<p><strong>ಜೇಟ್ಲಿ: ಪೂರ್ಣ ತೃಪ್ತಿ ಇಲ್ಲ</strong><br /> <strong>ನವದೆಹಲಿ (ಪಿಟಿಐ):</strong> ಚೆನ್ನೈನಲ್ಲಿ ಭಾನುವಾರ ನಡೆದ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಕಾರ್ಯಕಾರಿ ಸಮಿತಿ ಸಭೆಯಲ್ಲಿನ ನಿರ್ಧಾರಗಳಿಂದ ಮಂಡಳಿಯ ಉಪಾಧ್ಯಕ್ಷ ಅರುಣ್ ಜೇಟ್ಲಿ `ಸಂರ್ಪೂಣವಾಗಿ ತೃಪ್ತಿಯಾಗಿಲ್ಲ. ಈಗ ದಾಲ್ಮಿಯ ಬಂದಿರುವ ಸ್ಥಾನಕ್ಕೆ ಶಶಾಂಕ್ ಮನೋಹರ್ ಹೆಸರನ್ನು ಪ್ರಸ್ತಾಪಿಸಿದ್ದೆ' ಎಂದಿದ್ದಾರೆ.<br /> <br /> `ನಾನು ವೈಯಕ್ತಿಕವಾಗಿ ಶಶಾಂಕ್ ಅವರನ್ನು ದಾಲ್ಮಿಯಾ ಸ್ಥಾನದಲ್ಲಿ ನೋಡಲು ಬಯಸಿದ್ದೆ. ಅದಕ್ಕಾಗಿ ಅವರ ಸಮ್ಮತಿಯನ್ನೂ ಪಡೆಯದೆ ಅವರ ಹೆಸರನ್ನು ಸೂಚಿಸಿದ್ದೆ. ಶಶಾಂಕ್ ನಿಷ್ಕಳಂಕ ವ್ಯಕ್ತಿತ್ವ ಹೊಂದಿರುವವರು' ಎಂದು ಜೈಟ್ಲಿ ತಿಳಿಸಿದ್ದಾರೆ.<br /> <br /> `ಮಂಡಳಿಯ ಹೆಚ್ಚಿನ ಸದಸ್ಯರು ಅನುಭವಿ ದಾಲ್ಮಿಯ ಅವರ ಹೆಸರನ್ನು ಒಪ್ಪಿಕೊಂಡರು' ಎಂದೂ ಅವರು ಹೇಳಿದ್ದಾರೆ.<br /> <br /> <strong>ಚೆಸ್: ಜಂಟಿ ಅಗ್ರಸ್ಥಾನದಲ್ಲಿ ವಿಷ್ಣು</strong><br /> <strong>ಅಲ್ಬೆನಾ, ಬಲ್ಗೇರಿಯ (ಪಿಟಿಐ):</strong> ಭಾರತದ ವಿ. ವಿಷ್ಣು ಪ್ರಸನ್ನ ಇಲ್ಲಿ ನಡೆಯುತ್ತಿರುವ ಗ್ರಾಂಡ್ ಯೂರೋಪ್ ಅಲ್ಬೆನಾ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ ಮೂರನೇ ಸುತ್ತಿನ ಬಳಿಕ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.<br /> <br /> ಮಂಗಳವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಷ್ಣು ಭಾರತದವರೇ ಆದ ಅನುರಾಗ್ ಮಹಾಮಲ್ ವಿರುದ್ಧ ಗೆಲುವು ಪಡೆದರು. ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ವಿಷ್ಣು ಮೂರು ಪಾಯಿಂಟ್ಗಳೊಂದಿಗೆ ಇತರ ಆರು ಸ್ಪರ್ಧಿಗಳ ಜೊತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.<br /> <br /> ರೊಮೇನಿಯದ ಕಾನ್ಸ್ಟಾಂಟಿನ್ ಲಲುಲೆಸ್ಕು, ಬಲ್ಗೇರಿಯದ ಬೋರಿಸ್ ಚಟಲ್ಬಶೆವ್, ವಾಸಿಲ್ ಸ್ಪಸೋವ್, ಲಾತ್ವಿಯದ ಎವ್ಗೆನಿ ಸ್ವೆಶ್ನಿಕೋವ್ ಮತ್ತು ಅರ್ಜೆಂಟೀನಾದ ಸ್ಯಾಂಡ್ರೊ ಮರೆಕೊ ಅವರೂ ತಲಾ ಮೂರು ಪಾಯಿಂಟ್ ಹೊಂದಿದ್ದಾರೆ.