<p><strong>ನವದೆಹಲಿ (ಪಿಟಿಐ):</strong> ವಿವಾದಿತ `ಕೆಜಿ-ಡಿ6~ ಅನಿಲ ಘಟಕವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ಗೆ (ಆರ್ಐಎಲ್) ಅನುಮತಿ ನೀಡಿದ ತೈಲ ಸಚಿವಾಲಯದ ಕ್ರಮಕ್ಕೆ ಮಹಾಲೇಖಪಾಲರು ತೀವ್ರ ಛೀಮಾರಿ ಹಾಕಿದ್ದಾರೆ. <br /> <br /> ತೈಲ ಸಚಿವಾಲಯದ ಕ್ರಮಕ್ಕೆ ಛೀಮಾರಿ ಹಾಕಿರುವ `ಸಿಎಜಿ~, ಇದೇ ಘಟಕದ ಕ್ಷೇತ್ರ ಅಭಿವೃದ್ಧಿ ವೆಚ್ಚ ಮೂರು ಪಟ್ಟು ಹೆಚ್ಚಳವಾಗಿರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.<br /> <br /> 2004ರಲ್ಲಿ 2.4 ಶತಕೋಟಿ ಡಾಲರ್ ಇದ್ದ `ಕೆಜಿ-ಡಿ6~ ಘಟಕದ ಪ್ರಸ್ತಾವಿತ ಹೂಡಿಕೆ 2006ರಲ್ಲಿ 8.8 ಶತಕೋಟಿ ಡಾಲರ್ಗಳಿಗೆ ಏರಿಕೆಯಾಗಿದೆ. ಈ ಕುರಿತು ಸಿಎಜಿ ತನ್ನ ವರದಿಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. <br /> <br /> ಸುಮಾರು 7,645 ಚದರ ಕಿ.ಮೀ ವಿಸ್ತೀರ್ಣದ ಬಂಗಾಳ ಕೊಲ್ಲಿಯ `ಕೆಜಿ-ಡಿ6~ ಅನಿಲ ಉತ್ಪಾದನೆ ಪ್ರದೇಶವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು `ಆರ್ಐಎಲ್~ಗೆ ಅನುಮತಿ ನೀಡುವಾಗ, ತೈಲ ಸಚಿವಾಲಯ ಮತ್ತು ಅದರ ತಾಂತ್ರಿಕ ತಂಡವಾದ ಹೈಡ್ರೋಕಾರ್ಬನ್ ಮಹಾನಿರ್ದೇಶಕರು (ಡಿಜಿಎಚ್) ತಪ್ಪೆಸಗಿದ್ದಾರೆ ಎಂದು `ಸಿಎಜಿ~ ವರದಿ ಹೇಳಿದೆ. <br /> <br /> ಉತ್ಪಾದನೆ ಪಾಲುದಾರಿಕೆ ಒಪ್ಪಂದದ (ಪಿಎಸ್ಸಿ) ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು ಪ್ರದೇಶದಲ್ಲಿ ಶೇ 25ರಷ್ಟು ಪಾಲನ್ನು ಸರ್ಕಾರಕ್ಕೆ ನೀಡಬೇಕಿತ್ತು. ಆದರೆ, ಸಂಪೂರ್ಣ ಪ್ರದೇಶವನ್ನು ತಾನೇ ಪತ್ತೆ ಹಚ್ಚಿರುವುದಾಗಿ, ಹಾಗೂ ಅದರ ಸಂಪೂರ್ಣ ಒಡೆತನ ತನಗೆ ಸೇರಿರುವುದಾಗಿ `ಆರ್ಐಎಲ್~ 2005ರಲ್ಲಿ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ವಿವಾದ ತಲೆದೋರಿತ್ತು.