<p><strong>ದಾವಣಗೆರೆ:</strong> ಜನಿಸಿದಾಗ ಕಡಿಮೆ ತೂಕ ಹೊಂದಿರುವ ಅಥವಾ ಅವಧಿಗೆ ಮುನ್ನವೇ ಜನಿಸುವ ಮಕ್ಕಳಲ್ಲಿ (ಪ್ರಿಮೆಚೂರ್) ಕಂಡುಬರುವ ಅಂಧತ್ವ ನಿವಾರಣೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಇಂತಹ ಮಕ್ಕಳಿಗೆ ಉಚಿತ ಸೇವೆ ಕಲ್ಪಿಸಲು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಸಮನ್ವಯ (ನೋಡೆಲ್) ಕೇಂದ್ರಗಳು ಶೀಘ್ರವೇ ಆರಂಭವಾಗಲಿವೆ.<br /> <br /> ಒಂಬತ್ತು ತಿಂಗಳಿಗೆ ಜನಿಸುವ ಮಕ್ಕಳನ್ನು `ಆರೋಗ್ಯವಂತ ಮಕ್ಕಳು~ ಎಂದು ಕರೆಯಲಾಗುತ್ತದೆ. ನಾನಾ ಕಾರಣದಿಂದಾಗಿ, 9 ತಿಂಗಳಿಗೆ ಮುನ್ನವೇ ಮಕ್ಕಳು ಜನಿಸುವುದು ಉಂಟು. ಹೀಗೆ, ~ಅವಧಿಗೆ ಮುನ್ನವೇ~ ಜನಿಸುವ ಮಕ್ಕಳ ತೂಕ ಕಡಿಮೆ ಇರುತ್ತವೆ ಮತ್ತು ವಿವಿಧ ಆರೋಗ್ಯ ಸಂಬಂಧಿ ತೊಂದರೆಗಳನ್ನು ಎದುರಿಸುತ್ತವೆ. ಇದರಲ್ಲಿ ದೃಷ್ಟಿದೋಷವೂ ಒಂದು. <br /> <br /> ಹೀಗೆ, ದೃಷ್ಟಿದೋಷ ಇರುವುದು ಪೋಷಕರಿಗೆ ಆರಂಭದಲ್ಲಿಯೇ ಗೊತ್ತಾಗುವುದಿಲ್ಲ. ಮಗು ಬೆಳೆಯುತ್ತಾ ಹೋದಂತೆ, ದೃಷ್ಟಿದೋಷ ಇರುವುದು ತಿಳಿದುಬರಬಹುದು. ಆ ವೇಳೆಗಾಗಲೇ ಸಮಸ್ಯೆಯ ಪರಿಣಾಮ ಹೆಚ್ಚಾಗಿರುತ್ತದೆ. ಸೂಕ್ತ ಚಿಕಿತ್ಸೆ ದೊರೆಯದೇ, ಮಕ್ಕಳು ಅಂಧತ್ವಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಯೋಜನೆ ರೂಪಿಸಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ತಲಾ ರೂ 1 ಕೋಟಿ ಅನುದಾನ: ರಾಯಚೂರಿನಲ್ಲಿ ಈ ಸೇವಾ ಕೇಂದ್ರ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ದಾವಣಗೆರೆಯಲ್ಲಿ ಶೀಘ್ರವೇ ಕೇಂದ್ರ ಕಾರ್ಯಾರಂಭ ಮಾಡಲಿದ್ದು, ಮುಂದಿನ ಹಂತದಲ್ಲಿ ಮೈಸೂರು, ಬೆಂಗಳೂರು ಹಾಗೂ ಮಂಗಳೂರು ಜಿಲ್ಲೆ ಆಯ್ಕೆ ಮಾಡಿಕೊಳ್ಳಲಾಗಿದೆ. <br /> <br /> ತಲಾ ರೂ 1 ಕೋಟಿ ಅನುದಾನ ದೊರೆಯಲಿದೆ. ಈ ಹಣದಲ್ಲಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಖರೀದಿಸಿ, ಮಕ್ಕಳಿಗೆ ತಪಾಸಣೆ ಮತ್ತು ಚಿಕಿತ್ಸಾ ಸೇವೆ ನೀಡಲಾಗುವುದು. ಅಲ್ಲದೇ, ನೆರೆಹೊರೆಯ ಜಿಲ್ಲೆಗಳಿಗೂ ವೈದ್ಯರ ತಂಡ ತೆರಳಿ ಸೇವೆ ಒದಗಿಸಲಿದೆ ಎಂದು ಮಾಹಿತಿ ನೀಡಿದರು.