<p><strong>ಬೆಂಗಳೂರು:</strong> ನಗರದ ಅರಮನೆ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಮೋಜಿ ಗಾಗಿ ಒಬ್ಬರ ಮೇಲೆ ಇನ್ನೊಬ್ಬರು ಟೊಮಾಟೊ ಹಣ್ಣುಗಳನ್ನು ಎಸೆ ಯುವ `ಲಾ ಟೊಮಾಟಿನಾ~ ಉತ್ಸ ವವನ್ನು ರದ್ದು ಮಾಡುವಂತೆ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಬೆಂಗಳೂರು ಮತ್ತು ಮೈಸೂರು ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ.<br /> <br /> `ರೈತರು ಬೆಳೆದ ಟೊಮಾಟೊ ಹಣ್ಣುಗಳನ್ನು ಮೋಜಿಗಾಗಿ ಒಬ್ಬರ ಮೇಲೆ ಒಬ್ಬರು ಎಸೆದುಕೊಳ್ಳುವ `ಲಾ ಟೊಮಾಟಿನಾ~ ಉತ್ಸವದ ಹೆಸರಿನಲ್ಲಿ ಬೆಳೆಯನ್ನು ಹಾಳುಮಾಡಲು ಅವಕಾಶ ನೀಡಬಾರದು~ ಎಂದು ಕೋಲಾರ ಜಿಲ್ಲೆಯ ಟೊಮಾಟೊ ಬೆಳೆಗಾರರು, ಪರಿಸರವಾದಿಗಳು ಹಾಗೂ ಸರ್ಕಾ ರೇತರ ಸಂಘ ಸಂಸ್ಥೆಗಳ ನಿಯೋಗವು ಮುಖ್ಯಮಂತ್ರಿಗಳನ್ನು ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. <br /> <br /> `ಲಾ ಟೊಮಾಟಿನಾ ಉತ್ಸವದಲ್ಲಿ ಐದು ಸಾವಿರ ಜನ ಪಾಲ್ಗೊಳ್ಳಲಿದ್ದಾರೆ. ಪ್ರತಿಯೊಬ್ಬರೂ ಕನಿಷ್ಠ 80ರಿಂದ 100 ಟೊಮಾಟೊ ಹಣ್ಣುಗಳನ್ನು ಮೋಜಿ ಗಾಗಿ ಎಸೆದುಕೊಳ್ಳುತ್ತಾರೆ. ಇದರಿಂದ 5 ಲಕ್ಷ ಟೊಮಾಟೊ ಹಣ್ಣು ಮಣ್ಣು ಪಾಲಾಗಲಿದೆ. ಏನಿಲ್ಲವೆಂದರೂ 62 ಸಾವಿರ ಕೆ.ಜಿ. ಟೊಮಾಟೊ ಶ್ರಿಮಂತರ ಮೋಜಿಗೆ ಹಾಳಾಗುವುದು ಸರಿಯಲ್ಲ~ ಎಂದು ನಿಯೋಗದ ನೇತೃತ್ವ ವಹಿಸಿದ್ದ ಜಯನಗರ ಶಾಸಕ ಬಿ.ಎನ್. ವಿಜಯ ಕುಮಾರ್ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದರು.<br /> <br /> ಮನವಿಗೆ ಸ್ಪಂದಿಸಿದ ಮುಖ್ಯ ಮಂತ್ರಿಗಳು ಈ ಉತ್ಸವವನ್ನು ರದ್ದು ಮಾಡುವಂತೆ ಆದೇಶಿಸಿ ಮೈಸೂರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.<br /> <br /> `ಡಾಟ್~ ಎಂಬ ಸಂಸ್ಥೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ `ಟೊಮಾಟೊ ಸ್ಕ್ವಾಷ್~ ಹೆಸರಿನಲ್ಲಿ `ಲಾ ಟೊಮಾಟಿನಾ~ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿತ್ತು. ಪ್ಯಾಷ ನೇಟ್ ಪ್ರೊಫೆಷನಲ್ಸ್ ಸಂಸ್ಥೆ ಅರಮನೆ ಮೈದಾನದ ಪ್ರಿನ್ಸಸ್ ಅಕಾಡೆಮಿಯಲ್ಲಿ ಭಾನುವಾರ `ಲಾ ಟೊಮಾಟಿನಾ ಫೆಸ್ಟಿವಲ್~ ಹೆಸರಿನಲ್ಲಿ ಇದೇ ಉತ್ಸವ ಆಯೋಜಿಸಲು ಉದ್ದೇಶಿಸಿತ್ತು.