<p><strong>ಚಿಕ್ಕಮಗಳೂರು: </strong>ಬೆಲೆ ಏರಿಕೆ, ಬರ ಪರಿಸ್ಥಿತಿ, ನಿರುದ್ಯೋಗ ಸಮಸ್ಯೆ ನಡುವೆಯೂ ಈಗ ಚುನಾವಣೆ ಹೊರೆಯನ್ನು ಜನರು ಹೊರಬೇಕಾಗಿದೆ. ಜನವಿರೋಧಿ ಚುನಾವಣೆಯನ್ನು ಜನರು ತಿರಸ್ಕರಿಸಬೇಕು ಎಂದು ಸಿಪಿಐಎಂಎಲ್ ಜಿಲ್ಲಾ ಘಟಕ ಕಾರ್ಯದರ್ಶಿ ಐ.ಎಂ.ಪೂರ್ಣೇಶ್ ಮನವಿ ಮಾಡಿದ್ದಾರೆ.<br /> <br /> ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಾಗಿನಿಂದ ಇದುವರೆಗೆ ಅಧಿಕಾರದ ಆಸೆಗಾಗಿ ದಿನಕ್ಕೊಬ್ಬ ನಾಯಕರನ್ನು ಆರಿಸುತ್ತಿದ್ದಾರೆ. ಗೊಂದಲದಿಂದಲೇ ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರ ಕಳೆದ ಮೂರೂವರೆ ವರ್ಷದಲ್ಲಿ ಅಭಿವೃದ್ಧಿಗೆ ಗಮನ ಹರಿಸದೆ ಗೊಂದಲದಲ್ಲಿಯೇ ದಿನದೂಡುತ್ತಿದೆ ಎಂದು ಟೀಕಿಸಿದ್ದಾರೆ.<br /> <br /> ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ ಜನ ಬಯಸಿದ ಚುನಾವಣೆಯಲ್ಲ. ಸರ್ಕಾರ ಗೊಂದಲಗಳಿಗೆ ಪರಿಹಾರ ಕಾಣದೆ ಹುಟ್ಟಿಕೊಂಡ ಚುನಾವಣೆ. ಇದುವರೆಗೆ ಆಯ್ಕೆಯಾದ ಸಂಸದರು ಜಿಲ್ಲೆಗೆ ಮಾಡಿದ ಕೆಲಸಗಳೇನು? ಬಾಲಸುಬ್ರಹ್ಮಣ್ಯ ವರದಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ನಿಲುವೇನು? ಎಂಬುದನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.<br /> <br /> ಜಾತ್ಯತೀತ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿರುವ ಎಲ್ಲ ಪಕ್ಷಗಳಲ್ಲೂ ಜಾತ್ಯತೀತ ಪದ ಅರ್ಥ ಕಳೆದುಕೊಂಡಿದೆ. ಈ ಪಕ್ಷಗಳ ಬಾವುಟ ಬೇರೆಯಾದರು ನೀತಿಗಳು ಮಾತ್ರ ಒಂದೇ ಆಗಿವೆ. ರೈತರು, ಕಾರ್ಮಿಕರು, ದಲಿತ, ಆದಿವಾಸಿಗಳ ಪರಿಸ್ಥಿತಿ ಹದಗೆಟ್ಟಿದೆ. <br /> <br /> ಜೀವನ ನಿರ್ವಹಣೆ ಕಷ್ಟ ಸಾಧ್ಯ. ಕೂಲಿ ಅರಸಿ ಜನರು ನಗರದತ್ತ ಮುಖಮಾಡುತ್ತಿದ್ದಾರೆ. ಭೀಕರ ಬರಪರಿಸ್ಥಿತಿಯಲ್ಲೂ ಜನರ ಮೇಲೆ ಚುನಾವಣಾ ಹೊರೆ ಹೇರುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.<br /> <br /> ಈ ಉಪಚುನಾವಣೆಗೆ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಚುನಾವಣೆ ಕುರಿತು ಪಕ್ಷದ ರಾಜಕೀಯವನ್ನು ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಕೊಡಲಿದ್ದೇವೆ. ಚುನಾವಣಾ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಜನರನ್ನು ಹೇಗೆ ಸುಲಿಗೆ ಮಾಡುತ್ತವೆ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಚುನಾವಣೆ ಬಳಸಿಕೊಕೊಳ್ಳಲಾಗುವುದು ಎಂದಿದ್ದಾರೆ. <br /> <br /> ಜನತೆಗೆ ಆರ್ಥಿಕ ಹೊರೆ ಹೊರಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು ಎಂದು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಬೆಲೆ ಏರಿಕೆ, ಬರ ಪರಿಸ್ಥಿತಿ, ನಿರುದ್ಯೋಗ ಸಮಸ್ಯೆ ನಡುವೆಯೂ ಈಗ ಚುನಾವಣೆ ಹೊರೆಯನ್ನು ಜನರು ಹೊರಬೇಕಾಗಿದೆ. ಜನವಿರೋಧಿ ಚುನಾವಣೆಯನ್ನು ಜನರು ತಿರಸ್ಕರಿಸಬೇಕು ಎಂದು ಸಿಪಿಐಎಂಎಲ್ ಜಿಲ್ಲಾ ಘಟಕ ಕಾರ್ಯದರ್ಶಿ ಐ.