<p>ಹಂಪಿಯ ದೇವಸ್ಥಾನಗಳು ಹಾಗೂ ಐತಿಹಾಸಿಕ ಸ್ಮಾರಕಗಳ ಸುರಕ್ಷತಾ ವಲಯದಲ್ಲಿ ಅಕ್ರಮ ಕಟ್ಟಡಗಳಿಗೆ ಅವಕಾಶ ಕೊಡಬಾರದು ಎಂಬ ರಾಜ್ಯ ಹೈಕೋಟಿನ ವಿಭಾಗೀಯ ಪೀಠದ ಆದೇಶ ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಎತ್ತಿ ಹಿಡಿಯುವ ಮಹತ್ವದ ನಿರ್ಧಾರ. <br /> <br /> ವಿರೂಪಾಕ್ಷ ದೇವಸ್ಥಾನ ಬೀದಿಯಲ್ಲಿರುವ ವಿಜಯನಗರ ಕಾಲದ ಮಂಟಪಗಳ ಅತಿಕ್ರಮಣವನ್ನು ಹಂಪಿ ಪ್ರಾಧಿಕಾರ ಈಗಾಗಲೇ ತೆರವುಗೊಳಿಸಿದೆ.<br /> <br /> ತೆರವು ವಿರುದ್ಧ ಸ್ಥಳೀಯರ ಆಕ್ಷೇಪಗಳು ಸಮರ್ಥನೀಯವಲ್ಲ. ಯಾವುದೇ ಕಾರಣಕ್ಕೂ ಒತ್ತುವರಿಯನ್ನು ಸಹಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇಡೀ ಹಂಪಿಯನ್ನು ಯುನೆಸ್ಕೊ `ವಿಶ್ವ ಪರಂಪರೆಯ ತಾಣ~ಎಂದು ಘೋಷಿಸಿದೆ.<br /> <br /> ಯುನೆಸ್ಕೊ ನಿಗದಿ ಪಡಿಸಿರುವ ಸಂರಕ್ಷಣಾ ಮಾನದಂಡಗಳನ್ನು ಅಳವಡಿಸಿಕೊಂಡು ಸ್ಮಾರಕಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರ್ಕಾರ ತಜ್ಞರ ಸಲಹೆಯನ್ನೂ ಪಡೆಯಬೇಕು. <br /> <br /> 1980ರ ದಶಕದಲ್ಲೇ ರಾಜ್ಯ ಸರ್ಕಾರ ಮಂಟಪಗಳ ತೆರವಿಗೆ ಆದೇಶ ಹೊರಡಿಸಿತ್ತು. ರಾಜಕೀಯ ಕಾರಣಗಳಿಂದಾಗಿ ತೆರವು ಸಾಧ್ಯವಾಗಿರಲಿಲ್ಲ. ಮಂಟಪಗಳನ್ನು ಮಳಿಗೆಗಳನ್ನಾಗಿ ಪರಿವರ್ತಿಸಿ ಅಲ್ಲಿ ನಾನಾ ವಸ್ತುಗಳ ಮಾರಾಟ ನಡೆಯುತ್ತಿತ್ತು. <br /> <br /> ಕೆಲ ಮಂಟಪಗಳು ವಾಸದ ಮನೆಗಳಾಗಿದ್ದವು. ಅತಿಕ್ರಮಣ ತೆರವುಗೊಳಿಸದಿದ್ದರೆ `ವಿಶ್ವ ಪರಂಪರೆಯ ತಾಣ~ದ ಮಾನ್ಯತೆಯನ್ನೇ ಹಿಂಪಡೆಯುವ ಎಚ್ಚರಿಕೆಯನ್ನು ಯುನೆಸ್ಕೊ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ತೆಗೆದುಕೊಂಡ ಕ್ರಮಗಳು ಸ್ವಾಗತಾರ್ಹ. <br /> <br /> ಸ್ಮಾರಕಗಳ ಸಂರಕ್ಷಣೆಯೂ ಆಗಬೇಕು, ಅತಿಕ್ರಮಣವನ್ನೂ ತೆರವುಗೊಳಿಸಬಾರದು ಎಂಬ ಸ್ಥಳೀಯರ ಧೋರಣೆಯನ್ನು ಒಪ್ಪಲಾಗದು. ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸ್ಮಾರಕಗಳಿಗೆ ಉಳಿಗಾಲವಿಲ್ಲ. <br /> <br /> ಹಂಪಿ, ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆ ಸಂಕೇತ. ಅದು ಇಡೀ ಜಗತ್ತಿನ ಗಮನ ಸೆಳೆದಿದೆ. ಹಂಪಿಯ ಸ್ಮಾರಕಗಳ ಸುತ್ತಲಿನ ಭೂಮಿ ಅತಿಕ್ರಮಣ ಅಗಾಧ ಸ್ವರೂಪದ್ದು. ರಕ್ಕಸತಂಗಡಿ ಯುದ್ಧದ ನಂತರ ಹಂಪಿ ನಾಶವಾಯಿತು. <br /> <br /> ನಂತರದ ದಿನಗಳಲ್ಲಿ ಹಂಪಿಯನ್ನು