<p>ಇಷ್ಟು ದಿನ ನೀವು ನೋಡುತ್ತಿದ್ದ ಚಿತ್ರಕಲಾ ಪರಿಷತ್ ಈಗ ಹೊಸದೊಂದು ವೇಷ ಧರಿಸಿದೆ. ಚಿತ್ರಕಲಾ ಪರಿಷತ್ಗೆ ಬಿಳಿಯ ಬಟ್ಟೆ ತೊಡಿಸಿದ ಹುಡುಗನ ಕಣ್ಣಲ್ಲಿ ಸಾಧಿಸಬೇಕಾದದ್ದು ಇನ್ನೂ ಇದೆ ಎಂಬ ವಿನಯ. <br /> <br /> `ನಾನೊಬ್ಬ ಮಹತ್ವಕಾಂಕ್ಷಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತೆ. ಪುಟ್ಟ ಕಣ್ಣಲ್ಲಿ ಬೆಟ್ಟದಷ್ಟು ಕನಸು ಕಾಣುವುದಕ್ಕೆ ಯಾರೂ ಹಣ ಕೊಡಬೇಕಾಗಿಲ್ಲ. ಸದಾ ಹೊಸತನ್ನು ಮಾಡಬೇಕೆಂಬ ತುಡಿತವೊಂದು ನನ್ನನ್ನು ಯಾವಾಗಲೂ ಕಾಡುತ್ತಾ ಇರುತ್ತದೆ.~ ಇದು ಚಿತ್ರಕಲಾ ಪರಿಷತ್ನ ಕಲಾ ವಿದ್ಯಾರ್ಥಿ ಆಶ್ರಯ್ ಮಾತು.<br /> <br /> ಕಲೆ ಎಂದರೆ ಕೇವಲ ಬ್ರಶ್, ಬಣ್ಣ, ಕ್ಯಾನ್ವಾಸ್ ಅಲ್ಲ. ಹೊಸತೇನನ್ನಾದರೂ ಅನಾವರಣಗೊಳಿಸುವುದೇ ಕಲೆ. ನನಗೆ ಸ್ಫೂರ್ತಿ ಹಂಗೇರಿಯಾ ಕಲಾವಿದ `ಕ್ರಿಸ್ಟೋ~. ಅವನು ಸಹ ಇಂಥದೊಂದು ಪ್ರಯತ್ನಕ್ಕೆ ಕೈಹಾಕಿ ಯಶಸ್ಸು ಪಡೆದ ಮಹಾನ್ ಕಲಾಕಾರ.<br /> ಗ್ಯಾಲರಿಯನ್ನು ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚುವುದು ಸಹ ಒಂದು ಕಲೆ. ಅದನ್ನು ನೋಡುವ ದೃಷ್ಟಿ ಬದಲಾಗಬೇಕು.<br /> <br /> 4,800 ಮೀಟರ್ ಬಟ್ಟೆಯಿಂದ ಇಡೀ ಚಿತ್ರಕಲಾ ಪರಿಷತ್ತನ್ನು ಮುಚ್ಚಿದ್ದೇನೆ. ಒಳಗಡೆ ಏನೋ ನಡೆಯುತ್ತಿದೆ ಎಂಬ ಕುತೂಹಲ ನೋಡುಗರಿಗೂ ಇರುತ್ತದೆ. ಜನರ ಮನಸ್ಸಿನಲ್ಲಿ ಅಂಥದ್ದೊಂದು ಕುತೂಹಲದ ಬೀಜ ಬಿತ್ತಿ ಆಸಕ್ತಿ ಬೆಳೆಸುವುದು ಸಹ ಒಂದು ಕಲೆ ಎಂದು ನಗು ಬೀರುತ್ತಾರೆ.