<p>ಚುನಾವಣೆಗಳ ಸಂದರ್ಭಕ್ಕೆ ಸರಿಯಾಗಿ ದೇಶದ ಎಲ್ಲೆಡೆ ಜಾತಿ ಸಮಾವೇಶಗಳ ಭರಾಟೆಯೂ ಆರಂಭವಾಗುತ್ತದೆ. ಭಾರತದ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಜಾತಿಗಿರುವ ಮಹತ್ವವನ್ನು ಅರಿತವರಿಗೆ ಇದರಲ್ಲಿ ಆಶ್ಚರ್ಯ ಹುಟ್ಟಿಸುವಂಥದ್ದೇನೂ ಇಲ್ಲ. ಸಂವಿಧಾನ, ಹುಟ್ಟನ್ನು ಆಧಾರವಾಗಿಟ್ಟುಕೊಂಡ ಜಾತಿ ಅಸಮಾನತೆಯನ್ನು ಗುರುತಿಸಿದೆ.<br /> <br /> ಹಾಗೆಯೇ ಅದನ್ನು ನಿರ್ಮೂಲನ ಮಾಡುವುದಕ್ಕಾಗಿ ಧನಾತ್ಮಕ ತಾರತಮ್ಯವನ್ನು ಏರ್ಪಡಿಸುವ ಮೀಸಲಾತಿಯಂಥ ಸವಲತ್ತನ್ನೂ ಒದಗಿಸಿದೆ. ಇದರಾಚೆಗಿನ ಕೆಲವು ಸಾಮಾಜಿಕ ವಾಸ್ತವಗಳೂ ನಮ್ಮ ಮುಂದಿವೆ. ನಿರ್ದಿಷ್ಟ ಸಮುದಾಯವೊಂದು ತನ್ನ ರಾಜಕೀಯ ಅಭೀಪ್ಸೆಗಳನ್ನು ಮುಂದಿಡುವುದಕ್ಕಾಗಿ ಸಂಘಟಿತ ಪ್ರಯತ್ನ ನಡೆಸಬೇಕಾಗುತ್ತದೆ.<br /> <br /> ಈ ಬಗೆಯ ಸಂಘಟನೆಗೆ ಜಾತಿಯೊಂದು ಕಾರಣವಾಗುವುದು ಸಹಜ ಬೆಳವಣಿಗೆಯೇ. ವರ್ತಮಾನದಲ್ಲಿ ಜಾತಿಯ ಸಾಮಾಜಿಕ ಸ್ವರೂಪವಿರುವುದೇ ಅದರ ಸಂಘಟಿತ ರಾಜಕೀಯ ಅನನ್ಯತೆಯಲ್ಲಿ. ಈ ಎಲ್ಲಾ ಆಯಾಮಗಳನ್ನು ಒಟ್ಟಾಗಿ ಪರಿಗಣಿಸಿದಾಗ ಒಂದು ಸಾಮೂಹಿಕ ಚೌಕಾಸಿಯ ಮಾರ್ಗವಾಗಿ ಜಾತಿಯೆಂಬ ಅನನ್ಯತೆಯಡಿಯಲ್ಲಿ ಸಂಘಟಿತರಾಗುವುದನ್ನು ಪೂರ್ಣವಾಗಿ ತಪ್ಪು ಎನ್ನಲು ಸಾಧ್ಯವಿಲ್ಲ. ಆದರೆ ಚುನಾವಣೆಗಳ ಕಾಲಕ್ಕೆ ನಡೆಯುವ ಜಾತಿ ಸಮಾವೇಶಗಳು ಇಷ್ಟು ಸರಳವಲ್ಲ.