<p>ಕನ್ನಡದಲ್ಲಿ ಸ್ಟಾರ್ ನಾಯಕರ ಕಾಲ್ಷೀಟ್ ಕೊರತೆ ಇರುವುದನ್ನು ಹಿಂದಿ ನಟ ಅರ್ಬಾಜ್ ಖಾನ್ ಎದುರೇ ಹೇಳಿಕೊಂಡ ದಿನೇಶ್ ಗಾಂಧಿ `ಛತ್ರಪತಿ~ ಚಿತ್ರದ ಮೂಲಕ ಕೆಲವರಿಗೆ ಪಾಠ ಕಲಿಸಲು ಹೊರಟಂತಿದೆ. ಅವರ ಮಾತಿನ ಧಾಟಿ ಅದನ್ನೇ ಹೇಳುವಂತಿತ್ತು. <br /> <br /> ತಾವೇ ನಿರ್ಮಿಸಿ, ನಿರ್ದೇಶಿಸಿರುತ್ತಿರುವ `ಛತ್ರಪತಿ~ ತೆಲುಗಿನ ರೀಮೇಕ್. 17 ಲಕ್ಷ ರೂಪಾಯಿ ತೆತ್ತು ರೀಮೇಕ್ ಹಕ್ಕು ಪಡೆದುಬಂದ ಅವರು ಸುದೀಪ್ ಕಾಲ್ಷೀಟ್ಗೆ ಕೈಚಾಚಿದರು. ಸದ್ಯಕ್ಕೆ ಸುದೀಪ್ ಬಿಡುವಾಗಿಲ್ಲ. <br /> <br /> ಆಮೇಲೆ ಅವರ ತಲೆಯಲ್ಲಿ ಕೆಲವು ನಟರ ಹೆಸರುಗಳು ಸುಳಿದವಾದರೂ ಅವರದ್ದೂ ಕಾಲ್ಷೀಟ್ ಸಮಸ್ಯೆ ಆದರೇನು ಮಾಡುವುದು ಎಂದು ಲೆಕ್ಕಿಸಿ, `ಎಕೆ-56~ ಚಿತ್ರದಲ್ಲಿ ಅಭಿನಯಿಸಿರುವ ಸಿದ್ಧಾಂತ್ ಅವರನ್ನು ನಾಯಕನನ್ನಾಗಿ ಆರಿಸಿಕೊಂಡರು. <br /> <br /> ಕೇರಳದ ಕೊಣ್ಣೂರಿನಲ್ಲಿ ಒಂದು ಹಂತದ ಚಿತ್ರೀಕರಣ ಪೂರೈಸಿರುವ ದಿನೇಶ್ ಗಾಂಧಿ ಮುಂದಿನ ಹಂತದಲ್ಲಿ ವೈಜಾಕ್ ಕಡೆಗೆ ತಂಡದೊಂದಿಗೆ ಪಯಣಿಸಲಿದ್ದಾರೆ.<br /> <br /> ಮೂಲ ಚಿತ್ರದ ನಿರ್ದೇಶಕ ರಾಜಮೌಳಿ ಯಾವ ಲೊಕೇಷನ್ಗಳಲ್ಲಿ ಚಿತ್ರೀಕರಿಸಿದ್ದಾರೋ ದಿನೇಶ್ ಗಾಂಧಿ ಕೂಡ ಅಲ್ಲೇ ಅದೇ ರೀತಿ ಚಿತ್ರೀಕರಣ ಮಾಡುವ ರೀಮೇಕ್ ನಿಷ್ಠೆಗೆ ಬದ್ಧರಾಗಿದ್ದಾರೆ. <br /> <br /> ಅರ್ಬಾಜ್ ಖಾನ್ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಅವರು ಖಳನಾಯಕನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. <br /> <br /> ನಾಯಕನ ಇಮೇಜ್ಗೆ ತಾವು ಮೊದಲಿನಿಂದಲೂ ಅಂಟಿಕೊಂಡಿಲ್ಲ ಎಂದ ಅರ್ಬಾಜ್, ಒಳ್ಳೆಯ ಪಾತ್ರಗಳು ಸಿಕ್ಕರೆ ಕನ್ನಡದಲ್ಲಿ ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸಲು ಸಿದ್ಧವೆಂದು ಇನ್ನಷ್ಟು ನಿರ್ಮಾಪಕರಿಗೆ ತಮ್ಮ ಕಾಲ್ಷೀಟ್ ಲಭ್ಯತೆಯ ಅರಿವು ಮೂಡಿಸುವಂತೆ ಮಾತನಾಡಿದರು. <br /> <br /> ತೆಲುಗಿನ `ಛತ್ರಪತಿ~ಯಲ್ಲಿ ಪ್ರಭಾಸ್ ನಿರ್ವಹಿಸಿದ್ದ ಪಾತ್ರದ ಸವಾಲನ್ನು ಸ್ವೀಕರಿಸಿರುವುದಾಗಿ ಹೇಳಿದ ಸಿದ್ಧಾಂತ್, `ಎಕೆ-56~ ಬಿಡುಗಡೆಗೆ ಚಾತಕಪಕ್ಷಿಯಾಗಿದ್ದಾರೆ. <br /> <br /> ಅನುಷ್ಕಾ ಶೆಟ್ಟಿ, ಇಲಿಯಾನಾ, ತ್ರಿಶಾ ಈ ಪೈಕಿ ಯಾರಾದರನ್ನೂ ಚಿತ್ರಕ್ಕೆ ನಾಯಕಿಯಾಗಿ ಗೊತ್ತುಮಾಡಬೇಕೆಂದು ದಿನೇಶ್ ಗಾಂಧಿ ಯತ್ನಿಸುತ್ತಿದ್ದಾರೆ.