<br /> <br /> ಎಲ್ಲರಿಗೂ ಮೊಬೈಲ್, ಬೈಕ್ ಹುಚ್ಚಿದ್ದರೆ ಇವರಿಗೆ ಕಲೆಯೇ ಜೀವಾಳ. `ಮನೆಯಲ್ಲಿ ಯಾವತ್ತೂ ನನಗಾಗಿ ಹಣ ಕೇಳಿಲ್ಲ. ಆದರೆ ನನ್ನ ಕನಸಿಗಾಗಿ ಹಣ ಕೇಳಿದ್ದೇನೆ. ಆ ಕನಸೇ ಇಂದು ಇಲ್ಲಿ ರೂಪ ಪಡೆದಿದೆ~ ಎಂದು ಹೇಳುವ ಅವರು ಸುಮ್ಮನೆ ಹಣವನ್ನು ದುಂದು ಮಾಡುವವರಲ್ಲ. ಮಗನ ಈ ಕಲೆಗಾಗಿ ತಂದೆ ಒಂದು ಲಕ್ಷದ ಅರವತ್ಮೂರು ಸಾವಿರ ರೂಪಾಯಿ ಹಣ ನೀಡಿದ್ದಾರೆ. <br /> <br /> ಕೇವಲ ಕಲೆಯಲ್ಲದೆ ನಾಟಕ, ಸಿನಿಮಾ ಕ್ಷೇತ್ರದಲ್ಲೂ ಆಸಕ್ತಿ ಬೆಳಸಿಕೊಂಡ ಆಶ್ರಯ್ ಮೂರು ನಾಟಕಗಳನ್ನು ಬರೆದಿದ್ದಾರೆ. ರವಿಚಂದ್ರನ್ ನಿರ್ದೇಶನದ `ಹೂ~ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.<br /> <br /> ಚಿಕ್ಕ ವಯಸ್ಸಿನಲ್ಲಿಯೇ ಎಲ್ಲವನ್ನೂ ಓದಿ ಮುಗಿಸುವ ಹಂಬಲ. ತನ್ನೆಲ್ಲಾ ಕನಸಿಗೆ ಸಹಕಾರ ನೀಡಿದ್ದು ತಂದೆ, ಗುರು ಹಾಗೂ ಚಿತ್ರಕಲಾ ಪರಿಷತ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. <br /> <br /> ಶುಭ್ರ ಬಿಳಿ ಸ್ಯಾಟಿನ್ ಬಟ್ಟೆಯಲ್ಲಿ ಇಡೀ ಚಿತ್ರಕಲಾ ಪರಿಷತ್ ಕಂಗೊಳಿಸುವಂತೆ ಮಾಡಿದ ಇವರ ಕನಸು ಮಾತ್ರ ದೊಡ್ಡದು. `ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು ಕೊನೆಯನೆಂದೂ ಮುಟ್ಟದಿರು~ ಎಂಬ ಕುವೆಂಪು ಪದ್ಯದ ಸಾಲುಗಳಂತೆ ಬದುಕುವುದು ಆಶ್ರಯ್ ಬಯಕೆ. <br /> <br /> `ಕಲಾಕೃತಿಯ ಮರುಜನ್ಮ~ ಎಂಬ ವಿಷಯದ ಮೇಲೆ ಈ ಕಲೆ ನಿಂತಿದೆ. ಕ್ರಿಸ್ಟೋ ಮಾಡಿದ ಕಲೆಯನ್ನು ನಾನು ಇಲ್ಲಿ ಮಾಡಲು ಪ್ರಯತ್ನಿಸುತ್ತಿದ್ದೇನೆ, ಅಷ್ಟೆ ಎಂದು ನಗು ಸೂಸುತ್ತಾರೆ.<br /> <br /> ಚಿತ್ರಕಲಾ ಪರಿಷತ್ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಈ ಪ್ರದರ್ಶನ ಇದೇ 10ರವರೆಗೆ ನಡೆಯಲಿದೆ. ಸಮಯ: ಬೆಳಿಗ್ಗೆ 10ರಿಂದ ಸಂಜೆ 5.