<p><br /> <strong>ಮುಳಬಾಗಲು:</strong> ತಾಯಂದಿಯರು ಹೆಣ್ಣು ಮಕ್ಕಳೊಂದಿಗೆ ಸ್ನೇಹದಿಂದ ವರ್ತಿಸಿ ಮನಸ್ಸನ್ನು ಗೆಲ್ಲುವು ಮೂಲಕ ಅನಾಹುತಗಳನ್ನು ತಪ್ಪಿಸಬಹುದು ಎಂದು ಶಾಲೆಯ ಕಾರ್ಯದರ್ಶಿ ಕೆ.ರಾಮಚಂದ್ರ ಹೇಳಿದರು.<br /> <br /> ತಾಲ್ಲೂಕಿನ ನಂಗಲಿ ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಈಚೆಗೆ ನಡೆದ ತಾಯಂದಿಯರ ಸಭೆಯಲ್ಲಿ ಮಾತನಾಡಿದರು.<br /> ಮನೆಯಲ್ಲಿ ಮಕ್ಕಳ ಮೇಲೆ ಹಲವು ವಿಷಯಗಳಲ್ಲಿ ಅಧಿಕ ಒತ್ತಡ ಹೇರದೆ ತಾಳ್ಮೆಯಿಂದ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.<br /> <br /> ಮನೆಯಲ್ಲಿ ಪೋಷಕರು ಶಾಲಾ ತರಗತಿಗಳಲ್ಲಿ ನಡೆದ ಪಾಠ ಪ್ರವಚನಗಳ ಬಗ್ಗೆ ಚರ್ಚಿಸಬೇಕು. ಹೆಣ್ಣು ಮಕ್ಕಳ ಬಗ್ಗೆ ತಾಯಂದಿಯರು ಜಾಗರೂಕತೆಯಿಂದ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.<br /> <br /> ಸ್ವಾಮಿ ವಿವೇಕಾನಂದ ಆಂಗ್ಲ ಶಾಲೆ ಮುಖ್ಯ ಶಿಕ್ಷಕ ಡಿ.ಸಿ.ಜನಾರ್ದನ್, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಂ.ಶ್ರೀನಿವಾಸ್, ಶಿಕ್ಷಕರಾದ ಬಾಬು, ಸುಬ್ರಮಣಿ, ದೇವರಾಜ್, ಮಾನಸಾ ಮತ್ತಿತರರು ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> <strong>ಮುಳಬಾಗಲು:</strong> ತಾಯಂದಿಯರು ಹೆಣ್ಣು ಮಕ್ಕಳೊಂದಿಗೆ ಸ್ನೇಹದಿಂದ ವರ್ತಿಸಿ ಮನಸ್ಸನ್ನು ಗೆಲ್ಲುವು ಮೂಲಕ ಅನಾಹುತಗಳನ್ನು ತಪ್ಪಿಸಬಹುದು ಎಂದು ಶಾಲೆಯ ಕಾರ್ಯದರ್ಶಿ ಕೆ.ರಾಮಚಂದ್ರ ಹೇಳಿದರು.<br /> <br /> ತಾಲ್ಲೂಕಿನ ನಂಗಲಿ ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಈಚೆಗೆ ನಡೆದ ತಾಯಂದಿಯರ ಸಭೆಯಲ್ಲಿ ಮಾತನಾಡಿದರು.<br /> ಮನೆಯಲ್ಲಿ ಮಕ್ಕಳ ಮೇಲೆ ಹಲವು ವಿಷಯಗಳಲ್ಲಿ ಅಧಿಕ ಒತ್ತಡ ಹೇರದೆ ತಾಳ್ಮೆಯಿಂದ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.<br /> <br /> ಮನೆಯಲ್ಲಿ ಪೋಷಕರು ಶಾಲಾ ತರಗತಿಗಳಲ್ಲಿ ನಡೆದ ಪಾಠ ಪ್ರವಚನಗಳ ಬಗ್ಗೆ ಚರ್ಚಿಸಬೇಕು. ಹೆಣ್ಣು ಮಕ್ಕಳ ಬಗ್ಗೆ ತಾಯಂದಿಯರು ಜಾಗರೂಕತೆಯಿಂದ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.<br /> <br /> ಸ್ವಾಮಿ ವಿವೇಕಾನಂದ ಆಂಗ್ಲ ಶಾಲೆ ಮುಖ್ಯ ಶಿಕ್ಷಕ ಡಿ.ಸಿ.ಜನಾರ್ದನ್, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಂ.ಶ್ರೀನಿವಾಸ್, ಶಿಕ್ಷಕರಾದ ಬಾಬು, ಸುಬ್ರಮಣಿ, ದೇವರಾಜ್, ಮಾನಸಾ ಮತ್ತಿತರರು ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>