<p><strong>ದುಬೈ:</strong> ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ತಡವಾಗಿ ನಡೆದ ಏಷ್ಯಾ ಕಪ್ 'ಎ' ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ 41 ರನ್ ಅಂತರದಿಂದ ಗೆದ್ದಿರುವ ಪಾಕಿಸ್ತಾನ 'ಸೂಪರ್ ಫೋರ್' ಹಂತಕ್ಕೆ ಪ್ರವೇಶಿಸಿತು. </p><p>ಇದರೊಂದಿಗೆ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಮಗದೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. </p><p>'ಎ' ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ತೇರ್ಗಡೆ ಹೊಂದಿತು. ಮತ್ತೊಂದೆಡೆ ಯುಎಇ ಹಾಗೂ ಒಮಾನ್ ಟೂರ್ನಿಯಿಂದ ನಿರ್ಗಮಿಸಿತು. </p><p>ಸೂಪರ್ ಫೋರ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಸೆಪ್ಟೆಂಬರ್ 21, ಭಾನುವಾರ ನಡೆಯಲಿದೆ ಎಂದು ತಿಳಿದು ಬಂದಿದೆ. </p><p>ಯುಎಇ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಾಕಿಸ್ತಾನ, ಒಂದು ಹಂತದಲ್ಲಿ 18.5 ಓವರ್ಗಳಲ್ಲಿ 128 ರನ್ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತ್ತು. </p><p>ಆದರೆ ಕೊನೆಯ ಓವರ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಶಾಹೀನ್ ಅಫ್ರಿದಿ ತಂಡದ ಮೊತ್ತವನ್ನು 146ಕ್ಕೆ ತಲುಪಿಸಿದರು. ಶಾಹೀನ್ 14 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿಗಳಿಂದ ಅಜೇಯ 29 ರನ್ ಗಳಿಸಿದರು. </p><p>ಈ ಮೊದಲು ಫಖರ್ ಜಮಾನ್ 36 ಎಸೆತಗಳಲ್ಲಿ ಅರ್ಧಶತಕ (3 ಸಿಕ್ಸರ್, 2 ಬೌಂಡರಿ) ಗಳಿಸಿದರು. ಯುಎಇ ಪರ ಜುನೈದಿ ಸಿದ್ಧಿಕಿ ನಾಲ್ಕು ಹಾಗೂ ಸಿಮ್ರನ್ಜೀತ್ ಸಿಂಗ್ ಮೂರು ವಿಕೆಟ್ ಗಳಿಸಿದರು. </p><p>ಈ ಗುರಿ ಬೆನ್ನಟ್ಟಿದ ಯುಎಇ 17.4 ಓವರ್ಗಳಲ್ಲಿ 105 ರನ್ನಿಗೆ ತನ್ನೆಲ್ಲ ವಿಕೆಟ್ಗಳು ಕಳೆದುಕೊಂಡಿತು. </p><p><strong>ಪಾಕಿಸ್ತಾನ ತಂಡದ ಹೈಡ್ರಾಮಾ...</strong></p><p>ಭಾರತೀಯ ಆಟಗಾರರು ಹಸ್ತಲಾಘವ ಮಾಡದೇ ಇರುವ ವಿವಾದಕ್ಕೆ ಸಂಬಂಧಿಸಿದಂತೆ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸುವಂತೆ ಪಟ್ಟು ಹಿಡಿದಿದ್ದ ಪಾಕಿಸ್ತಾನ, ಕೊನೆಯ ಕ್ಷಣದಲ್ಲಿ ತನ್ನ ಪಟ್ಟು ಸಡಿಲಿಸಿತು. </p><p>ಒಂದು ವೇಳೆ ಪಂದ್ಯ ಬಹಿಷ್ಕರಿಸಿದ್ದರೆ ಟೂರ್ನಿಯಿಂದ ಪಾಕಿಸ್ತಾನ ಹೊರಬೀಳುತ್ತಿತ್ತು. ಅಲ್ಲದೆ ಭಾರಿ ದಂಡವನ್ನೇ ತೆರಬೇಕಾಗಿತ್ತು. ಇದು ಆಗಲೇ ಸಂಕಷ್ಟದಲ್ಲಿರುವ ಪಾಕ್ ಕ್ರಿಕೆಟ್ಗೆ ಮತ್ತಷ್ಟು ಆರ್ಥಿಕ ಹೊರೆಯಾಗುತ್ತಿತ್ತು. </p><p>ಪಿಸಿಬಿ ಅಧ್ಯಕ್ಷ ಮೊಹಸಿನ್ ನಕ್ವಿ ಅವರು ತಂಡವನ್ನು ಹೋಟೆಲ್ನಲ್ಲಿಯೇ ಇರುವಂತೆ ಸೂಚಿಸಿದ್ದರು. ಸತತ ಚರ್ಚೆಗಳ ಬಳಿಕ ಕೊನೆಯ ಕ್ಷಣದಲ್ಲಿ ನಿರ್ಧಾರವನ್ನು ಬದಲಾಯಿಸಿದರು. ಅಂತಿಮವಾಗಿ ರೆಫರಿ ಪೈಕ್ರಾಫ್ಟ್ ಅವರೇ ಕರ್ತವ್ಯವನ್ನು ನಿಭಾಯಿಸಿದರು. </p><p>ಬಳಿಕ ಪ್ರಕಟಣೆ ಹೊರಡಿಸಿದ ಪಿಸಿಬಿ, ರೆಫರಿ ಪೈಕ್ರಾಫ್ಟ್ ತಮ್ಮ ನಡವಳಿಕೆಗಾಗಿ ಕ್ಷಮೆಯಾಚಿಸಿದ್ದರು ಎಂದು ಹೇಳಿದೆ. </p><p>ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಜೊತೆ ಹಸ್ತಲಾಘವ ಮಾಡದಂತೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರಿಗೆ ಮ್ಯಾಚ್ ರೆಫ್ರಿಯಾಗಿದ್ದ ಪೈಕ್ರಾಫ್ಟ್ ಅವರು ಸೂಚಿಸಿದ್ದರು ಎಂದು ಪಿಸಿಬಿ ಆರೋಪಿಸಿತ್ತು. </p>.Asia Cup: ಯುಎಇ ಎದುರು ಗೆದ್ದು 'ಸೂಪರ್ ಫೋರ್' ಹಂತಕ್ಕೇರಿದ ಪಾಕಿಸ್ತಾನ.Asia Cup: ಪಾಕಿಸ್ತಾನ ತಂಡದ ‘ಹೈಡ್ರಾಮಾ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬೈ:</strong> ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ತಡವಾಗಿ ನಡೆದ ಏಷ್ಯಾ ಕಪ್ 'ಎ' ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ 41 ರನ್ ಅಂತರದಿಂದ ಗೆದ್ದಿರುವ ಪಾಕಿಸ್ತಾನ 'ಸೂಪರ್ ಫೋರ್' ಹಂತಕ್ಕೆ ಪ್ರವೇಶಿಸಿತು. </p><p>ಇದರೊಂದಿಗೆ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಮಗದೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. </p><p>'ಎ' ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ತೇರ್ಗಡೆ ಹೊಂದಿತು. ಮತ್ತೊಂದೆಡೆ ಯುಎಇ ಹಾಗೂ ಒಮಾನ್ ಟೂರ್ನಿಯಿಂದ ನಿರ್ಗಮಿಸಿತು. </p><p>ಸೂಪರ್ ಫೋರ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಸೆಪ್ಟೆಂಬರ್ 21, ಭಾನುವಾರ ನಡೆಯಲಿದೆ ಎಂದು ತಿಳಿದು ಬಂದಿದೆ. </p><p>ಯುಎಇ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಾಕಿಸ್ತಾನ, ಒಂದು ಹಂತದಲ್ಲಿ 18.5 ಓವರ್ಗಳಲ್ಲಿ 128 ರನ್ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತ್ತು. </p><p>ಆದರೆ ಕೊನೆಯ ಓವರ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಶಾಹೀನ್ ಅಫ್ರಿದಿ ತಂಡದ ಮೊತ್ತವನ್ನು 146ಕ್ಕೆ ತಲುಪಿಸಿದರು. ಶಾಹೀನ್ 14 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿಗಳಿಂದ ಅಜೇಯ 29 ರನ್ ಗಳಿಸಿದರು. </p><p>ಈ ಮೊದಲು ಫಖರ್ ಜಮಾನ್ 36 ಎಸೆತಗಳಲ್ಲಿ ಅರ್ಧಶತಕ (3 ಸಿಕ್ಸರ್, 2 ಬೌಂಡರಿ) ಗಳಿಸಿದರು. ಯುಎಇ ಪರ ಜುನೈದಿ ಸಿದ್ಧಿಕಿ ನಾಲ್ಕು ಹಾಗೂ ಸಿಮ್ರನ್ಜೀತ್ ಸಿಂಗ್ ಮೂರು ವಿಕೆಟ್ ಗಳಿಸಿದರು. </p><p>ಈ ಗುರಿ ಬೆನ್ನಟ್ಟಿದ ಯುಎಇ 17.4 ಓವರ್ಗಳಲ್ಲಿ 105 ರನ್ನಿಗೆ ತನ್ನೆಲ್ಲ ವಿಕೆಟ್ಗಳು ಕಳೆದುಕೊಂಡಿತು. </p><p><strong>ಪಾಕಿಸ್ತಾನ ತಂಡದ ಹೈಡ್ರಾಮಾ...</strong></p><p>ಭಾರತೀಯ ಆಟಗಾರರು ಹಸ್ತಲಾಘವ ಮಾಡದೇ ಇರುವ ವಿವಾದಕ್ಕೆ ಸಂಬಂಧಿಸಿದಂತೆ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸುವಂತೆ ಪಟ್ಟು ಹಿಡಿದಿದ್ದ ಪಾಕಿಸ್ತಾನ, ಕೊನೆಯ ಕ್ಷಣದಲ್ಲಿ ತನ್ನ ಪಟ್ಟು ಸಡಿಲಿಸಿತು. </p><p>ಒಂದು ವೇಳೆ ಪಂದ್ಯ ಬಹಿಷ್ಕರಿಸಿದ್ದರೆ ಟೂರ್ನಿಯಿಂದ ಪಾಕಿಸ್ತಾನ ಹೊರಬೀಳುತ್ತಿತ್ತು. ಅಲ್ಲದೆ ಭಾರಿ ದಂಡವನ್ನೇ ತೆರಬೇಕಾಗಿತ್ತು. ಇದು ಆಗಲೇ ಸಂಕಷ್ಟದಲ್ಲಿರುವ ಪಾಕ್ ಕ್ರಿಕೆಟ್ಗೆ ಮತ್ತಷ್ಟು ಆರ್ಥಿಕ ಹೊರೆಯಾಗುತ್ತಿತ್ತು. </p><p>ಪಿಸಿಬಿ ಅಧ್ಯಕ್ಷ ಮೊಹಸಿನ್ ನಕ್ವಿ ಅವರು ತಂಡವನ್ನು ಹೋಟೆಲ್ನಲ್ಲಿಯೇ ಇರುವಂತೆ ಸೂಚಿಸಿದ್ದರು. ಸತತ ಚರ್ಚೆಗಳ ಬಳಿಕ ಕೊನೆಯ ಕ್ಷಣದಲ್ಲಿ ನಿರ್ಧಾರವನ್ನು ಬದಲಾಯಿಸಿದರು. ಅಂತಿಮವಾಗಿ ರೆಫರಿ ಪೈಕ್ರಾಫ್ಟ್ ಅವರೇ ಕರ್ತವ್ಯವನ್ನು ನಿಭಾಯಿಸಿದರು. </p><p>ಬಳಿಕ ಪ್ರಕಟಣೆ ಹೊರಡಿಸಿದ ಪಿಸಿಬಿ, ರೆಫರಿ ಪೈಕ್ರಾಫ್ಟ್ ತಮ್ಮ ನಡವಳಿಕೆಗಾಗಿ ಕ್ಷಮೆಯಾಚಿಸಿದ್ದರು ಎಂದು ಹೇಳಿದೆ. </p><p>ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಜೊತೆ ಹಸ್ತಲಾಘವ ಮಾಡದಂತೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರಿಗೆ ಮ್ಯಾಚ್ ರೆಫ್ರಿಯಾಗಿದ್ದ ಪೈಕ್ರಾಫ್ಟ್ ಅವರು ಸೂಚಿಸಿದ್ದರು ಎಂದು ಪಿಸಿಬಿ ಆರೋಪಿಸಿತ್ತು. </p>.Asia Cup: ಯುಎಇ ಎದುರು ಗೆದ್ದು 'ಸೂಪರ್ ಫೋರ್' ಹಂತಕ್ಕೇರಿದ ಪಾಕಿಸ್ತಾನ.Asia Cup: ಪಾಕಿಸ್ತಾನ ತಂಡದ ‘ಹೈಡ್ರಾಮಾ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>