<p><strong>ಬೆಂಗಳೂರು:</strong> `ಮಾನವನ ಜೀವ ರಕ್ಷಣೆಯಲ್ಲಿ ಔಷಧೀಯ ವಿಜ್ಞಾನದ ಅನ್ವೇಷಣೆಯ ಪಾತ್ರ ಮುಖ್ಯವಾದುದು~ ಎಂದು ಶರೀರ ವಿಜ್ಞಾನ ಕ್ಷೇತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪೀಟರ್ ಸಿ. ದೊಹರ್ಟಿ ಅಭಿಪ್ರಾಯ ಪಟ್ಟರು.</p>.<p>ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ಆಸ್ಟ್ರಿಯಾ ಎನೆಕ ಔಷಧೀಯ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ವಿಜ್ಞಾನದ ಮೂಲಕ ಸಾಂಕ್ರಾಮಿಕ ರೋಗಗಳ ನಿರೋಧ~ ವಿಷಯವಾಗಿ ಉಪನ್ಯಾಸ ನೀಡಿದರು.</p>.<p>`ರೋಗ ಪತ್ತೆಯ ವಿಧಾನಗಳು ಸಾಕಷ್ಟು ಬೆಳೆಯದಿದ್ದ ಕಾಲದಲ್ಲಿಯೂ ಔಷಧೀಯ ವಿಜ್ಞಾನ ಕ್ಷೇತ್ರವು ರೋಗ ನಿರೋಧಕಗಳನ್ನು ಸಂಶೋಧಿಸಿ ಜೀವ ಮಾರಕಗಳನ್ನು ತಡೆಯುತ್ತಾ ಬಂದಿದೆ. ಸಾಂಕ್ರಾಮಿಕ ರೋಗಗಳ ತಡೆಗೆ ಹಿಂದಿನಿಂದಲೂ ವೈಜ್ಞಾನಿಕ ಕ್ಷೇತ್ರದಲ್ಲಿ ಅನ್ವೇಷಣೆಗಳು ನಡೆಯುತ್ತಲೇ ಬಂದಿವೆ. ಈ ವಿಚಾರದಲ್ಲಿ ಔಷಧೀಯ ವಿಜ್ಞಾನ ಕ್ಷೇತ್ರದ ಕೊಡುಗೆ ಅಪಾರವಾದುದು~ ಎಂದು ಅವರು ತಿಳಿಸಿದರು.</p>.<p>`ರೋಗಗಳು ಬರುವ ಮುನ್ನವೇ ರೋಗ ನಿರೋಧಕ ಶಕ್ತಿಯ ಬಗ್ಗೆ ಮುಂಜಾಗ್ರತೆ ವಹಿಸುವ ಮೂಲಕ ರೋಗಗಳನ್ನು ತಡೆಗಟ್ಟಬಹುದು ಎಂಬುದು ಪ್ರಾಚಿನ ತಿಳುವಳಿಕೆಯಾಗಿದ್ದು, ರೋಗ ನಿರೋಧಕ ಶಕ್ತಿಯ ಬಗ್ಗೆ ಹಿಂದಿನ ತಲೆಮಾರಿನವರ ತಿಳುವಳಿಕೆ ಸ್ಪಷ್ಟವಾಗಿತ್ತು. ಶಾರೀರಿಕ ಹಾಗೂ ಔಷಧೀಯ ವಿಜ್ಞಾನ ಕ್ಷೇತ್ರಗಳಲ್ಲಿ ಕಳೆದ 60 - 70 ವರ್ಷಗಳಲ್ಲಿ ಸಾಕಷ್ಟು ಅಮೂಲ್ಯ ಸಂಶೋಧನೆಗಳು ನಡೆದಿವೆ~ ಎಂದರು.</p>.<p>`ಔಷಧ ವಿಜ್ಞಾನ ಕ್ಷೇತ್ರ ಸಾಕಷ್ಟು ಬೆಳೆಯದಿದ್ದ ಕಾಲದಲ್ಲಿ ಜಗತ್ತಿನ ನಾನಾ ಕಡೆಗಳಲ್ಲಿ ಪ್ಲೇಗ್ನಿಂದಾಗಿ ಹಲವು ಜನರು ಪ್ರಾಣ ಬಿಡಬೇಕಾಯಿತು. ಕ್ರಿ.