<p><strong>ಯಲಹಂಕ: </strong>ಇಲ್ಲಿನ ಕೋಗಿಲು ಬಡಾವಣೆಯ ಬಂಡೆ ಪ್ರದೇಶದ ನೀರಿನ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ತಾಯಿ ಮತ್ತು ಇಬ್ಬರು ಗಂಡು ಮಕ್ಕಳ ಮೃತ ದೇಹಗಳ ಗುರುತು ಪತ್ತೆಯಾಗಿದೆ.<br /> <br /> ಚಿಕ್ಕಬಳ್ಳಾಪುರ ಜಿಲ್ಲೆಯ ಅಜ್ಜಾವಾರ ಗ್ರಾಮದ ನಿವಾಸಿ ಟೆಂಪೋ ಚಾಲಕ ಶಿವ ಕುಮಾರಾಚಾರಿ ಅವರ ಪತ್ನಿ ಕಾಮಾಕ್ಷಿ(29) ಹಾಗೂ ಮಕ್ಕಳಾದ ಚೇತನ್ (5) ಹಾಗೂ ಎರಡೂವರೆ ವರ್ಷದ ಗಗನ್ ಮೃತಪಟ್ಟವರು.<br /> <br /> ಗಣೇಶ ಹಬ್ಬಕ್ಕೆಂದು ಕೋಗಿಲು ಬಡಾವಣೆಯಲ್ಲಿರುವ ತನ್ನ ಅಕ್ಕನ ಮನೆಗೆ ಕಾಮಾಕ್ಷಿ ಮಕ್ಕಳನ್ನು ಕರೆದುಕೊಂಡು ಬಂದ್ದ್ದಿದರು. ನಂತರ ಪತಿಯೂ ಅಲ್ಲಿಗೆ ಬಂದಿದ್ದರು. ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸುವಂತೆ ಆಕೆ ತನ್ನ ಗಂಡನ ಬಳಿ ಹಠ ಹಿಡಿದಿದ್ದರು. <br /> <br /> ಆದರೆ, ಅಂಗಡಿಯಲ್ಲಿ ಆಯ್ಕೆ ಮಾಡಿದ ಬಟ್ಟೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪತಿ-ಪತ್ನಿಯರ ಮಧ್ಯೆ ಜಗಳ ನಡೆಯಿತು ಎನ್ನಲಾಗಿದೆ. ನಂತರ ಮೂವರಿಗೂ ಬಟ್ಟೆ ಕೊಡಿಸಿದ ಶಿವಕುಮಾರಾಚಾರಿ ಆ ದಿನವೇ ಊರಿಗೆ ಹೋಗಿದ್ದ. <br /> <br /> ಹಠದ ಸ್ವಭಾದವಳಾಗಿದ್ದ ಕಾಮಾಕ್ಷಿ ಇದೇ ವಿಚಾರವಾಗಿ ಬೇಸರಗೊಂಡು, ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಕೋಗಿಲು ಬಡಾವಣೆಯ ಬಂಡೆ ಪ್ರದೇಶದ ಹೊಂಡಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.<br /> <br /> <strong>ವಾಹನ ಡಿಕ್ಕಿ: ಸಾವು</strong> <br /> <strong>ಹೊಸಕೋಟೆ:</strong> ರಸ್ತೆ ಬದಿ ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಂಗಳೂರು ರಸ್ತೆಯ ಭಟ್ಟರಹಳ್ಳಿ ಬಳಿ ಶನಿವಾರ ಈ ಅಪಘಾತ ನಡೆದಿದೆ. 30 ವರ್ಷ ವಯಸ್ಸಿನ ವ್ಯಕ್ತಿ ಕಪ್ಪು ಬಣ್ಣದ ಟೀ ಶರ್ಟ್, ಪ್ಯಾಂಟ್ ಧರಿಸಿದ್ದಾನೆ. <br /> <br /> ಶವವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರಸುದಾರರು ಮಾಹಿತಿಗೆ ದೂರವಾಣಿ: 28472500 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: </strong>ಇಲ್ಲಿನ ಕೋಗಿಲು ಬಡಾವಣೆಯ ಬಂಡೆ ಪ್ರದೇಶದ ನೀರಿನ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ತಾಯಿ ಮತ್ತು ಇಬ್ಬರು ಗಂಡು ಮಕ್ಕಳ ಮೃತ ದೇಹಗಳ ಗುರುತು ಪತ್ತೆಯಾಗಿದೆ.