<br /> <br /> ಕರ್ನಾಟಕದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ನಡೆದ ಜಾತಿ ಸಮಾವೇಶಗಳನ್ನು ನೋಡಿದರೂ ಇದು ಅರ್ಥವಾಗುತ್ತದೆ. ಈ ಜಾತಿಗಳೆಲ್ಲವೂ ವಿಶಾಲಾತ್ಮಕ ನೆಲೆಯಲ್ಲಿ ಹಿಂದುಳಿದವು ಇಲ್ಲವೇ ಪರಿಶಿಷ್ಟ ಎನ್ನಬಹುದಾದ ವರ್ಗೀಕರಣದಲ್ಲಿ ಬರುವಂಥವು. ಆದರೆ ಆ ವರ್ಗದೊಳಗಿನ ಇತರ ಜಾತಿಗಳ ಜೊತೆ ಹೋಲಿಸಿ ನೋಡಿದಾಗ ಪ್ರಬಲವಾಗಿರುವಂಥವು. ಈ ವ್ಯತ್ಯಾಸವೇ ಚುನಾವಣಾ ಕಾಲದಲ್ಲಿ ‘ಜಾತಿ ಸಂಘಟನೆ’ಯ ಅಪಾಯವನ್ನು ವಿವರಿಸುತ್ತದೆ.<br /> <br /> ಸಂವಿಧಾನ, ಮೀಸಲಾತಿಯನ್ನು ಒದಗಿಸುವಾಗ ಸಾಮಾಜಿಕ ಅಸಮಾನತೆಯ ಪ್ರಮಾಣಕ್ಕನುಗುಣವಾಗಿ ಜಾತಿಗಳನ್ನು ಹಲವು ಗುಂಪುಗಳಲ್ಲಿ ವರ್ಗೀಕರಿಸಿದೆ. ಈ ಗುಂಪುಗಳ ಒಳಗಿರುವ ಕೆಲವು ಜಾತಿಗಳ ಸಂಖ್ಯಾಬಲ ಬಹಳ ದೊಡ್ಡದಿದ್ದರೆ ಇನ್ನು ಕೆಲವು ಜಾತಿಗಳಲ್ಲಿರುವವರ ಸಂಖ್ಯೆ ಬಹಳ ಸಣ್ಣದು. ಈ ಗುಂಪುಗಳ ಒಳಗಿರುವ ಜಾತಿಗಳು ಪ್ರತ್ಯೇಕ ಅನನ್ಯತೆಯನ್ನು ಪ್ರತಿಪಾದಿಸುವುದರ ಹಿಂದಿನ ಕಾರಣಗಳು ಎರಡು. ಮೊದಲನೆಯದ್ದು ತಮ್ಮ ಅರ್ಹತೆಯಷ್ಟು ಪ್ರಾತಿನಿಧ್ಯ ದೊರೆತಿಲ್ಲ ಎಂಬ ಕೊರಗು.<br /> <br /> ಎರಡನೆಯದ್ದು ತಮ್ಮ ಸಂಖ್ಯಾಬಲವನ್ನು ಬಳಸಿಕೊಂಡು ಗುಂಪಿನೊಳಗಿರುವ ಇತರರನ್ನು ಬದಿಗೊತ್ತುವ ಪ್ರಯತ್ನ. ಈ ಎರಡೂ ಬಗೆಯ ಪ್ರಯತ್ನಗಳಲ್ಲಿ ತೊಡಗಿಕೊಳ್ಳುವ ಜಾತಿಗಳಿಗೂ ಸಂಘಟಿತ ಒತ್ತಡ ಹೇರುವಷ್ಟು ಸಂಖ್ಯಾಬಲವಿರುತ್ತದೆ. ಈ ಕಾರಣದಿಂದಾಗಿಯೇ ಅವು ಕೆಲ ಮಟ್ಟಿಗಿನ ‘ಲಾಭ’ವನ್ನೂ ಪಡೆಯುತ್ತವೆ. ಆದರೆ ಈ ಬಗೆಯ ಒತ್ತಡ ಹೇರಲು ಸಾಧ್ಯವೇ ಇಲ್ಲದಿರುವ ಸಣ್ಣ–ಪುಟ್ಟ ಜಾತಿಗಳ ಸಂಖ್ಯೆಯೂ ಸಾಕಷ್ಟು ದೊಡ್ಡದು. ಇವುಗಳು ಅನುಭವಿಸುತ್ತಿರುವ ರಾಜಕೀಯ ಪ್ರಾತಿನಿಧ್ಯದ ಕೊರತೆಯೇನೂ ಸಣ್ಣದಲ್ಲ. ಆದರೆ ದೊಡ್ಡ ಜಾತಿಗಳ ‘ಭಾರೀ ಸಮಾವೇಶ’ಗಳ ನೆರಳಿನಲ್ಲಿ ಸಣ್ಣ ಜಾತಿಗಳ ಧ್ವನಿ ಸಣ್ಣದಾಗಿಯೂ ಕೇಳಿಸದಂತಾಗುತ್ತಿದೆ.