<p><strong>ನವದೆಹಲಿ (ಪಿಟಿಐ): </strong>ಐಪಿಎಲ್ ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲ್ ವಲ್ತಾಟಿ ಡ್ರೆಸ್ಸಿಂಗ್ ಕೊಠಡಿಯ ಬಾಗಿಲು ಮುರಿದಿದ್ದಾರೆ. ಆದ್ದರಿಂದ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರಿಗೆ ದೂರು ನೀಡಿದೆ.<br /> <br /> ಪುಣೆ ವಾರಿಯರ್ಸ್ ವಿರುದ್ಧದ ಈ ಪಂದ್ಯದಲ್ಲಿ `ಪಂಜಾಬ್ ತಂಡದ ನಾಯಕ ಆ್ಯಡಮ್ ಗಿಲ್ಕ್ರಿಸ್ಟ್ ಡ್ರೆಸ್ಸಿಂಗ್ ಕೊಠಡಿಯ ಬಾಗಿಲು ಮುರಿದಿದ್ದಾರೆ~ ಎಂದು ಮೊದಲು ಎಂಸಿಎ ಮೂಲಗಳು ತಿಳಿಸಿದ್ದವು. ಅವರು ಈ ಪಂದ್ಯದಲ್ಲಿ ಕೇವಲ ಆರು ರನ್ಗೆ ಔಟಾಗಿದ್ದರು. <br /> <br /> ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶುಕ್ಲಾ ಪಂದ್ಯದ ರೆಫರಿಗೆ ತಿಳಿಸಿದ್ದರು. ಆದರೆ, ಪ್ರಾಥಮಿಕ ತನಿಖೆಯ ನಂತರ ಈ ಘಟನೆಗೆ ಕಾರಣವಾಗಿದ್ದು, ಗಿಲ್ಕ್ರಿಸ್ಟ್ ಅಲ್ಲ, ವಲ್ತಾಟಿ ಎಂಬುದು ಗೊತ್ತಾಗಿದೆ ಎಂದು ಐಪಿಎಲ್ ಮೂಲಗಳು ಹೇಳಿವೆ. ವಲ್ತಾಟಿ ಸಹ ಈ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದ್ದರು.<br /> <br /> ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್ 22 ರನ್ಗಳ ಸೋಲು ಅನುಭವಿಸಿತ್ತು. ಈ ಘಟನೆ ಆಕಸ್ಮಿಕ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಐಪಿಎಲ್ ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲ್ ವಲ್ತಾಟಿ ಡ್ರೆಸ್ಸಿಂಗ್ ಕೊಠಡಿಯ ಬಾಗಿಲು ಮುರಿದಿದ್ದಾರೆ. ಆದ್ದರಿಂದ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರಿಗೆ ದೂರು ನೀಡಿದೆ.<br /> <br /> ಪುಣೆ ವಾರಿಯರ್ಸ್ ವಿರುದ್ಧದ ಈ ಪಂದ್ಯದಲ್ಲಿ `ಪಂಜಾಬ್ ತಂಡದ ನಾಯಕ ಆ್ಯಡಮ್ ಗಿಲ್ಕ್ರಿಸ್ಟ್ ಡ್ರೆಸ್ಸಿಂಗ್ ಕೊಠಡಿಯ ಬಾಗಿಲು ಮುರಿದಿದ್ದಾರೆ~ ಎಂದು ಮೊದಲು ಎಂಸಿಎ ಮೂಲಗಳು ತಿಳಿಸಿದ್ದವು. ಅವರು ಈ ಪಂದ್ಯದಲ್ಲಿ ಕೇವಲ ಆರು ರನ್ಗೆ ಔಟಾಗಿದ್ದರು. <br /> <br /> ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶುಕ್ಲಾ ಪಂದ್ಯದ ರೆಫರಿಗೆ ತಿಳಿಸಿದ್ದರು. ಆದರೆ, ಪ್ರಾಥಮಿಕ ತನಿಖೆಯ ನಂತರ ಈ ಘಟನೆಗೆ ಕಾರಣವಾಗಿದ್ದು, ಗಿಲ್ಕ್ರಿಸ್ಟ್ ಅಲ್ಲ, ವಲ್ತಾಟಿ ಎಂಬುದು ಗೊತ್ತಾಗಿದೆ ಎಂದು ಐಪಿಎಲ್ ಮೂಲಗಳು ಹೇಳಿವೆ. ವಲ್ತಾಟಿ ಸಹ ಈ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದ್ದರು.<br /> <br /> ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್ 22 ರನ್ಗಳ ಸೋಲು ಅನುಭವಿಸಿತ್ತು. ಈ ಘಟನೆ ಆಕಸ್ಮಿಕ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>