<br /> <br /> <strong>ದಾವಣಗೆರೆಯಲ್ಲಿ ಶೀಘ್ರವೇ ಸೇವೆ: </strong>ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ. ಪರಶುರಾಮಪ್ಪ, ಆರ್ಒಪಿ (ರೆಟಿನೋಪಥಿ ಆಫ್ ಪ್ರಿಮೆಚೂರ್) ಯೋಜನೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿಯ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. <br /> <br /> ಯೋಜನೆ ಅನುಷ್ಠಾನಕ್ಕಾಗಿ ರೂ 1 ಕೋಟಿ ಅನುದಾನ ದೊರೆತಿದ್ದು, ರೂ 80 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಹಾಗೂ ವಾಹನ ಖರೀದಿಸಲಾಗಿದೆ. ವೈದ್ಯರಿಗೆ ತರಬೇತಿ ನೀಡಿದ ನಂತರ, ಸೇವೆ ಆರಂಭಿಸಲಾಗುವುದು. ಸಮಯ ನಿಗದಿಪಡಿಸಿಕೊಂಡು ನಮ್ಮ ವ್ಯಾಪ್ತಿಯ ಇತರ 5 ಜಿಲ್ಲೆಗಳಿಗೂ ವೈದ್ಯರ ತಂಡ ತೆರಳಿ, ಅಲ್ಲಿನ ಮಕ್ಕಳ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಿದೆ. <br /> <br /> ಇದರಿಂದ, ಅವಧಿಗೆ ಮುನ್ನವೇ ಜನಿಸುವ ಮಕ್ಕಳಲ್ಲಿ ಕಂಡುಬರುವ ಅಂಧತ್ವ ಆರಂಭದಲ್ಲಿಯೇ ಗುರುತಿಸಿ, ಆ ಸಮಸ್ಯೆ ಮುಂದುವರಿಯದಂತೆ ನೋಡಿಕೊಳ್ಳಬಹುದು. ಸಂಪೂರ್ಣ ಉಚಿತವಾಗಿ ಈ ಸೇವೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.<br /> <br /> <strong>ಏನಿದರ ಮಹತ್ವ?</strong><br /> ಸದ್ಯಕ್ಕೆ `ಅವಧಿಗೆ ಮುನ್ನವೇ ಜನಿಸುವ~ ಮಕ್ಕಳ, ನೇತ್ರ ತಪಾಸಣೆ ಮಾಡಿಸುವುದಕ್ಕೆ ಪೋಷಕರು ಪರದಾಡಬೇಕಾದ ಸ್ಥಿತಿ ಇದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಹೋಗುವುದಕ್ಕೆ ಕಷ್ಟ ಆಗಬಹುದು. ಕೆಲ ಜಿಲ್ಲೆಗಳಲ್ಲಿ, ಆಯ್ದ ಆಸ್ಪತ್ರೆಗಳಿಗೆ ನಾರಾಯಣ ನೇತ್ರಾಲಯದ ವೈದ್ಯರ ತಂಡ ಭೇಟಿ ಕೊಡುತ್ತದೆ. <br /> <br /> ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ತಪಾಸಣೆಗೆ ಇಂತಿಷ್ಟು ಶುಲ್ಕ (ಕನಿಷ್ಠ ರೂ 250- 300) ಪಡೆಯಲಾಗುತ್ತದೆ. ಹೀಗೆ, ಹಲವು ಬಾರಿ ತಪಾಸಣೆಗೆ ಹೋದಾಗಲೂ ಶುಲ್ಕ ನೀಡಬೇಕು, ಚಿಕಿತ್ಸೆಗೆ ಹಣ ತುಂಬಬೇಕು. ಅಲ್ಲದೇ, ಪ್ರಯಾಣದ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಮಧ್ಯಮ ವರ್ಗದವರಿಗೆ ಇದರಿಂದ ಆಗುವ `ಹೊರೆ~ ತಪ್ಪಿಸಲು ಸರ್ಕಾರದಿಂದಲೇ, ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಸೇವೆ ಕಲ್ಪಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಅಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಜನಿಸಿದಾಗ ಕಡಿಮೆ ತೂಕ ಹೊಂದಿರುವ ಅಥವಾ ಅವಧಿಗೆ ಮುನ್ನವೇ ಜನಿಸುವ ಮಕ್ಕಳಲ್ಲಿ (ಪ್ರಿಮೆಚೂರ್) ಕಂಡುಬರುವ ಅಂಧತ್ವ ನಿವಾರಣೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಇಂತಹ ಮಕ್ಕಳಿಗೆ ಉಚಿತ ಸೇವೆ ಕಲ್ಪಿಸಲು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಸಮನ್ವಯ (ನೋಡೆಲ್) ಕೇಂದ್ರಗಳು ಶೀಘ್ರವೇ ಆರಂಭವಾಗಲಿವೆ.<br /> <br /> ಒಂಬತ್ತು ತಿಂಗಳಿಗೆ ಜನಿಸುವ ಮಕ್ಕಳನ್ನು `ಆರೋಗ್ಯವಂತ ಮಕ್ಕಳು~ ಎಂದು ಕರೆಯಲಾಗುತ್ತದೆ. ನಾನಾ ಕಾರಣದಿಂದಾಗಿ, 9 ತಿಂಗಳಿಗೆ ಮುನ್ನವೇ ಮಕ್ಕಳು ಜನಿಸುವುದು ಉಂಟು. ಹೀಗೆ, ~ಅವಧಿಗೆ ಮುನ್ನವೇ~ ಜನಿಸುವ ಮಕ್ಕಳ ತೂಕ ಕಡಿಮೆ ಇರುತ್ತವೆ ಮತ್ತು ವಿವಿಧ ಆರೋಗ್ಯ ಸಂಬಂಧಿ ತೊಂದರೆಗಳನ್ನು ಎದುರಿಸುತ್ತವೆ. ಇದರಲ್ಲಿ ದೃಷ್ಟಿದೋಷವೂ ಒಂದು. <br /> <br /> ಹೀಗೆ, ದೃಷ್ಟಿದೋಷ ಇರುವುದು ಪೋಷಕರಿಗೆ ಆರಂಭದಲ್ಲಿಯೇ ಗೊತ್ತಾಗುವುದಿಲ್ಲ. ಮಗು ಬೆಳೆಯುತ್ತಾ ಹೋದಂತೆ, ದೃಷ್ಟಿದೋಷ ಇರುವುದು ತಿಳಿದುಬರಬಹುದು. ಆ ವೇಳೆಗಾಗಲೇ ಸಮಸ್ಯೆಯ ಪರಿಣಾಮ ಹೆಚ್ಚಾಗಿರುತ್ತದೆ. ಸೂಕ್ತ ಚಿಕಿತ್ಸೆ ದೊರೆಯದೇ, ಮಕ್ಕಳು ಅಂಧತ್ವಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಯೋಜನೆ ರೂಪಿಸಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ತಲಾ ರೂ 1 ಕೋಟಿ ಅನುದಾನ: ರಾಯಚೂರಿನಲ್ಲಿ ಈ ಸೇವಾ ಕೇಂದ್ರ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ದಾವಣಗೆರೆಯಲ್ಲಿ ಶೀಘ್ರವೇ ಕೇಂದ್ರ ಕಾರ್ಯಾರಂಭ ಮಾಡಲಿದ್ದು, ಮುಂದಿನ ಹಂತದಲ್ಲಿ ಮೈಸೂರು, ಬೆಂಗಳೂರು ಹಾಗೂ ಮಂಗಳೂರು ಜಿಲ್ಲೆ ಆಯ್ಕೆ ಮಾಡಿಕೊಳ್ಳಲಾಗಿದೆ. <br /> <br /> ತಲಾ ರೂ 1 ಕೋಟಿ ಅನುದಾನ ದೊರೆಯಲಿದೆ. ಈ ಹಣದಲ್ಲಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಖರೀದಿಸಿ, ಮಕ್ಕಳಿಗೆ ತಪಾಸಣೆ ಮತ್ತು ಚಿಕಿತ್ಸಾ ಸೇವೆ ನೀಡಲಾಗುವುದು. ಅಲ್ಲದೇ, ನೆರೆಹೊರೆಯ ಜಿಲ್ಲೆಗಳಿಗೂ ವೈದ್ಯರ ತಂಡ ತೆರಳಿ ಸೇವೆ ಒದಗಿಸಲಿದೆ ಎಂದು ಮಾಹಿತಿ ನೀಡಿದರು.