<p>ಬೇಸಿಗೆ ರಜೆ ಎಂದರೆ ಬೆಂಗಳೂರಿನಲ್ಲಿ ರಜಾಶಿಬಿರಗಳದ್ದೇ ಭರಾಟೆ. ಶಾಲೆಯ ಓದು ಹಾಗೂ ಬರಹದಲ್ಲಿ ಆಗಾಗ ಕುಗ್ಗುವ ಅವರ ಕ್ರಿಯಾತ್ಮಕ ಹಾಗೂ ಸೃಜನಾತ್ಮಕ ಶಕ್ತಿ ಆಚೆ ಬರುವುದೇ ಇಂಥ ಶಿಬಿರಗಳಲ್ಲಿ. <br /> <br /> ಈ ವರ್ಷ ಮಕ್ಕಳ ಸೃಜನಾತ್ಮಕ ಶಕ್ತಿಯನ್ನು ಬೆಳೆಸಲು ಧಾತು ವಿಶೇಷ ಕಾರ್ಯಾಗಾರಗಳನ್ನು ಏರ್ಪಡಿಸಿದೆ. ಬನಶಂಕರಿಯ ಎರಡನೇ ಹಂತದಲ್ಲಿರುವ `ಧಾತು~ ಸಂಸ್ಥೆಯು 9ರಿಂದ 13 ವರ್ಷ ವಯೋಮಾನದ ಮಕ್ಕಳಿಗಾಗಿ ಮಹಾಭಾರತದ ಕಾರ್ಯಾಗಾರವನ್ನು ಏರ್ಪಡಿಸಿದೆ. <br /> <br /> ಮಹಾಭಾರತದ ಮಹಾ ಕತೆಯನ್ನು ಹೇಳುತ್ತಲೇ ವರ್ಕ್ ಬುಕ್ ಆ್ಯಕ್ಟಿವಿಟಿ ಬುಕ್ಗಳನ್ನು ಸಹ ಮಕ್ಕಳಿಗೆ ನೀಡುತ್ತದೆ. ಈ ಕಾರ್ಯಾಗಾರದಲ್ಲಿ ಮಹಾಭಾರತದ ದೃಶ್ಯಗಳನ್ನು ರೂಪಕವಾಗಿ, ಬೊಂಬೆಯಾಟದ ಮೂಲಕ ಪ್ರಸ್ತುತ ಪಡಿಸುವುದನ್ನೂ ಹೇಳಿಕೊಡಲಾಗುತ್ತದೆ.<br /> <br /> ಮಹಾಭಾರತದ ಕತೆಯೊಂದಿಗೆ, ಕತೆ ಹೇಳುವುದನ್ನು ಮಕ್ಕಳು ಕಲಿಯುತ್ತಾರೆ. ಪತ್ರಗಳೇ ಮರೆಯಾಗುತ್ತಿರುವ ಈ ಕಾಲದಲ್ಲಿ ಪೋಸ್ಟ್ ಕಾರ್ಡ್ನಲ್ಲಿ ಮಹಾಭಾರತದ ಯಾವುದಾದರೂ ಒಂದು ಪಾತ್ರ ಪರಿಚಯ ಅಥವಾ ದೃಶ್ಯವನ್ನು ಇನ್ನೊಬ್ಬರಿಗೆ ಬರೆಯುವ ಕಲೆಯನ್ನೂ ಹೇಳಿಕೊಡಲಾಗುತ್ತದೆ.<br /> <br /> ಮಕ್ಕಳ ಕಲ್ಪನಾ ಲೋಕವನ್ನು ವಿಸ್ತರಿಸುತ್ತಲೇ, ಪರಿಕಲ್ಪನೆಯನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನೂ ನೀಡಲಾಗುತ್ತದೆ.<br /> <br /> 7ರಿಂದ 12 ವರ್ಷಗಳ ಚಿಣ್ಣರಿಗೆ ಬೊಂಬೆ ತಯಾರಿಸುವ ಬಗೆಯನ್ನು ಹೇಳಿಕೊಡಲಿದ್ದಾರೆ. ಇವರಿಗೆ ಏ.9ರಿಂದ 13ರವರೆಗೆ ಕಾರ್ಯಾಗಾರವನ್ನು ಏರ್ಪಡಿಸಿದ್ದಾರೆ. ಮಕ್ಕಳು ಮಾಡಿದ ಬೊಂಬೆಯನ್ನು ಮನೆಗೆ ಕೊಂಡೊಯ್ಯಬಹುದಾಗಿದೆ.