ದಿನ ಭವಿಷ್ಯ: ಈ ರಾಶಿಯವರಿಗೆ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸಗಳು ದೊರೆಯಲಿವೆ
Published 30 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇನ್ನೊಬ್ಬರಿಗೆ ಮೋಸ ಮಾಡುವ ಮನಸ್ಥಿತಿ ದೂರಮಾಡಿಕೊಂಡು ಜೀವನ ನಡೆಸಿ, ಅದರಿಂದಾಗಿ ನಿಮಗೆ ಶ್ರೇಯಸ್ಸು ಪ್ರಾಪ್ತಿಯಾಗುವುದು. ಸಜ್ಜನರ ಭೇಟಿಯಾಗಲಿದೆ. ಗೃಹ ನಿರ್ಮಾಣದ ಆರಂಭಕ್ಕೆ ದಿನ ನಿಶ್ಚಯ.
30 ಅಕ್ಟೋಬರ್ 2025, 23:30 IST
ವೃಷಭ
ಸವಿತೃ ಸೂರ್ಯ ನಾರಾಯಣನಿಗೆ ನಮಸ್ಕರಿಸುವುದರಿಂದ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದಗಳಿರುವುದಿಲ್ಲ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸಗಳು ದೊರೆಯಲಿವೆ.
30 ಅಕ್ಟೋಬರ್ 2025, 23:30 IST
ಮಿಥುನ
ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಮುಂದಾಳತ್ವವಿರುವ ಸಾಮಾಜಿಕ ಚಟುವಟಿಕೆಯಲ್ಲಿ ಅಡ್ಡಿ-ಆತಂಕಗಳು ಎದುರಾಗಲಿವೆ. ಗೆಳೆಯರ ಒತ್ತಾಯದಿಂದ ಸಂಘ-ಸಂಸ್ಥೆ ಅಥವಾ ರಾಜಕೀಯಕ್ಕೆ ಸೇರುವಿರಿ.
30 ಅಕ್ಟೋಬರ್ 2025, 23:30 IST
ಕರ್ಕಾಟಕ
ವಾಹನ ರಿಪೇರಿಯಂಥ ವಿಚಾರದಲ್ಲಿ ಅಧಿಕ ಖರ್ಚು ಸಂಭವಿಸಲಿದೆ. ವಿದ್ಯಾರ್ಥಿಗಳು ಉದಾಸೀನ ಮಾಡದೆ ಶಾಲಾ ತರಗತಿಯಲ್ಲಿ ಭಾಗವಹಿಸಿ. ಗುರುಗಳ ಮಾತನ್ನು ಮೀರುವುದರಲ್ಲಿ ಶ್ರೇಯಸ್ಸು ಇರುವುದಿಲ್ಲ.
30 ಅಕ್ಟೋಬರ್ 2025, 23:30 IST
ಸಿಂಹ
ಮಾತನ್ನು ತಿರಸ್ಕರಿಸಿ ಬೇರೆಯ ಮಾರ್ಗವನ್ನು ಹಿಡಿದಂಥ ಮಕ್ಕಳು ಪಶ್ಚ್ತಾತಾಪ ಪಡುವರು. ಮಕ್ಕಳ ಓದಿಗೆ ಅಡ್ಡಿಯಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ ನೆಮ್ಮದಿ ಮೂಡುತ್ತದೆ. ನೂತನ ವಸ್ತ್ರ ಖರೀದಿಯ ಯೋಗವಿದೆ.
30 ಅಕ್ಟೋಬರ್ 2025, 23:30 IST
ಕನ್ಯಾ
ವೃತ್ತಿಯಲ್ಲಿ ಬದಲಾವಣೆ ಮಾಡುವವರು ಲಕ್ಷ್ಮಿ ಸಮೇತನಾದ ಶ್ರೀನಿವಾಸ ದೇವರ ಸೇವೆಯನ್ನು ಮಾಡುವುದರಿಂದ ಅಭಿವೃದ್ಧಿಯನ್ನು ಕಾಣಬಹುದು. ಮನೆಯಲ್ಲಿ ದೇವತಾಕಾರ್ಯ ಮಾಡುವ ತೀರ್ಮಾನ ಮಾಡಿರಿ.
