<p><strong>ಶಿರಾಳಕೊಪ್ಪ:</strong> ಐತಿಹಾಸಿಕ ಗ್ರಾಮ ತಾಳಗುಂದದಲ್ಲಿ ಎರಡನೆ ಹಂತದ ಪ್ರಾಯೋಗಿಕ ಉತ್ಖನನ ಕಾರ್ಯ ಭರದಿಂದ ಸಾಗಿದೆ.<br /> ಈ ವೇಳೆ ಕಂಚಿನ ಪೂಜಾ ಸಾಮಗ್ರಿಗಳಾದ ಘಂಟೆ, ಆರತಿ ತಟ್ಟೆ, ದೀಪ, ಧೂಪಾರತಿ, ಹಣತೆ, ಭಗ್ನವಾದ ವಿಷ್ಣುಮೂರ್ತಿ, ಶಾಸನಗಳ ತುಣುಕುಗಳು, ಸುಂದರ ಕಲಾಕೃತಿ ಹೊಂದಿರುವ ಹೆಂಚು, ವಿಶೇಷವಾದ ದೊಡ್ಡ ಸುಣ್ಣದ ಕಲ್ಲು ಸಿಕ್ಕಿದ್ದು ಅದನ್ನು ಭಗ್ನವಾಗಿರುವ ಶಿವಲಿಂಗವಿರಬಹುದು ಎಂದು ಅಂದಾಜಿಸಲಾಗಿದೆ.<br /> <br /> ಚಂದ್ರಶಿಲೆಯ ಚಂದ್ರಾಕೃತಿಯ ಮೆಟ್ಟಿಲುಗಳು ನೆಲದಿಂದ ಸುಮಾರು 3 ಅಡಿ ಆಳದಲ್ಲಿ ಲಭ್ಯವಾಗಿದ್ದು ಉತ್ಖನನ ಕಾರ್ಯಕ್ಕೆ ಮತ್ತಷ್ಟು ಸ್ಫೂರ್ತಿ ದೊರಕಿದೆ.<br /> <br /> ಕನ್ನಡದ ಮೊದಲ ದೊರೆ ಮಯೂರ ವರ್ಮನ ಮೂಲ ನೆಲೆ, ಕನ್ನಡದ ಮೊದಲ ವಿದ್ಯಾಕೇಂದ್ರ ಎಂದು ಹೇಳಲಾಗಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ತಾಳಗುಂದ ಗ್ರಾಮದ ಪ್ರಣವೇಶ್ವರ ದೇವಾಲಯದ ಉತ್ಖನನ ಕಾರ್ಯ ನಡೆಯಬೇಕು ಎಂದು ಈ ಭಾಗದ ಜನರು ಪುರಾತತ್ವ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಪುರಾತತ್ವ ಇಲಾಖೆ ಫೆಬ್ರುವರಿ ತಿಂಗಳಿನಲ್ಲಿ ಪ್ರಾಯೋಗಿಕ ಉತ್ಖನನ ನಡೆಸಿತ್ತು.<br /> <br /> ಆ ಸಂದರ್ಭದಲ್ಲಿ ಗಂಗರ ಕಾಲದ 13 ಚಿನ್ನದ ನಾಣ್ಯಗಳು, ಖಳಚೂರರ ತಾಮ್ರದ ತಟ್ಟೆಗಳು ಲಭಿಸಿದ್ದವು.<br /> ಈ ಬಗ್ಗೆ ರಾಜ್ಯ ಪುರಾತತ್ವ ಶಾಸ್ತ್ರಜ್ಞರ ಉಪ ಮೇಲ್ವಿಚಾರಕ ಕೇಶವ ಶರ್ಮ ಮಾತನಾಡಿ, ತಾಳಗುಂದದಲ್ಲಿ ಹುದುಗಿ ಹೋಗಿರುವ ಇತಿಹಾಸ ಹೊರಗೆಡವಲು ಪುರಾತತ್ವ ಇಲಾಖೆ ಮುಂದಾಗಿದ್ದು. ಉತ್ಖನನ ಕಾರ್ಯ ಪೂರ್ಣವಾದ ನಂತರವೇ ಇಲ್ಲಿಯ ಇತಿಹಾಸದ ಸ್ಪಷ್ಟ ಮಾಹಿತಿ ಲಭಿಸುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾಳಕೊಪ್ಪ:</strong> ಐತಿಹಾಸಿಕ ಗ್ರಾಮ ತಾಳಗುಂದದಲ್ಲಿ ಎರಡನೆ ಹಂತದ ಪ್ರಾಯೋಗಿಕ ಉತ್ಖನನ ಕಾರ್ಯ ಭರದಿಂದ ಸಾಗಿದೆ.