ ಎತ್ತಿ ನೀರು ಕುಡಿದರು.</p>.<p>‘ಓ.. ಅವರು ಊಟ ಮಾಡ್ಲಿ, ನಾನು ನೀರು ಕುಡಿಸ್ತೀನಿ ಅಂತ ಅರ್ಥನಾ?’</p>.<p>ಬಂಡೆ ಸಾಹೇಬ್ರು ಹಣೆ ಮುಟ್ಟಿಕೊಂಡರು.</p>.<p>‘ಗೊತ್ತಾತು, ಹಣೆಬರಹದಲ್ಲಿ ಇದ್ರೆ ಸಿ.ಎಂ. ಆಗ್ತೀನಿ ಅಂತ. ಹಣೆಬರಹದಲ್ಲಿ ಇಲ್ಲದೇ ಇದ್ರೆ?’</p>.<p>ಬಂಡೆ ಸಾಹೇಬ್ರ ಮುಖ ಕೆಂಪಾಯಿತು. ಸಿಟ್ಟಿನಿಂದ ಬಾಗಿಲ ಕಡೆಗೆ ಕೈ ತೋರಿಸಿದರು.</p>.<p>‘ಓ... ಬಾಗಿಲು ಒದ್ದು ಸಿ.ಎಂ. ಸ್ಥಾನ ಕಿತ್ಕೋತೀನಿ ಅಂದ್ರಾ?’</p>.<p>‘ಇಲ್ಲ, ಬಾಗಿಲು ಆ ಕಡೆ ಇದೆ, ಎದ್ದು ನಡಿಯಪ್ಪ ಸಾಕು ಅಂದೆ...’ ಬಾಯಿ ಬಿಟ್ಟರು ಬಂಡೆ!</p>.<p>ಕೊನೆಗೂ ಡಿಕೆಶಿ ಮೌನ ಭಂಗ ಮಾಡಿದ ಖುಷಿಯಲ್ಲಿ ಪಿಟಿಕ್ಕನ್ನದೆ ಎದ್ದು ಬಂದ ತೆಪರೇಸಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>