<p><strong>ಸೊರಬ: </strong>ದಂಡಾವತಿ ಆಣೆಕಟ್ಟು ಯೋಜನಾ ಪ್ರದೇಶದ ಮುಳುಗಡೆ ಸಂತ್ರಸ್ತರು ಗುರುವಾರ ರಸ್ತೆ ತಡೆ ನಡೆಸಿ ನಡಹಳ್ಳಿ ಗ್ರಾಮದ ಬಳಿ ಪ್ರತಿಭಟನೆ ನಡೆಸಿದರು. </p>.<p>ಜಮೀನು ಸರ್ವೆ ನಡೆಸಲು ಅಧಿಕಾರಿಗಳು ಬರುತ್ತಾರೆಂಬ ಸುದ್ದಿ ತಿಳಿದ ರೈತರು ಬುಧವಾರ ರಾತ್ರಿ ಟೈರ್ಗೆ ಬೆಂಕಿ ಹಚ್ಚಿ ರಸ್ತೆಗೆ ಅಡ್ಡಲಾಗಿಟ್ಟು, ಸ್ಥಳದಲ್ಲಿ ಜಮಾಯಿಸಿ ಸರ್ಕಾರ, ಸ್ಥಳೀಯ ಶಾಸಕರ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟಿಸಿದರು.</p>.<p>ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿ ಬಳಿ ಈ ಭಾಗದ ರೈತರಿಗೆ ಮುಕ್ತ ಚರ್ಚೆ ನಡೆಸಲು ಅವಕಾಶ ಕಲ್ಪಿಸಬೇಕು, ಈಗಾಗಲೇ ಹೊರಡಿಸಿರುವ 4(1), 6(1) ಅಧಿಸೂಚನೆ ಹಿಂಪಡೆಯಬೇಕು. ಈ ಹಿಂದೆ ಸಭೆಯಲ್ಲಿ ಚರ್ಚಿಸಿದ ವಿಷಯಕ್ಕೆ ಅಧಿಕಾರಿಗಳು ಲಿಖಿತ ಉತ್ತರ ಕೊಡಬೇಕು. ಸರ್ವೆ ಕಾರ್ಯ ನಡೆಸುವ ಬಗ್ಗೆ ಅಧಿಕಾರಿಗಳು ಲಿಖಿತ ಉತ್ತರ ಕೊಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.</p>.<p>ರೈತರ ಅಹವಾಲು ಸ್ವೀಕರಿಸಿದ ಅಧಿಕಾರಿಗಳು, ಮನವಿಯನ್ನು ಸರ್ಕಾರದ ಮೇಲಾಧಿಕಾರಿಗೆ ತಿಳಿಸಲಾಗುವುದು ಹಾಗೂ ಇಂದಿನ ಸರ್ವೆ ಕಾರ್ಯ ಸ್ಥಗಿತಗೊಳಿಸಲಾಗುವುದು ಎಂದರು.</p>.<p>ದಂಡಾವತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ವಾಮದೇವಗೌಡ ಮಾತನಾಡಿ, ಯೋಜನೆಗೆ ಬಿಡುಗಡೆಯಾದ ಶೇ 26ರಷ್ಟು ಹಣ ಬೇರೆ ಕಾಮಗಾರಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಸುಮಾರು ರೂ. 60 ಕೋಟಿಗಳಷ್ಟು ಅವ್ಯವಹಾರ ನಡೆದಿದ್ದೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.</p>.<p>ಶ್ರೀಪಾದ ಹೆಗಡೆ ನಿಸರಾಣಿ, ಬರಗಿ ನಿಂಗಪ್ಪ, ಮಂಜಪ್ಪ ಬನದಕೊಪ್ಪ, ಜೆ.ಎಸ್. ಚಿದಾನಂದ ಗೌಡ, ಶಿವಪ್ಪ ನಡಹಳ್ಳಿ, ವಸಂತ ಬಂಗೇರ, ಕುಪ್ಪೆ ಜಗದೀಶ, ರೇಣುಕಮ್ಮ, ಬಸಪ್ಪ ಚೀಲನೂರು, ಬೈರಪ್ಪ, ಸೋಮಶೇಖರ, ಹಾಲೇಶ, ಲೋಕೇಶ ಹಾಗೂ ಸಂತ್ರಸ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೊರಬ: </strong>ದಂಡಾವತಿ ಆಣೆಕಟ್ಟು ಯೋಜನಾ ಪ್ರದೇಶದ ಮುಳುಗಡೆ ಸಂತ್ರಸ್ತರು ಗುರುವಾರ ರಸ್ತೆ ತಡೆ ನಡೆಸಿ ನಡಹಳ್ಳಿ ಗ್ರಾಮದ ಬಳಿ ಪ್ರತಿಭಟನೆ ನಡೆಸಿದರು. </p>.<p>ಜಮೀನು ಸರ್ವೆ ನಡೆಸಲು ಅಧಿಕಾರಿಗಳು ಬರುತ್ತಾರೆಂಬ ಸುದ್ದಿ ತಿಳಿದ ರೈತರು ಬುಧವಾರ ರಾತ್ರಿ ಟೈರ್ಗೆ ಬೆಂಕಿ ಹಚ್ಚಿ ರಸ್ತೆಗೆ ಅಡ್ಡಲಾಗಿಟ್ಟು, ಸ್ಥಳದಲ್ಲಿ ಜಮಾಯಿಸಿ ಸರ್ಕಾರ, ಸ್ಥಳೀಯ ಶಾಸಕರ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟಿಸಿದರು.</p>.<p>ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿ ಬಳಿ ಈ ಭಾಗದ ರೈತರಿಗೆ ಮುಕ್ತ ಚರ್ಚೆ ನಡೆಸಲು ಅವಕಾಶ ಕಲ್ಪಿಸಬೇಕು, ಈಗಾಗಲೇ ಹೊರಡಿಸಿರುವ 4(1), 6(1) ಅಧಿಸೂಚನೆ ಹಿಂಪಡೆಯಬೇಕು. ಈ ಹಿಂದೆ ಸಭೆಯಲ್ಲಿ ಚರ್ಚಿಸಿದ ವಿಷಯಕ್ಕೆ ಅಧಿಕಾರಿಗಳು ಲಿಖಿತ ಉತ್ತರ ಕೊಡಬೇಕು. ಸರ್ವೆ ಕಾರ್ಯ ನಡೆಸುವ ಬಗ್ಗೆ ಅಧಿಕಾರಿಗಳು ಲಿಖಿತ ಉತ್ತರ ಕೊಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.</p>.<p>ರೈತರ ಅಹವಾಲು ಸ್ವೀಕರಿಸಿದ ಅಧಿಕಾರಿಗಳು, ಮನವಿಯನ್ನು ಸರ್ಕಾರದ ಮೇಲಾಧಿಕಾರಿಗೆ ತಿಳಿಸಲಾಗುವುದು ಹಾಗೂ ಇಂದಿನ ಸರ್ವೆ ಕಾರ್ಯ ಸ್ಥಗಿತಗೊಳಿಸಲಾಗುವುದು ಎಂದರು.</p>.<p>ದಂಡಾವತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ವಾಮದೇವಗೌಡ ಮಾತನಾಡಿ, ಯೋಜನೆಗೆ ಬಿಡುಗಡೆಯಾದ ಶೇ 26ರಷ್ಟು ಹಣ ಬೇರೆ ಕಾಮಗಾರಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಸುಮಾರು ರೂ. 60 ಕೋಟಿಗಳಷ್ಟು ಅವ್ಯವಹಾರ ನಡೆದಿದ್ದೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.</p>.<p>ಶ್ರೀಪಾದ ಹೆಗಡೆ ನಿಸರಾಣಿ, ಬರಗಿ ನಿಂಗಪ್ಪ, ಮಂಜಪ್ಪ ಬನದಕೊಪ್ಪ, ಜೆ.ಎಸ್. ಚಿದಾನಂದ ಗೌಡ, ಶಿವಪ್ಪ ನಡಹಳ್ಳಿ, ವಸಂತ ಬಂಗೇರ, ಕುಪ್ಪೆ ಜಗದೀಶ, ರೇಣುಕಮ್ಮ, ಬಸಪ್ಪ ಚೀಲನೂರು, ಬೈರಪ್ಪ, ಸೋಮಶೇಖರ, ಹಾಲೇಶ, ಲೋಕೇಶ ಹಾಗೂ ಸಂತ್ರಸ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>