<p>ಯಲಹಂಕ: ವಿಳಾಸ ಕೇಳುವ ನೆಪದಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮನೆಯ ಕಾಂಪೌಂಡ್ನ ಒಳಗೆ ಕುಳಿತಿದ್ದ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾಗಿರುವ ಘಟನೆ ಯಲಹಂಕ ಉಪನಗರ ನಾಲ್ಕನೇ ಹಂತದಲ್ಲಿ ಮಂಗಳವಾರ ನಡೆದಿದೆ.<br /> <br /> ರತ್ನಾವತಿ(70) ಸರ ಕಳೆದುಕೊಂಡ ವೃದ್ಧೆ. ಇವರು ಬೆಳಗ್ಗೆ 11 ಗಂಟೆ ಹೊತ್ತಿನಲ್ಲಿ ಗಣೇಶ ದೇವಸ್ಥಾನದ ಬಳಿಯಿರುವ ತಮ್ಮ ಮನೆಯ ಕಾಂ ಪೌಂಡ್ನ ಒಳಗೆ ಕುಳಿತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ಬೈಕ್ನಲ್ಲಿ ಬಂದಿದ್ದಾರೆ.<br /> <br /> ಒಬ್ಬ ಹೆಲ್ಮೆಟ್ ಧರಿಸಿ ಬೈಕ್ನ ಮೇಲೆ ಕುಳಿತಿದ್ದ. ಮತ್ತೊಬ್ಬ ಚೀಟಿ ಹಿಡಿದುಕೊಂಡು ವಿಳಾಸಕೇಳುವ ರೀತಿಯಲ್ಲಿ ಕಾಂಪೌಂಡ್ನ ಒಳಗೆ ಬಂದು ಈಕೆಯ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡಿದ್ದಾನೆ.<br /> <br /> ಈ ವೇಳೆ ಆಕೆ ಕೂಗಿಕೊಂಡಿದ್ದಾಳೆ. ಮನೆಯವರು ಆಚೆ ಬರುವಷ್ಟರಲ್ಲಿ ಇಬ್ಬರೂ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಯಲಹಂಕ ಉಪ ನಗರ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಲಹಂಕ: ವಿಳಾಸ ಕೇಳುವ ನೆಪದಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮನೆಯ ಕಾಂಪೌಂಡ್ನ ಒಳಗೆ ಕುಳಿತಿದ್ದ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾಗಿರುವ ಘಟನೆ ಯಲಹಂಕ ಉಪನಗರ ನಾಲ್ಕನೇ ಹಂತದಲ್ಲಿ ಮಂಗಳವಾರ ನಡೆದಿದೆ.<br /> <br /> ರತ್ನಾವತಿ(70) ಸರ ಕಳೆದುಕೊಂಡ ವೃದ್ಧೆ. ಇವರು ಬೆಳಗ್ಗೆ 11 ಗಂಟೆ ಹೊತ್ತಿನಲ್ಲಿ ಗಣೇಶ ದೇವಸ್ಥಾನದ ಬಳಿಯಿರುವ ತಮ್ಮ ಮನೆಯ ಕಾಂ ಪೌಂಡ್ನ ಒಳಗೆ ಕುಳಿತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ಬೈಕ್ನಲ್ಲಿ ಬಂದಿದ್ದಾರೆ.<br /> <br /> ಒಬ್ಬ ಹೆಲ್ಮೆಟ್ ಧರಿಸಿ ಬೈಕ್ನ ಮೇಲೆ ಕುಳಿತಿದ್ದ. ಮತ್ತೊಬ್ಬ ಚೀಟಿ ಹಿಡಿದುಕೊಂಡು ವಿಳಾಸಕೇಳುವ ರೀತಿಯಲ್ಲಿ ಕಾಂಪೌಂಡ್ನ ಒಳಗೆ ಬಂದು ಈಕೆಯ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡಿದ್ದಾನೆ.<br /> <br /> ಈ ವೇಳೆ ಆಕೆ ಕೂಗಿಕೊಂಡಿದ್ದಾಳೆ. ಮನೆಯವರು ಆಚೆ ಬರುವಷ್ಟರಲ್ಲಿ ಇಬ್ಬರೂ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಯಲಹಂಕ ಉಪ ನಗರ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>