ರಕ್ಷಣೆ ಮಾಡುವ ಸ್ಥಳೀಯ ಆಡಳಿತ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಮೂರುನಾಲ್ಕು ಶತಮಾನಗಳ ಹಿಂದಿನಿಂದಲೂ ಒತ್ತುವರಿ ಆಗುತ್ತಲೇ ಇದೆ. <br /> <br /> ಸ್ಮಾರಕಗಳ ಸುತ್ತಲಿನ ಭೂಮಿಯಲ್ಲಿ ಸಾಗುವಳಿ ನಡೆಯುತ್ತಿದೆ. ಅದನ್ನೆಲ್ಲ ತೆರವುಗೊಳಿಸುವುದು ದೊಡ್ಡ ಸವಾಲು. ಅದೇನೇ ಇರಲಿ, ಹಂಪಿ ನೋಡಲು ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನೂ ಒದಗಿಸುವುದಕ್ಕೂ ಸರ್ಕಾರ ಗಮನ ಕೊಡಬೇಕು.<br /> <br /> ಹಂಪಿಯ ಸ್ಮಾರಕಗಳು ವಿಶಾಲ ಭೂ ಪ್ರದೇಶದಲ್ಲಿ ಹರಡಿಕೊಂಡಿರುವುದರಿಂದ ಒತ್ತುವರಿಯ ಮೇಲೆ ನಿಗಾ ಇಡಲು ಸರ್ಕಾರ ಗಮನ ಕೊಡಬೇಕು. ಸ್ಮಾರಕಗಳ ಸಮೀಪದಲ್ಲಿ ವಾಹನ ಓಡಾಟ ನಿರ್ಬಂಧಿಸುವ ಬಗ್ಗೆಯೂ ನಿರ್ಧರಿಸಬೇಕು.<br /> <br /> ಅಲ್ಲಿನ ಕಲ್ಲುಬಂಡೆಗಳ ಮೇಲೆ ಗಾಢ ಬಣ್ಣಗಳಲ್ಲಿ ಜಾಹೀರಾತು ಘೋಷಣೆಗಳನ್ನು ಬರೆಯುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಸ್ಮಾರಕ ಸಂರಕ್ಷಣೆ ಮತ್ತು ಒತ್ತುವರಿ ಆಗದಂತೆ ನೋಡಿಕೊಳ್ಳಲು ಕಾವಲು ಸಮಿತಿಯ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಂಪಿಯ ದೇವಸ್ಥಾನಗಳು ಹಾಗೂ ಐತಿಹಾಸಿಕ ಸ್ಮಾರಕಗಳ ಸುರಕ್ಷತಾ ವಲಯದಲ್ಲಿ ಅಕ್ರಮ ಕಟ್ಟಡಗಳಿಗೆ ಅವಕಾಶ ಕೊಡಬಾರದು ಎಂಬ ರಾಜ್ಯ ಹೈಕೋಟಿನ ವಿಭಾಗೀಯ ಪೀಠದ ಆದೇಶ ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಎತ್ತಿ ಹಿಡಿಯುವ ಮಹತ್ವದ ನಿರ್ಧಾರ. <br /> <br /> ವಿರೂಪಾಕ್ಷ ದೇವಸ್ಥಾನ ಬೀದಿಯಲ್ಲಿರುವ ವಿಜಯನಗರ ಕಾಲದ ಮಂಟಪಗಳ ಅತಿಕ್ರಮಣವನ್ನು ಹಂಪಿ ಪ್ರಾಧಿಕಾರ ಈಗಾಗಲೇ ತೆರವುಗೊಳಿಸಿದೆ.<br /> <br /> ತೆರವು ವಿರುದ್ಧ ಸ್ಥಳೀಯರ ಆಕ್ಷೇಪಗಳು ಸಮರ್ಥನೀಯವಲ್ಲ. ಯಾವುದೇ ಕಾರಣಕ್ಕೂ ಒತ್ತುವರಿಯನ್ನು ಸಹಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇಡೀ ಹಂಪಿಯನ್ನು ಯುನೆಸ್ಕೊ `ವಿಶ್ವ ಪರಂಪರೆಯ ತಾಣ~ಎಂದು ಘೋಷಿಸಿದೆ.<br /> <br /> ಯುನೆಸ್ಕೊ ನಿಗದಿ ಪಡಿಸಿರುವ ಸಂರಕ್ಷಣಾ ಮಾನದಂಡಗಳನ್ನು ಅಳವಡಿಸಿಕೊಂಡು ಸ್ಮಾರಕಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರ್ಕಾರ ತಜ್ಞರ ಸಲಹೆಯನ್ನೂ ಪಡೆಯಬೇಕು. <br /> <br /> 1980ರ ದಶಕದಲ್ಲೇ ರಾಜ್ಯ ಸರ್ಕಾರ ಮಂಟಪಗಳ ತೆರವಿಗೆ ಆದೇಶ ಹೊರಡಿಸಿತ್ತು. ರಾಜಕೀಯ ಕಾರಣಗಳಿಂದಾಗಿ ತೆರವು ಸಾಧ್ಯವಾಗಿರಲಿಲ್ಲ. ಮಂಟಪಗಳನ್ನು ಮಳಿಗೆಗಳನ್ನಾಗಿ ಪರಿವರ್ತಿಸಿ ಅಲ್ಲಿ ನಾನಾ ವಸ್ತುಗಳ ಮಾರಾಟ ನಡೆಯುತ್ತಿತ್ತು. <br /> <br /> ಕೆಲ ಮಂಟಪಗಳು ವಾಸದ ಮನೆಗಳಾಗಿದ್ದವು. ಅತಿಕ್ರಮಣ ತೆರವುಗೊಳಿಸದಿದ್ದರೆ `ವಿಶ್ವ ಪರಂಪರೆಯ ತಾಣ~ದ ಮಾನ್ಯತೆಯನ್ನೇ ಹಿಂಪಡೆಯುವ ಎಚ್ಚರಿಕೆಯನ್ನು ಯುನೆಸ್ಕೊ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ತೆಗೆದುಕೊಂಡ ಕ್ರಮಗಳು ಸ್ವಾಗತಾರ್ಹ. <br /> <br /> ಸ್ಮಾರಕಗಳ ಸಂರಕ್ಷಣೆಯೂ ಆಗಬೇಕು, ಅತಿಕ್ರಮಣವನ್ನೂ ತೆರವುಗೊಳಿಸಬಾರದು ಎಂಬ ಸ್ಥಳೀಯರ ಧೋರಣೆಯನ್ನು ಒಪ್ಪಲಾಗದು. ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸ್ಮಾರಕಗಳಿಗೆ ಉಳಿಗಾಲವಿಲ್ಲ. <br /> <br /> ಹಂಪಿ, ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆ ಸಂಕೇತ. ಅದು ಇಡೀ ಜಗತ್ತಿನ ಗಮನ ಸೆಳೆದಿದೆ. ಹಂಪಿಯ ಸ್ಮಾರಕಗಳ ಸುತ್ತಲಿನ ಭೂಮಿ ಅತಿಕ್ರಮಣ ಅಗಾಧ ಸ್ವರೂಪದ್ದು. ರಕ್ಕಸತಂಗಡಿ ಯುದ್ಧದ ನಂತರ ಹಂಪಿ ನಾಶವಾಯಿತು. <br /> <br /> ನಂತರದ ದಿನಗಳಲ್ಲಿ ಹಂಪಿಯನ್ನು ರಕ್ಷಣೆ ಮಾಡುವ ಸ್ಥಳೀಯ ಆಡಳಿತ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಮೂರುನಾಲ್ಕು ಶತಮಾನಗಳ ಹಿಂದಿನಿಂದಲೂ ಒತ್ತುವರಿ ಆಗುತ್ತಲೇ ಇದೆ. <br /> <br /> ಸ್ಮಾರಕಗಳ ಸುತ್ತಲಿನ ಭೂಮಿಯಲ್ಲಿ ಸಾಗುವಳಿ ನಡೆಯುತ್ತಿದೆ. ಅದನ್ನೆಲ್ಲ ತೆರವುಗೊಳಿಸುವುದು ದೊಡ್ಡ ಸವಾಲು. ಅದೇನೇ ಇರಲಿ, ಹಂಪಿ ನೋಡಲು ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನೂ ಒದಗಿಸುವುದಕ್ಕೂ ಸರ್ಕಾರ ಗಮನ ಕೊಡಬೇಕು.<br /> <br /> ಹಂಪಿಯ ಸ್ಮಾರಕಗಳು ವಿಶಾಲ ಭೂ ಪ್ರದೇಶದಲ್ಲಿ ಹರಡಿಕೊಂಡಿರುವುದರಿಂದ ಒತ್ತುವರಿಯ ಮೇಲೆ ನಿಗಾ ಇಡಲು ಸರ್ಕಾರ ಗಮನ ಕೊಡಬೇಕು. ಸ್ಮಾರಕಗಳ ಸಮೀಪದಲ್ಲಿ ವಾಹನ ಓಡಾಟ ನಿರ್ಬಂಧಿಸುವ ಬಗ್ಗೆಯೂ ನಿರ್ಧರಿಸಬೇಕು.<br /> <br /> ಅಲ್ಲಿನ ಕಲ್ಲುಬಂಡೆಗಳ ಮೇಲೆ ಗಾಢ ಬಣ್ಣಗಳಲ್ಲಿ ಜಾಹೀರಾತು ಘೋಷಣೆಗಳನ್ನು ಬರೆಯುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಸ್ಮಾರಕ ಸಂರಕ್ಷಣೆ ಮತ್ತು ಒತ್ತುವರಿ ಆಗದಂತೆ ನೋಡಿಕೊಳ್ಳಲು ಕಾವಲು ಸಮಿತಿಯ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>