<p><strong>ಬೆಂಗಳೂರು:</strong> ನಗರದಲ್ಲಿ ವಿದ್ಯುತ್ ಕೊರತೆಯನ್ನು ನೀಗಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಕಾರ್ಯಕ್ಕೆ ಮುಂದಾಗಿದೆ.<br /> <br /> ನಗರದಲ್ಲಿ ದೊರೆಯುವ ಹಸಿ ತ್ಯಾಜ್ಯದಿಂದ ಶಾಶ್ವತವಾಗಿ ಬೀದಿದೀಪಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ವಿವಿಧ ಭಾಗಗಳಲ್ಲಿ 16 ಜೈವಿಕ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪಾಲಿಕೆ ಸಿದ್ಧತೆ ನಡೆಸಿದೆ.<br /> <br /> ಪಾಲಿಕೆಯ ಈ ಯೋಜನೆಯಂತೆ ನಗರದ ಮತ್ತಿಕೆರೆ, ಕೆ.ಆರ್.ಮಾರುಕಟ್ಟೆ, ನಾಗಪುರ, ಗಾಂಧಿನಗರ, ರಾಜರಾಜೇಶ್ವರಿನಗರ, ದೇವರಚಿಕ್ಕನಹಳ್ಳಿ, ಜಯನಗರ, ಪಟ್ಟಾಭಿರಾಮನಗರ, ಕೋರಮಂಗಲ, ದೊಮ್ಮಲೂರು, ಸ್ಯಾಂಕಿ ರಸ್ತೆ, ಕೆ.ಆರ್.ರಸ್ತೆ, ಗರುಡಾಚಾರ್ಪಾಳ್ಯ, ಕೆ.ಆರ್.ಪುರ ಮಾರುಕಟ್ಟೆ, ಕೆಂಚನಹಳ್ಳಿ ಹಾಗೂ ಕುವೆಂಪು ಬಡಾವಣೆಗಳಲ್ಲಿ ಘಟಕಗಳು ಸ್ಥಾಪನೆಯಾಗಲಿವೆ.<br /> <br /> ಪ್ರತಿಯೊಂದು ಘಟಕ ನಿರ್ಮಾಣಕ್ಕೆ 16 ಕೋಟಿ ವೆಚ್ಚವಾಗಲಿದೆ. 5 ಸಾವಿರ ಚದರಡಿ ವಿಸ್ತೀರ್ಣದ ಸ್ಥಳದ ಅವಶ್ಯಕತೆ ಇದ್ದು, ಒಟ್ಟಾರೆ ಎಲ್ಲಾ ಘಟಕಗಳಿಂದ 800 ಕಿಲೋ ವಾಟ್ ವಿದ್ಯುತ್ ಉತ್ಪಾದಿಸುವ ಅಂದಾಜಿದೆ.<br /> ನಗರದಲ್ಲಿ ನಿತ್ಯ 3 ಸಾವಿರ ಟನ್ಗಳಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ವಿಲೇವಾರಿಗೆ ಪ್ರತಿ ವರ್ಷ ಸುಮಾರು 350 ಕೋಟಿ ಹಣ ವ್ಯಯವಾಗುತ್ತಿದೆ.<br /> <br /> ಇದುವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ತಲೆನೋವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಅದನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಉದ್ದೇಶಿಸಿದೆ.