<p><strong>ನವದೆಹಲಿ (ಪಿಟಿಐ): </strong>ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಟಿ-3 ಟರ್ಮಿನಲ್ನಲ್ಲಿ ನೂತನವಾಗಿ ನಿರ್ಮಿಸಿದ್ದ ಭದ್ರತಾ ಉದ್ದೇಶದ ಕಂಪ್ಯೂಟರ್ಗಳ ಮೇಲೆ ವೈರಸ್ ದಾಳಿ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿದೆ.<br /> <br /> ವೈರಸ್ ದಾಳಿಯಿಂದಾಗಿ ಈ ವ್ಯವಸ್ಥೆಯ ಕಾರ್ಯಾಚರಣೆಯನ್ನು ಸುಮಾರು ಮೂರು ತಿಂಗಳಿನಿಂದ ನಿಲ್ಲಿಸಲಾಗಿದೆ.ವಿಮಾನಗಳ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ನಿಯಂತ್ರಿಸುವ ಜಾಲದ (ಕಾಮನ್ ಯೂಸ್ ಪ್ಯಾಸೆಂಜರ್ಸ್ ಪ್ರೋಸೆಸಿಂಗ್ ಸಿಸ್ಟಂ) ಮೇಲೆ ದಾಳಿ ನಡೆಸುವ ದುರುದ್ದೇಶಪೂರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶಂಕಿಸಿರುವುದಾಗಿ ಸಿಬಿಐನ ಮೂಲಗಳು ಹೇಳಿವೆ. <br /> <br /> ಇದು ತಾಂತ್ರಿಕ ತೊಂದರೆ ಅಲ್ಲ. ಬದಲು ಸೈಬರ್ ದಾಳಿ ಇರಬಹುದು ಎಂದು ತನಿಖೆ ನಡೆಸುತ್ತಿರುವ ಸಿಬಿಐ ಶಂಕಿಸಿದೆ. ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು ಸಂಕೇತಗಳನ್ನು ಒಳಗೊಂಡ ವ್ಯವಸ್ಥೆಯ ಮೂಲವನ್ನು ಇನ್ನೂ ಗುರುತಿಸಬೇಕಿದೆ ಎಂದು ಮೂಲಗಳು ಹೇಳಿವೆ.<br /> <br /> ಸೈಬರ್ ದಾಳಿಯ ಯತ್ನದಿಂದಾಗಿ ಜೂನ್ 29ರಂದು ಟಿ-3ರಲ್ಲಿನ ಎಲ್ಲಾ ಕೌಂಟರ್ಗಳನ್ನು ಮುಚ್ಚಲಾಗಿತ್ತು.<br /> ವಿಮಾನಗಳು ಆಗಮಿಸುವ ಮತ್ತು ಹೊರಡುವ ವೇಳೆಯನ್ನು ತಿಳಿಸುವ ವ್ಯವಸ್ಥೆಯನ್ನು ಮಾತ್ರ 12 ಗಂಟೆಗಳ ನಂತರ ಸರಿಪಡಿಸಲಾಗಿತ್ತು.ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಟಿ ಕಾಯಿದೆಯಡಿ ಸಿಬಿಐ ಪ್ರಕರಣ ದಾಖಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಟಿ-3 ಟರ್ಮಿನಲ್ನಲ್ಲಿ ನೂತನವಾಗಿ ನಿರ್ಮಿಸಿದ್ದ ಭದ್ರತಾ ಉದ್ದೇಶದ ಕಂಪ್ಯೂಟರ್ಗಳ ಮೇಲೆ ವೈರಸ್ ದಾಳಿ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿದೆ.<br /> <br /> ವೈರಸ್ ದಾಳಿಯಿಂದಾಗಿ ಈ ವ್ಯವಸ್ಥೆಯ ಕಾರ್ಯಾಚರಣೆಯನ್ನು ಸುಮಾರು ಮೂರು ತಿಂಗಳಿನಿಂದ ನಿಲ್ಲಿಸಲಾಗಿದೆ.ವಿಮಾನಗಳ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ನಿಯಂತ್ರಿಸುವ ಜಾಲದ (ಕಾಮನ್ ಯೂಸ್ ಪ್ಯಾಸೆಂಜರ್ಸ್ ಪ್ರೋಸೆಸಿಂಗ್ ಸಿಸ್ಟಂ) ಮೇಲೆ ದಾಳಿ ನಡೆಸುವ ದುರುದ್ದೇಶಪೂರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶಂಕಿಸಿರುವುದಾಗಿ ಸಿಬಿಐನ ಮೂಲಗಳು ಹೇಳಿವೆ. <br /> <br /> ಇದು ತಾಂತ್ರಿಕ ತೊಂದರೆ ಅಲ್ಲ. ಬದಲು ಸೈಬರ್ ದಾಳಿ ಇರಬಹುದು ಎಂದು ತನಿಖೆ ನಡೆಸುತ್ತಿರುವ ಸಿಬಿಐ ಶಂಕಿಸಿದೆ. ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು ಸಂಕೇತಗಳನ್ನು ಒಳಗೊಂಡ ವ್ಯವಸ್ಥೆಯ ಮೂಲವನ್ನು ಇನ್ನೂ ಗುರುತಿಸಬೇಕಿದೆ ಎಂದು ಮೂಲಗಳು ಹೇಳಿವೆ.<br /> <br /> ಸೈಬರ್ ದಾಳಿಯ ಯತ್ನದಿಂದಾಗಿ ಜೂನ್ 29ರಂದು ಟಿ-3ರಲ್ಲಿನ ಎಲ್ಲಾ ಕೌಂಟರ್ಗಳನ್ನು ಮುಚ್ಚಲಾಗಿತ್ತು.<br /> ವಿಮಾನಗಳು ಆಗಮಿಸುವ ಮತ್ತು ಹೊರಡುವ ವೇಳೆಯನ್ನು ತಿಳಿಸುವ ವ್ಯವಸ್ಥೆಯನ್ನು ಮಾತ್ರ 12 ಗಂಟೆಗಳ ನಂತರ ಸರಿಪಡಿಸಲಾಗಿತ್ತು.ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಟಿ ಕಾಯಿದೆಯಡಿ ಸಿಬಿಐ ಪ್ರಕರಣ ದಾಖಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>