<br /> <br /> ಚಿಕ್ಕಬಳ್ಳಾಪುರ ಜಿಲ್ಲೆಯ ಅಜ್ಜಾವಾರ ಗ್ರಾಮದ ನಿವಾಸಿ ಟೆಂಪೋ ಚಾಲಕ ಶಿವ ಕುಮಾರಾಚಾರಿ ಅವರ ಪತ್ನಿ ಕಾಮಾಕ್ಷಿ(29) ಹಾಗೂ ಮಕ್ಕಳಾದ ಚೇತನ್ (5) ಹಾಗೂ ಎರಡೂವರೆ ವರ್ಷದ ಗಗನ್ ಮೃತಪಟ್ಟವರು.<br /> <br /> ಗಣೇಶ ಹಬ್ಬಕ್ಕೆಂದು ಕೋಗಿಲು ಬಡಾವಣೆಯಲ್ಲಿರುವ ತನ್ನ ಅಕ್ಕನ ಮನೆಗೆ ಕಾಮಾಕ್ಷಿ ಮಕ್ಕಳನ್ನು ಕರೆದುಕೊಂಡು ಬಂದ್ದ್ದಿದರು. ನಂತರ ಪತಿಯೂ ಅಲ್ಲಿಗೆ ಬಂದಿದ್ದರು. ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸುವಂತೆ ಆಕೆ ತನ್ನ ಗಂಡನ ಬಳಿ ಹಠ ಹಿಡಿದಿದ್ದರು. <br /> <br /> ಆದರೆ, ಅಂಗಡಿಯಲ್ಲಿ ಆಯ್ಕೆ ಮಾಡಿದ ಬಟ್ಟೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪತಿ-ಪತ್ನಿಯರ ಮಧ್ಯೆ ಜಗಳ ನಡೆಯಿತು ಎನ್ನಲಾಗಿದೆ. ನಂತರ ಮೂವರಿಗೂ ಬಟ್ಟೆ ಕೊಡಿಸಿದ ಶಿವಕುಮಾರಾಚಾರಿ ಆ ದಿನವೇ ಊರಿಗೆ ಹೋಗಿದ್ದ. <br /> <br /> ಹಠದ ಸ್ವಭಾದವಳಾಗಿದ್ದ ಕಾಮಾಕ್ಷಿ ಇದೇ ವಿಚಾರವಾಗಿ ಬೇಸರಗೊಂಡು, ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಕೋಗಿಲು ಬಡಾವಣೆಯ ಬಂಡೆ ಪ್ರದೇಶದ ಹೊಂಡಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.<br /> <br /> <strong>ವಾಹನ ಡಿಕ್ಕಿ: ಸಾವು</strong> <br /> <strong>ಹೊಸಕೋಟೆ:</strong> ರಸ್ತೆ ಬದಿ ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಂಗಳೂರು ರಸ್ತೆಯ ಭಟ್ಟರಹಳ್ಳಿ ಬಳಿ ಶನಿವಾರ ಈ ಅಪಘಾತ ನಡೆದಿದೆ. 30 ವರ್ಷ ವಯಸ್ಸಿನ ವ್ಯಕ್ತಿ ಕಪ್ಪು ಬಣ್ಣದ ಟೀ ಶರ್ಟ್, ಪ್ಯಾಂಟ್ ಧರಿಸಿದ್ದಾನೆ. <br /> <br /> ಶವವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರಸುದಾರರು ಮಾಹಿತಿಗೆ ದೂರವಾಣಿ: 28472500 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>