<br /> <br /> ಅನುಮತಿ ನಿರಾಕರಣೆ: ಡಾಟ್ ಸಂಸ್ಥೆಯ `ಟೊಮಾಟೊ ಸ್ಕ್ವಾಷ್~ ಕಾರ್ಯಕ್ರಮಕ್ಕೆ ಅನುಮತಿ ನಿರಾಕ ರಿಸಲಾಗಿದೆ. ಪ್ಯಾಷನೇಟ್ ಪ್ರೊಫೆ ಷನಲ್ಸ್ ಸಂಸ್ಥೆ ಪ್ರಿನ್ಸಸ್ ಅಕಾಡೆಮಿ ಯಲ್ಲಿ ಭಾನುವಾರ ಏರ್ಪಡಿಸಲು ಉದ್ದೇಶಿಸಿದ್ದ `ಲಾ ಟೊಮಾಟಿನಾ ಫೆಸ್ಟಿ ವಲ್~ ಕಾರ್ಯಕ್ರಮಕ್ಕೂ ಅನು ಮತಿ ನಿರಾಕರಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> ಅನುಮತಿ ನಿರಾಕರಿಸಿರುವ ಹಿನ್ನೆಲೆ ಯಲ್ಲಿ ಈ ಕಾರ್ಯಕ್ರಮದಲ್ಲಿ ಸಾರ್ವ ಜನಿಕರು ಪಾಲ್ಗೊಳ್ಳಬಾರದು ಎಂದು ಮಿರ್ಜಿ ಮನವಿ ಮಾಡಿದ್ದಾರೆ. ಲಾ ಟೊಮಾಟಿನಾ ಉತ್ಸವದ ವಿರುದ್ಧ ಪಾಪ್ಯುಲರ್ ಸಿಟಿಜನ್ಸ್ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿ, ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡ ಬಾರದು ಎಂದು ನಗರ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಅರಮನೆ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಮೋಜಿ ಗಾಗಿ ಒಬ್ಬರ ಮೇಲೆ ಇನ್ನೊಬ್ಬರು ಟೊಮಾಟೊ ಹಣ್ಣುಗಳನ್ನು ಎಸೆ ಯುವ `ಲಾ ಟೊಮಾಟಿನಾ~ ಉತ್ಸ ವವನ್ನು ರದ್ದು ಮಾಡುವಂತೆ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಬೆಂಗಳೂರು ಮತ್ತು ಮೈಸೂರು ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ.<br /> <br /> `ರೈತರು ಬೆಳೆದ ಟೊಮಾಟೊ ಹಣ್ಣುಗಳನ್ನು ಮೋಜಿಗಾಗಿ ಒಬ್ಬರ ಮೇಲೆ ಒಬ್ಬರು ಎಸೆದುಕೊಳ್ಳುವ `ಲಾ ಟೊಮಾಟಿನಾ~ ಉತ್ಸವದ ಹೆಸರಿನಲ್ಲಿ ಬೆಳೆಯನ್ನು ಹಾಳುಮಾಡಲು ಅವಕಾಶ ನೀಡಬಾರದು~ ಎಂದು ಕೋಲಾರ ಜಿಲ್ಲೆಯ ಟೊಮಾಟೊ ಬೆಳೆಗಾರರು, ಪರಿಸರವಾದಿಗಳು ಹಾಗೂ ಸರ್ಕಾ ರೇತರ ಸಂಘ ಸಂಸ್ಥೆಗಳ ನಿಯೋಗವು ಮುಖ್ಯಮಂತ್ರಿಗಳನ್ನು ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. <br /> <br /> `ಲಾ ಟೊಮಾಟಿನಾ ಉತ್ಸವದಲ್ಲಿ ಐದು ಸಾವಿರ ಜನ ಪಾಲ್ಗೊಳ್ಳಲಿದ್ದಾರೆ. ಪ್ರತಿಯೊಬ್ಬರೂ ಕನಿಷ್ಠ 80ರಿಂದ 100 ಟೊಮಾಟೊ ಹಣ್ಣುಗಳನ್ನು ಮೋಜಿ ಗಾಗಿ ಎಸೆದುಕೊಳ್ಳುತ್ತಾರೆ. ಇದರಿಂದ 5 ಲಕ್ಷ ಟೊಮಾಟೊ ಹಣ್ಣು ಮಣ್ಣು ಪಾಲಾಗಲಿದೆ. ಏನಿಲ್ಲವೆಂದರೂ 62 ಸಾವಿರ ಕೆ.