<br /> -</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಷ್ಟು ದಿನ ನೀವು ನೋಡುತ್ತಿದ್ದ ಚಿತ್ರಕಲಾ ಪರಿಷತ್ ಈಗ ಹೊಸದೊಂದು ವೇಷ ಧರಿಸಿದೆ. ಚಿತ್ರಕಲಾ ಪರಿಷತ್ಗೆ ಬಿಳಿಯ ಬಟ್ಟೆ ತೊಡಿಸಿದ ಹುಡುಗನ ಕಣ್ಣಲ್ಲಿ ಸಾಧಿಸಬೇಕಾದದ್ದು ಇನ್ನೂ ಇದೆ ಎಂಬ ವಿನಯ. <br /> <br /> `ನಾನೊಬ್ಬ ಮಹತ್ವಕಾಂಕ್ಷಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತೆ. ಪುಟ್ಟ ಕಣ್ಣಲ್ಲಿ ಬೆಟ್ಟದಷ್ಟು ಕನಸು ಕಾಣುವುದಕ್ಕೆ ಯಾರೂ ಹಣ ಕೊಡಬೇಕಾಗಿಲ್ಲ. ಸದಾ ಹೊಸತನ್ನು ಮಾಡಬೇಕೆಂಬ ತುಡಿತವೊಂದು ನನ್ನನ್ನು ಯಾವಾಗಲೂ ಕಾಡುತ್ತಾ ಇರುತ್ತದೆ.~ ಇದು ಚಿತ್ರಕಲಾ ಪರಿಷತ್ನ ಕಲಾ ವಿದ್ಯಾರ್ಥಿ ಆಶ್ರಯ್ ಮಾತು.<br /> <br /> ಕಲೆ ಎಂದರೆ ಕೇವಲ ಬ್ರಶ್, ಬಣ್ಣ, ಕ್ಯಾನ್ವಾಸ್ ಅಲ್ಲ. ಹೊಸತೇನನ್ನಾದರೂ ಅನಾವರಣಗೊಳಿಸುವುದೇ ಕಲೆ. ನನಗೆ ಸ್ಫೂರ್ತಿ ಹಂಗೇರಿಯಾ ಕಲಾವಿದ `ಕ್ರಿಸ್ಟೋ~. ಅವನು ಸಹ ಇಂಥದೊಂದು ಪ್ರಯತ್ನಕ್ಕೆ ಕೈಹಾಕಿ ಯಶಸ್ಸು ಪಡೆದ ಮಹಾನ್ ಕಲಾಕಾರ.<br /> ಗ್ಯಾಲರಿಯನ್ನು ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚುವುದು ಸಹ ಒಂದು ಕಲೆ. ಅದನ್ನು ನೋಡುವ ದೃಷ್ಟಿ ಬದಲಾಗಬೇಕು.<br /> <br /> 4,800 ಮೀಟರ್ ಬಟ್ಟೆಯಿಂದ ಇಡೀ ಚಿತ್ರಕಲಾ ಪರಿಷತ್ತನ್ನು ಮುಚ್ಚಿದ್ದೇನೆ. ಒಳಗಡೆ ಏನೋ ನಡೆಯುತ್ತಿದೆ ಎಂಬ ಕುತೂಹಲ ನೋಡುಗರಿಗೂ ಇರುತ್ತದೆ. ಜನರ ಮನಸ್ಸಿನಲ್ಲಿ ಅಂಥದ್ದೊಂದು ಕುತೂಹಲದ ಬೀಜ ಬಿತ್ತಿ ಆಸಕ್ತಿ ಬೆಳೆಸುವುದು ಸಹ ಒಂದು ಕಲೆ ಎಂದು ನಗು ಬೀರುತ್ತಾರೆ.