<br /> ಈ ವೇಳೆ ಕಂಚಿನ ಪೂಜಾ ಸಾಮಗ್ರಿಗಳಾದ ಘಂಟೆ, ಆರತಿ ತಟ್ಟೆ, ದೀಪ, ಧೂಪಾರತಿ, ಹಣತೆ, ಭಗ್ನವಾದ ವಿಷ್ಣುಮೂರ್ತಿ, ಶಾಸನಗಳ ತುಣುಕುಗಳು, ಸುಂದರ ಕಲಾಕೃತಿ ಹೊಂದಿರುವ ಹೆಂಚು, ವಿಶೇಷವಾದ ದೊಡ್ಡ ಸುಣ್ಣದ ಕಲ್ಲು ಸಿಕ್ಕಿದ್ದು ಅದನ್ನು ಭಗ್ನವಾಗಿರುವ ಶಿವಲಿಂಗವಿರಬಹುದು ಎಂದು ಅಂದಾಜಿಸಲಾಗಿದೆ.<br /> <br /> ಚಂದ್ರಶಿಲೆಯ ಚಂದ್ರಾಕೃತಿಯ ಮೆಟ್ಟಿಲುಗಳು ನೆಲದಿಂದ ಸುಮಾರು 3 ಅಡಿ ಆಳದಲ್ಲಿ ಲಭ್ಯವಾಗಿದ್ದು ಉತ್ಖನನ ಕಾರ್ಯಕ್ಕೆ ಮತ್ತಷ್ಟು ಸ್ಫೂರ್ತಿ ದೊರಕಿದೆ.<br /> <br /> ಕನ್ನಡದ ಮೊದಲ ದೊರೆ ಮಯೂರ ವರ್ಮನ ಮೂಲ ನೆಲೆ, ಕನ್ನಡದ ಮೊದಲ ವಿದ್ಯಾಕೇಂದ್ರ ಎಂದು ಹೇಳಲಾಗಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ತಾಳಗುಂದ ಗ್ರಾಮದ ಪ್ರಣವೇಶ್ವರ ದೇವಾಲಯದ ಉತ್ಖನನ ಕಾರ್ಯ ನಡೆಯಬೇಕು ಎಂದು ಈ ಭಾಗದ ಜನರು ಪುರಾತತ್ವ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಪುರಾತತ್ವ ಇಲಾಖೆ ಫೆಬ್ರುವರಿ ತಿಂಗಳಿನಲ್ಲಿ ಪ್ರಾಯೋಗಿಕ ಉತ್ಖನನ ನಡೆಸಿತ್ತು.<br /> <br /> ಆ ಸಂದರ್ಭದಲ್ಲಿ ಗಂಗರ ಕಾಲದ 13 ಚಿನ್ನದ ನಾಣ್ಯಗಳು, ಖಳಚೂರರ ತಾಮ್ರದ ತಟ್ಟೆಗಳು ಲಭಿಸಿದ್ದವು.<br /> ಈ ಬಗ್ಗೆ ರಾಜ್ಯ ಪುರಾತತ್ವ ಶಾಸ್ತ್ರಜ್ಞರ ಉಪ ಮೇಲ್ವಿಚಾರಕ ಕೇಶವ ಶರ್ಮ ಮಾತನಾಡಿ, ತಾಳಗುಂದದಲ್ಲಿ ಹುದುಗಿ ಹೋಗಿರುವ ಇತಿಹಾಸ ಹೊರಗೆಡವಲು ಪುರಾತತ್ವ ಇಲಾಖೆ ಮುಂದಾಗಿದ್ದು. ಉತ್ಖನನ ಕಾರ್ಯ ಪೂರ್ಣವಾದ ನಂತರವೇ ಇಲ್ಲಿಯ ಇತಿಹಾಸದ ಸ್ಪಷ್ಟ ಮಾಹಿತಿ ಲಭಿಸುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>