<p>ಮೈಸೂರು: ರಂಗುರಂಗಿನ ಬಟ್ಟೆಗಳನ್ನು ಧರಿಸಿದ್ದ ಮಕ್ಕಳ ಮುಖದಲ್ಲಿ ಸಂಭ್ರಮದ ರಂಗು. ನೆಚ್ಚಿನ ಕ್ರಿಕೆಟ್ ತಾರೆ ಕಣ್ಮುಂದೆ ಬಂದು ನಿಂತಾಗ ಅವರ ಹಸ್ತಾಕ್ಷರ ತೆಗೆದುಕೊಳ್ಳುವ ಸಡಗರದಲ್ಲಿ ತಮ್ಮನ್ನು ತಾವೇ ಮರೆತಿದ್ದರು. <br /> <br /> ಭಾರತ ಕ್ರಿಕೆಟ್ ತಂಡದ ಮಾಜಿ ಅನಿಲ್ ಕುಂಬ್ಳೆ ಶುಕ್ರವಾರ ಸಂಜೆ ಜಯಲಕ್ಷ್ಮೀಪುರದ ಚಿನ್ಮಯ ವಿದ್ಯಾಲಯದ ವಾರ್ಷಿಕೋತ್ಸವ ಉದ್ಘಾಟಿಸಲು ಬಂದಾಗ ಇಲ್ಲಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂತಸಕ್ಕೆ ಪಾರವೇ ಇರಲಿಲ್ಲ. `ಜಂಬೋ~ ಕಾರ್ಯಕ್ರಮ ಮುಗಿಸಿ ಮರಳಿ ಹೋಗುವವರೆಗೂ ಅವರ ಆಟೋಗ್ರಾಫ್ಗಾಗಿ ವಿದ್ಯಾರ್ಥಿಗಳು ಮುಗಿಬಿದ್ದರು. <br /> <br /> ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಕುಂಬ್ಳೆ, `ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಬರುವ ಶಾಲೆಯ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಹತ್ತು ಸಾವಿರ ರೂಪಾಯಿ ಮತ್ತು ಪಿಯುಸಿ ದ್ವಿತೀಯ ವರ್ಷದ ರಸಾಯನಶಾಸ್ತ್ರದಲ್ಲಿ ಮೊದಲಿಗರಾಗುವ ವಿದ್ಯಾರ್ಥಿಗೆ ಹತ್ತುಸಾವಿರ ರೂಪಾಯಿ ಬಹುಮಾನವನ್ನು ನೀಡುತ್ತೇನೆ~ ಎಂದು ಘೋಷಿಸಿದರು. <br /> <br /> `ನಾನು ಕ್ರೀಡಾಪಟುವಾಗಿಯೂ ನಗದು ಪ್ರಶಸ್ತಿಯನ್ನು ಶೈಕ್ಷಣಿಕ ವಿಭಾಗಕ್ಕೆ ಕೊಡುತ್ತಿರುವುದು ಏಕೆಂದರೆ, ಆಟದೊಂದಿಗೆ ಪಾಠದಲ್ಲಿಯೂ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಆಟವು ಸೋಲು ಮತ್ತು ಗೆಲುವನ್ನು ನಿಭಾಯಿಸುವ ಮನೋಭಾವ ಬೆಳೆಸಿದರೆ. ಓದು ಭವಿಷ್ಯ ರೂಪಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಆಟ-ಪಾಠ ಎರಡರಲ್ಲೂ ಸಮಾನ ಆಸಕ್ತಿ ತೋರಬೇಕು. ನಾನು ಕೂಡ ಚಿನ್ಮಯ ಕುಟುಂಬದ ಸದಸ್ಯನಾಗಿರುವುದು ಸಂತಸದ ವಿಷಯ~ ಎಂದು ಹೇಳಿದರು. <br /> <br /> `ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಕಾರ್ಯ ನಿರ್ವಹಿಸುವ ಶಿಕ್ಷಕರು ಕ್ರೀಡೆಗಳಲ್ಲಿ ಆಸಕ್ತಿ ತೋರಬೇಕು. ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು ಮತ್ತು ಸಮರ್ಪಣಾ ಭಾವವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕಾರ್ಯವು ಯಶಸ್ವಿಯಾಗಬೇಕಾದರೆ ಸಂಪೂರ್ಣ ಸಮರ್ಪಣಾ ಭಾವ ಅಗತ್ಯ~ ಎಂದು ಸಲಹೆ ನೀಡಿದರು. <br /> <br /> ಅಧ್ಯಕ್ಷತೆ ವಹಿಸಿದ್ದ ಚಿನ್ಮಯ ವಿದ್ಯಾಲಯ ಆಡಳಿತ ಮಂಡಳಿ ಚೇರಮನ್ ಎಚ್.