ಪ್ರತಿ ನಿತ್ಯ ಒಂದು ಟನ್ ಕಸ ವಿಲೇವಾರಿಗೆ ಒಂದು ಸಾವಿರ ರೂಪಾಯಿ ಖರ್ಚಾಗುತ್ತಿದೆ. ನಗರದ ಹತ್ತಿರದ ಬಡಾವಣೆಗಳಲ್ಲಿ ವಿದ್ಯುತ್ ಘಟಕಗಳು ಸ್ಥಾಪನೆಯಾದರೆ ಕಸ ವಿಲೇವಾರಿಗೆ ಬಳಕೆಯಾಗುವ ಹಣ ಉಳಿತಾಯವಾಗಲಿದೆ. <br /> <br /> ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಿದರೆ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎನ್ನುತ್ತಾರೆ ಪಾಲಿಕೆಯ ಹಿರಿಯ ಅಧಿಕಾರಿಗಳು. ಘಟಕಗಳ ನಿರ್ಮಾಣಕ್ಕೆ ಪಾಲಿಕೆಯು ಈಗಾಗಲೇ ಎರಡು ಬಾರಿ ಟೆಂಡರ್ ಪ್ರಕ್ರಿಯೆ ನಡೆಸಿದೆ. ಆದರೆ, ಒಂದು ಖಾಸಗಿ ಕಂಪೆನಿ ಮಾತ್ರ ಟೆಂಡರ್ನಲ್ಲಿ ಭಾಗವಹಿಸಲು ಒಲವು ತೋರಿದೆ.<br /> <br /> ಹೆಚ್ಚಿನ ಕಂಪೆನಿಗಳು ಟೆಂಡರ್ನಲ್ಲಿ ಭಾಗವಹಿಸದ ಕಾರಣ ಪಾಲಿಕೆ ಸರ್ಕಾರಿ ನಿಯಮದಂತೆ ಮತ್ತೆ `ಇ- ಟೆಂಡರ್~ ಪ್ರಕ್ರಿಯೆ ನಡೆಸಲು ಮುಂದಾಗಿದೆ.<br /> <br /> ನಗರದ ಬೀದಿ ದೀಪಗಳ ನಿರ್ವಹಣೆಗಾಗಿ ಪಾಲಿಕೆಯು ಪ್ರತಿ ತಿಂಗಳು 8 ಕೋಟಿ ರೂಪಾಯಿಗಳನ್ನು `ಬೆಸ್ಕಾಂ~ಗೆ ಪಾವತಿ ಮಾಡುತ್ತಿದೆ. ಈ ಬಯೋ ಮಿಥೇನ್ ಘಟಕಗಳು ನಿರ್ಮಾಣವಾದರೆ ಕೋಟಿಗಟ್ಟಲೆ ಹಣ ಉಳಿತಾಯವಾಗಲಿದೆ. <br /> <br /> ಇದರಿಂದ ವಿದ್ಯುತ್ಗೆ `ಬೆಸ್ಕಾಂ~ ಅನ್ನು ಅವಲಂಬಿಸುವುದು ತಪ್ಪಲಿದೆ. ಕೇವಲ ವಿದ್ಯುತ್ ಉತ್ಪಾದನೆ ಮಾತ್ರವಲ್ಲದೆ ಇಲ್ಲಿ ಸಿಗುವ ಗೊಬ್ಬರವನ್ನು ನಗರದ ಎಲ್ಲಾ ಉದ್ಯಾನಗಳಿಗೆ ಬಳಸಿಕೊಳ್ಳಲು ಪಾಲಿಕೆಯು ಚಿಂತಿಸಿದೆ. <br /> <br /> ಬಿಬಿಎಂಪಿ ಕೈಗೊಂಡಿರುವ ಪೈಲಟ್ ಯೋಜನೆಗೆ ಸ್ಥಳೀಯರು ಹಾಗೂ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳ ಸಹಕಾರದ ಅವಶ್ಯಕತೆ ಇದೆ. ಅವರು ಸೂಚಿಸುವ ಸ್ಥಳದಲ್ಲೇ ಪಾಲಿಕೆಯು ಘಟಕಗಳನ್ನು ತೆರೆಯಲು ಮುಂದಾಗಲಿದ್ದು, ಈ ಬಗ್ಗೆ ಸಂಘ- ಸಂಸ್ಥೆಗಳ ಪ್ರತಿಕ್ರಿಯೆಗಾಗಿ ಪಾಲಿಕೆ ಎದುರು ನೋಡುತ್ತಿದೆ. <br /> <br /> ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ 2012ರ ಅಂತ್ಯದೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ವಿದ್ಯುತ್ ಕೊರತೆಯನ್ನು ನೀಗಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಕಾರ್ಯಕ್ಕೆ ಮುಂದಾಗಿದೆ.