<br /> <br /> ಚಿತ್ರದ ಬಜೆಟ್ ಒಂಬತ್ತು ಕೋಟಿ ಎಂದು ಅವರು ಮುಚ್ಚುಮರೆಯಿಲ್ಲದೆ ಹೇಳಿಕೊಂಡರು. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆದಿ ಲೋಕೇಶ್ ಕೂಡ ಅನುಭವ ಹಂಚಿಕೊಂಡರು. <br /> <br /> ಕೆ.ಸಿ.ಎನ್.ಚಂದ್ರಶೇಖರ್, ಚಿನ್ನೇಗೌಡ, ಎಸ್.ಎ.ಗೋವಿಂದರಾಜು, ಬಿ.ಎನ್.ಗಂಗಾಧರ್ ಮೊದಲಾದ ನಿರ್ಮಾಪಕರು ಹಾಗೂ ನಿರ್ದೇಶಕ ಇಂದ್ರಜಿತ್ ಅತಿಥಿಗಳ ಸಾಲಿನಲ್ಲಿದ್ದರು. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಕೂಡ ಹಾಜರಿದ್ದರು. <br /> <br /> ನಟಿ ಭಾನುಪ್ರಿಯಾ ಅವರನ್ನು ಒಳಗೊಂಡ ಹಾಡು ಸೇರಿದಂತೆ 25 ದಿನಗಳ ಚಿತ್ರೀಕರಣದ ಕೆಲವು ತುಣುಕುಗಳನ್ನು ದಿನೇಶ್ ಗಾಂಧಿ ತೋರಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡದಲ್ಲಿ ಸ್ಟಾರ್ ನಾಯಕರ ಕಾಲ್ಷೀಟ್ ಕೊರತೆ ಇರುವುದನ್ನು ಹಿಂದಿ ನಟ ಅರ್ಬಾಜ್ ಖಾನ್ ಎದುರೇ ಹೇಳಿಕೊಂಡ ದಿನೇಶ್ ಗಾಂಧಿ `ಛತ್ರಪತಿ~ ಚಿತ್ರದ ಮೂಲಕ ಕೆಲವರಿಗೆ ಪಾಠ ಕಲಿಸಲು ಹೊರಟಂತಿದೆ. ಅವರ ಮಾತಿನ ಧಾಟಿ ಅದನ್ನೇ ಹೇಳುವಂತಿತ್ತು. <br /> <br /> ತಾವೇ ನಿರ್ಮಿಸಿ, ನಿರ್ದೇಶಿಸಿರುತ್ತಿರುವ `ಛತ್ರಪತಿ~ ತೆಲುಗಿನ ರೀಮೇಕ್. 17 ಲಕ್ಷ ರೂಪಾಯಿ ತೆತ್ತು ರೀಮೇಕ್ ಹಕ್ಕು ಪಡೆದುಬಂದ ಅವರು ಸುದೀಪ್ ಕಾಲ್ಷೀಟ್ಗೆ ಕೈಚಾಚಿದರು. ಸದ್ಯಕ್ಕೆ ಸುದೀಪ್ ಬಿಡುವಾಗಿಲ್ಲ. <br /> <br /> ಆಮೇಲೆ ಅವರ ತಲೆಯಲ್ಲಿ ಕೆಲವು ನಟರ ಹೆಸರುಗಳು ಸುಳಿದವಾದರೂ ಅವರದ್ದೂ ಕಾಲ್ಷೀಟ್ ಸಮಸ್ಯೆ ಆದರೇನು ಮಾಡುವುದು ಎಂದು ಲೆಕ್ಕಿಸಿ, `ಎಕೆ-56~ ಚಿತ್ರದಲ್ಲಿ ಅಭಿನಯಿಸಿರುವ ಸಿದ್ಧಾಂತ್ ಅವರನ್ನು ನಾಯಕನನ್ನಾಗಿ ಆರಿಸಿಕೊಂಡರು. <br /> <br /> ಕೇರಳದ ಕೊಣ್ಣೂರಿನಲ್ಲಿ ಒಂದು ಹಂತದ ಚಿತ್ರೀಕರಣ ಪೂರೈಸಿರುವ ದಿನೇಶ್ ಗಾಂಧಿ ಮುಂದಿನ ಹಂತದಲ್ಲಿ ವೈಜಾಕ್ ಕಡೆಗೆ ತಂಡದೊಂದಿಗೆ ಪಯಣಿಸಲಿದ್ದಾರೆ.