ಎಂ.ಪೂರ್ಣೇಶ್ ಮನವಿ ಮಾಡಿದ್ದಾರೆ.<br /> <br /> ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಾಗಿನಿಂದ ಇದುವರೆಗೆ ಅಧಿಕಾರದ ಆಸೆಗಾಗಿ ದಿನಕ್ಕೊಬ್ಬ ನಾಯಕರನ್ನು ಆರಿಸುತ್ತಿದ್ದಾರೆ. ಗೊಂದಲದಿಂದಲೇ ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರ ಕಳೆದ ಮೂರೂವರೆ ವರ್ಷದಲ್ಲಿ ಅಭಿವೃದ್ಧಿಗೆ ಗಮನ ಹರಿಸದೆ ಗೊಂದಲದಲ್ಲಿಯೇ ದಿನದೂಡುತ್ತಿದೆ ಎಂದು ಟೀಕಿಸಿದ್ದಾರೆ.<br /> <br /> ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ ಜನ ಬಯಸಿದ ಚುನಾವಣೆಯಲ್ಲ. ಸರ್ಕಾರ ಗೊಂದಲಗಳಿಗೆ ಪರಿಹಾರ ಕಾಣದೆ ಹುಟ್ಟಿಕೊಂಡ ಚುನಾವಣೆ. ಇದುವರೆಗೆ ಆಯ್ಕೆಯಾದ ಸಂಸದರು ಜಿಲ್ಲೆಗೆ ಮಾಡಿದ ಕೆಲಸಗಳೇನು? ಬಾಲಸುಬ್ರಹ್ಮಣ್ಯ ವರದಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ನಿಲುವೇನು? ಎಂಬುದನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.<br /> <br /> ಜಾತ್ಯತೀತ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿರುವ ಎಲ್ಲ ಪಕ್ಷಗಳಲ್ಲೂ ಜಾತ್ಯತೀತ ಪದ ಅರ್ಥ ಕಳೆದುಕೊಂಡಿದೆ. ಈ ಪಕ್ಷಗಳ ಬಾವುಟ ಬೇರೆಯಾದರು ನೀತಿಗಳು ಮಾತ್ರ ಒಂದೇ ಆಗಿವೆ. ರೈತರು, ಕಾರ್ಮಿಕರು, ದಲಿತ, ಆದಿವಾಸಿಗಳ ಪರಿಸ್ಥಿತಿ ಹದಗೆಟ್ಟಿದೆ. <br /> <br /> ಜೀವನ ನಿರ್ವಹಣೆ ಕಷ್ಟ ಸಾಧ್ಯ. ಕೂಲಿ ಅರಸಿ ಜನರು ನಗರದತ್ತ ಮುಖಮಾಡುತ್ತಿದ್ದಾರೆ. ಭೀಕರ ಬರಪರಿಸ್ಥಿತಿಯಲ್ಲೂ ಜನರ ಮೇಲೆ ಚುನಾವಣಾ ಹೊರೆ ಹೇರುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.<br /> <br /> ಈ ಉಪಚುನಾವಣೆಗೆ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಚುನಾವಣೆ ಕುರಿತು ಪಕ್ಷದ ರಾಜಕೀಯವನ್ನು ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಕೊಡಲಿದ್ದೇವೆ. ಚುನಾವಣಾ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಜನರನ್ನು ಹೇಗೆ ಸುಲಿಗೆ ಮಾಡುತ್ತವೆ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಚುನಾವಣೆ ಬಳಸಿಕೊಕೊಳ್ಳಲಾಗುವುದು ಎಂದಿದ್ದಾರೆ. <br /> <br /> ಜನತೆಗೆ ಆರ್ಥಿಕ ಹೊರೆ ಹೊರಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು ಎಂದು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>