<br /> <br /> `ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯವೇ `ಕೆಜಿ-ಡಿ6~ ಘಟಕದ ಸಂಪೂರ್ಣ ವಿವಾದವನ್ನು ಇತ್ಯರ್ಥಗೊಳಿಸಬೇಕು ಎಂದೂ `ಸಿಎಜಿ~ ಶಿಫಾರಸು ಮಾಡಿದೆ. <br /> <br /> ರಿಲಯನ್ಸ್ ಇಂಡಸ್ಟ್ರೀಸ್ಗೆ `ಕೆಜಿ-ಡಿ6~ ಘಟಕದಲ್ಲಿ ಉತ್ಪಾದನಾ ಘಟಕ ಆರಂಭಿಸಲು 1.1 ಶತಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ತೈಲ ಸಚಿವಾಲಯ ಏಕ ಹರಾಜು ಪ್ರಕ್ರಿಯೆ ಮೂಲಕ ಅನುಮತಿ ನೀಡಿರುವುದನ್ನೂ `ಸಿಎಜಿ~ ಪ್ರಶ್ನಿಸಿದೆ. <br /> <br /> <strong>ಆರ್ಐಎಲ್ ಪ್ರತಿಕ್ರಿಯೆ: </strong> ಕೃಷ್ಣ-ಗೋದಾವರಿ `ಕೆಜಿ-ಡಿ6~ ಅನಿಲ ಉತ್ಪಾದನೆ ಪಾಲುದಾರಿಕೆ ಒಪ್ಪಂದದಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಮರ್ಥಿಸಿಕೊಂಡಿದೆ. <br /> <br /> ಈ ಪಾಲುದಾರಿಕೆ ಒಪ್ಪಂದದ ನಿಯಮಗಳನ್ನು `ಆರ್ಐಎಲ್~ ಉಲ್ಲಂಘಿಸಿದ್ದು, ಇದರಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು `ಸಿಎಜಿ~ ವರದಿ ಹೇಳಿದೆ. <br /> <br /> ಉತ್ಪಾದನೆ ಪಾಲುದಾರಿಕೆ ಒಪ್ಪಂದದ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು ಅನುಮತಿ ನೀಡಲಾದ ಪ್ರದೇಶದ ಶೇ 25ರಷ್ಟು ಪಾಲನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ವಿವಾದಿತ `ಕೆಜಿ-ಡಿ6~ ಅನಿಲ ಘಟಕವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ಗೆ (ಆರ್ಐಎಲ್) ಅನುಮತಿ ನೀಡಿದ ತೈಲ ಸಚಿವಾಲಯದ ಕ್ರಮಕ್ಕೆ ಮಹಾಲೇಖಪಾಲರು ತೀವ್ರ ಛೀಮಾರಿ ಹಾಕಿದ್ದಾರೆ. <br /> <br /> ತೈಲ ಸಚಿವಾಲಯದ ಕ್ರಮಕ್ಕೆ ಛೀಮಾರಿ ಹಾಕಿರುವ `ಸಿಎಜಿ~, ಇದೇ ಘಟಕದ ಕ್ಷೇತ್ರ ಅಭಿವೃದ್ಧಿ ವೆಚ್ಚ ಮೂರು ಪಟ್ಟು ಹೆಚ್ಚಳವಾಗಿರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.<br /> <br /> 2004ರಲ್ಲಿ 2.4 ಶತಕೋಟಿ ಡಾಲರ್ ಇದ್ದ `ಕೆಜಿ-ಡಿ6~ ಘಟಕದ ಪ್ರಸ್ತಾವಿತ ಹೂಡಿಕೆ 2006ರಲ್ಲಿ 8.8 ಶತಕೋಟಿ ಡಾಲರ್ಗಳಿಗೆ ಏರಿಕೆಯಾಗಿದೆ. ಈ ಕುರಿತು ಸಿಎಜಿ ತನ್ನ ವರದಿಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. <br /> <br /> ಸುಮಾರು 7,645 ಚದರ ಕಿ.