<br /> <br /> ಮೂಲ ಚಿತ್ರದ ನಿರ್ದೇಶಕ ರಾಜಮೌಳಿ ಯಾವ ಲೊಕೇಷನ್ಗಳಲ್ಲಿ ಚಿತ್ರೀಕರಿಸಿದ್ದಾರೋ ದಿನೇಶ್ ಗಾಂಧಿ ಕೂಡ ಅಲ್ಲೇ ಅದೇ ರೀತಿ ಚಿತ್ರೀಕರಣ ಮಾಡುವ ರೀಮೇಕ್ ನಿಷ್ಠೆಗೆ ಬದ್ಧರಾಗಿದ್ದಾರೆ. <br /> <br /> ಅರ್ಬಾಜ್ ಖಾನ್ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಅವರು ಖಳನಾಯಕನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. <br /> <br /> ನಾಯಕನ ಇಮೇಜ್ಗೆ ತಾವು ಮೊದಲಿನಿಂದಲೂ ಅಂಟಿಕೊಂಡಿಲ್ಲ ಎಂದ ಅರ್ಬಾಜ್, ಒಳ್ಳೆಯ ಪಾತ್ರಗಳು ಸಿಕ್ಕರೆ ಕನ್ನಡದಲ್ಲಿ ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸಲು ಸಿದ್ಧವೆಂದು ಇನ್ನಷ್ಟು ನಿರ್ಮಾಪಕರಿಗೆ ತಮ್ಮ ಕಾಲ್ಷೀಟ್ ಲಭ್ಯತೆಯ ಅರಿವು ಮೂಡಿಸುವಂತೆ ಮಾತನಾಡಿದರು. <br /> <br /> ತೆಲುಗಿನ `ಛತ್ರಪತಿ~ಯಲ್ಲಿ ಪ್ರಭಾಸ್ ನಿರ್ವಹಿಸಿದ್ದ ಪಾತ್ರದ ಸವಾಲನ್ನು ಸ್ವೀಕರಿಸಿರುವುದಾಗಿ ಹೇಳಿದ ಸಿದ್ಧಾಂತ್, `ಎಕೆ-56~ ಬಿಡುಗಡೆಗೆ ಚಾತಕಪಕ್ಷಿಯಾಗಿದ್ದಾರೆ. <br /> <br /> ಅನುಷ್ಕಾ ಶೆಟ್ಟಿ, ಇಲಿಯಾನಾ, ತ್ರಿಶಾ ಈ ಪೈಕಿ ಯಾರಾದರನ್ನೂ ಚಿತ್ರಕ್ಕೆ ನಾಯಕಿಯಾಗಿ ಗೊತ್ತುಮಾಡಬೇಕೆಂದು ದಿನೇಶ್ ಗಾಂಧಿ ಯತ್ನಿಸುತ್ತಿದ್ದಾರೆ.<br /> <br /> ಚಿತ್ರದ ಬಜೆಟ್ ಒಂಬತ್ತು ಕೋಟಿ ಎಂದು ಅವರು ಮುಚ್ಚುಮರೆಯಿಲ್ಲದೆ ಹೇಳಿಕೊಂಡರು. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆದಿ ಲೋಕೇಶ್ ಕೂಡ ಅನುಭವ ಹಂಚಿಕೊಂಡರು. <br /> <br /> ಕೆ.ಸಿ.ಎನ್.ಚಂದ್ರಶೇಖರ್, ಚಿನ್ನೇಗೌಡ, ಎಸ್.ಎ.ಗೋವಿಂದರಾಜು, ಬಿ.ಎನ್.ಗಂಗಾಧರ್ ಮೊದಲಾದ ನಿರ್ಮಾಪಕರು ಹಾಗೂ ನಿರ್ದೇಶಕ ಇಂದ್ರಜಿತ್ ಅತಿಥಿಗಳ ಸಾಲಿನಲ್ಲಿದ್ದರು. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಕೂಡ ಹಾಜರಿದ್ದರು. <br /> <br /> ನಟಿ ಭಾನುಪ್ರಿಯಾ ಅವರನ್ನು ಒಳಗೊಂಡ ಹಾಡು ಸೇರಿದಂತೆ 25 ದಿನಗಳ ಚಿತ್ರೀಕರಣದ ಕೆಲವು ತುಣುಕುಗಳನ್ನು ದಿನೇಶ್ ಗಾಂಧಿ ತೋರಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>