<br /> <br /> ಇದಷ್ಟೇ ಅಲ್ಲ, ಬೊಂಬೆ ಬಳಸಿ ಕತೆ ಹೇಳುವ ಕಲೆಯನ್ನು ಕಲಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಅನುಪಮಾ ಹೊಸಕೆರೆ ಅವರನ್ನು ಸಂಪರ್ಕಿಸಬಹುದು. ಠ್ಠಿಃಜಞಜ್ಝಿ.್ಚಟಞ, 08065683396ಗೆ ಸಂಪರ್ಕಿಸಬಹುದು.<br /> <br /> ಬ್ರಿಟಿಷ್ ಲೈಬ್ರೆರಿ ಹದಿಹರೆಯದ ಮಕ್ಕಳನ್ನು ಈ ಬೇಸಿಗೆಯಲ್ಲಿ ಓದಿನತ್ತ ಸೆಳೆಯುವ ತಂತ್ರ ಹೂಡಿದೆ.ಬ್ರಿಟಿಷ್ ಲೈಬ್ರೆರಿ ಯಂಗ್ ಲರ್ನರ್ಸ್ ಸದಸ್ಯತ್ವವನ್ನು ಪರಿಚಯಿಸಿದೆ. ಲೈಬ್ರೆರಿಯ ಸಂಗ್ರಹದಲ್ಲಿರುವ 4000 ಮಕ್ಕಳ ಪುಸ್ತಕಗಳಲ್ಲಿ ಕೆಲವನ್ನಾದರೂ ಈ ಬೇಸಿಗೆಯಲ್ಲಿ ಓದಿ ಎಂಬುದು ಗ್ರಂಥಾಲಯದ ಆಶಯವಾಗಿದೆ. <br /> <br /> ಕಾಲ್ಪನಿಕ ಕತೆಯೊಂದಿಗೆ ರೋಚಕ ಅನುಭವ ಪಡೆಯಿರಿ. ಕತೆಯಿಂದಲೇ ಕಲ್ಪನಾಲೋಕಕ್ಕೆ ಕಾಲಿರಿಸಿ ಎಂದು ಕರೆ ನೀಡಿದೆ. ಜ್ಞಾನ ಕಣಜದ ಹರಿವನ್ನು ಹಿಗ್ಗಿಸಲು ಸರಳ ವಿಜ್ಞಾನ, ಸುಲಭ ಗಣಿತ, ಆಸಕ್ತಿಕರ ಇತಿಹಾಸದ ಪುಸ್ತಕಗಳನ್ನೂ ಓದಿರಿ ಎಂದು ಆಹ್ವಾನಿಸಿದೆ.<br /> <br /> ಇಂಗ್ಲಿಷ್ ಶಬ್ದ ಸಂಪತ್ತು ಹೆಚ್ಚಿಸುತ್ತಲೇ ಭಾಷಾ ಕೌಶಲ ಪಡೆಯಿರಿ ಎಂಬ ಸಲಹೆ ನೀಡುತ್ತದೆ. ಇದಷ್ಟೇ ಅಲ್ಲ, ಸದಸ್ಯತ್ವ ಪಡೆದವರಿಗಾಗಿ ರಿಯಾಯಿತಿ ದರದಲ್ಲಿ ಕೆಲ ಸಾಹಿತ್ಯದ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಬಹುದಾಗಿದೆ ಎಂದು ಲೈಬ್ರೆರಿ ಹೇಳಿದೆ.<br /> <br /> 16 ವರ್ಷ ಮೀರದ ಮಕ್ಕಳಿಗಾಗಿ ಎರಡು ತಿಂಗಳ ಅವಧಿಯ ಸದಸ್ಯತ್ವವನ್ನು ನೀಡಲಾಗುತ್ತದೆ. ಪ್ರತಿ ಸದಸ್ಯತ್ವ ಶುಲ್ಕ 600 ರೂಪಾಯಿಗಳು. ಹೆಚ್ಚಿನ ಮಾಹಿತಿಗೆ 22489220ಗೆ ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇಸಿಗೆ ರಜೆ ಎಂದರೆ ಬೆಂಗಳೂರಿನಲ್ಲಿ ರಜಾಶಿಬಿರಗಳದ್ದೇ ಭರಾಟೆ. ಶಾಲೆಯ ಓದು ಹಾಗೂ ಬರಹದಲ್ಲಿ ಆಗಾಗ ಕುಗ್ಗುವ ಅವರ ಕ್ರಿಯಾತ್ಮಕ ಹಾಗೂ ಸೃಜನಾತ್ಮಕ ಶಕ್ತಿ ಆಚೆ ಬರುವುದೇ ಇಂಥ ಶಿಬಿರಗಳಲ್ಲಿ. <br /> <br /> ಈ ವರ್ಷ ಮಕ್ಕಳ ಸೃಜನಾತ್ಮಕ ಶಕ್ತಿಯನ್ನು ಬೆಳೆಸಲು ಧಾತು ವಿಶೇಷ ಕಾರ್ಯಾಗಾರಗಳನ್ನು ಏರ್ಪಡಿಸಿದೆ. ಬನಶಂಕರಿಯ ಎರಡನೇ ಹಂತದಲ್ಲಿರುವ `ಧಾತು~ ಸಂಸ್ಥೆಯು 9ರಿಂದ 13 ವರ್ಷ ವಯೋಮಾನದ ಮಕ್ಕಳಿಗಾಗಿ ಮಹಾಭಾರತದ ಕಾರ್ಯಾಗಾರವನ್ನು ಏರ್ಪಡಿಸಿದೆ. <br /> <br /> ಮಹಾಭಾರತದ ಮಹಾ ಕತೆಯನ್ನು ಹೇಳುತ್ತಲೇ ವರ್ಕ್ ಬುಕ್ ಆ್ಯಕ್ಟಿವಿಟಿ ಬುಕ್ಗಳನ್ನು ಸಹ ಮಕ್ಕಳಿಗೆ ನೀಡುತ್ತದೆ. ಈ ಕಾರ್ಯಾಗಾರದಲ್ಲಿ ಮಹಾಭಾರತದ ದೃಶ್ಯಗಳನ್ನು ರೂಪಕವಾಗಿ, ಬೊಂಬೆಯಾಟದ ಮೂಲಕ ಪ್ರಸ್ತುತ ಪಡಿಸುವುದನ್ನೂ ಹೇಳಿಕೊಡಲಾಗುತ್ತದೆ.<br /> <br /> ಮಹಾಭಾರತದ ಕತೆಯೊಂದಿಗೆ, ಕತೆ ಹೇಳುವುದನ್ನು ಮಕ್ಕಳು ಕಲಿಯುತ್ತಾರೆ. ಪತ್ರಗಳೇ ಮರೆಯಾಗುತ್ತಿರುವ ಈ ಕಾಲದಲ್ಲಿ ಪೋಸ್ಟ್ ಕಾರ್ಡ್ನಲ್ಲಿ ಮಹಾಭಾರತದ ಯಾವುದಾದರೂ ಒಂದು ಪಾತ್ರ ಪರಿಚಯ ಅಥವಾ ದೃಶ್ಯವನ್ನು ಇನ್ನೊಬ್ಬರಿಗೆ ಬರೆಯುವ ಕಲೆಯನ್ನೂ ಹೇಳಿಕೊಡಲಾಗುತ್ತದೆ.<br /> <br /> ಮಕ್ಕಳ ಕಲ್ಪನಾ ಲೋಕವನ್ನು ವಿಸ್ತರಿಸುತ್ತಲೇ, ಪರಿಕಲ್ಪನೆಯನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನೂ ನೀಡಲಾಗುತ್ತದೆ.<br /> <br /> 7ರಿಂದ 12 ವರ್ಷಗಳ ಚಿಣ್ಣರಿಗೆ ಬೊಂಬೆ ತಯಾರಿಸುವ ಬಗೆಯನ್ನು ಹೇಳಿಕೊಡಲಿದ್ದಾರೆ. ಇವರಿಗೆ ಏ.9ರಿಂದ 13ರವರೆಗೆ ಕಾರ್ಯಾಗಾರವನ್ನು ಏರ್ಪಡಿಸಿದ್ದಾರೆ. ಮಕ್ಕಳು ಮಾಡಿದ ಬೊಂಬೆಯನ್ನು ಮನೆಗೆ ಕೊಂಡೊಯ್ಯಬಹುದಾಗಿದೆ.