<p>ಚಿಕ್ಕೋಡಿ:ಅಂತರರಾಷ್ಟ್ರೀಯ ಖ್ಯಾತಿಯ ಕುಸ್ತಿಪಟುಗಳ ಜಂಗೀ ಕುಸ್ತಿ ಪಂದ್ಯಾವಳಿಗೆ ಯಕ್ಸಂಬಾದಲ್ಲಿ ಅಖಾಡಾ ಸಜ್ಜುಗೊಂಡಿದ್ದು, ಈ ಕುಸ್ತಿ ಶುಕ್ರವಾರ ಆರಂಭವಾಗಲಿದೆ.<br /> <br /> ತಾಲ್ಲೂಕಿನ ಸುಕ್ಷೇತ್ರ ಯಕ್ಸಂಬಾ ಗ್ರಾಮದ ಬೀರದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶಾಸಕ ಪ್ರಕಾಶ ಹುಕ್ಕೇರಿ ಅವರ ನೇತೃತ್ವದಲ್ಲಿ ಈ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.<br /> <br /> ಜನರ ಕುತೂಹಲ ಕೆರಳಿಸಿರುವ ಕುಸ್ತಿ ಕಾಳಗ ಇಂದು ಮಧ್ಯಾಹ್ನ 3 ಗಂಟೆಗೆ ಮಲಿಕವಾಡ ಬಳಿಯ ಶರ್ಯತ್ತು ಮೈದಾನದಲ್ಲಿ ನಡೆಯಲಿದೆ. <br /> <br /> ಪ್ರಥಮ ಕ್ರಮಾಂಕದ ಮಲ್ಲಯುದ್ಧ ಹರಿಯಾಣಾದ `ಭಾರತ ಕೇಸರಿ~ ಹಿತೇಶಕುಮಾರ ಮತ್ತು ಪಂಜಾಬಿನ `ಭಾರತ ಕೇಸರಿ~ ಕಿಶನ್ಕುಮಾರ ಅವರ ನಡುವೆ ನಡೆಯಲಿದೆ. ದ್ವಿತೀಯ ಕ್ರಮಾಂಕದ ಕುಸ್ತಿ ಪಂಜಾಬಿನ ರುಬಲಜೀತಸಿಂಗ್ ಮತ್ತು ಹರಿಯಾಣಾದ ಸತ್ಯೇಂದ್ರ ಅವರ ಮಧ್ಯೆ ಹಾಗೂ ತೃತೀಯ ಕ್ರಮಾಂಕದಲ್ಲಿ ಮಹಾರಾಷ್ಟ್ರದ ಚಂದ್ರಹಾಸ ಪಾಟೀಲ ಮತ್ತು ಪಂಜಾಬಿನ ಯುದ್ಧವೀರ್ ಅವರ ನಡುವೆ ನಡೆಯಲಿದೆ. <br /> <br /> ಒಟ್ಟು 32 ಜೋಡಿ ಜಟ್ಟಿಗಳು ಸೆಣಸಾಟ ನಡೆಸಲಿದ್ದಾರೆ. ಪ್ರಥಮ ಬಹುಮಾನ ರೂ 3 ಲಕ್ಷ, ದ್ವಿತೀಯ ರೂ 2.50 ಲಕ್ಷ ಹಾಗೂ 3ನೇ ಬಹುಮಾನ ರೂ 2 ಲಕ್ಷ ನಿಗದಿಪಡಿಸಲಾಗಿದೆ.<br /> <br /> `ಹಿಂದ್ಕೇಸರಿ~ಗಳಾದ ಯಕ್ಸಂಬಾದ ಶ್ರೀಪತಿ ಖಂಚನಾಳೆ, ಗಣಪತರಾವ್ ಆಂದಳಕರ, ದೀನಾನಾಥಸಿಂಗ್, ಇಸಾಕ್ ಶಿರಗುಪ್ಪಿ, ಅಪ್ಪಾ ಕರಜಗಿ, ಬಂಡುಅಣ್ಣಾ ಕುಡಚಿ ಮುಂತಾದವರು ಆಗಮಿಸಲಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕೋಡಿ:ಅಂತರರಾಷ್ಟ್ರೀಯ ಖ್ಯಾತಿಯ ಕುಸ್ತಿಪಟುಗಳ ಜಂಗೀ ಕುಸ್ತಿ ಪಂದ್ಯಾವಳಿಗೆ ಯಕ್ಸಂಬಾದಲ್ಲಿ ಅಖಾಡಾ ಸಜ್ಜುಗೊಂಡಿದ್ದು, ಈ ಕುಸ್ತಿ ಶುಕ್ರವಾರ ಆರಂಭವಾಗಲಿದೆ.<br /> <br /> ತಾಲ್ಲೂಕಿನ ಸುಕ್ಷೇತ್ರ ಯಕ್ಸಂಬಾ ಗ್ರಾಮದ ಬೀರದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶಾಸಕ ಪ್ರಕಾಶ ಹುಕ್ಕೇರಿ ಅವರ ನೇತೃತ್ವದಲ್ಲಿ ಈ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.<br /> <br /> ಜನರ ಕುತೂಹಲ ಕೆರಳಿಸಿರುವ ಕುಸ್ತಿ ಕಾಳಗ ಇಂದು ಮಧ್ಯಾಹ್ನ 3 ಗಂಟೆಗೆ ಮಲಿಕವಾಡ ಬಳಿಯ ಶರ್ಯತ್ತು ಮೈದಾನದಲ್ಲಿ ನಡೆಯಲಿದೆ. <br /> <br /> ಪ್ರಥಮ ಕ್ರಮಾಂಕದ ಮಲ್ಲಯುದ್ಧ ಹರಿಯಾಣಾದ `ಭಾರತ ಕೇಸರಿ~ ಹಿತೇಶಕುಮಾರ ಮತ್ತು ಪಂಜಾಬಿನ `ಭಾರತ ಕೇಸರಿ~ ಕಿಶನ್ಕುಮಾರ ಅವರ ನಡುವೆ ನಡೆಯಲಿದೆ. ದ್ವಿತೀಯ ಕ್ರಮಾಂಕದ ಕುಸ್ತಿ ಪಂಜಾಬಿನ ರುಬಲಜೀತಸಿಂಗ್ ಮತ್ತು ಹರಿಯಾಣಾದ ಸತ್ಯೇಂದ್ರ ಅವರ ಮಧ್ಯೆ ಹಾಗೂ ತೃತೀಯ ಕ್ರಮಾಂಕದಲ್ಲಿ ಮಹಾರಾಷ್ಟ್ರದ ಚಂದ್ರಹಾಸ ಪಾಟೀಲ ಮತ್ತು ಪಂಜಾಬಿನ ಯುದ್ಧವೀರ್ ಅವರ ನಡುವೆ ನಡೆಯಲಿದೆ. <br /> <br /> ಒಟ್ಟು 32 ಜೋಡಿ ಜಟ್ಟಿಗಳು ಸೆಣಸಾಟ ನಡೆಸಲಿದ್ದಾರೆ. ಪ್ರಥಮ ಬಹುಮಾನ ರೂ 3 ಲಕ್ಷ, ದ್ವಿತೀಯ ರೂ 2.50 ಲಕ್ಷ ಹಾಗೂ 3ನೇ ಬಹುಮಾನ ರೂ 2 ಲಕ್ಷ ನಿಗದಿಪಡಿಸಲಾಗಿದೆ.<br /> <br /> `ಹಿಂದ್ಕೇಸರಿ~ಗಳಾದ ಯಕ್ಸಂಬಾದ ಶ್ರೀಪತಿ ಖಂಚನಾಳೆ, ಗಣಪತರಾವ್ ಆಂದಳಕರ, ದೀನಾನಾಥಸಿಂಗ್, ಇಸಾಕ್ ಶಿರಗುಪ್ಪಿ, ಅಪ್ಪಾ ಕರಜಗಿ, ಬಂಡುಅಣ್ಣಾ ಕುಡಚಿ ಮುಂತಾದವರು ಆಗಮಿಸಲಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>