ಮೀ ವಿಸ್ತೀರ್ಣದ ಬಂಗಾಳ ಕೊಲ್ಲಿಯ `ಕೆಜಿ-ಡಿ6~ ಅನಿಲ ಉತ್ಪಾದನೆ ಪ್ರದೇಶವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು `ಆರ್ಐಎಲ್~ಗೆ ಅನುಮತಿ ನೀಡುವಾಗ, ತೈಲ ಸಚಿವಾಲಯ ಮತ್ತು ಅದರ ತಾಂತ್ರಿಕ ತಂಡವಾದ ಹೈಡ್ರೋಕಾರ್ಬನ್ ಮಹಾನಿರ್ದೇಶಕರು (ಡಿಜಿಎಚ್) ತಪ್ಪೆಸಗಿದ್ದಾರೆ ಎಂದು `ಸಿಎಜಿ~ ವರದಿ ಹೇಳಿದೆ. <br /> <br /> ಉತ್ಪಾದನೆ ಪಾಲುದಾರಿಕೆ ಒಪ್ಪಂದದ (ಪಿಎಸ್ಸಿ) ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು ಪ್ರದೇಶದಲ್ಲಿ ಶೇ 25ರಷ್ಟು ಪಾಲನ್ನು ಸರ್ಕಾರಕ್ಕೆ ನೀಡಬೇಕಿತ್ತು. ಆದರೆ, ಸಂಪೂರ್ಣ ಪ್ರದೇಶವನ್ನು ತಾನೇ ಪತ್ತೆ ಹಚ್ಚಿರುವುದಾಗಿ, ಹಾಗೂ ಅದರ ಸಂಪೂರ್ಣ ಒಡೆತನ ತನಗೆ ಸೇರಿರುವುದಾಗಿ `ಆರ್ಐಎಲ್~ 2005ರಲ್ಲಿ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ವಿವಾದ ತಲೆದೋರಿತ್ತು.<br /> <br /> `ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯವೇ `ಕೆಜಿ-ಡಿ6~ ಘಟಕದ ಸಂಪೂರ್ಣ ವಿವಾದವನ್ನು ಇತ್ಯರ್ಥಗೊಳಿಸಬೇಕು ಎಂದೂ `ಸಿಎಜಿ~ ಶಿಫಾರಸು ಮಾಡಿದೆ. <br /> <br /> ರಿಲಯನ್ಸ್ ಇಂಡಸ್ಟ್ರೀಸ್ಗೆ `ಕೆಜಿ-ಡಿ6~ ಘಟಕದಲ್ಲಿ ಉತ್ಪಾದನಾ ಘಟಕ ಆರಂಭಿಸಲು 1.1 ಶತಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ತೈಲ ಸಚಿವಾಲಯ ಏಕ ಹರಾಜು ಪ್ರಕ್ರಿಯೆ ಮೂಲಕ ಅನುಮತಿ ನೀಡಿರುವುದನ್ನೂ `ಸಿಎಜಿ~ ಪ್ರಶ್ನಿಸಿದೆ. <br /> <br /> <strong>ಆರ್ಐಎಲ್ ಪ್ರತಿಕ್ರಿಯೆ: </strong> ಕೃಷ್ಣ-ಗೋದಾವರಿ `ಕೆಜಿ-ಡಿ6~ ಅನಿಲ ಉತ್ಪಾದನೆ ಪಾಲುದಾರಿಕೆ ಒಪ್ಪಂದದಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಮರ್ಥಿಸಿಕೊಂಡಿದೆ. <br /> <br /> ಈ ಪಾಲುದಾರಿಕೆ ಒಪ್ಪಂದದ ನಿಯಮಗಳನ್ನು `ಆರ್ಐಎಲ್~ ಉಲ್ಲಂಘಿಸಿದ್ದು, ಇದರಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು `ಸಿಎಜಿ~ ವರದಿ ಹೇಳಿದೆ. <br /> <br /> ಉತ್ಪಾದನೆ ಪಾಲುದಾರಿಕೆ ಒಪ್ಪಂದದ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು ಅನುಮತಿ ನೀಡಲಾದ ಪ್ರದೇಶದ ಶೇ 25ರಷ್ಟು ಪಾಲನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>