<p>ಅಮೀನಗಡ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಹಿತರಕ್ಷಣಾ ಸಮಿತಿ ಇಲ್ಲಿನ ನಾಡ ಕಾರ್ಯಾಲಯದ ಎದುರು ಸೋಮವಾರದಿಂದ ಪ್ರಾರಂಭಿಸಿದ್ದ ಅನಿರ್ಧಿಷ್ಟ ಸರದಿ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ.<br /> <br /> ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹುನಗುಂದ ತಹಶೀಲ್ದಾರ ಶ್ರೀಮತಿ ಅಪರ್ಣಾ ಪಾವಟೆ ಅವರು, ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಸತ್ಯಾಗ್ರಹ ಕೈಬಿಡಬೇಕು ಎಂದು ಪ್ರತಿಭಟನಾಕಾರರ ಮನವೊಲಿಸಲು ಯಶಸ್ವಿಯಾದರು.<br /> <br /> ಉಪತಹಶೀಲ್ದಾರ ಎಫ್.ಬಿ. ಗೌಡರ, ಆಹಾರ ಇಲಾಖೆಯ ಎ.ಎಚ್.ಢವಳಗಿ, ಗ್ರಾಮಲೆಕ್ಕಾಧಿಕಾರಿ ಹೆಬ್ಬಳ್ಳಿ, ವಕೀಲ ರವಿಕುಮಾರ ಪಟ್ಟದಕಲ್ಲ, ಹಿತರಕ್ಷಣಾ ಮುಖಂಡರಾದ ಪಿ.ಜಿ. ಮೂಲಿಮನಿ, ಸಿ.ಆರ್. ಗೋಕಾವಿ, ಸಿದ್ದಣ್ಣ ಕಂಬಳಿ, ದೊಡಮನಿ, ಶೇಖರಪ್ಪ ಜಿರ್ಲಿ, ಧರ್ಮವ್ವ ಕಂಗಳ, ದಾನಮ್ಮ ಇಂಗಳಗಿ, ಮುತ್ತಣ್ಣ ಹಿರೇಮಠ, ಭಾಗವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಮೀನಗಡ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಹಿತರಕ್ಷಣಾ ಸಮಿತಿ ಇಲ್ಲಿನ ನಾಡ ಕಾರ್ಯಾಲಯದ ಎದುರು ಸೋಮವಾರದಿಂದ ಪ್ರಾರಂಭಿಸಿದ್ದ ಅನಿರ್ಧಿಷ್ಟ ಸರದಿ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ.<br /> <br /> ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹುನಗುಂದ ತಹಶೀಲ್ದಾರ ಶ್ರೀಮತಿ ಅಪರ್ಣಾ ಪಾವಟೆ ಅವರು, ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಸತ್ಯಾಗ್ರಹ ಕೈಬಿಡಬೇಕು ಎಂದು ಪ್ರತಿಭಟನಾಕಾರರ ಮನವೊಲಿಸಲು ಯಶಸ್ವಿಯಾದರು.<br /> <br /> ಉಪತಹಶೀಲ್ದಾರ ಎಫ್.ಬಿ. ಗೌಡರ, ಆಹಾರ ಇಲಾಖೆಯ ಎ.ಎಚ್.ಢವಳಗಿ, ಗ್ರಾಮಲೆಕ್ಕಾಧಿಕಾರಿ ಹೆಬ್ಬಳ್ಳಿ, ವಕೀಲ ರವಿಕುಮಾರ ಪಟ್ಟದಕಲ್ಲ, ಹಿತರಕ್ಷಣಾ ಮುಖಂಡರಾದ ಪಿ.ಜಿ. ಮೂಲಿಮನಿ, ಸಿ.ಆರ್. ಗೋಕಾವಿ, ಸಿದ್ದಣ್ಣ ಕಂಬಳಿ, ದೊಡಮನಿ, ಶೇಖರಪ್ಪ ಜಿರ್ಲಿ, ಧರ್ಮವ್ವ ಕಂಗಳ, ದಾನಮ್ಮ ಇಂಗಳಗಿ, ಮುತ್ತಣ್ಣ ಹಿರೇಮಠ, ಭಾಗವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>