30 ಅಕ್ಟೋಬರ್ 2025, 23:30 IST
ತುಲಾ
ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ ವೃತ್ತಿಯಲ್ಲಿ ಮುಂಬಡ್ತಿ ಅಥವಾ ಸನ್ಮಾನಗಳು ದೊರಕಲಿವೆ. ನಿಮ್ಮ ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ವ್ಯಾಪಾರದಲ್ಲಿ ಮಿಶ್ರಫಲವಿರುವುದು.
30 ಅಕ್ಟೋಬರ್ 2025, 23:30 IST
ವೃಶ್ಚಿಕ
ಆನುವಂಶಿಕ ಬಹುಕಾಲದ ಬೇಡಿಕೆಯೊಂದು ಈಡೇರುವುದರಿಂದ ನೆಮ್ಮದಿ ಸಿಗಲಿದೆ. ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯವೆನಿಸಲಿದೆ. ನಂಬಿಕೆ ಪ್ರತಿಪಾದಿಸಲು ಅಂಜಿಕೆ ಬೇಡ.
30 ಅಕ್ಟೋಬರ್ 2025, 23:30 IST
ಧನು
ಸಂಪೂರ್ಣ ಜ್ಞಾನವನ್ನು ಹೊಂದದೆ ವಾದಿಸಿದ ವಿಷಯದಲ್ಲಿ ಹಾಸ್ಯಾಸ್ಪ ದರಾಗಬಹುದು. ವಸ್ತ್ರ ವಿನ್ಯಾಸ, ಚಿತ್ರಕಲೆ, ಕಥೆ-ಕವನಗಳ ಬರವಣಿಗೆಯಲ್ಲಿ ಆಸಕ್ತಿ ಮೂಡಲಿದೆ.
30 ಅಕ್ಟೋಬರ್ 2025, 23:30 IST
ಮಕರ
ಪ್ರಮುಖ ಗುರಿ ಸಾಧನೆಗಳಿಗೆ ಕುಟುಂಬ ವರ್ಗದವರಿಂದ ಒಳ್ಳೆಯ ಬೆಂಬಲ ಸಿಗುವುದು. ಮಲ್ಲಿಕಾರ್ಜುನನ ಅನುಗ್ರಹ ಸಂಪಾದಿಸಿದಲ್ಲಿ ಮತ್ತಷ್ಟು ಉತ್ತಮ ಫಲಗಳನ್ನು ಅನುಭವಿಸುವ ಯೋಗವಿದೆ.
30 ಅಕ್ಟೋಬರ್ 2025, 23:30 IST
ಕುಂಭ
ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡ ದೊಡ್ಡ ಸಮಸ್ಯೆ ಮಾಡುವ ಮನಸ್ಥಿತಿಯನ್ನು ತಕ್ಷಣದಲ್ಲಿಯೇ ಬದಲಾಯಿಸಿಕೊಳ್ಳುವುದು ಉತ್ತಮ. ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ.
30 ಅಕ್ಟೋಬರ್ 2025, 23:30 IST
ಮೀನ
ಕೃಷಿಕರು ಕೈ ಬಿಟ್ಟಿರುವ ಯೋಜನೆಗಳನ್ನು ಮತ್ತೆ ಮುಂದುವರಿಸುವ ಅವಕಾಶ ಬರಲಿದೆ. ಪೂರಕವಾದ ವಾತಾವರಣ ನಿರ್ಮಾಣವಾಗುವುದು. ಶ್ರಮಕ್ಕೆ ಹೋಲಿಸಿದರೆ ದುಪ್ಪಟ್ಟು ಸಂಪಾದನೆಯಾಗುವ ಯೋಗವಿದೆ.
30 ಅಕ್ಟೋಬರ್ 2025, 23:30 IST