<p>ಬೆಂಗಳೂರು: ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್ ಖನ್ನಾ ಅವರು ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. 12 ವರ್ಷಗಳಿಂದ ಅಧ್ಯಕ್ಷರಾಗಿದ್ದ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರು ಆ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದರು.<br /> <br /> ಉದ್ಯಾನ ನಗರಿಯ ಏಟ್ರಿಯಾ ಹೋಟೆಲ್ನಲ್ಲಿ ಶನಿವಾರ ಬೆಳಿಗ್ಗೆ ನಡೆದ ಎಐಟಿಎ ವಾರ್ಷಿಕ ಮಹಾ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಸಿನ್ಹಾ ಹಾಗೂ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಅಧ್ಯಕ್ಷ ಎಸ್.ಎಂ.ಕೃಷ್ಣ ಅವರನ್ನು ಆಜೀವ ಅಧ್ಯಕ್ಷರನ್ನಾಗಿ ಮಾಡಲು ಸಭೆ ತೀರ್ಮಾನ ಕೈಗೊಂಡಿತು.<br /> <br /> ಕೆಎಸ್ಎಲ್ಟಿಎ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುವ ಸಿ.ಎಸ್.ಸುಂದರ್ ರಾಜು ಅವರನ್ನು ಎಐಟಿಎ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಭರತ್ ಓಜಾ ಹಾಗೂ ರಕ್ತಿಮ್ ಸೈಕಿಯಾ ಅವರು ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ನಾಲ್ಕು ವರ್ಷಗಳ ಅವಧಿಗೆ ಆಯ್ಕೆಯಾದರು. <br /> <br /> ಎಐಟಿಎ ನೂತನ ಪದಾಧಿಕಾರಿಗಳು ಇಂತಿದ್ದಾರೆ: ಅಧ್ಯಕ್ಷ: ಅನಿಲ್ ಖನ್ನಾ; ಕಾರ್ಯಕಾರಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ: ಭರತ್ ಓಜಾ; ಜಂಟಿ ಕಾರ್ಯದರ್ಶಿ: ಸಿ.ಎಸ್.ಸುಂದರ್ ರಾಜು; ಖಜಾಂಚಿ: ರಕ್ತಿಮ್ ಸೈಕಿಯಾ. ಉಪಾಧ್ಯಕ್ಷರು: ಚಿಂತನ್ ಪಾರಿಖ್, ದೀಪೇಂದ್ರ ಹೂಡಾ, ದಲ್ಬೀರ್ ಸಿಂಗ್, ಜವಾಹರ್ ಸಿರ್ಕಾರ್, ಕಾರ್ತಿ ಪಿ.ಚಿದಂಬರಂ, ಎಂ.ಎ.ಅಳಗಪ್ಪನ್, ನರೇಂದ್ರ ಕುಮಾರ್, ಪ್ರತ್ಯೂಷ್ ಸಿನ್ಹಾ, ಪ್ರವೀಣ್ ಮಹಾಜನ್ ಹಾಗೂ ರಂಜನ್ ಕಶ್ಯಪ್.<br /> <br /> <strong>ಕಾರ್ಯಕಾರಿ ಸಮಿತಿ</strong>: ಹಿರೋನ್ಮಾಯ್ ಚಟರ್ಜಿ (ಪಶ್ಚಿಮ ಬಂಗಾಳ), ಎ.ಬಿ.ಪ್ರಸಾದ್ (ಬಿಹಾರ), ಅಸಿತ್ ತ್ರಿಪಾಠಿ (ಒರಿಸ್ಸಾ), ಟಿ.ಡಿ.ಫ್ರಾನ್ಸಿಸ್ (ಕೇರಳ), ಸಿ.ಬಿ.ಎನ್.ರೆಡ್ಡಿ (ತಮಿಳುನಾಡು), ಶರದ್ ಕನ್ನಾಮ್ವರ್ (ಮಹಾರಾಷ್ಟ್ರ), ಅನಿಲ್ ಧೂಪರ್ (ಮಧ್ಯಪ್ರದೇಶ), ಸುಮನ್ ಕಪೂರ್ (ಹರಿಯಾಣ), ಸಿ.ಪಿ.ಕಾಕರ್ (ಉತ್ತರಪ್ರದೇಶ), ವಿ.ಕೆ.