<p><strong>ವಿಜಯಪುರ:</strong> ಲಕ್ಷ್ಮೀವೆಂಕಟರಮಣಸ್ವಾಮಿಯ ಕಲ್ಲುಗಾಲಿಯ ಪ್ರಯುಕ್ತ ಆಯೋಜಿಸಿದ್ದ 5 ದಿನಗಳ ಗಾನ ಗಂಗೋತ್ರಿ ಕಾರ್ಯಕ್ರಮವು ಭಾನುವಾರ ಯಶಸ್ವಿಯಾಗಿ ಮುಕ್ತಾಯವಾಯಿತು.<br /> <br /> ಪಟ್ಟಣದ ಎಸ್.ಎಲ್.ವಿ.ಮಹಾದ್ವಾರದ ಬಳಿ ಶನಿವಾರ ಜೇಸಿಐ ವಿಜಯಪುರ ವತಿಯಿಂದ ಲಕ್ಷ್ಮೀವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವದ ಪ್ರಯುಕ್ತ 5 ದಿನಗಳ ಕಾಲ ಏರ್ಪಡಿಸಿದ್ದ `ಜೇಸಿ ಗಾನಗಂಗೋತ್ರಿ' ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ವತಿಯಿಂದ ಅಭಿನಂದನೆ, ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿ ಜೇಸಿಐ ಅಧ್ಯಕ್ಷ ಬಲಮುರಿ ಶ್ರಿನಿವಾಸ್ ಮಾತನಾಡಿದರು.<br /> <br /> ಜೇಸಿಐ ವಿಜಯಪುರದ ಯೋಜನಾ ನಿರ್ದೇಶಕ ಎಂ.ಶಿವಕುಮಾರ್ ಮಾತನಾಡಿ, ಕಳೆದ 29 ವರ್ಷಗಳಿಂದ ಜೇಸಿಐ ಸಂಸ್ಥೆ ಸಾರ್ವಜನಿಕ ವಲಯದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ರಕ್ತದಾನ, ನೇತ್ರ ತಪಾಸಣಾ ಶಿಬಿರ, ಫಲಾನುಭವಿಗಳಿಗೆ ಚಿಕಿತ್ಸಾ ವೆಚ್ಚ ನೀಡುತ್ತಿದೆ ಎಂದರು.<br /> <br /> ಇದೇ ಸಂದರ್ಭದಲ್ಲಿ ಶ್ರವಣ ದೋಷವುಳ್ಳ ರವಿಕುಮಾರ್ ಅವರಿಗೆ ಶ್ರವಣ ಸಾಧನ ಅಳವಡಿಸಿಕೊಳ್ಳಲು ಬೇಕಾದ ಧನ ಸಹಾಯವನ್ನು ಚೆಕ್ ಮೂಲಕ ವಿತರಿಸಲಾಯಿತು.<br /> <br /> ಸಂಸ್ಥೆಯ ವತಿಯಿಂದ ಬಳುವನಹಳ್ಳಿಯ ಸಂಗೀತ ವಿದ್ವಂಸ ಸೋಮಶೇಖರಾಚಾರಿ ಅವರಿಗೆ ಗಾಯನ ರತ್ನ ಪ್ರಶಸ್ತಿ, ಎಂ.ಹನುಮಂತಪ್ಪ ಅವರಿಗೆ ಸಂಗೀತ ರತ್ನ ಪ್ರಶಸ್ತಿ, ಹಿರಿಯ ರಂಗಭೂಮಿ ಕಲಾವಿದ ಈ.ಬೈರೇಗೌಡ ಅವರಿಗೆ ರಂಗಭೂಮಿ ರತ್ನ ಪ್ರಶಸ್ತಿಯನ್ನು ನೀಡಲಾಯಿತು.<br /> <br /> ಗಾನ ಗಂಗೋತ್ರಿ ಕಾರ್ಯಕ್ರಮದ ವತಿಯಿಂದ ಏರ್ಪಡಿಸಿದ್ದ ನೃತ್ಯ ಕಾರಂಜಿ ವಿಶೇಷ ಕಾರ್ಯಕ್ರಮದಲ್ಲಿ ಪಟ್ಟಣದ ಶೃಂಗೇರಿ ಶಾರದಾ ಶಾಲೆ, ಜೇಸಿಸ್ ಶಾಲೆ ಮತ್ತು ಮಿಥುನ್ ಸ್ಟೆಪ್ ಆಫ್ ತಂಡದ ಮಕ್ಕಳು ನೃತ್ಯ ಪ್ರದರ್ಶಿಸಿದರು.<br /> <br /> ಜೇಸಿಐ ವಿಜಯಪುರದ ಸಂಸ್ಥಾಪಕ ಅಧ್ಯಕ್ಷ ಪಿ.ಮುಕುಂದರಾವ್, ಮಾಜಿ ಅಧ್ಯಕ್ಷರ ಸಂಘದ ಅಧ್ಯಕ್ಷ ವಿ.ಎನ್.ರಮೇಶ್, ಕಾರ್ಯದರ್ಶಿ ಕೆ.ವಿ.ಭೈರೇಗೌಡ, ಖಜಾಂಚಿ ಐ.ಟಿ.ರಾಮಾಂಜಿನಪ್ಪ, ಮಾಜಿ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ವಿ.ವೆಂಕಟೇಶ್, ವಿಜಯಪುರ ಬಲಿಜ ಸಂಘದ ಅಧ್ಯಕ್ಷ ಎಂ.ವಿ.ಮುನಿಯಪ್ಪ, ಸದಸ್ಯ ಎಂ.ಮುನಿರಾಜು, ಎಂ.ನಾಗರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಲಕ್ಷ್ಮೀವೆಂಕಟರಮಣಸ್ವಾಮಿಯ ಕಲ್ಲುಗಾಲಿಯ ಪ್ರಯುಕ್ತ ಆಯೋಜಿಸಿದ್ದ 5 ದಿನಗಳ ಗಾನ ಗಂಗೋತ್ರಿ ಕಾರ್ಯಕ್ರಮವು ಭಾನುವಾರ ಯಶಸ್ವಿಯಾಗಿ ಮುಕ್ತಾಯವಾಯಿತು.<br /> <br /> ಪಟ್ಟಣದ ಎಸ್.ಎಲ್.ವಿ.ಮಹಾದ್ವಾರದ ಬಳಿ ಶನಿವಾರ ಜೇಸಿಐ ವಿಜಯಪುರ ವತಿಯಿಂದ ಲಕ್ಷ್ಮೀವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವದ ಪ್ರಯುಕ್ತ 5 ದಿನಗಳ ಕಾಲ ಏರ್ಪಡಿಸಿದ್ದ `ಜೇಸಿ ಗಾನಗಂಗೋತ್ರಿ' ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ವತಿಯಿಂದ ಅಭಿನಂದನೆ, ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿ ಜೇಸಿಐ ಅಧ್ಯಕ್ಷ ಬಲಮುರಿ ಶ್ರಿನಿವಾಸ್ ಮಾತನಾಡಿದರು.<br /> <br /> ಜೇಸಿಐ ವಿಜಯಪುರದ ಯೋಜನಾ ನಿರ್ದೇಶಕ ಎಂ.ಶಿವಕುಮಾರ್ ಮಾತನಾಡಿ, ಕಳೆದ 29 ವರ್ಷಗಳಿಂದ ಜೇಸಿಐ ಸಂಸ್ಥೆ ಸಾರ್ವಜನಿಕ ವಲಯದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ರಕ್ತದಾನ, ನೇತ್ರ ತಪಾಸಣಾ ಶಿಬಿರ, ಫಲಾನುಭವಿಗಳಿಗೆ ಚಿಕಿತ್ಸಾ ವೆಚ್ಚ ನೀಡುತ್ತಿದೆ ಎಂದರು.<br /> <br /> ಇದೇ ಸಂದರ್ಭದಲ್ಲಿ ಶ್ರವಣ ದೋಷವುಳ್ಳ ರವಿಕುಮಾರ್ ಅವರಿಗೆ ಶ್ರವಣ ಸಾಧನ ಅಳವಡಿಸಿಕೊಳ್ಳಲು ಬೇಕಾದ ಧನ ಸಹಾಯವನ್ನು ಚೆಕ್ ಮೂಲಕ ವಿತರಿಸಲಾಯಿತು.<br /> <br /> ಸಂಸ್ಥೆಯ ವತಿಯಿಂದ ಬಳುವನಹಳ್ಳಿಯ ಸಂಗೀತ ವಿದ್ವಂಸ ಸೋಮಶೇಖರಾಚಾರಿ ಅವರಿಗೆ ಗಾಯನ ರತ್ನ ಪ್ರಶಸ್ತಿ, ಎಂ.ಹನುಮಂತಪ್ಪ ಅವರಿಗೆ ಸಂಗೀತ ರತ್ನ ಪ್ರಶಸ್ತಿ, ಹಿರಿಯ ರಂಗಭೂಮಿ ಕಲಾವಿದ ಈ.ಬೈರೇಗೌಡ ಅವರಿಗೆ ರಂಗಭೂಮಿ ರತ್ನ ಪ್ರಶಸ್ತಿಯನ್ನು ನೀಡಲಾಯಿತು.<br /> <br /> ಗಾನ ಗಂಗೋತ್ರಿ ಕಾರ್ಯಕ್ರಮದ ವತಿಯಿಂದ ಏರ್ಪಡಿಸಿದ್ದ ನೃತ್ಯ ಕಾರಂಜಿ ವಿಶೇಷ ಕಾರ್ಯಕ್ರಮದಲ್ಲಿ ಪಟ್ಟಣದ ಶೃಂಗೇರಿ ಶಾರದಾ ಶಾಲೆ, ಜೇಸಿಸ್ ಶಾಲೆ ಮತ್ತು ಮಿಥುನ್ ಸ್ಟೆಪ್ ಆಫ್ ತಂಡದ ಮಕ್ಕಳು ನೃತ್ಯ ಪ್ರದರ್ಶಿಸಿದರು.<br /> <br /> ಜೇಸಿಐ ವಿಜಯಪುರದ ಸಂಸ್ಥಾಪಕ ಅಧ್ಯಕ್ಷ ಪಿ.ಮುಕುಂದರಾವ್, ಮಾಜಿ ಅಧ್ಯಕ್ಷರ ಸಂಘದ ಅಧ್ಯಕ್ಷ ವಿ.ಎನ್.ರಮೇಶ್, ಕಾರ್ಯದರ್ಶಿ ಕೆ.ವಿ.ಭೈರೇಗೌಡ, ಖಜಾಂಚಿ ಐ.ಟಿ.ರಾಮಾಂಜಿನಪ್ಪ, ಮಾಜಿ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ವಿ.ವೆಂಕಟೇಶ್, ವಿಜಯಪುರ ಬಲಿಜ ಸಂಘದ ಅಧ್ಯಕ್ಷ ಎಂ.ವಿ.ಮುನಿಯಪ್ಪ, ಸದಸ್ಯ ಎಂ.ಮುನಿರಾಜು, ಎಂ.ನಾಗರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>