<br /> <br /> ಮತಗಳ ಪ್ರಮಾಣಕ್ಕನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳುವ ರಾಜಕೀಯ ಪಕ್ಷಗಳು ಕೊನೆಗೂ ಮಣೆ ಹಾಕುವುದು ಸಂಖ್ಯಾಬಲಕ್ಕೇ. ಕೇಂದ್ರದಿಂದ ರಾಜ್ಯದ ತನಕದ ಅಧಿಕಾರಾರೂಢ ರಾಜಕಾರಣಿಗಳಿಂದ ಹೆಚ್ಚುವರಿ ಮೀಸಲಾತಿ ಸವಲತ್ತಿನ ಭರವಸೆ ಪಡೆಯುತ್ತಿರುವ ಜಾತಿಗಳೆಲ್ಲವೂ ವೋಟಿನ ಬಲವನ್ನು ಹೊಂದಿವೆ. ಈ ಪ್ರಕ್ರಿಯೆ ಒಟ್ಟರ್ಥದಲ್ಲಿ ಮೀಸಲಾತಿಯನ್ನು ಅಪ್ರಸ್ತುತಗೊಳಿಸುವುದರ ಜೊತೆಗೆ ಅಂಚಿನಲ್ಲಿ ಉಳಿದ ಜಾತಿಗಳು ಸದಾ ಅನಾಥ ಪ್ರಜ್ಞೆಯಲ್ಲಿ ಕೊರಗುವಂತೆ ಮಾಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚುನಾವಣೆಗಳ ಸಂದರ್ಭಕ್ಕೆ ಸರಿಯಾಗಿ ದೇಶದ ಎಲ್ಲೆಡೆ ಜಾತಿ ಸಮಾವೇಶಗಳ ಭರಾಟೆಯೂ ಆರಂಭವಾಗುತ್ತದೆ. ಭಾರತದ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಜಾತಿಗಿರುವ ಮಹತ್ವವನ್ನು ಅರಿತವರಿಗೆ ಇದರಲ್ಲಿ ಆಶ್ಚರ್ಯ ಹುಟ್ಟಿಸುವಂಥದ್ದೇನೂ ಇಲ್ಲ. ಸಂವಿಧಾನ, ಹುಟ್ಟನ್ನು ಆಧಾರವಾಗಿಟ್ಟುಕೊಂಡ ಜಾತಿ ಅಸಮಾನತೆಯನ್ನು ಗುರುತಿಸಿದೆ.<br /> <br /> ಹಾಗೆಯೇ ಅದನ್ನು ನಿರ್ಮೂಲನ ಮಾಡುವುದಕ್ಕಾಗಿ ಧನಾತ್ಮಕ ತಾರತಮ್ಯವನ್ನು ಏರ್ಪಡಿಸುವ ಮೀಸಲಾತಿಯಂಥ ಸವಲತ್ತನ್ನೂ ಒದಗಿಸಿದೆ. ಇದರಾಚೆಗಿನ ಕೆಲವು ಸಾಮಾಜಿಕ ವಾಸ್ತವಗಳೂ ನಮ್ಮ ಮುಂದಿವೆ. ನಿರ್ದಿಷ್ಟ ಸಮುದಾಯವೊಂದು ತನ್ನ ರಾಜಕೀಯ ಅಭೀಪ್ಸೆಗಳನ್ನು ಮುಂದಿಡುವುದಕ್ಕಾಗಿ ಸಂಘಟಿತ ಪ್ರಯತ್ನ ನಡೆಸಬೇಕಾಗುತ್ತದೆ.