<p>ನವದೆಹಲಿ (ಪಿಟಿಐ): ಮಾಜಿ ಸೇನಾ ದಂಡನಾಯಕ ಜನರಲ್ ವಿ.ಕೆ. ಸಿಂಗ್ ಅವರು ~ಟಟ್ರಾ ಟ್ರಕ್ ವ್ಯವಹಾರದಲ್ಲಿ 600 ಟ್ರಕ್ ಗಳಿಗೆ ಸಂಬಂಧಿಸಿದಂತೆ ತಮಗೆ 14 ಕೋಟಿ ರೂಪಾಯಿಗಳ ಲಂಚದ ಆಮಿಷ ಒಡ್ಡಲಾಗಿತ್ತು~ ಎಂಬುದಾಗಿ ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶಿಫಾರಸಿನ ಮೇರೆಗೆ ಬಿಇಎಂಎಲ್ ಮುಖ್ಯಸ್ಥ ವಿ.ಆರ್.ಎಸ್. ನಟರಾಜನ್ ಅವರನ್ನು ರಕ್ಷಣಾ ಸಚಿವಾಲಯವು ಸೋಮವಾರ ಅಮಾನತುಗೊಳಿಸಿತು.<br /> <br /> ರಕ್ಷಣಾ ಸಚಿವಾಲಯದ ಅನುಮತಿ ಇಲ್ಲದೆ ಜನರಲ್ ವಿ.ಕೆ. ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಕ್ಕಾಗಿ ಷೋಕಾಸ್ ನೋಟಿಸ್ ಜಾರಿಗೊಳಿಸಿದ ಕೆಲವು ದಿನಗಳ ಬಳಿಕ ರಕ್ಷಣಾ ಸಚಿವಾಲಯವು ಈ ಕ್ರಮ ಕೈಗೊಂಡಿದೆ.<br /> <br /> ~ಸರ್ಕಾರವು ಬಿಎಎಂಎಲ್ ಸಿಎಂಡಿ ವಿ.ಆರ್.ಎಸ್. ನಟರಾಜನ್ ಅವರನ್ನು ಸಿಬಿಐ ಶಿಫಾರಸಿನ ಮೇರೆಗೆ ಅಮಾನತಿನಲ್ಲಿ ಇರಿಸಿದೆ. ಪ್ರಾಮಾಣಿಕ ತನಿಖೆಯ ಖಾತರಿಗಾಗಿ ನಟರಾಜನ್ ಅವರನ್ನು ಹುದ್ದೆಯಿಂದ ದೂರದಲ್ಲಿ ಇರಿಸಬೇಕು ಎಂಬುದಾಗಿ ಸಿಬಿಐ ಶಿಫಾರಸು ಮಾಡಿತ್ತು.<br /> <br /> ನಟರಾಜನ್ ವಿರುದ್ಧದ ವಿವಿಧ ಆಪಾದನೆಗಳ ಬಗ್ಗೆ ಸಿಬಿಐ ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು ರಕ್ಷಣಾ ಸಚಿವಾಲಯ ವಕ್ತಾರ ಸಿತಾಂಶು ಕರ್ ಇಲ್ಲಿ ತಿಳಿಸಿದರು.<br /> <br /> ಸಿಎಂಡಿ ಉಸ್ತುವಾರಿಯನ್ನು ಬಿಇಎಂಎಲ್ ನ ಹಿರಿಯ ನಿರ್ದೇಶಕ ಪಿ. ದ್ವಾರಕಾನಾಥ್ ಅವರಿಗೆ ನೀಡಲಾಗಿದೆ ಎಂದು ಅವರು ನುಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಮಾಜಿ ಸೇನಾ ದಂಡನಾಯಕ ಜನರಲ್ ವಿ.ಕೆ. ಸಿಂಗ್ ಅವರು ~ಟಟ್ರಾ ಟ್ರಕ್ ವ್ಯವಹಾರದಲ್ಲಿ 600 ಟ್ರಕ್ ಗಳಿಗೆ ಸಂಬಂಧಿಸಿದಂತೆ ತಮಗೆ 14 ಕೋಟಿ ರೂಪಾಯಿಗಳ ಲಂಚದ ಆಮಿಷ ಒಡ್ಡಲಾಗಿತ್ತು~ ಎಂಬುದಾಗಿ ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶಿಫಾರಸಿನ ಮೇರೆಗೆ ಬಿಇಎಂಎಲ್ ಮುಖ್ಯಸ್ಥ ವಿ.ಆರ್.ಎಸ್. ನಟರಾಜನ್ ಅವರನ್ನು ರಕ್ಷಣಾ ಸಚಿವಾಲಯವು ಸೋಮವಾರ ಅಮಾನತುಗೊಳಿಸಿತು.<br /> <br /> ರಕ್ಷಣಾ ಸಚಿವಾಲಯದ ಅನುಮತಿ ಇಲ್ಲದೆ ಜನರಲ್ ವಿ.ಕೆ. ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಕ್ಕಾಗಿ ಷೋಕಾಸ್ ನೋಟಿಸ್ ಜಾರಿಗೊಳಿಸಿದ ಕೆಲವು ದಿನಗಳ ಬಳಿಕ ರಕ್ಷಣಾ ಸಚಿವಾಲಯವು ಈ ಕ್ರಮ ಕೈಗೊಂಡಿದೆ.<br /> <br /> ~ಸರ್ಕಾರವು ಬಿಎಎಂಎಲ್ ಸಿಎಂಡಿ ವಿ.ಆರ್.ಎಸ್. ನಟರಾಜನ್ ಅವರನ್ನು ಸಿಬಿಐ ಶಿಫಾರಸಿನ ಮೇರೆಗೆ ಅಮಾನತಿನಲ್ಲಿ ಇರಿಸಿದೆ. ಪ್ರಾಮಾಣಿಕ ತನಿಖೆಯ ಖಾತರಿಗಾಗಿ ನಟರಾಜನ್ ಅವರನ್ನು ಹುದ್ದೆಯಿಂದ ದೂರದಲ್ಲಿ ಇರಿಸಬೇಕು ಎಂಬುದಾಗಿ ಸಿಬಿಐ ಶಿಫಾರಸು ಮಾಡಿತ್ತು.<br /> <br /> ನಟರಾಜನ್ ವಿರುದ್ಧದ ವಿವಿಧ ಆಪಾದನೆಗಳ ಬಗ್ಗೆ ಸಿಬಿಐ ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು ರಕ್ಷಣಾ ಸಚಿವಾಲಯ ವಕ್ತಾರ ಸಿತಾಂಶು ಕರ್ ಇಲ್ಲಿ ತಿಳಿಸಿದರು.<br /> <br /> ಸಿಎಂಡಿ ಉಸ್ತುವಾರಿಯನ್ನು ಬಿಇಎಂಎಲ್ ನ ಹಿರಿಯ ನಿರ್ದೇಶಕ ಪಿ. ದ್ವಾರಕಾನಾಥ್ ಅವರಿಗೆ ನೀಡಲಾಗಿದೆ ಎಂದು ಅವರು ನುಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>