ಶ 1348 ರಿಂದ 1350 ರ ಅವಧಿಯಲ್ಲಿ ಇಂಗ್ಲೆಂಡ್ನಲ್ಲಿ ಪ್ಲೇಗ್ನಿಂದಾಗಿ ಸುಮಾರು 15 ಲಕ್ಷ ಜನರು ಜೀವ ಕಳೆದುಕೊಂಡರು. ನಂತರದ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳಿಂದ ಇಷ್ಟು ದೊಡ್ಡ ಪ್ರಮಾಣದ ಸಾವುಗಳು ಸಂಭವಿಸಿಲ್ಲ. ಇದೇ ಔಷಧೀಯ ವಿಜ್ಞಾನ ಕ್ಷೇತ್ರದ ಕೊಡುಗೆ~ ಎಂದು ಅವರು ನುಡಿದರು.</p>.<p>`ವಾತಾವರಣದಲ್ಲಿ ಕೆಲವೊಮ್ಮೆ ಅನೇಕ ವಿಷಕಾರಿ ವೈರಸ್ಗಳು ಮಾನವನ ಜೀವಕ್ಕೆ ಕುತ್ತು ತರುತ್ತವೆ. 2002-03 ರಲ್ಲಿ ಕಾಣಿಸಿಕೊಂಡ ಸಾರ್ಸ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಸುಮಾರು ಎಂಟು ಸಾವಿರ ಜನರು ಬಳಲುವಂತಾಗಿತ್ತು. ಹೀಗಾಗಿ ಹೊಸ ರೋಗಗಳು ಬರುವ ಮುನ್ನವೇ ರೋಗ ನಿರೋಧ ಶಕ್ತಿ ಬೆಳೆಸಿಕೊಳ್ಳಬೇಕಾದ್ದು ಅನಿವಾರ್ಯ~ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಮಾನವನ ಜೀವ ರಕ್ಷಣೆಯಲ್ಲಿ ಔಷಧೀಯ ವಿಜ್ಞಾನದ ಅನ್ವೇಷಣೆಯ ಪಾತ್ರ ಮುಖ್ಯವಾದುದು~ ಎಂದು ಶರೀರ ವಿಜ್ಞಾನ ಕ್ಷೇತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪೀಟರ್ ಸಿ. ದೊಹರ್ಟಿ ಅಭಿಪ್ರಾಯ ಪಟ್ಟರು.</p>.<p>ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ಆಸ್ಟ್ರಿಯಾ ಎನೆಕ ಔಷಧೀಯ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ವಿಜ್ಞಾನದ ಮೂಲಕ ಸಾಂಕ್ರಾಮಿಕ ರೋಗಗಳ ನಿರೋಧ~ ವಿಷಯವಾಗಿ ಉಪನ್ಯಾಸ ನೀಡಿದರು.</p>.<p>`ರೋಗ ಪತ್ತೆಯ ವಿಧಾನಗಳು ಸಾಕಷ್ಟು ಬೆಳೆಯದಿದ್ದ ಕಾಲದಲ್ಲಿಯೂ ಔಷಧೀಯ ವಿಜ್ಞಾನ ಕ್ಷೇತ್ರವು ರೋಗ ನಿರೋಧಕಗಳನ್ನು ಸಂಶೋಧಿಸಿ ಜೀವ ಮಾರಕಗಳನ್ನು ತಡೆಯುತ್ತಾ ಬಂದಿದೆ. ಸಾಂಕ್ರಾಮಿಕ ರೋಗಗಳ ತಡೆಗೆ ಹಿಂದಿನಿಂದಲೂ ವೈಜ್ಞಾನಿಕ ಕ್ಷೇತ್ರದಲ್ಲಿ ಅನ್ವೇಷಣೆಗಳು ನಡೆಯುತ್ತಲೇ ಬಂದಿವೆ. ಈ ವಿಚಾರದಲ್ಲಿ ಔಷಧೀಯ ವಿಜ್ಞಾನ ಕ್ಷೇತ್ರದ ಕೊಡುಗೆ ಅಪಾರವಾದುದು~ ಎಂದು ಅವರು ತಿಳಿಸಿದರು.