<br /> <br /> ನಗರದಲ್ಲಿ ದೊರೆಯುವ ಹಸಿ ತ್ಯಾಜ್ಯದಿಂದ ಶಾಶ್ವತವಾಗಿ ಬೀದಿದೀಪಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ವಿವಿಧ ಭಾಗಗಳಲ್ಲಿ 16 ಜೈವಿಕ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪಾಲಿಕೆ ಸಿದ್ಧತೆ ನಡೆಸಿದೆ.<br /> <br /> ಪಾಲಿಕೆಯ ಈ ಯೋಜನೆಯಂತೆ ನಗರದ ಮತ್ತಿಕೆರೆ, ಕೆ.ಆರ್.ಮಾರುಕಟ್ಟೆ, ನಾಗಪುರ, ಗಾಂಧಿನಗರ, ರಾಜರಾಜೇಶ್ವರಿನಗರ, ದೇವರಚಿಕ್ಕನಹಳ್ಳಿ, ಜಯನಗರ, ಪಟ್ಟಾಭಿರಾಮನಗರ, ಕೋರಮಂಗಲ, ದೊಮ್ಮಲೂರು, ಸ್ಯಾಂಕಿ ರಸ್ತೆ, ಕೆ.ಆರ್.ರಸ್ತೆ, ಗರುಡಾಚಾರ್ಪಾಳ್ಯ, ಕೆ.ಆರ್.ಪುರ ಮಾರುಕಟ್ಟೆ, ಕೆಂಚನಹಳ್ಳಿ ಹಾಗೂ ಕುವೆಂಪು ಬಡಾವಣೆಗಳಲ್ಲಿ ಘಟಕಗಳು ಸ್ಥಾಪನೆಯಾಗಲಿವೆ.<br /> <br /> ಪ್ರತಿಯೊಂದು ಘಟಕ ನಿರ್ಮಾಣಕ್ಕೆ 16 ಕೋಟಿ ವೆಚ್ಚವಾಗಲಿದೆ. 5 ಸಾವಿರ ಚದರಡಿ ವಿಸ್ತೀರ್ಣದ ಸ್ಥಳದ ಅವಶ್ಯಕತೆ ಇದ್ದು, ಒಟ್ಟಾರೆ ಎಲ್ಲಾ ಘಟಕಗಳಿಂದ 800 ಕಿಲೋ ವಾಟ್ ವಿದ್ಯುತ್ ಉತ್ಪಾದಿಸುವ ಅಂದಾಜಿದೆ.<br /> ನಗರದಲ್ಲಿ ನಿತ್ಯ 3 ಸಾವಿರ ಟನ್ಗಳಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ವಿಲೇವಾರಿಗೆ ಪ್ರತಿ ವರ್ಷ ಸುಮಾರು 350 ಕೋಟಿ ಹಣ ವ್ಯಯವಾಗುತ್ತಿದೆ.<br /> <br /> ಇದುವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ತಲೆನೋವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಅದನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಉದ್ದೇಶಿಸಿದೆ.