<br /> <br /> ಈ ಬಗೆಯ ಸಂಘಟನೆಗೆ ಜಾತಿಯೊಂದು ಕಾರಣವಾಗುವುದು ಸಹಜ ಬೆಳವಣಿಗೆಯೇ. ವರ್ತಮಾನದಲ್ಲಿ ಜಾತಿಯ ಸಾಮಾಜಿಕ ಸ್ವರೂಪವಿರುವುದೇ ಅದರ ಸಂಘಟಿತ ರಾಜಕೀಯ ಅನನ್ಯತೆಯಲ್ಲಿ. ಈ ಎಲ್ಲಾ ಆಯಾಮಗಳನ್ನು ಒಟ್ಟಾಗಿ ಪರಿಗಣಿಸಿದಾಗ ಒಂದು ಸಾಮೂಹಿಕ ಚೌಕಾಸಿಯ ಮಾರ್ಗವಾಗಿ ಜಾತಿಯೆಂಬ ಅನನ್ಯತೆಯಡಿಯಲ್ಲಿ ಸಂಘಟಿತರಾಗುವುದನ್ನು ಪೂರ್ಣವಾಗಿ ತಪ್ಪು ಎನ್ನಲು ಸಾಧ್ಯವಿಲ್ಲ. ಆದರೆ ಚುನಾವಣೆಗಳ ಕಾಲಕ್ಕೆ ನಡೆಯುವ ಜಾತಿ ಸಮಾವೇಶಗಳು ಇಷ್ಟು ಸರಳವಲ್ಲ.<br /> <br /> ಕರ್ನಾಟಕದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ನಡೆದ ಜಾತಿ ಸಮಾವೇಶಗಳನ್ನು ನೋಡಿದರೂ ಇದು ಅರ್ಥವಾಗುತ್ತದೆ. ಈ ಜಾತಿಗಳೆಲ್ಲವೂ ವಿಶಾಲಾತ್ಮಕ ನೆಲೆಯಲ್ಲಿ ಹಿಂದುಳಿದವು ಇಲ್ಲವೇ ಪರಿಶಿಷ್ಟ ಎನ್ನಬಹುದಾದ ವರ್ಗೀಕರಣದಲ್ಲಿ ಬರುವಂಥವು. ಆದರೆ ಆ ವರ್ಗದೊಳಗಿನ ಇತರ ಜಾತಿಗಳ ಜೊತೆ ಹೋಲಿಸಿ ನೋಡಿದಾಗ ಪ್ರಬಲವಾಗಿರುವಂಥವು. ಈ ವ್ಯತ್ಯಾಸವೇ ಚುನಾವಣಾ ಕಾಲದಲ್ಲಿ ‘ಜಾತಿ ಸಂಘಟನೆ’ಯ ಅಪಾಯವನ್ನು ವಿವರಿಸುತ್ತದೆ.<br /> <br /> ಸಂವಿಧಾನ, ಮೀಸಲಾತಿಯನ್ನು ಒದಗಿಸುವಾಗ ಸಾಮಾಜಿಕ ಅಸಮಾನತೆಯ ಪ್ರಮಾಣಕ್ಕನುಗುಣವಾಗಿ ಜಾತಿಗಳನ್ನು ಹಲವು ಗುಂಪುಗಳಲ್ಲಿ ವರ್ಗೀಕರಿಸಿದೆ. ಈ ಗುಂಪುಗಳ ಒಳಗಿರುವ ಕೆಲವು ಜಾತಿಗಳ ಸಂಖ್ಯಾಬಲ ಬಹಳ ದೊಡ್ಡದಿದ್ದರೆ ಇನ್ನು ಕೆಲವು ಜಾತಿಗಳಲ್ಲಿರುವವರ ಸಂಖ್ಯೆ ಬಹಳ ಸಣ್ಣದು. ಈ ಗುಂಪುಗಳ ಒಳಗಿರುವ ಜಾತಿಗಳು ಪ್ರತ್ಯೇಕ ಅನನ್ಯತೆಯನ್ನು ಪ್ರತಿಪಾದಿಸುವುದರ ಹಿಂದಿನ ಕಾರಣಗಳು ಎರಡು. ಮೊದಲನೆಯದ್ದು ತಮ್ಮ ಅರ್ಹತೆಯಷ್ಟು ಪ್ರಾತಿನಿಧ್ಯ ದೊರೆತಿಲ್ಲ ಎಂಬ ಕೊರಗು.