</p>.<p>`ರೋಗಗಳು ಬರುವ ಮುನ್ನವೇ ರೋಗ ನಿರೋಧಕ ಶಕ್ತಿಯ ಬಗ್ಗೆ ಮುಂಜಾಗ್ರತೆ ವಹಿಸುವ ಮೂಲಕ ರೋಗಗಳನ್ನು ತಡೆಗಟ್ಟಬಹುದು ಎಂಬುದು ಪ್ರಾಚಿನ ತಿಳುವಳಿಕೆಯಾಗಿದ್ದು, ರೋಗ ನಿರೋಧಕ ಶಕ್ತಿಯ ಬಗ್ಗೆ ಹಿಂದಿನ ತಲೆಮಾರಿನವರ ತಿಳುವಳಿಕೆ ಸ್ಪಷ್ಟವಾಗಿತ್ತು. ಶಾರೀರಿಕ ಹಾಗೂ ಔಷಧೀಯ ವಿಜ್ಞಾನ ಕ್ಷೇತ್ರಗಳಲ್ಲಿ ಕಳೆದ 60 - 70 ವರ್ಷಗಳಲ್ಲಿ ಸಾಕಷ್ಟು ಅಮೂಲ್ಯ ಸಂಶೋಧನೆಗಳು ನಡೆದಿವೆ~ ಎಂದರು.</p>.<p>`ಔಷಧ ವಿಜ್ಞಾನ ಕ್ಷೇತ್ರ ಸಾಕಷ್ಟು ಬೆಳೆಯದಿದ್ದ ಕಾಲದಲ್ಲಿ ಜಗತ್ತಿನ ನಾನಾ ಕಡೆಗಳಲ್ಲಿ ಪ್ಲೇಗ್ನಿಂದಾಗಿ ಹಲವು ಜನರು ಪ್ರಾಣ ಬಿಡಬೇಕಾಯಿತು. ಕ್ರಿ.ಶ 1348 ರಿಂದ 1350 ರ ಅವಧಿಯಲ್ಲಿ ಇಂಗ್ಲೆಂಡ್ನಲ್ಲಿ ಪ್ಲೇಗ್ನಿಂದಾಗಿ ಸುಮಾರು 15 ಲಕ್ಷ ಜನರು ಜೀವ ಕಳೆದುಕೊಂಡರು. ನಂತರದ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳಿಂದ ಇಷ್ಟು ದೊಡ್ಡ ಪ್ರಮಾಣದ ಸಾವುಗಳು ಸಂಭವಿಸಿಲ್ಲ. ಇದೇ ಔಷಧೀಯ ವಿಜ್ಞಾನ ಕ್ಷೇತ್ರದ ಕೊಡುಗೆ~ ಎಂದು ಅವರು ನುಡಿದರು.</p>.<p>`ವಾತಾವರಣದಲ್ಲಿ ಕೆಲವೊಮ್ಮೆ ಅನೇಕ ವಿಷಕಾರಿ ವೈರಸ್ಗಳು ಮಾನವನ ಜೀವಕ್ಕೆ ಕುತ್ತು ತರುತ್ತವೆ. 2002-03 ರಲ್ಲಿ ಕಾಣಿಸಿಕೊಂಡ ಸಾರ್ಸ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಸುಮಾರು ಎಂಟು ಸಾವಿರ ಜನರು ಬಳಲುವಂತಾಗಿತ್ತು. ಹೀಗಾಗಿ ಹೊಸ ರೋಗಗಳು ಬರುವ ಮುನ್ನವೇ ರೋಗ ನಿರೋಧ ಶಕ್ತಿ ಬೆಳೆಸಿಕೊಳ್ಳಬೇಕಾದ್ದು ಅನಿವಾರ್ಯ~ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>