<p><strong>ತುಮಕೂರು: </strong>ಸ್ವಸಹಾಯ ಗುಂಪುಗಳ ರಚನೆ, ಸಾಲ ಜೋಡಣೆಯಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗೆ ನಬಾರ್ಡ್ ಈಚೆಗೆ `ಅತ್ಯುತ್ತಮ ಸಾಧನೆ~ ಪ್ರಶಸ್ತಿ ನೀಡಿ ಗೌರವಿಸಿತು.<br /> <br /> ಸ್ವಸಹಾಯ ಗುಂಪುಗಳ ವಿಭಾಗದಲ್ಲಿ ಬ್ಯಾಂಕ್ ಸಮಗ್ರ ಸಾಧನೆ, ಶಾಖೆಗಳ ವಿಭಾಗದಲ್ಲಿ ರಾಜ್ಯದಲ್ಲಿಯೇ ಅತಿಹೆಚ್ಚು ಪ್ರಗತಿ ಸಾಧಿಸಿದ ಮಧುಗಿರಿ ಶಾಖೆಗೆ ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಎ.ಜಿನ್ನಾ ಸಮ್ಮುಖದಲ್ಲಿ ರಾಜ್ಯ ಕೃಷಿ ಸಚಿವ ಉಮೇಶ್ಕತ್ತಿ ಬಹುಮಾನ ವಿತರಿಸಿದರು.<br /> <br /> ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ವಿ.ನರಸಿಂಹಮೂರ್ತಿ ಬ್ಯಾಂಕ್ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಬ್ಯಾಂಕ್ ಸ್ವಸಹಾಯ ಗುಂಪುಗಳ ನೋಡೆಲ್ ಅಧಿಕಾರಿ ಟಿ.ಕೆ.ಧನಲಕ್ಷ್ಮಿ, ಮಧುಗಿರಿ ಶಾಖೆ ಮೇಲ್ವಿಚಾರಕರಾದ ಸೀತಾರಾಮು, ಎಚ್.ಸಿ.ತಿಮ್ಮರಾಜು ಉಪಸ್ಥಿತರಿದ್ದರು.<br /> <br /> ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಕಾಮಧೇನು ಸ್ವಸಹಾಯ ಕಾರ್ಡ್ಗಳ ಮೂಲಕ ರೂ. 53 ಕೋಟಿಗೂ ಹೆಚ್ಚು ಸಾಲ ಸೌಲಭ್ಯವನ್ನು ಡಿಸಿಸಿ ಬ್ಯಾಂಕ್ ಒದಗಿಸಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಸ್ವಸಹಾಯ ಗುಂಪುಗಳ ರಚನೆ, ಸಾಲ ಜೋಡಣೆಯಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗೆ ನಬಾರ್ಡ್ ಈಚೆಗೆ `ಅತ್ಯುತ್ತಮ ಸಾಧನೆ~ ಪ್ರಶಸ್ತಿ ನೀಡಿ ಗೌರವಿಸಿತು.<br /> <br /> ಸ್ವಸಹಾಯ ಗುಂಪುಗಳ ವಿಭಾಗದಲ್ಲಿ ಬ್ಯಾಂಕ್ ಸಮಗ್ರ ಸಾಧನೆ, ಶಾಖೆಗಳ ವಿಭಾಗದಲ್ಲಿ ರಾಜ್ಯದಲ್ಲಿಯೇ ಅತಿಹೆಚ್ಚು ಪ್ರಗತಿ ಸಾಧಿಸಿದ ಮಧುಗಿರಿ ಶಾಖೆಗೆ ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಎ.ಜಿನ್ನಾ ಸಮ್ಮುಖದಲ್ಲಿ ರಾಜ್ಯ ಕೃಷಿ ಸಚಿವ ಉಮೇಶ್ಕತ್ತಿ ಬಹುಮಾನ ವಿತರಿಸಿದರು.<br /> <br /> ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ವಿ.ನರಸಿಂಹಮೂರ್ತಿ ಬ್ಯಾಂಕ್ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಬ್ಯಾಂಕ್ ಸ್ವಸಹಾಯ ಗುಂಪುಗಳ ನೋಡೆಲ್ ಅಧಿಕಾರಿ ಟಿ.ಕೆ.ಧನಲಕ್ಷ್ಮಿ, ಮಧುಗಿರಿ ಶಾಖೆ ಮೇಲ್ವಿಚಾರಕರಾದ ಸೀತಾರಾಮು, ಎಚ್.ಸಿ.ತಿಮ್ಮರಾಜು ಉಪಸ್ಥಿತರಿದ್ದರು.<br /> <br /> ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಕಾಮಧೇನು ಸ್ವಸಹಾಯ ಕಾರ್ಡ್ಗಳ ಮೂಲಕ ರೂ. 53 ಕೋಟಿಗೂ ಹೆಚ್ಚು ಸಾಲ ಸೌಲಭ್ಯವನ್ನು ಡಿಸಿಸಿ ಬ್ಯಾಂಕ್ ಒದಗಿಸಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>