<br /> <br /> <strong>ದಾವಣಗೆರೆಯಲ್ಲಿ ಶೀಘ್ರವೇ ಸೇವೆ: </strong>ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ. ಪರಶುರಾಮಪ್ಪ, ಆರ್ಒಪಿ (ರೆಟಿನೋಪಥಿ ಆಫ್ ಪ್ರಿಮೆಚೂರ್) ಯೋಜನೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿಯ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. <br /> <br /> ಯೋಜನೆ ಅನುಷ್ಠಾನಕ್ಕಾಗಿ ರೂ 1 ಕೋಟಿ ಅನುದಾನ ದೊರೆತಿದ್ದು, ರೂ 80 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಹಾಗೂ ವಾಹನ ಖರೀದಿಸಲಾಗಿದೆ. ವೈದ್ಯರಿಗೆ ತರಬೇತಿ ನೀಡಿದ ನಂತರ, ಸೇವೆ ಆರಂಭಿಸಲಾಗುವುದು. ಸಮಯ ನಿಗದಿಪಡಿಸಿಕೊಂಡು ನಮ್ಮ ವ್ಯಾಪ್ತಿಯ ಇತರ 5 ಜಿಲ್ಲೆಗಳಿಗೂ ವೈದ್ಯರ ತಂಡ ತೆರಳಿ, ಅಲ್ಲಿನ ಮಕ್ಕಳ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಿದೆ. <br /> <br /> ಇದರಿಂದ, ಅವಧಿಗೆ ಮುನ್ನವೇ ಜನಿಸುವ ಮಕ್ಕಳಲ್ಲಿ ಕಂಡುಬರುವ ಅಂಧತ್ವ ಆರಂಭದಲ್ಲಿಯೇ ಗುರುತಿಸಿ, ಆ ಸಮಸ್ಯೆ ಮುಂದುವರಿಯದಂತೆ ನೋಡಿಕೊಳ್ಳಬಹುದು. ಸಂಪೂರ್ಣ ಉಚಿತವಾಗಿ ಈ ಸೇವೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.<br /> <br /> <strong>ಏನಿದರ ಮಹತ್ವ?</strong><br /> ಸದ್ಯಕ್ಕೆ `ಅವಧಿಗೆ ಮುನ್ನವೇ ಜನಿಸುವ~ ಮಕ್ಕಳ, ನೇತ್ರ ತಪಾಸಣೆ ಮಾಡಿಸುವುದಕ್ಕೆ ಪೋಷಕರು ಪರದಾಡಬೇಕಾದ ಸ್ಥಿತಿ ಇದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಹೋಗುವುದಕ್ಕೆ ಕಷ್ಟ ಆಗಬಹುದು. ಕೆಲ ಜಿಲ್ಲೆಗಳಲ್ಲಿ, ಆಯ್ದ ಆಸ್ಪತ್ರೆಗಳಿಗೆ ನಾರಾಯಣ ನೇತ್ರಾಲಯದ ವೈದ್ಯರ ತಂಡ ಭೇಟಿ ಕೊಡುತ್ತದೆ. <br /> <br /> ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ತಪಾಸಣೆಗೆ ಇಂತಿಷ್ಟು ಶುಲ್ಕ (ಕನಿಷ್ಠ ರೂ 250- 300) ಪಡೆಯಲಾಗುತ್ತದೆ. ಹೀಗೆ, ಹಲವು ಬಾರಿ ತಪಾಸಣೆಗೆ ಹೋದಾಗಲೂ ಶುಲ್ಕ ನೀಡಬೇಕು, ಚಿಕಿತ್ಸೆಗೆ ಹಣ ತುಂಬಬೇಕು. ಅಲ್ಲದೇ, ಪ್ರಯಾಣದ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಮಧ್ಯಮ ವರ್ಗದವರಿಗೆ ಇದರಿಂದ ಆಗುವ `ಹೊರೆ~ ತಪ್ಪಿಸಲು ಸರ್ಕಾರದಿಂದಲೇ, ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಸೇವೆ ಕಲ್ಪಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಅಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>