ಎನ್. ರಾಮತೀರ್ಥ, `ಮಕ್ಕಳಿಗೆ ಕುಟುಂಬದ ಸದಸ್ಯರೇ ಆದರ್ಶವಾಗಬೇಕು. ಅವರು ಒಳ್ಳೆಯ ಮಾದರಿಯಾದಾಗ ಮಾತ್ರ ಮಕ್ಕಳು ಉತ್ತಮ ದಾರಿ ಹಿಡಿಯುತ್ತಾರೆ. ಅನಿಲ ಕುಂಬ್ಳೆಯವರು ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸಿದ ವ್ಯಕ್ತಿ. <br /> <br /> ಸಮಯಪರಿಪಾಲನೆ, ಸಮರ್ಪಣಾ ಭಾವಗಳಿಂದ ಎಂಜಿನಿಯರಿಂಗ್ನಲ್ಲಿ ರ್ಯಾಂಕ್ ಪಡೆಯುದರ ಜೊತೆಗೆ ವಿಶ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಬೆಳಗಿದ್ದಾರೆ. ಅವರು ಹುಟ್ಟಿನಿಂದಲೇ ನಾಯಕತ್ವ ಗುಣ ಇದ್ದವರು. ಅಂತಹವರ ಬದುಕು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು~ ಎಂದು ಹೇಳಿದರು. <br /> <br /> ಚಿನ್ಮಯ ವಿದ್ಯಾಲಯದ ಅಧ್ಯಕ್ಷೆ ರಮಾದೇವಿ ರಾಮತೀರ್ಥ, ಆಡಳಿತಾಧಿಕಾರಿ ಎಂಎಸ್ಎಸ್ ಪ್ರಸಾದ್, ಪ್ರಭಾರ ಪ್ರಾಚಾರ್ಯರಾದ ಕುಶಲ, ಮುಖ್ಯೋಪಾಧ್ಯಾಯಿನಿ ಕೆ. ಮಂಗಳ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ರಂಗುರಂಗಿನ ಬಟ್ಟೆಗಳನ್ನು ಧರಿಸಿದ್ದ ಮಕ್ಕಳ ಮುಖದಲ್ಲಿ ಸಂಭ್ರಮದ ರಂಗು. ನೆಚ್ಚಿನ ಕ್ರಿಕೆಟ್ ತಾರೆ ಕಣ್ಮುಂದೆ ಬಂದು ನಿಂತಾಗ ಅವರ ಹಸ್ತಾಕ್ಷರ ತೆಗೆದುಕೊಳ್ಳುವ ಸಡಗರದಲ್ಲಿ ತಮ್ಮನ್ನು ತಾವೇ ಮರೆತಿದ್ದರು. <br /> <br /> ಭಾರತ ಕ್ರಿಕೆಟ್ ತಂಡದ ಮಾಜಿ ಅನಿಲ್ ಕುಂಬ್ಳೆ ಶುಕ್ರವಾರ ಸಂಜೆ ಜಯಲಕ್ಷ್ಮೀಪುರದ ಚಿನ್ಮಯ ವಿದ್ಯಾಲಯದ ವಾರ್ಷಿಕೋತ್ಸವ ಉದ್ಘಾಟಿಸಲು ಬಂದಾಗ ಇಲ್ಲಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂತಸಕ್ಕೆ ಪಾರವೇ ಇರಲಿಲ್ಲ. `ಜಂಬೋ~ ಕಾರ್ಯಕ್ರಮ ಮುಗಿಸಿ ಮರಳಿ ಹೋಗುವವರೆಗೂ ಅವರ ಆಟೋಗ್ರಾಫ್ಗಾಗಿ ವಿದ್ಯಾರ್ಥಿಗಳು ಮುಗಿಬಿದ್ದರು. <br /> <br /> ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಕುಂಬ್ಳೆ, `ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಬರುವ ಶಾಲೆಯ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಹತ್ತು ಸಾವಿರ ರೂಪಾಯಿ ಮತ್ತು ಪಿಯುಸಿ ದ್ವಿತೀಯ ವರ್ಷದ ರಸಾಯನಶಾಸ್ತ್ರದಲ್ಲಿ ಮೊದಲಿಗರಾಗುವ ವಿದ್ಯಾರ್ಥಿಗೆ ಹತ್ತುಸಾವಿರ ರೂಪಾಯಿ ಬಹುಮಾನವನ್ನು ನೀಡುತ್ತೇನೆ~ ಎಂದು ಘೋಷಿಸಿದರು. <br /> <br /> `ನಾನು ಕ್ರೀಡಾಪಟುವಾಗಿಯೂ ನಗದು ಪ್ರಶಸ್ತಿಯನ್ನು ಶೈಕ್ಷಣಿಕ ವಿಭಾಗಕ್ಕೆ ಕೊಡುತ್ತಿರುವುದು ಏಕೆಂದರೆ, ಆಟದೊಂದಿಗೆ ಪಾಠದಲ್ಲಿಯೂ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಆಟವು ಸೋಲು ಮತ್ತು ಗೆಲುವನ್ನು ನಿಭಾಯಿಸುವ ಮನೋಭಾವ ಬೆಳೆಸಿದರೆ. ಓದು ಭವಿಷ್ಯ ರೂಪಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಆಟ-ಪಾಠ ಎರಡರಲ್ಲೂ ಸಮಾನ ಆಸಕ್ತಿ ತೋರಬೇಕು. ನಾನು ಕೂಡ ಚಿನ್ಮಯ ಕುಟುಂಬದ ಸದಸ್ಯನಾಗಿರುವುದು ಸಂತಸದ ವಿಷಯ~ ಎಂದು ಹೇಳಿದರು. <br /> <br /> `ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಕಾರ್ಯ ನಿರ್ವಹಿಸುವ ಶಿಕ್ಷಕರು ಕ್ರೀಡೆಗಳಲ್ಲಿ ಆಸಕ್ತಿ ತೋರಬೇಕು. ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು ಮತ್ತು ಸಮರ್ಪಣಾ ಭಾವವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕಾರ್ಯವು ಯಶಸ್ವಿಯಾಗಬೇಕಾದರೆ ಸಂಪೂರ್ಣ ಸಮರ್ಪಣಾ ಭಾವ ಅಗತ್ಯ~ ಎಂದು ಸಲಹೆ ನೀಡಿದರು. <br /> <br /> ಅಧ್ಯಕ್ಷತೆ ವಹಿಸಿದ್ದ ಚಿನ್ಮಯ ವಿದ್ಯಾಲಯ ಆಡಳಿತ ಮಂಡಳಿ ಚೇರಮನ್ ಎಚ್.ಎನ್. ರಾಮತೀರ್ಥ, `ಮಕ್ಕಳಿಗೆ ಕುಟುಂಬದ ಸದಸ್ಯರೇ ಆದರ್ಶವಾಗಬೇಕು. ಅವರು ಒಳ್ಳೆಯ ಮಾದರಿಯಾದಾಗ ಮಾತ್ರ ಮಕ್ಕಳು ಉತ್ತಮ ದಾರಿ ಹಿಡಿಯುತ್ತಾರೆ. ಅನಿಲ ಕುಂಬ್ಳೆಯವರು ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸಿದ ವ್ಯಕ್ತಿ. <br /> <br /> ಸಮಯಪರಿಪಾಲನೆ, ಸಮರ್ಪಣಾ ಭಾವಗಳಿಂದ ಎಂಜಿನಿಯರಿಂಗ್ನಲ್ಲಿ ರ್ಯಾಂಕ್ ಪಡೆಯುದರ ಜೊತೆಗೆ ವಿಶ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಬೆಳಗಿದ್ದಾರೆ. ಅವರು ಹುಟ್ಟಿನಿಂದಲೇ ನಾಯಕತ್ವ ಗುಣ ಇದ್ದವರು. ಅಂತಹವರ ಬದುಕು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು~ ಎಂದು ಹೇಳಿದರು. <br /> <br /> ಚಿನ್ಮಯ ವಿದ್ಯಾಲಯದ ಅಧ್ಯಕ್ಷೆ ರಮಾದೇವಿ ರಾಮತೀರ್ಥ, ಆಡಳಿತಾಧಿಕಾರಿ ಎಂಎಸ್ಎಸ್ ಪ್ರಸಾದ್, ಪ್ರಭಾರ ಪ್ರಾಚಾರ್ಯರಾದ ಕುಶಲ, ಮುಖ್ಯೋಪಾಧ್ಯಾಯಿನಿ ಕೆ. ಮಂಗಳ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>