<br /> <br /> ಎರಡನೆಯದ್ದು ತಮ್ಮ ಸಂಖ್ಯಾಬಲವನ್ನು ಬಳಸಿಕೊಂಡು ಗುಂಪಿನೊಳಗಿರುವ ಇತರರನ್ನು ಬದಿಗೊತ್ತುವ ಪ್ರಯತ್ನ. ಈ ಎರಡೂ ಬಗೆಯ ಪ್ರಯತ್ನಗಳಲ್ಲಿ ತೊಡಗಿಕೊಳ್ಳುವ ಜಾತಿಗಳಿಗೂ ಸಂಘಟಿತ ಒತ್ತಡ ಹೇರುವಷ್ಟು ಸಂಖ್ಯಾಬಲವಿರುತ್ತದೆ. ಈ ಕಾರಣದಿಂದಾಗಿಯೇ ಅವು ಕೆಲ ಮಟ್ಟಿಗಿನ ‘ಲಾಭ’ವನ್ನೂ ಪಡೆಯುತ್ತವೆ. ಆದರೆ ಈ ಬಗೆಯ ಒತ್ತಡ ಹೇರಲು ಸಾಧ್ಯವೇ ಇಲ್ಲದಿರುವ ಸಣ್ಣ–ಪುಟ್ಟ ಜಾತಿಗಳ ಸಂಖ್ಯೆಯೂ ಸಾಕಷ್ಟು ದೊಡ್ಡದು. ಇವುಗಳು ಅನುಭವಿಸುತ್ತಿರುವ ರಾಜಕೀಯ ಪ್ರಾತಿನಿಧ್ಯದ ಕೊರತೆಯೇನೂ ಸಣ್ಣದಲ್ಲ. ಆದರೆ ದೊಡ್ಡ ಜಾತಿಗಳ ‘ಭಾರೀ ಸಮಾವೇಶ’ಗಳ ನೆರಳಿನಲ್ಲಿ ಸಣ್ಣ ಜಾತಿಗಳ ಧ್ವನಿ ಸಣ್ಣದಾಗಿಯೂ ಕೇಳಿಸದಂತಾಗುತ್ತಿದೆ.<br /> <br /> ಮತಗಳ ಪ್ರಮಾಣಕ್ಕನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳುವ ರಾಜಕೀಯ ಪಕ್ಷಗಳು ಕೊನೆಗೂ ಮಣೆ ಹಾಕುವುದು ಸಂಖ್ಯಾಬಲಕ್ಕೇ. ಕೇಂದ್ರದಿಂದ ರಾಜ್ಯದ ತನಕದ ಅಧಿಕಾರಾರೂಢ ರಾಜಕಾರಣಿಗಳಿಂದ ಹೆಚ್ಚುವರಿ ಮೀಸಲಾತಿ ಸವಲತ್ತಿನ ಭರವಸೆ ಪಡೆಯುತ್ತಿರುವ ಜಾತಿಗಳೆಲ್ಲವೂ ವೋಟಿನ ಬಲವನ್ನು ಹೊಂದಿವೆ. ಈ ಪ್ರಕ್ರಿಯೆ ಒಟ್ಟರ್ಥದಲ್ಲಿ ಮೀಸಲಾತಿಯನ್ನು ಅಪ್ರಸ್ತುತಗೊಳಿಸುವುದರ ಜೊತೆಗೆ ಅಂಚಿನಲ್ಲಿ ಉಳಿದ ಜಾತಿಗಳು ಸದಾ ಅನಾಥ ಪ್ರಜ್ಞೆಯಲ್ಲಿ ಕೊರಗುವಂತೆ ಮಾಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>