<p>ದೇಶದ ಗಣ್ಯಾತಿಗಣ್ಯರು ಒಬ್ಬರ ಹಿಂದೊಬ್ಬರಂತೆ ಜೈಲು ಪಾಲಾಗುತ್ತಿರುವಾಗ (ಎಲ್ಲರೂ ಬಹುತೇಕ ದುಷ್ಟ ಅಪರಾಧಗಳಿಗಾಗಿಯೇ ಒಳ ಹೋಗುತ್ತಿದ್ದಾರೆ) ಕರ್ನಾಟಕದ ಕೊಡುಗೆಯೂ ಅದಕ್ಕೆ ಅಪಾರವಾಗಿ ಸಂದಾಯವಾಗುತ್ತಿರುವುದು ಚೋದ್ಯವೇ ಸರಿ. <br /> <br /> ಜೈಲು ಹೊಸ್ತಿಲು ತುಳಿಯುತ್ತಿದ್ದಂತೆಯೇ ಈ ಮಹಾನುಭಾವರೆಲ್ಲರಿಗೂ ಇನ್ನಿಲ್ಲದ ಕಾಯಿಲೆಗಳು ದಿಢೀರನೆ ವಕ್ಕರಿಸಿಕೊಂಡು ತಕ್ಷಣವೇ ಆಸ್ಪತ್ರೆ ಸೇರಬೇಕೆನ್ನಿಸುವುದು ವಿಪರ್ಯಾಸ. ಸ್ಥಿತಿವಂತರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ನಿಸ್ಸಂಶಯವಾಗಿ ದಂಡನಾರ್ಹ. <br /> <br /> ಮೇಲ್ನೋಟಕ್ಕೆ ಇದು ಎಲ್ಲರಿಗೂ ತಿಳಿಯುವಂತಿದ್ದರೂ ಯಾರೂ ಏನೂ ಮಾಡಲಾಗುತ್ತಿಲ್ಲ. ಈ ಮನೋಭಾವದ ಆರೋಪಿ ಮತ್ತು ಅಪರಾಧಿಗಳು ವೈದ್ಯಕೀಯ ದಾಖಲೆಗಳಿಗೆ ಇರುವ ಸೌಲಭ್ಯ ಹಾಗೂ ಕಾನೂನಿನ ಅವಕಾಶಗಳನ್ನು ದುರ್ಬಳಕೆ ಮಾಡಿಕೊಳ್ಳಲು ವಕಾಲತ್ತು ವಹಿಸುವವರೇ ದಾರಿ ತೋರಿಸುತ್ತಿರುವುದು ನಮ್ಮ ಸಮಾಜ ನೈತಿಕವಾಗಿ ಸೊರಗಿರುವುದರ ಪ್ರತೀಕ. <br /> <br /> ರಾಜ್ಯದ ಜೈಲುಗಳಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೈದಿಗಳಲ್ಲಿ ಬಹಳಷ್ಟು ಜನರು ಆಸ್ತಮಾ, ಕ್ಯಾನ್ಸರ್, ಏಡ್ಸ್ ಹಾಗೂ ಇನ್ನಿತರೆ ಗುಣಪಡಿಸಲಾಗದಂತಹ ಕಾಯಿಲೆಗಳಿಂದ ನರಳುತ್ತಿದ್ದಾರೆ. ಇದನ್ನು ಎಷ್ಟೋ ವೇಳೆ ಜೈಲಿಗೆ ಭೇಟಿ ನೀಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರೇ ಪತ್ತೆಹಚ್ಚಿದ್ದಾರೆ. <br /> <br /> ಅಲ್ಲಿನ ಆಸ್ಪತ್ರೆಗಳನ್ನು ಸುಧಾರಿಸಲು ಸಲಹೆ ನೀಡಿದ್ದಾರೆ. ಹಾಗಿದ್ದರೂ ಈ ಬಡ ಕೈದಿಗಳ ಯೋಗಕ್ಷೇಮದ ಬಗ್ಗೆ ಗಮನ ಹರಿಸಲು ಸರ್ಕಾರಕ್ಕೆ ಬಿಡುವಿಲ್ಲ. ಆದರೆ `ದೊಡ್ಡವರು~ ಜೈಲು ಸೇರುತ್ತಿದ್ದಂತೆಯೇ ಅವರಿಗೆ ವೈಭವೋಪೇತ ಸ್ವಾಗತ ನೀಡಿ ಅವರನ್ನು ನಿಜವಾದ `ಜೈಲು~ವಾಸದಿಂದ ಪಾರು ಮಾಡುತ್ತಿರುವುದನ್ನು ಸಂಬಂಧಿಸಿದವರು ಗಂಭೀರವಾಗಿ ಪರಿಗಣಿಸಬೇಕು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇಶದ ಗಣ್ಯಾತಿಗಣ್ಯರು ಒಬ್ಬರ ಹಿಂದೊಬ್ಬರಂತೆ ಜೈಲು ಪಾಲಾಗುತ್ತಿರುವಾಗ (ಎಲ್ಲರೂ ಬಹುತೇಕ ದುಷ್ಟ ಅಪರಾಧಗಳಿಗಾಗಿಯೇ ಒಳ ಹೋಗುತ್ತಿದ್ದಾರೆ) ಕರ್ನಾಟಕದ ಕೊಡುಗೆಯೂ ಅದಕ್ಕೆ ಅಪಾರವಾಗಿ ಸಂದಾಯವಾಗುತ್ತಿರುವುದು ಚೋದ್ಯವೇ ಸರಿ. <br /> <br /> ಜೈಲು ಹೊಸ್ತಿಲು ತುಳಿಯುತ್ತಿದ್ದಂತೆಯೇ ಈ ಮಹಾನುಭಾವರೆಲ್ಲರಿಗೂ ಇನ್ನಿಲ್ಲದ ಕಾಯಿಲೆಗಳು ದಿಢೀರನೆ ವಕ್ಕರಿಸಿಕೊಂಡು ತಕ್ಷಣವೇ ಆಸ್ಪತ್ರೆ ಸೇರಬೇಕೆನ್ನಿಸುವುದು ವಿಪರ್ಯಾಸ. ಸ್ಥಿತಿವಂತರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ನಿಸ್ಸಂಶಯವಾಗಿ ದಂಡನಾರ್ಹ. <br /> <br /> ಮೇಲ್ನೋಟಕ್ಕೆ ಇದು ಎಲ್ಲರಿಗೂ ತಿಳಿಯುವಂತಿದ್ದರೂ ಯಾರೂ ಏನೂ ಮಾಡಲಾಗುತ್ತಿಲ್ಲ. ಈ ಮನೋಭಾವದ ಆರೋಪಿ ಮತ್ತು ಅಪರಾಧಿಗಳು ವೈದ್ಯಕೀಯ ದಾಖಲೆಗಳಿಗೆ ಇರುವ ಸೌಲಭ್ಯ ಹಾಗೂ ಕಾನೂನಿನ ಅವಕಾಶಗಳನ್ನು ದುರ್ಬಳಕೆ ಮಾಡಿಕೊಳ್ಳಲು ವಕಾಲತ್ತು ವಹಿಸುವವರೇ ದಾರಿ ತೋರಿಸುತ್ತಿರುವುದು ನಮ್ಮ ಸಮಾಜ ನೈತಿಕವಾಗಿ ಸೊರಗಿರುವುದರ ಪ್ರತೀಕ. <br /> <br /> ರಾಜ್ಯದ ಜೈಲುಗಳಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೈದಿಗಳಲ್ಲಿ ಬಹಳಷ್ಟು ಜನರು ಆಸ್ತಮಾ, ಕ್ಯಾನ್ಸರ್, ಏಡ್ಸ್ ಹಾಗೂ ಇನ್ನಿತರೆ ಗುಣಪಡಿಸಲಾಗದಂತಹ ಕಾಯಿಲೆಗಳಿಂದ ನರಳುತ್ತಿದ್ದಾರೆ. ಇದನ್ನು ಎಷ್ಟೋ ವೇಳೆ ಜೈಲಿಗೆ ಭೇಟಿ ನೀಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರೇ ಪತ್ತೆಹಚ್ಚಿದ್ದಾರೆ. <br /> <br /> ಅಲ್ಲಿನ ಆಸ್ಪತ್ರೆಗಳನ್ನು ಸುಧಾರಿಸಲು ಸಲಹೆ ನೀಡಿದ್ದಾರೆ. ಹಾಗಿದ್ದರೂ ಈ ಬಡ ಕೈದಿಗಳ ಯೋಗಕ್ಷೇಮದ ಬಗ್ಗೆ ಗಮನ ಹರಿಸಲು ಸರ್ಕಾರಕ್ಕೆ ಬಿಡುವಿಲ್ಲ. ಆದರೆ `ದೊಡ್ಡವರು~ ಜೈಲು ಸೇರುತ್ತಿದ್ದಂತೆಯೇ ಅವರಿಗೆ ವೈಭವೋಪೇತ ಸ್ವಾಗತ ನೀಡಿ ಅವರನ್ನು ನಿಜವಾದ `ಜೈಲು~ವಾಸದಿಂದ ಪಾರು ಮಾಡುತ್ತಿರುವುದನ್ನು ಸಂಬಂಧಿಸಿದವರು ಗಂಭೀರವಾಗಿ ಪರಿಗಣಿಸಬೇಕು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>