<br /> <br /> ಎಲ್ಲರಿಗೂ ಮೊಬೈಲ್, ಬೈಕ್ ಹುಚ್ಚಿದ್ದರೆ ಇವರಿಗೆ ಕಲೆಯೇ ಜೀವಾಳ. `ಮನೆಯಲ್ಲಿ ಯಾವತ್ತೂ ನನಗಾಗಿ ಹಣ ಕೇಳಿಲ್ಲ. ಆದರೆ ನನ್ನ ಕನಸಿಗಾಗಿ ಹಣ ಕೇಳಿದ್ದೇನೆ. ಆ ಕನಸೇ ಇಂದು ಇಲ್ಲಿ ರೂಪ ಪಡೆದಿದೆ~ ಎಂದು ಹೇಳುವ ಅವರು ಸುಮ್ಮನೆ ಹಣವನ್ನು ದುಂದು ಮಾಡುವವರಲ್ಲ. ಮಗನ ಈ ಕಲೆಗಾಗಿ ತಂದೆ ಒಂದು ಲಕ್ಷದ ಅರವತ್ಮೂರು ಸಾವಿರ ರೂಪಾಯಿ ಹಣ ನೀಡಿದ್ದಾರೆ. <br /> <br /> ಕೇವಲ ಕಲೆಯಲ್ಲದೆ ನಾಟಕ, ಸಿನಿಮಾ ಕ್ಷೇತ್ರದಲ್ಲೂ ಆಸಕ್ತಿ ಬೆಳಸಿಕೊಂಡ ಆಶ್ರಯ್ ಮೂರು ನಾಟಕಗಳನ್ನು ಬರೆದಿದ್ದಾರೆ. ರವಿಚಂದ್ರನ್ ನಿರ್ದೇಶನದ `ಹೂ~ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.<br /> <br /> ಚಿಕ್ಕ ವಯಸ್ಸಿನಲ್ಲಿಯೇ ಎಲ್ಲವನ್ನೂ ಓದಿ ಮುಗಿಸುವ ಹಂಬಲ. ತನ್ನೆಲ್ಲಾ ಕನಸಿಗೆ ಸಹಕಾರ ನೀಡಿದ್ದು ತಂದೆ, ಗುರು ಹಾಗೂ ಚಿತ್ರಕಲಾ ಪರಿಷತ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. <br /> <br /> ಶುಭ್ರ ಬಿಳಿ ಸ್ಯಾಟಿನ್ ಬಟ್ಟೆಯಲ್ಲಿ ಇಡೀ ಚಿತ್ರಕಲಾ ಪರಿಷತ್ ಕಂಗೊಳಿಸುವಂತೆ ಮಾಡಿದ ಇವರ ಕನಸು ಮಾತ್ರ ದೊಡ್ಡದು. `ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು ಕೊನೆಯನೆಂದೂ ಮುಟ್ಟದಿರು~ ಎಂಬ ಕುವೆಂಪು ಪದ್ಯದ ಸಾಲುಗಳಂತೆ ಬದುಕುವುದು ಆಶ್ರಯ್ ಬಯಕೆ. <br /> <br /> `ಕಲಾಕೃತಿಯ ಮರುಜನ್ಮ~ ಎಂಬ ವಿಷಯದ ಮೇಲೆ ಈ ಕಲೆ ನಿಂತಿದೆ. ಕ್ರಿಸ್ಟೋ ಮಾಡಿದ ಕಲೆಯನ್ನು ನಾನು ಇಲ್ಲಿ ಮಾಡಲು ಪ್ರಯತ್ನಿಸುತ್ತಿದ್ದೇನೆ, ಅಷ್ಟೆ ಎಂದು ನಗು ಸೂಸುತ್ತಾರೆ.<br /> <br /> ಚಿತ್ರಕಲಾ ಪರಿಷತ್ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಈ ಪ್ರದರ್ಶನ ಇದೇ 10ರವರೆಗೆ ನಡೆಯಲಿದೆ. ಸಮಯ: ಬೆಳಿಗ್ಗೆ 10ರಿಂದ ಸಂಜೆ 5.<br /> -</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>