ಬಾತ್ರಾ (ದೆಹಲಿ) ಹಾಗೂ ಅಶೋಕ್ ಕುಮಾರ್ (ಆಂಧ್ರಪ್ರದೇಶ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್ ಖನ್ನಾ ಅವರು ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. 12 ವರ್ಷಗಳಿಂದ ಅಧ್ಯಕ್ಷರಾಗಿದ್ದ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರು ಆ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದರು.<br /> <br /> ಉದ್ಯಾನ ನಗರಿಯ ಏಟ್ರಿಯಾ ಹೋಟೆಲ್ನಲ್ಲಿ ಶನಿವಾರ ಬೆಳಿಗ್ಗೆ ನಡೆದ ಎಐಟಿಎ ವಾರ್ಷಿಕ ಮಹಾ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಸಿನ್ಹಾ ಹಾಗೂ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಅಧ್ಯಕ್ಷ ಎಸ್.ಎಂ.ಕೃಷ್ಣ ಅವರನ್ನು ಆಜೀವ ಅಧ್ಯಕ್ಷರನ್ನಾಗಿ ಮಾಡಲು ಸಭೆ ತೀರ್ಮಾನ ಕೈಗೊಂಡಿತು.<br /> <br /> ಕೆಎಸ್ಎಲ್ಟಿಎ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುವ ಸಿ.ಎಸ್.ಸುಂದರ್ ರಾಜು ಅವರನ್ನು ಎಐಟಿಎ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಭರತ್ ಓಜಾ ಹಾಗೂ ರಕ್ತಿಮ್ ಸೈಕಿಯಾ ಅವರು ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ನಾಲ್ಕು ವರ್ಷಗಳ ಅವಧಿಗೆ ಆಯ್ಕೆಯಾದರು. <br /> <br /> ಎಐಟಿಎ ನೂತನ ಪದಾಧಿಕಾರಿಗಳು ಇಂತಿದ್ದಾರೆ: ಅಧ್ಯಕ್ಷ: ಅನಿಲ್ ಖನ್ನಾ; ಕಾರ್ಯಕಾರಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ: ಭರತ್ ಓಜಾ; ಜಂಟಿ ಕಾರ್ಯದರ್ಶಿ: ಸಿ.ಎಸ್.ಸುಂದರ್ ರಾಜು; ಖಜಾಂಚಿ: ರಕ್ತಿಮ್ ಸೈಕಿಯಾ. ಉಪಾಧ್ಯಕ್ಷರು: ಚಿಂತನ್ ಪಾರಿಖ್, ದೀಪೇಂದ್ರ ಹೂಡಾ, ದಲ್ಬೀರ್ ಸಿಂಗ್, ಜವಾಹರ್ ಸಿರ್ಕಾರ್, ಕಾರ್ತಿ ಪಿ.ಚಿದಂಬರಂ, ಎಂ.ಎ.ಅಳಗಪ್ಪನ್, ನರೇಂದ್ರ ಕುಮಾರ್, ಪ್ರತ್ಯೂಷ್ ಸಿನ್ಹಾ, ಪ್ರವೀಣ್ ಮಹಾಜನ್ ಹಾಗೂ ರಂಜನ್ ಕಶ್ಯಪ್.<br /> <br /> <strong>ಕಾರ್ಯಕಾರಿ ಸಮಿತಿ</strong>: ಹಿರೋನ್ಮಾಯ್ ಚಟರ್ಜಿ (ಪಶ್ಚಿಮ ಬಂಗಾಳ), ಎ.ಬಿ.ಪ್ರಸಾದ್ (ಬಿಹಾರ), ಅಸಿತ್ ತ್ರಿಪಾಠಿ (ಒರಿಸ್ಸಾ), ಟಿ.ಡಿ.ಫ್ರಾನ್ಸಿಸ್ (ಕೇರಳ), ಸಿ.ಬಿ.ಎನ್.ರೆಡ್ಡಿ (ತಮಿಳುನಾಡು), ಶರದ್ ಕನ್ನಾಮ್ವರ್ (ಮಹಾರಾಷ್ಟ್ರ), ಅನಿಲ್ ಧೂಪರ್ (ಮಧ್ಯಪ್ರದೇಶ), ಸುಮನ್ ಕಪೂರ್ (ಹರಿಯಾಣ), ಸಿ.ಪಿ.ಕಾಕರ್ (ಉತ್ತರಪ್ರದೇಶ), ವಿ.ಕೆ.ಬಾತ್ರಾ (ದೆಹಲಿ) ಹಾಗೂ ಅಶೋಕ್ ಕುಮಾರ್ (ಆಂಧ್ರಪ್ರದೇಶ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>