<br /> <br /> ಇದಷ್ಟೇ ಅಲ್ಲ, ಬೊಂಬೆ ಬಳಸಿ ಕತೆ ಹೇಳುವ ಕಲೆಯನ್ನು ಕಲಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಅನುಪಮಾ ಹೊಸಕೆರೆ ಅವರನ್ನು ಸಂಪರ್ಕಿಸಬಹುದು. ಠ್ಠಿಃಜಞಜ್ಝಿ.್ಚಟಞ, 08065683396ಗೆ ಸಂಪರ್ಕಿಸಬಹುದು.<br /> <br /> ಬ್ರಿಟಿಷ್ ಲೈಬ್ರೆರಿ ಹದಿಹರೆಯದ ಮಕ್ಕಳನ್ನು ಈ ಬೇಸಿಗೆಯಲ್ಲಿ ಓದಿನತ್ತ ಸೆಳೆಯುವ ತಂತ್ರ ಹೂಡಿದೆ.ಬ್ರಿಟಿಷ್ ಲೈಬ್ರೆರಿ ಯಂಗ್ ಲರ್ನರ್ಸ್ ಸದಸ್ಯತ್ವವನ್ನು ಪರಿಚಯಿಸಿದೆ. ಲೈಬ್ರೆರಿಯ ಸಂಗ್ರಹದಲ್ಲಿರುವ 4000 ಮಕ್ಕಳ ಪುಸ್ತಕಗಳಲ್ಲಿ ಕೆಲವನ್ನಾದರೂ ಈ ಬೇಸಿಗೆಯಲ್ಲಿ ಓದಿ ಎಂಬುದು ಗ್ರಂಥಾಲಯದ ಆಶಯವಾಗಿದೆ. <br /> <br /> ಕಾಲ್ಪನಿಕ ಕತೆಯೊಂದಿಗೆ ರೋಚಕ ಅನುಭವ ಪಡೆಯಿರಿ. ಕತೆಯಿಂದಲೇ ಕಲ್ಪನಾಲೋಕಕ್ಕೆ ಕಾಲಿರಿಸಿ ಎಂದು ಕರೆ ನೀಡಿದೆ. ಜ್ಞಾನ ಕಣಜದ ಹರಿವನ್ನು ಹಿಗ್ಗಿಸಲು ಸರಳ ವಿಜ್ಞಾನ, ಸುಲಭ ಗಣಿತ, ಆಸಕ್ತಿಕರ ಇತಿಹಾಸದ ಪುಸ್ತಕಗಳನ್ನೂ ಓದಿರಿ ಎಂದು ಆಹ್ವಾನಿಸಿದೆ.<br /> <br /> ಇಂಗ್ಲಿಷ್ ಶಬ್ದ ಸಂಪತ್ತು ಹೆಚ್ಚಿಸುತ್ತಲೇ ಭಾಷಾ ಕೌಶಲ ಪಡೆಯಿರಿ ಎಂಬ ಸಲಹೆ ನೀಡುತ್ತದೆ. ಇದಷ್ಟೇ ಅಲ್ಲ, ಸದಸ್ಯತ್ವ ಪಡೆದವರಿಗಾಗಿ ರಿಯಾಯಿತಿ ದರದಲ್ಲಿ ಕೆಲ ಸಾಹಿತ್ಯದ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಬಹುದಾಗಿದೆ ಎಂದು ಲೈಬ್ರೆರಿ ಹೇಳಿದೆ.<br /> <br /> 16 ವರ್ಷ ಮೀರದ ಮಕ್ಕಳಿಗಾಗಿ ಎರಡು ತಿಂಗಳ ಅವಧಿಯ ಸದಸ್ಯತ್ವವನ್ನು ನೀಡಲಾಗುತ್ತದೆ. ಪ್ರತಿ ಸದಸ್ಯತ್ವ ಶುಲ್ಕ 600 ರೂಪಾಯಿಗಳು. ಹೆಚ್ಚಿನ ಮಾಹಿತಿಗೆ 22489220ಗೆ ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>