<br /> ಭಾರತದ ಸ್ವಪ್ನಿಲ್ ಧೋಪಡೆ ಮತ್ತು ಅಶ್ವಿನ್ ಜಯರಾಮ್ ತಲಾ 2.5 ಪಾಯಿಂಟ್ ಕಲೆಹಾಕಿದ್ದು, ಇತರ 20 ಸ್ಪರ್ಧಿಗಳ ಜೊತೆ ಜಂಟಿ ಏಳನೇ ಸ್ಥಾನದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೇಟ್ಲಿ: ಪೂರ್ಣ ತೃಪ್ತಿ ಇಲ್ಲ</strong><br /> <strong>ನವದೆಹಲಿ (ಪಿಟಿಐ):</strong> ಚೆನ್ನೈನಲ್ಲಿ ಭಾನುವಾರ ನಡೆದ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಕಾರ್ಯಕಾರಿ ಸಮಿತಿ ಸಭೆಯಲ್ಲಿನ ನಿರ್ಧಾರಗಳಿಂದ ಮಂಡಳಿಯ ಉಪಾಧ್ಯಕ್ಷ ಅರುಣ್ ಜೇಟ್ಲಿ `ಸಂರ್ಪೂಣವಾಗಿ ತೃಪ್ತಿಯಾಗಿಲ್ಲ. ಈಗ ದಾಲ್ಮಿಯ ಬಂದಿರುವ ಸ್ಥಾನಕ್ಕೆ ಶಶಾಂಕ್ ಮನೋಹರ್ ಹೆಸರನ್ನು ಪ್ರಸ್ತಾಪಿಸಿದ್ದೆ' ಎಂದಿದ್ದಾರೆ.<br /> <br /> `ನಾನು ವೈಯಕ್ತಿಕವಾಗಿ ಶಶಾಂಕ್ ಅವರನ್ನು ದಾಲ್ಮಿಯಾ ಸ್ಥಾನದಲ್ಲಿ ನೋಡಲು ಬಯಸಿದ್ದೆ. ಅದಕ್ಕಾಗಿ ಅವರ ಸಮ್ಮತಿಯನ್ನೂ ಪಡೆಯದೆ ಅವರ ಹೆಸರನ್ನು ಸೂಚಿಸಿದ್ದೆ. ಶಶಾಂಕ್ ನಿಷ್ಕಳಂಕ ವ್ಯಕ್ತಿತ್ವ ಹೊಂದಿರುವವರು' ಎಂದು ಜೈಟ್ಲಿ ತಿಳಿಸಿದ್ದಾರೆ.<br /> <br /> `ಮಂಡಳಿಯ ಹೆಚ್ಚಿನ ಸದಸ್ಯರು ಅನುಭವಿ ದಾಲ್ಮಿಯ ಅವರ ಹೆಸರನ್ನು ಒಪ್ಪಿಕೊಂಡರು' ಎಂದೂ ಅವರು ಹೇಳಿದ್ದಾರೆ.<br /> <br /> <strong>ಚೆಸ್: ಜಂಟಿ ಅಗ್ರಸ್ಥಾನದಲ್ಲಿ ವಿಷ್ಣು</strong><br /> <strong>ಅಲ್ಬೆನಾ, ಬಲ್ಗೇರಿಯ (ಪಿಟಿಐ):</strong> ಭಾರತದ ವಿ. ವಿಷ್ಣು ಪ್ರಸನ್ನ ಇಲ್ಲಿ ನಡೆಯುತ್ತಿರುವ ಗ್ರಾಂಡ್ ಯೂರೋಪ್ ಅಲ್ಬೆನಾ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ ಮೂರನೇ ಸುತ್ತಿನ ಬಳಿಕ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.<br /> <br /> ಮಂಗಳವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಷ್ಣು ಭಾರತದವರೇ ಆದ ಅನುರಾಗ್ ಮಹಾಮಲ್ ವಿರುದ್ಧ ಗೆಲುವು ಪಡೆದರು. ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ವಿಷ್ಣು ಮೂರು ಪಾಯಿಂಟ್ಗಳೊಂದಿಗೆ ಇತರ ಆರು ಸ್ಪರ್ಧಿಗಳ ಜೊತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.<br /> <br /> ರೊಮೇನಿಯದ ಕಾನ್ಸ್ಟಾಂಟಿನ್ ಲಲುಲೆಸ್ಕು, ಬಲ್ಗೇರಿಯದ ಬೋರಿಸ್ ಚಟಲ್ಬಶೆವ್, ವಾಸಿಲ್ ಸ್ಪಸೋವ್, ಲಾತ್ವಿಯದ ಎವ್ಗೆನಿ ಸ್ವೆಶ್ನಿಕೋವ್ ಮತ್ತು ಅರ್ಜೆಂಟೀನಾದ ಸ್ಯಾಂಡ್ರೊ ಮರೆಕೊ ಅವರೂ ತಲಾ ಮೂರು ಪಾಯಿಂಟ್ ಹೊಂದಿದ್ದಾರೆ.<br /> ಭಾರತದ ಸ್ವಪ್ನಿಲ್ ಧೋಪಡೆ ಮತ್ತು ಅಶ್ವಿನ್ ಜಯರಾಮ್ ತಲಾ 2.5 ಪಾಯಿಂಟ್ ಕಲೆಹಾಕಿದ್ದು, ಇತರ 20 ಸ್ಪರ್ಧಿಗಳ ಜೊತೆ ಜಂಟಿ ಏಳನೇ ಸ್ಥಾನದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>