ಜಿ. ಟೊಮಾಟೊ ಶ್ರಿಮಂತರ ಮೋಜಿಗೆ ಹಾಳಾಗುವುದು ಸರಿಯಲ್ಲ~ ಎಂದು ನಿಯೋಗದ ನೇತೃತ್ವ ವಹಿಸಿದ್ದ ಜಯನಗರ ಶಾಸಕ ಬಿ.ಎನ್. ವಿಜಯ ಕುಮಾರ್ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದರು.<br /> <br /> ಮನವಿಗೆ ಸ್ಪಂದಿಸಿದ ಮುಖ್ಯ ಮಂತ್ರಿಗಳು ಈ ಉತ್ಸವವನ್ನು ರದ್ದು ಮಾಡುವಂತೆ ಆದೇಶಿಸಿ ಮೈಸೂರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.<br /> <br /> `ಡಾಟ್~ ಎಂಬ ಸಂಸ್ಥೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ `ಟೊಮಾಟೊ ಸ್ಕ್ವಾಷ್~ ಹೆಸರಿನಲ್ಲಿ `ಲಾ ಟೊಮಾಟಿನಾ~ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿತ್ತು. ಪ್ಯಾಷ ನೇಟ್ ಪ್ರೊಫೆಷನಲ್ಸ್ ಸಂಸ್ಥೆ ಅರಮನೆ ಮೈದಾನದ ಪ್ರಿನ್ಸಸ್ ಅಕಾಡೆಮಿಯಲ್ಲಿ ಭಾನುವಾರ `ಲಾ ಟೊಮಾಟಿನಾ ಫೆಸ್ಟಿವಲ್~ ಹೆಸರಿನಲ್ಲಿ ಇದೇ ಉತ್ಸವ ಆಯೋಜಿಸಲು ಉದ್ದೇಶಿಸಿತ್ತು.<br /> <br /> ಅನುಮತಿ ನಿರಾಕರಣೆ: ಡಾಟ್ ಸಂಸ್ಥೆಯ `ಟೊಮಾಟೊ ಸ್ಕ್ವಾಷ್~ ಕಾರ್ಯಕ್ರಮಕ್ಕೆ ಅನುಮತಿ ನಿರಾಕ ರಿಸಲಾಗಿದೆ. ಪ್ಯಾಷನೇಟ್ ಪ್ರೊಫೆ ಷನಲ್ಸ್ ಸಂಸ್ಥೆ ಪ್ರಿನ್ಸಸ್ ಅಕಾಡೆಮಿ ಯಲ್ಲಿ ಭಾನುವಾರ ಏರ್ಪಡಿಸಲು ಉದ್ದೇಶಿಸಿದ್ದ `ಲಾ ಟೊಮಾಟಿನಾ ಫೆಸ್ಟಿ ವಲ್~ ಕಾರ್ಯಕ್ರಮಕ್ಕೂ ಅನು ಮತಿ ನಿರಾಕರಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> ಅನುಮತಿ ನಿರಾಕರಿಸಿರುವ ಹಿನ್ನೆಲೆ ಯಲ್ಲಿ ಈ ಕಾರ್ಯಕ್ರಮದಲ್ಲಿ ಸಾರ್ವ ಜನಿಕರು ಪಾಲ್ಗೊಳ್ಳಬಾರದು ಎಂದು ಮಿರ್ಜಿ ಮನವಿ ಮಾಡಿದ್ದಾರೆ. ಲಾ ಟೊಮಾಟಿನಾ ಉತ್ಸವದ ವಿರುದ್ಧ ಪಾಪ್ಯುಲರ್ ಸಿಟಿಜನ್ಸ್ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿ, ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡ ಬಾರದು ಎಂದು ನಗರ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>