ಪ್ರತಿ ನಿತ್ಯ ಒಂದು ಟನ್ ಕಸ ವಿಲೇವಾರಿಗೆ ಒಂದು ಸಾವಿರ ರೂಪಾಯಿ ಖರ್ಚಾಗುತ್ತಿದೆ. ನಗರದ ಹತ್ತಿರದ ಬಡಾವಣೆಗಳಲ್ಲಿ ವಿದ್ಯುತ್ ಘಟಕಗಳು ಸ್ಥಾಪನೆಯಾದರೆ ಕಸ ವಿಲೇವಾರಿಗೆ ಬಳಕೆಯಾಗುವ ಹಣ ಉಳಿತಾಯವಾಗಲಿದೆ. <br /> <br /> ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಿದರೆ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎನ್ನುತ್ತಾರೆ ಪಾಲಿಕೆಯ ಹಿರಿಯ ಅಧಿಕಾರಿಗಳು. ಘಟಕಗಳ ನಿರ್ಮಾಣಕ್ಕೆ ಪಾಲಿಕೆಯು ಈಗಾಗಲೇ ಎರಡು ಬಾರಿ ಟೆಂಡರ್ ಪ್ರಕ್ರಿಯೆ ನಡೆಸಿದೆ. ಆದರೆ, ಒಂದು ಖಾಸಗಿ ಕಂಪೆನಿ ಮಾತ್ರ ಟೆಂಡರ್ನಲ್ಲಿ ಭಾಗವಹಿಸಲು ಒಲವು ತೋರಿದೆ.<br /> <br /> ಹೆಚ್ಚಿನ ಕಂಪೆನಿಗಳು ಟೆಂಡರ್ನಲ್ಲಿ ಭಾಗವಹಿಸದ ಕಾರಣ ಪಾಲಿಕೆ ಸರ್ಕಾರಿ ನಿಯಮದಂತೆ ಮತ್ತೆ `ಇ- ಟೆಂಡರ್~ ಪ್ರಕ್ರಿಯೆ ನಡೆಸಲು ಮುಂದಾಗಿದೆ.<br /> <br /> ನಗರದ ಬೀದಿ ದೀಪಗಳ ನಿರ್ವಹಣೆಗಾಗಿ ಪಾಲಿಕೆಯು ಪ್ರತಿ ತಿಂಗಳು 8 ಕೋಟಿ ರೂಪಾಯಿಗಳನ್ನು `ಬೆಸ್ಕಾಂ~ಗೆ ಪಾವತಿ ಮಾಡುತ್ತಿದೆ. ಈ ಬಯೋ ಮಿಥೇನ್ ಘಟಕಗಳು ನಿರ್ಮಾಣವಾದರೆ ಕೋಟಿಗಟ್ಟಲೆ ಹಣ ಉಳಿತಾಯವಾಗಲಿದೆ. <br /> <br /> ಇದರಿಂದ ವಿದ್ಯುತ್ಗೆ `ಬೆಸ್ಕಾಂ~ ಅನ್ನು ಅವಲಂಬಿಸುವುದು ತಪ್ಪಲಿದೆ. ಕೇವಲ ವಿದ್ಯುತ್ ಉತ್ಪಾದನೆ ಮಾತ್ರವಲ್ಲದೆ ಇಲ್ಲಿ ಸಿಗುವ ಗೊಬ್ಬರವನ್ನು ನಗರದ ಎಲ್ಲಾ ಉದ್ಯಾನಗಳಿಗೆ ಬಳಸಿಕೊಳ್ಳಲು ಪಾಲಿಕೆಯು ಚಿಂತಿಸಿದೆ. <br /> <br /> ಬಿಬಿಎಂಪಿ ಕೈಗೊಂಡಿರುವ ಪೈಲಟ್ ಯೋಜನೆಗೆ ಸ್ಥಳೀಯರು ಹಾಗೂ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳ ಸಹಕಾರದ ಅವಶ್ಯಕತೆ ಇದೆ. ಅವರು ಸೂಚಿಸುವ ಸ್ಥಳದಲ್ಲೇ ಪಾಲಿಕೆಯು ಘಟಕಗಳನ್ನು ತೆರೆಯಲು ಮುಂದಾಗಲಿದ್ದು, ಈ ಬಗ್ಗೆ ಸಂಘ- ಸಂಸ್ಥೆಗಳ ಪ್ರತಿಕ್ರಿಯೆಗಾಗಿ ಪಾಲಿಕೆ ಎದುರು ನೋಡುತ್ತಿದೆ. <br /> <br /> ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ 2012ರ ಅಂತ್ಯದೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>